• Home
  • About Us
  • ಕರ್ನಾಟಕ
Friday, January 9, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

UAPA ನ್ಯಾಯಾಲಯಗಳ ಅಧಿಕಾರವನ್ನೇ ಕಿತ್ತುಕೊಂಡ ಕರಾಳ ಕಾಯ್ದೆ: ಇಬ್ಬರು ಜಸ್ಟೀಸ್‌ಗಳ ಅಭಿಪ್ರಾಯ

ಪಿಕೆ ಮಲ್ಲನಗೌಡರ್ by ಪಿಕೆ ಮಲ್ಲನಗೌಡರ್
July 27, 2021
in ಅಭಿಮತ, ದೇಶ
0
UAPA ನ್ಯಾಯಾಲಯಗಳ ಅಧಿಕಾರವನ್ನೇ ಕಿತ್ತುಕೊಂಡ ಕರಾಳ ಕಾಯ್ದೆ: ಇಬ್ಬರು ಜಸ್ಟೀಸ್‌ಗಳ ಅಭಿಪ್ರಾಯ
Share on WhatsAppShare on FacebookShare on Telegram

ಈಗ ಪೆಗಾಸಸ್ ಎಂಬ ಸಾಫ್ಟ್ವೇರ್ ಎಂಬ ‘ಅಸ್ತ್ರ’ದ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರ ಹಿಂದೆ UAPA ಎಂಬ ಕಾಯಿದೆಯಿದೆ. ಇದಕ್ಕೂ ಎನ್ಐಎ (ರಾಷ್ಟ್ರೀಯ ತನಿಖಾ ದಳ)ಗೂ ಲಿಂಕ್ ಇದೆ. UAPA ಎಂಬ ಈ ಕರಾಳ ಕಾನೂನು ನ್ಯಾಯಾಂಗೀಯ ವ್ಯವಸ್ಥೆಯ ಅಧಿಕಾರವನ್ನೇ ಕಿತ್ತುಕೊಂಡಿದೆ ಎಂಬ ಮಾತುಗಳನ್ನು ಇಬ್ಬರು ಸುಪ್ರಿಂಕೋರ್ಟಿನ ನ್ಯಾಯಾಧೀಶರು ನಿನ್ನೆ ಹೇಳಿದ್ದಾರೆ. ಆದರೆ, ಸಂವಿದಾನ ನೀಡಿರುವ ಅಧಿಕಾರವನ್ನು ಉಲ್ಲೇಖ ಮಾಡುವ  ಕೆಲವರು ನ್ಯಾಯಾಲಯ ಈ ‘ದುರಂತ’ವನ್ನು ತಡೆಯಲು ಸಾಧ್ಯವಿದೆ ಎನ್ನುತ್ತಾರೆ.

ADVERTISEMENT

ಈ ದಿಸೆಯಲ್ಲಿ ಪ್ರತಿಧ್ವನಿ ಹಲವು ಕಾನೂನು ಪಂಡಿತರು, ಸಾಮಾಜಿಕ ಹೋರಾಟಗಾರರ ಅಭಿಪ್ರಾಯ ಪಡೆದು ಪ್ರಕಟಿಸುತ್ತಿದೆ. ಅದಕ್ಕೂ ಮೊದಲು ಜಸ್ಟೀಸ್ ಗೋಪಾಲಗೌಡರು ಏನು ಹೇಳಿದರು ಎಂಬುದನ್ನು ನೋಡೋಣ.

‘ಜಾಮೀನು ನೀಡುವ ನ್ಯಾಯಾಲಯಗಳ ಪಾತ್ರವನ್ನು ಯುಎಪಿಎ ಕಾಯಿದೆ ನಿರ್ಬಂಧಿಸುತ್ತದೆ ಎಂದಿರುವ  ನಿವೃತ್ತ ನ್ಯಾ. ಗೋಪಾಲಗೌಡ, ಈ ಕಾಯಿದೆ ಸರ್ವಾಧಿಕಾರಿ ಧೋರಣೆ ಒಳಗೊಂಡಿರುವುದರಿಂದ ಭಾರತದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ವಿಶೇಷ ಭದ್ರತಾ ಕಾಯಿದೆಗಳಲ್ಲಿ ಭಾರಿ ಸುಧಾರಣೆ ಅಗತ್ಯ ಎಂದು ಅಭಿಪ್ರಾಯ ಪಟ್ಟಿದ್ದಾರೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.

Also Read: ಸಂಚಲನ ಸೃಷ್ಟಿಸಿದ ಪೇಗಾಸಸ್ ಲೀಕ್ಸ್: ಮೋದಿ ಆಡಳಿತದ ಟೀಕಾಕಾರರ ಮೊಬೈಲ್ ಗೆ ಕನ್ನ!

ಜಾಮೀನು ನೀಡುವಾಗ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯು (ಯುಎಪಿಎ), ಕಾನೂನು ಕ್ರಮ ಪರಿಶೀಲಿಸುವ ನ್ಯಾಯಾಲಯಗಳ ಪಾತ್ರವನ್ನು ನಿರ್ಬಂಧಿಸುತ್ತದೆ ಮತ್ತು ಪ್ರಾಸಿಕ್ಯೂಷನ್ ವಾದ ತನಗೆ ನಿಜವೆನಿಸಿದರೆ ಜಾಮೀನನ್ನು ತಡೆಯುತ್ತದೆ ಎಂದು ಹೇಳಿದ್ದಾರೆ..

Also Read: ಯುಎಪಿಎ ಕಾಯ್ದೆ ಏಕೆ ಅಷ್ಟು ಕಠೋರ ?

“ಯುಎಪಿಎ: ಪ್ರಜಾಪ್ರಭುತ್ವ, ಭಿನ್ನಾಭಿಪ್ರಾಯ ಮತ್ತು ಸೌಹಾರ್ದ ಕಾನೂನುಗಳು” ಎಂಬ ವಿಷಯದ ಕುರಿತು ‘ಕ್ಯಾಂಪೇನ್ ಫಾರ್ ಜುಡಿಷಿಯಲ್ ಅಕೌಂಟಬಿಲಿಟಿ ಅಂಡ್ ರಿಫಾರ್ಮ್ಸ್’ ’ಸಂಘಟನೆ ಆಯೋಜಿಸಿದ್ದ ಸಾರ್ವಜನಿಕ ಸಂವಾದ ಕಾರ್ಯಕ್ರಮದಲ್ಲಿ ಇದನ್ನು ಅವರು ಹೇಳಿದ್ದಾರೆ.

Also Read: ಇಸ್ರೇಲ್ ಮಾಲ್ವೇರ್ ಬಳಸಿ ರಾಜಕಾರಣಿಗಳು, ಪತ್ರಕರ್ತರ ಚಲನವಲನದ ಮೇಲೆ ಕಣ್ಣಿಟ್ಟಿತ್ತೆ ಸರ್ಕಾರ?

“ಆರೋಪಿತ ವ್ಯಕ್ತಿಯ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ನಂಬಲು ಸೂಕ್ತ ಆಧಾರಗಳಿವೆ ಎನಿಸಿದರೂ ಕೇಸ್ ಡೈರಿಯ ಪರಿಶೀಲನೆ ಮತ್ತು ನ್ಯಾಯಾಲಯದ ಅಭಿಪ್ರಾಯದಲ್ಲಿ, ಯುಎಪಿಎ ಸೆಕ್ಷನ್ ೪೩ ಡಿ (೫) ಜಾಮೀನು ನಿರ್ಬಂಧಿಸುತ್ತದೆ” ಎಂದು ಅಭಿಪ್ರಾಯಪಟ್ಟರು.

ಈ ಕುರಿತಂತೆ ಮಾತನಾಡಿರುವ ನಿವೃತ್ತ ಸುಪ್ರಿಂಕೋರ್ಟ್ ನ್ಯಾಯಾಧೀಶ ದೀಪಕ್ ಮಿಶ್ರಾ ಕೂಡ, ನಾವು ಮನುಷ್ಯತ್ವನ್ನೇ ಮರೆತು ಬಿಟ್ಟೆವಾ ಎಂದು ಪ್ರಶ್ನೆ ಮಾಡಿದ್ದಾರೆ.

Also Read: ಈ ಸಾವಿಗೆ ನಾವೆಲ್ಲರೂ ಹೊಣೆ

“84 ವಯಸ್ಸಿನ ಫಾದರ್ ಸ್ಟಾನ್ ಸ್ವಾಮಿ, ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದರು.  ಅವರಿಗೆ ವಿಚಾರಣೆ ನಡೆಸದೇ ಜೈಲಿನಲ್ಲಿ ಕೊಳೆಯಿಸಿದ್ದು ನ್ಯಾಯವೇ? ಅಂದರೆ ನಾವು ಮನುಷ್ಯರಲ್ಲವೇ, ನಾವು ಮನುಷ್ಯತ್ವದ ಎಲ್ಲಾ ಸ್ಪರ್ಶ ಕಳೆದುಕೊಂಡಿದ್ದೇವೆಯೇ? ಯುಎಪಿಎ ಕಾಯಿದೆಯ 43 ಡಿ ಅಥವಾ 43 ಇ ಪ್ರಕಾರ  ಅಂತಹ ವ್ಯಕ್ತಿಗೆ ಜಾಮೀನು ನೀಡಬೇಕು. ಅಲ್ಲಿ ಈ ಜನರಿಗೆ ಜಾಮೀನು ನೀಡಲು ಉನ್ನತ ನ್ಯಾಯಾಲಯದ ಅಧಿಕಾರ ಬಳಕೆಯಾಗಬೇಕು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಯುಎಪಿಎ ವಿರುದ್ಧ ದೇಶದಲ್ಲಿ ನೂರಾರು ಕಡೆ ಪ್ರತಿಭಟನೆ ಅಥವಾ ಪ್ರತಿರೋಧ ನಡೆಯುತ್ತಿದೆ. ಈ ಸಂದರ್ಭದಲ್ಲಿ ನ್ಯಾಯಾಂಗೀಯ ವ್ಯವಸ್ಥೆ ಅದರಲ್ಲೂ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿದ್ದ ಗೋಪಾಲಗೌಡ ಮತ್ತು ದೀಪಕ್ ಶರ್ಮಾ ಅವರು ಹೇಳಿದ್ದರ ಹಿಂದೆ ಸಾಕಷ್ಟು ಸತ್ಯಗಳಿವೆ.

ಈ ಕುರಿತಂತೆ ಪ್ರತಿಧ್ವನಿ ಇಬ್ದರು ಹೈಕೋರ್ಟ್ ವಕೀಲರನ್ನು ಮಾತನಾಡಿಸಿತು.

Also Read: ವ್ಯವಸ್ಥೆಯೇ ಕೊಲೆಗೈದ ಸ್ಟ್ಯಾನ್ ಸ್ವಾಮಿ ಮತ್ತು ಕೊಳೆತು ನಾರುತ್ತಿರುವ ದೇಶದ ಆತ್ಮಸಾಕ್ಷಿ

ಹೈಕೋರ್ಟ್ ವಕೀಲ ಬಿ. ವೆಂಕಟೇಶ್, ‘ಇಬ್ಬರೂ ನಿವೃತ್ತ ನ್ಯಾಯಾಧೀಶರು ಸರಿಯಾಗಿಯೇ ಹೇಳಿದ್ದಾರೆ. ಕೋರ್ಟಿನ ಸ್ವಾತಂತ್ರ್ಯ ಮತ್ತು ಸಂವಿಧಾನ ಕೊಟ್ಟಿರುವ ಹಕ್ಕುಗಳನ್ನುಈ ಯುಎಪಿಎ ಕಿತ್ತುಕೊಂಡಿದೆ. ಈ ಕರಾಳ ಕಾನೂನು ರದ್ದಾಗಬೇಕು’ ಎಂದರು. UAPA ಒಂದು ಕರಾಳ ಕಾನೂನು ಎಂಬುದಕ್ಕೆ ಯಾವುದೇ ಡೌಟ್ ಬೇಡ’ ಎನ್ನುತ್ತಾರೆ ವಕೀಲ ಬಿ. ವೆಂಕಟೇಶ್.

ಈ ಬಗ್ಗೆ ಪ್ರತಿಧ್ವನಿ ಜೊತೆ ಮಾತನಾಡಿದ ಹೈಕೋರ್ಟ್ ವಕೀಲೆ ರಾಜಲಕ್ಷ್ಮಿ ಅಂಕಲಗಿ, ‘ ಎರಡೆರಡು ವರ್ಷ ವಿಚಾರಣೆ ನಡೆಸದೇ ಒಬ್ಬ ಹಿರಿಯ ನಾಗರಿಕರಿಗೆ ಚಿತ್ರಹಿಂಸೆ ನೀಡುವಂತಹ ಈ ಕಾನೂನೇ ಭಯೋತ್ಪಾದಕ. ನ್ಯಾಯಾಲಯದ ಅಧಿಕಾರವನ್ನು ಇದು ಕಿತ್ತುಕೊಂಡಿದೆ ಎಂಬುದು ಸರಿ. ಆದರೆ ಹಲವಾರು ನ್ಯಾಯಾಧೀಶರು ಸಾಂವಿಧಾನಿಕ ಹಕ್ಕುಗಳನ್ನು ಎತ್ತಿ ಹಿಡಿದರೆ ಈ  ವೈಫಲ್ಯಗಳನ್ನು ತಪ್ಪಿಸಲು ಸಾಧ್ಯವಿದೆ. ಸಂವಿಧಾನ ವಿವಿಧ ರೂಪಗಳಲ್ಲಿ ಅಂತಹ ಅಧಿಕಾರ ನೀಡಿದೆ’ ಎಂದರು.

Also Read: ಉತ್ತಮ-ಪ್ರಾಮಾಣಿಕ ನಾಯಕರು ಯಾರು?

ಯುಎಪಿಎ ಕಾನೂನಿನ ದುರುಪಯೋಗ ತಡೆಯಬಹುದಿತ್ತು. ಕೆಲವು ನ್ಯಾಯಾಧೀಶರು ನೈತಿಕವಾಗಿ ಭ್ರಷ್ಟಗೊಂಡಿದ್ದಾರೆ ಎಂಬುದಂತೂ ಸತ್ಯ’ ಎನ್ನುತ್ತಾರೆ ರಾಜಲಕ್ಷ್ಮಿ ಅಂಕಲಗಿ.

ಎಸ್. ಆರ್ ಹಿರೇಮಠ ಅವರ ನೇತೃತ್ವದ ‘ಸಿಟಿಜನ್ ಫಾರ್ ಡೆಮಾಕ್ರಸಿ’ ಸಂಘಟನೆಯ ರಾಜ್ಯ ಕಾರ್ಯದರ್ಶಿ, ಡಾ. ವೆಂಕನಗೌಡ ಪಾಟೀಲರು, ‘ ಜಸ್ಟೀಸ್ ಗೋಪಾಲಗೌಡರು ಮತ್ತು ದೀಪಕ್ ಶರ್ಮಾ ಈ ವಿಷಯದಲ್ಲಿ ಧ್ವನಿ ಎತ್ತಿರುವುದು ಸ್ವಾಗತಾರ್ಹ ಬೆಳವಣಿಗೆ.  ಹಿಂದೆ ಕಾಂಗ್ರೆಸ್ ಮೀಸಾ (MISA) ಮತ್ತು ಟಾಡಾ ಕಾಯ್ದೆಗಳನ್ನು ದುರುಪಯೋಗ ಮಾಡಿಕೊಂಡಂತೆ, UAPA ಕಾನೂನನ್ನು ಮೋದಿ ಸರ್ಕಾರ ಭೀಕರವಾಗಿ ಬಳಸುವ ಮೂಲಕ ಪ್ರಜಾಸತ್ತಾತ್ಮಕ ಧ್ವನಿಗಳನ್ನು ಮಟ್ಟ ಹಾಕಲು ನೋಡುತ್ತಿದೆ. ಈ ಕಾನೂನೇ ರದ್ದಾಗಬೇಕು ಎಂಬ ಜನಾಂದೋಲನ ನಡೆಯಬೇಕಿದೆ’ ಎಂದರು.

Also Read: ಹಗಲಲ್ಲಿ ಕವಿದ ಅಂಧಕಾರ- ನ್ಯಾಯಾಂಗದ ಹೊಣೆಗಾರಿಕೆ

ತಲೆಮಾರುಗಳವರೆಗೆ ವಿಚಾರಣೆ ನಡೆದರೂ ಜಾಮೀನು ದೊರೆಯುವುದು ಬಹುತೇಕ ಅಸಾಧ್ಯವಾಗಿದ್ದು ಒಟ್ಟಾರೆ ಅಸಾಂವಿಧಾನಿಕವಾಗಿದೆ. ಈ  ಯುಎಪಿಎ ಕಾನೂನು ಜೀವಿಸುವ ಮೂಲಭೂತ ಹಕ್ಕು, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸಂವಿಧಾನದತ್ತವಾಗಿ ದೊರೆತ ತ್ವರಿತ ವಿಚಾರಣೆಯ ಬುಡಕ್ಕೆ ಪೆಟ್ಟು ನೀಡುತ್ತದೆ’ ಎಂದು ಹಲವಾರು ನಿವೃತ್ತ ನ್ಯಾಯಮೂರ್ತಿಗಳು ಅಟಭಿಪ್ರಾಯಪಟ್ಟಿದ್ದಾರೆ.

ಯುಎಪಿಎ ಅಡಿಯಲ್ಲಿ ಜಾಮೀನು ಪರಿಗಣಿಸುವಾಗ ನ್ಯಾಯಾಲಯಗಳು ಪ್ರಾಸಿಕ್ಯೂಷನ್ ಪ್ರಕರಣದ ವಿವರವಾದ ವಿಶ್ಲೇಷಣೆಯಲ್ಲಿ ತೊಡಗಿಸಿಕೊಳ್ಳಲು ಕೂಡ ಅನುಮತಿ ಇಲ್ಲ ಮತ್ತು ಪ್ರಾಸಿಕ್ಯೂಷನ್ ಒದಗಿಸಿದ ಸಾಕ್ಷ್ಯಗಳು ಸರಿ ಇವೆಯೇ  ಇಲ್ಲವೆ ಎಂಬುದನ್ನು ಅಳೆಯಲು ಕೂಡ ಆಗದು ಎನ್ನುತ್ತಾರೆ ಹಿರಿಯ ವಕೀಲರುಗಳು.

ಈ ಭೀಕರ ಪ್ರಜಾಸತ್ತಾತ್ಮಕ ಕಾನೂನು ಇನ್ನಷ್ಟು ಅಮಾಯಕರು, ಚಿಂತಕರನ್ನು ಬಲಿ ತೆಗೆದುಕೊಳ್ಳಬಹುದು? ಈಗ UAPA ವಿರುದ್ಧ ಜನಾಂದೋಲನ ಶುರು ಮಾಡುವ ಕಾಲ ಬಂದಿದೆ ಅಲ್ಲವೇ?

.

Previous Post

ರಾಜ್ಯದ ಮುಂದಿನ ಮುಖ್ಯಮಂತ್ರಿ ಬಿ.ಎಲ್ ಸಂತೋಷ್?

Next Post

ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಭಿನ್ನಮತ; ಸಂಪುಟ ಪುನರ್ರಚನೆಯ ಅಸ್ತ್ರ ಪ್ರಯೋಗಕ್ಕೆ ಮುಂದಾದ ಹೈಕಮಾಂಡ್

Related Posts

“ನರೇಗಾ ಉಳಿಸಿ” ಜನಾಂದೋಲನದ ಆಯೋಜನೆ ಕುರಿತು ಸಮಾಲೋಚನೆ ನಡೆಸಿದ ಸಿಎಂ ಸಿದ್ದರಾಮಯ್ಯ..!!
Top Story

“ನರೇಗಾ ಉಳಿಸಿ” ಜನಾಂದೋಲನದ ಆಯೋಜನೆ ಕುರಿತು ಸಮಾಲೋಚನೆ ನಡೆಸಿದ ಸಿಎಂ ಸಿದ್ದರಾಮಯ್ಯ..!!

by ಪ್ರತಿಧ್ವನಿ
January 8, 2026
0

ಮಹಾತ್ಮ‌ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತೆ ಜಾರಿಗೆ ತರುವಂತೆ ಒತ್ತಾಯಿಸಿ ನಿರ್ಣಯ ಅಂಗೀಕರಿಸಲು ಶೀಘ್ರವೇ ವಿದಾನ ಮಂಡಲದ ವಿಶೇಷ ಅಧಿವೇಶನ ಕರೆಯಲಾಗುವುದು. ಇದು ಬಿಜೆಪಿಯವರ ಹುನ್ನಾರ....

Read moreDetails
ಪ್ರಹ್ಲಾದ್ ಜೋಷಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ:: ಡಿ.ಕೆ. ಶಿವಕುಮಾರ್

ಪ್ರಹ್ಲಾದ್ ಜೋಷಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ:: ಡಿ.ಕೆ. ಶಿವಕುಮಾರ್

January 8, 2026
KJ George: 77.17 ಕೋಟಿ ರೂಗಳ ಲಾಭಾಂಶವನ್ನು ಸಿದ್ದರಾಮಯ್ಯನವರಿಗೆ ನೀಡಿದ ಕ್ರೆಡಲ್..‌!!

KJ George: 77.17 ಕೋಟಿ ರೂಗಳ ಲಾಭಾಂಶವನ್ನು ಸಿದ್ದರಾಮಯ್ಯನವರಿಗೆ ನೀಡಿದ ಕ್ರೆಡಲ್..‌!!

January 8, 2026
‘ವರ್ಡ್ ಪವರ್ ಈಸ್ ವರ್ಲ್ಡ್ ಪವರ್’, ಕೊಟ್ಟ ಮಾತಿನಂತೆ ನಡೆಯಬೇಕು. ಡಿ.ಕೆ. ಶಿವಕುಮಾರ್

‘ವರ್ಡ್ ಪವರ್ ಈಸ್ ವರ್ಲ್ಡ್ ಪವರ್’, ಕೊಟ್ಟ ಮಾತಿನಂತೆ ನಡೆಯಬೇಕು. ಡಿ.ಕೆ. ಶಿವಕುಮಾರ್

January 8, 2026
ವಿದ್ಯಾರ್ಥಿಗಳಿಗೆ ನಮ್ಮ ಮೆಟ್ರೋದಲ್ಲಿ ರಿಯಾಯಿತಿ ಪಾಸ್‌ ನೀಡಲು ಸಹಿ ಸಂಗ್ರಹಿಸಿದ ಎಎಪಿ ಯುವ ಘಟಕ..

ವಿದ್ಯಾರ್ಥಿಗಳಿಗೆ ನಮ್ಮ ಮೆಟ್ರೋದಲ್ಲಿ ರಿಯಾಯಿತಿ ಪಾಸ್‌ ನೀಡಲು ಸಹಿ ಸಂಗ್ರಹಿಸಿದ ಎಎಪಿ ಯುವ ಘಟಕ..

January 8, 2026
Next Post
ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಭಿನ್ನಮತ; ಸಂಪುಟ ಪುನರ್ರಚನೆಯ ಅಸ್ತ್ರ ಪ್ರಯೋಗಕ್ಕೆ ಮುಂದಾದ ಹೈಕಮಾಂಡ್

ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಭಿನ್ನಮತ; ಸಂಪುಟ ಪುನರ್ರಚನೆಯ ಅಸ್ತ್ರ ಪ್ರಯೋಗಕ್ಕೆ ಮುಂದಾದ ಹೈಕಮಾಂಡ್

Please login to join discussion

Recent News

“ನರೇಗಾ ಉಳಿಸಿ” ಜನಾಂದೋಲನದ ಆಯೋಜನೆ ಕುರಿತು ಸಮಾಲೋಚನೆ ನಡೆಸಿದ ಸಿಎಂ ಸಿದ್ದರಾಮಯ್ಯ..!!
Top Story

“ನರೇಗಾ ಉಳಿಸಿ” ಜನಾಂದೋಲನದ ಆಯೋಜನೆ ಕುರಿತು ಸಮಾಲೋಚನೆ ನಡೆಸಿದ ಸಿಎಂ ಸಿದ್ದರಾಮಯ್ಯ..!!

by ಪ್ರತಿಧ್ವನಿ
January 8, 2026
ಪ್ರಹ್ಲಾದ್ ಜೋಷಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ:: ಡಿ.ಕೆ. ಶಿವಕುಮಾರ್
Top Story

ಪ್ರಹ್ಲಾದ್ ಜೋಷಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ:: ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
January 8, 2026
KJ George: 77.17 ಕೋಟಿ ರೂಗಳ ಲಾಭಾಂಶವನ್ನು ಸಿದ್ದರಾಮಯ್ಯನವರಿಗೆ ನೀಡಿದ ಕ್ರೆಡಲ್..‌!!
Top Story

KJ George: 77.17 ಕೋಟಿ ರೂಗಳ ಲಾಭಾಂಶವನ್ನು ಸಿದ್ದರಾಮಯ್ಯನವರಿಗೆ ನೀಡಿದ ಕ್ರೆಡಲ್..‌!!

by ಪ್ರತಿಧ್ವನಿ
January 8, 2026
ಯಾವ ಪುರುಷಾರ್ಥಕ್ಕಾಗಿ ನಿಮ್ಮ ಹೋರಾಟ: ಕಾಂಗ್ರೆಸ್‌ ವಿರುದ್ಧ ಗುಡುಗಿದ ಪ್ರಹ್ಲಾದ್‌ ಜೋಶಿ
Top Story

ಯಾವ ಪುರುಷಾರ್ಥಕ್ಕಾಗಿ ನಿಮ್ಮ ಹೋರಾಟ: ಕಾಂಗ್ರೆಸ್‌ ವಿರುದ್ಧ ಗುಡುಗಿದ ಪ್ರಹ್ಲಾದ್‌ ಜೋಶಿ

by ಪ್ರತಿಧ್ವನಿ
January 8, 2026
Kogilu Layout Case: ಸರ್ಕಾರಿ ಜಾಗ ಕಬಳಿಸಿ ಮಾರಾಟ ಮಾಡಿದ್ದ ಇಬ್ಬರು ಅರೆಸ್ಟ್‌
Top Story

Kogilu Layout Case: ಸರ್ಕಾರಿ ಜಾಗ ಕಬಳಿಸಿ ಮಾರಾಟ ಮಾಡಿದ್ದ ಇಬ್ಬರು ಅರೆಸ್ಟ್‌

by ಪ್ರತಿಧ್ವನಿ
January 8, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

“ನರೇಗಾ ಉಳಿಸಿ” ಜನಾಂದೋಲನದ ಆಯೋಜನೆ ಕುರಿತು ಸಮಾಲೋಚನೆ ನಡೆಸಿದ ಸಿಎಂ ಸಿದ್ದರಾಮಯ್ಯ..!!

“ನರೇಗಾ ಉಳಿಸಿ” ಜನಾಂದೋಲನದ ಆಯೋಜನೆ ಕುರಿತು ಸಮಾಲೋಚನೆ ನಡೆಸಿದ ಸಿಎಂ ಸಿದ್ದರಾಮಯ್ಯ..!!

January 8, 2026
ಪ್ರಹ್ಲಾದ್ ಜೋಷಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ:: ಡಿ.ಕೆ. ಶಿವಕುಮಾರ್

ಪ್ರಹ್ಲಾದ್ ಜೋಷಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ:: ಡಿ.ಕೆ. ಶಿವಕುಮಾರ್

January 8, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada