ಈಗ ಪೆಗಾಸಸ್ ಎಂಬ ಸಾಫ್ಟ್ವೇರ್ ಎಂಬ ‘ಅಸ್ತ್ರ’ದ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರ ಹಿಂದೆ UAPA ಎಂಬ ಕಾಯಿದೆಯಿದೆ. ಇದಕ್ಕೂ ಎನ್ಐಎ (ರಾಷ್ಟ್ರೀಯ ತನಿಖಾ ದಳ)ಗೂ ಲಿಂಕ್ ಇದೆ. UAPA ಎಂಬ ಈ ಕರಾಳ ಕಾನೂನು ನ್ಯಾಯಾಂಗೀಯ ವ್ಯವಸ್ಥೆಯ ಅಧಿಕಾರವನ್ನೇ ಕಿತ್ತುಕೊಂಡಿದೆ ಎಂಬ ಮಾತುಗಳನ್ನು ಇಬ್ಬರು ಸುಪ್ರಿಂಕೋರ್ಟಿನ ನ್ಯಾಯಾಧೀಶರು ನಿನ್ನೆ ಹೇಳಿದ್ದಾರೆ. ಆದರೆ, ಸಂವಿದಾನ ನೀಡಿರುವ ಅಧಿಕಾರವನ್ನು ಉಲ್ಲೇಖ ಮಾಡುವ ಕೆಲವರು ನ್ಯಾಯಾಲಯ ಈ ‘ದುರಂತ’ವನ್ನು ತಡೆಯಲು ಸಾಧ್ಯವಿದೆ ಎನ್ನುತ್ತಾರೆ.
ಈ ದಿಸೆಯಲ್ಲಿ ಪ್ರತಿಧ್ವನಿ ಹಲವು ಕಾನೂನು ಪಂಡಿತರು, ಸಾಮಾಜಿಕ ಹೋರಾಟಗಾರರ ಅಭಿಪ್ರಾಯ ಪಡೆದು ಪ್ರಕಟಿಸುತ್ತಿದೆ. ಅದಕ್ಕೂ ಮೊದಲು ಜಸ್ಟೀಸ್ ಗೋಪಾಲಗೌಡರು ಏನು ಹೇಳಿದರು ಎಂಬುದನ್ನು ನೋಡೋಣ.
‘ಜಾಮೀನು ನೀಡುವ ನ್ಯಾಯಾಲಯಗಳ ಪಾತ್ರವನ್ನು ಯುಎಪಿಎ ಕಾಯಿದೆ ನಿರ್ಬಂಧಿಸುತ್ತದೆ ಎಂದಿರುವ ನಿವೃತ್ತ ನ್ಯಾ. ಗೋಪಾಲಗೌಡ, ಈ ಕಾಯಿದೆ ಸರ್ವಾಧಿಕಾರಿ ಧೋರಣೆ ಒಳಗೊಂಡಿರುವುದರಿಂದ ಭಾರತದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ವಿಶೇಷ ಭದ್ರತಾ ಕಾಯಿದೆಗಳಲ್ಲಿ ಭಾರಿ ಸುಧಾರಣೆ ಅಗತ್ಯ ಎಂದು ಅಭಿಪ್ರಾಯ ಪಟ್ಟಿದ್ದಾರೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
Also Read: ಸಂಚಲನ ಸೃಷ್ಟಿಸಿದ ಪೇಗಾಸಸ್ ಲೀಕ್ಸ್: ಮೋದಿ ಆಡಳಿತದ ಟೀಕಾಕಾರರ ಮೊಬೈಲ್ ಗೆ ಕನ್ನ!
ಜಾಮೀನು ನೀಡುವಾಗ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯು (ಯುಎಪಿಎ), ಕಾನೂನು ಕ್ರಮ ಪರಿಶೀಲಿಸುವ ನ್ಯಾಯಾಲಯಗಳ ಪಾತ್ರವನ್ನು ನಿರ್ಬಂಧಿಸುತ್ತದೆ ಮತ್ತು ಪ್ರಾಸಿಕ್ಯೂಷನ್ ವಾದ ತನಗೆ ನಿಜವೆನಿಸಿದರೆ ಜಾಮೀನನ್ನು ತಡೆಯುತ್ತದೆ ಎಂದು ಹೇಳಿದ್ದಾರೆ..
Also Read: ಯುಎಪಿಎ ಕಾಯ್ದೆ ಏಕೆ ಅಷ್ಟು ಕಠೋರ ?
“ಯುಎಪಿಎ: ಪ್ರಜಾಪ್ರಭುತ್ವ, ಭಿನ್ನಾಭಿಪ್ರಾಯ ಮತ್ತು ಸೌಹಾರ್ದ ಕಾನೂನುಗಳು” ಎಂಬ ವಿಷಯದ ಕುರಿತು ‘ಕ್ಯಾಂಪೇನ್ ಫಾರ್ ಜುಡಿಷಿಯಲ್ ಅಕೌಂಟಬಿಲಿಟಿ ಅಂಡ್ ರಿಫಾರ್ಮ್ಸ್’ ’ಸಂಘಟನೆ ಆಯೋಜಿಸಿದ್ದ ಸಾರ್ವಜನಿಕ ಸಂವಾದ ಕಾರ್ಯಕ್ರಮದಲ್ಲಿ ಇದನ್ನು ಅವರು ಹೇಳಿದ್ದಾರೆ.
Also Read: ಇಸ್ರೇಲ್ ಮಾಲ್ವೇರ್ ಬಳಸಿ ರಾಜಕಾರಣಿಗಳು, ಪತ್ರಕರ್ತರ ಚಲನವಲನದ ಮೇಲೆ ಕಣ್ಣಿಟ್ಟಿತ್ತೆ ಸರ್ಕಾರ?
“ಆರೋಪಿತ ವ್ಯಕ್ತಿಯ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ನಂಬಲು ಸೂಕ್ತ ಆಧಾರಗಳಿವೆ ಎನಿಸಿದರೂ ಕೇಸ್ ಡೈರಿಯ ಪರಿಶೀಲನೆ ಮತ್ತು ನ್ಯಾಯಾಲಯದ ಅಭಿಪ್ರಾಯದಲ್ಲಿ, ಯುಎಪಿಎ ಸೆಕ್ಷನ್ ೪೩ ಡಿ (೫) ಜಾಮೀನು ನಿರ್ಬಂಧಿಸುತ್ತದೆ” ಎಂದು ಅಭಿಪ್ರಾಯಪಟ್ಟರು.
ಈ ಕುರಿತಂತೆ ಮಾತನಾಡಿರುವ ನಿವೃತ್ತ ಸುಪ್ರಿಂಕೋರ್ಟ್ ನ್ಯಾಯಾಧೀಶ ದೀಪಕ್ ಮಿಶ್ರಾ ಕೂಡ, ನಾವು ಮನುಷ್ಯತ್ವನ್ನೇ ಮರೆತು ಬಿಟ್ಟೆವಾ ಎಂದು ಪ್ರಶ್ನೆ ಮಾಡಿದ್ದಾರೆ.
Also Read: ಈ ಸಾವಿಗೆ ನಾವೆಲ್ಲರೂ ಹೊಣೆ
“84 ವಯಸ್ಸಿನ ಫಾದರ್ ಸ್ಟಾನ್ ಸ್ವಾಮಿ, ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ ವಿಚಾರಣೆ ನಡೆಸದೇ ಜೈಲಿನಲ್ಲಿ ಕೊಳೆಯಿಸಿದ್ದು ನ್ಯಾಯವೇ? ಅಂದರೆ ನಾವು ಮನುಷ್ಯರಲ್ಲವೇ, ನಾವು ಮನುಷ್ಯತ್ವದ ಎಲ್ಲಾ ಸ್ಪರ್ಶ ಕಳೆದುಕೊಂಡಿದ್ದೇವೆಯೇ? ಯುಎಪಿಎ ಕಾಯಿದೆಯ 43 ಡಿ ಅಥವಾ 43 ಇ ಪ್ರಕಾರ ಅಂತಹ ವ್ಯಕ್ತಿಗೆ ಜಾಮೀನು ನೀಡಬೇಕು. ಅಲ್ಲಿ ಈ ಜನರಿಗೆ ಜಾಮೀನು ನೀಡಲು ಉನ್ನತ ನ್ಯಾಯಾಲಯದ ಅಧಿಕಾರ ಬಳಕೆಯಾಗಬೇಕು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಯುಎಪಿಎ ವಿರುದ್ಧ ದೇಶದಲ್ಲಿ ನೂರಾರು ಕಡೆ ಪ್ರತಿಭಟನೆ ಅಥವಾ ಪ್ರತಿರೋಧ ನಡೆಯುತ್ತಿದೆ. ಈ ಸಂದರ್ಭದಲ್ಲಿ ನ್ಯಾಯಾಂಗೀಯ ವ್ಯವಸ್ಥೆ ಅದರಲ್ಲೂ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿದ್ದ ಗೋಪಾಲಗೌಡ ಮತ್ತು ದೀಪಕ್ ಶರ್ಮಾ ಅವರು ಹೇಳಿದ್ದರ ಹಿಂದೆ ಸಾಕಷ್ಟು ಸತ್ಯಗಳಿವೆ.
ಈ ಕುರಿತಂತೆ ಪ್ರತಿಧ್ವನಿ ಇಬ್ದರು ಹೈಕೋರ್ಟ್ ವಕೀಲರನ್ನು ಮಾತನಾಡಿಸಿತು.
Also Read: ವ್ಯವಸ್ಥೆಯೇ ಕೊಲೆಗೈದ ಸ್ಟ್ಯಾನ್ ಸ್ವಾಮಿ ಮತ್ತು ಕೊಳೆತು ನಾರುತ್ತಿರುವ ದೇಶದ ಆತ್ಮಸಾಕ್ಷಿ
ಹೈಕೋರ್ಟ್ ವಕೀಲ ಬಿ. ವೆಂಕಟೇಶ್, ‘ಇಬ್ಬರೂ ನಿವೃತ್ತ ನ್ಯಾಯಾಧೀಶರು ಸರಿಯಾಗಿಯೇ ಹೇಳಿದ್ದಾರೆ. ಕೋರ್ಟಿನ ಸ್ವಾತಂತ್ರ್ಯ ಮತ್ತು ಸಂವಿಧಾನ ಕೊಟ್ಟಿರುವ ಹಕ್ಕುಗಳನ್ನುಈ ಯುಎಪಿಎ ಕಿತ್ತುಕೊಂಡಿದೆ. ಈ ಕರಾಳ ಕಾನೂನು ರದ್ದಾಗಬೇಕು’ ಎಂದರು. UAPA ಒಂದು ಕರಾಳ ಕಾನೂನು ಎಂಬುದಕ್ಕೆ ಯಾವುದೇ ಡೌಟ್ ಬೇಡ’ ಎನ್ನುತ್ತಾರೆ ವಕೀಲ ಬಿ. ವೆಂಕಟೇಶ್.
ಈ ಬಗ್ಗೆ ಪ್ರತಿಧ್ವನಿ ಜೊತೆ ಮಾತನಾಡಿದ ಹೈಕೋರ್ಟ್ ವಕೀಲೆ ರಾಜಲಕ್ಷ್ಮಿ ಅಂಕಲಗಿ, ‘ ಎರಡೆರಡು ವರ್ಷ ವಿಚಾರಣೆ ನಡೆಸದೇ ಒಬ್ಬ ಹಿರಿಯ ನಾಗರಿಕರಿಗೆ ಚಿತ್ರಹಿಂಸೆ ನೀಡುವಂತಹ ಈ ಕಾನೂನೇ ಭಯೋತ್ಪಾದಕ. ನ್ಯಾಯಾಲಯದ ಅಧಿಕಾರವನ್ನು ಇದು ಕಿತ್ತುಕೊಂಡಿದೆ ಎಂಬುದು ಸರಿ. ಆದರೆ ಹಲವಾರು ನ್ಯಾಯಾಧೀಶರು ಸಾಂವಿಧಾನಿಕ ಹಕ್ಕುಗಳನ್ನು ಎತ್ತಿ ಹಿಡಿದರೆ ಈ ವೈಫಲ್ಯಗಳನ್ನು ತಪ್ಪಿಸಲು ಸಾಧ್ಯವಿದೆ. ಸಂವಿಧಾನ ವಿವಿಧ ರೂಪಗಳಲ್ಲಿ ಅಂತಹ ಅಧಿಕಾರ ನೀಡಿದೆ’ ಎಂದರು.
Also Read: ಉತ್ತಮ-ಪ್ರಾಮಾಣಿಕ ನಾಯಕರು ಯಾರು?
ಯುಎಪಿಎ ಕಾನೂನಿನ ದುರುಪಯೋಗ ತಡೆಯಬಹುದಿತ್ತು. ಕೆಲವು ನ್ಯಾಯಾಧೀಶರು ನೈತಿಕವಾಗಿ ಭ್ರಷ್ಟಗೊಂಡಿದ್ದಾರೆ ಎಂಬುದಂತೂ ಸತ್ಯ’ ಎನ್ನುತ್ತಾರೆ ರಾಜಲಕ್ಷ್ಮಿ ಅಂಕಲಗಿ.
ಎಸ್. ಆರ್ ಹಿರೇಮಠ ಅವರ ನೇತೃತ್ವದ ‘ಸಿಟಿಜನ್ ಫಾರ್ ಡೆಮಾಕ್ರಸಿ’ ಸಂಘಟನೆಯ ರಾಜ್ಯ ಕಾರ್ಯದರ್ಶಿ, ಡಾ. ವೆಂಕನಗೌಡ ಪಾಟೀಲರು, ‘ ಜಸ್ಟೀಸ್ ಗೋಪಾಲಗೌಡರು ಮತ್ತು ದೀಪಕ್ ಶರ್ಮಾ ಈ ವಿಷಯದಲ್ಲಿ ಧ್ವನಿ ಎತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಹಿಂದೆ ಕಾಂಗ್ರೆಸ್ ಮೀಸಾ (MISA) ಮತ್ತು ಟಾಡಾ ಕಾಯ್ದೆಗಳನ್ನು ದುರುಪಯೋಗ ಮಾಡಿಕೊಂಡಂತೆ, UAPA ಕಾನೂನನ್ನು ಮೋದಿ ಸರ್ಕಾರ ಭೀಕರವಾಗಿ ಬಳಸುವ ಮೂಲಕ ಪ್ರಜಾಸತ್ತಾತ್ಮಕ ಧ್ವನಿಗಳನ್ನು ಮಟ್ಟ ಹಾಕಲು ನೋಡುತ್ತಿದೆ. ಈ ಕಾನೂನೇ ರದ್ದಾಗಬೇಕು ಎಂಬ ಜನಾಂದೋಲನ ನಡೆಯಬೇಕಿದೆ’ ಎಂದರು.
Also Read: ಹಗಲಲ್ಲಿ ಕವಿದ ಅಂಧಕಾರ- ನ್ಯಾಯಾಂಗದ ಹೊಣೆಗಾರಿಕೆ
ತಲೆಮಾರುಗಳವರೆಗೆ ವಿಚಾರಣೆ ನಡೆದರೂ ಜಾಮೀನು ದೊರೆಯುವುದು ಬಹುತೇಕ ಅಸಾಧ್ಯವಾಗಿದ್ದು ಒಟ್ಟಾರೆ ಅಸಾಂವಿಧಾನಿಕವಾಗಿದೆ. ಈ ಯುಎಪಿಎ ಕಾನೂನು ಜೀವಿಸುವ ಮೂಲಭೂತ ಹಕ್ಕು, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸಂವಿಧಾನದತ್ತವಾಗಿ ದೊರೆತ ತ್ವರಿತ ವಿಚಾರಣೆಯ ಬುಡಕ್ಕೆ ಪೆಟ್ಟು ನೀಡುತ್ತದೆ’ ಎಂದು ಹಲವಾರು ನಿವೃತ್ತ ನ್ಯಾಯಮೂರ್ತಿಗಳು ಅಟಭಿಪ್ರಾಯಪಟ್ಟಿದ್ದಾರೆ.
ಯುಎಪಿಎ ಅಡಿಯಲ್ಲಿ ಜಾಮೀನು ಪರಿಗಣಿಸುವಾಗ ನ್ಯಾಯಾಲಯಗಳು ಪ್ರಾಸಿಕ್ಯೂಷನ್ ಪ್ರಕರಣದ ವಿವರವಾದ ವಿಶ್ಲೇಷಣೆಯಲ್ಲಿ ತೊಡಗಿಸಿಕೊಳ್ಳಲು ಕೂಡ ಅನುಮತಿ ಇಲ್ಲ ಮತ್ತು ಪ್ರಾಸಿಕ್ಯೂಷನ್ ಒದಗಿಸಿದ ಸಾಕ್ಷ್ಯಗಳು ಸರಿ ಇವೆಯೇ ಇಲ್ಲವೆ ಎಂಬುದನ್ನು ಅಳೆಯಲು ಕೂಡ ಆಗದು ಎನ್ನುತ್ತಾರೆ ಹಿರಿಯ ವಕೀಲರುಗಳು.
ಈ ಭೀಕರ ಪ್ರಜಾಸತ್ತಾತ್ಮಕ ಕಾನೂನು ಇನ್ನಷ್ಟು ಅಮಾಯಕರು, ಚಿಂತಕರನ್ನು ಬಲಿ ತೆಗೆದುಕೊಳ್ಳಬಹುದು? ಈಗ UAPA ವಿರುದ್ಧ ಜನಾಂದೋಲನ ಶುರು ಮಾಡುವ ಕಾಲ ಬಂದಿದೆ ಅಲ್ಲವೇ?
.