Shivakumar A

Shivakumar A

ಲಾಲು ಪುತ್ರ ತೇಜಸ್ವಿಯ ರೋಚಕ ಕ್ರಿಕೆಟ್‌ ಪ್ರಯಾಣ

ಆರ್ ಜೆ ಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಪುತ್ರ ಅಖಿಲೇಶ್ ಯಾದವ್ ಅದೃಷ್ಟ ನಿಜಕ್ಕೂ ಖುಲಾಯಿಸಿದೆ. ಕಳೆದ ಬಿಹಾರ ಸಾರ್ವ್ರತಿಕ ಚುನಾವಣೆಯಲ್ಲಿ ರಾಜ್ಯದ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಅಧಿಕಾರದಿಂದ ವಂಚಿತರಾಗಿದ್ದ ತೇಜಸ್ವಿ ಯಾದವ್, ಈಗ ಡಿಸಿಎಂ ಆಗಿದ್ದಾರೆ. ಅಂದಹಾಗೇ, ಇವರು ತಮ್ಮ ಅದೃಷ್ಟ ಪರೀಕ್ಷೆಯನ್ನು ಕೇವಲ ರಾಜಕೀಯ ಕ್ಷೇತ್ರದಲ್ಲಿ ಮಾತ್ರ ನಡೆಸಿಲ್ಲ. ಬದಲಾಗಿ, ಕ್ರಿಕೆಟ್’ನಲ್ಲಿಯೂ ಮಿಂಚಲು ಕೆಲಕಾಲ ಪ್ರಯತ್ನಿಸಿದ ಇವರು ಅದೃಷ್ಟ ಕೈಹಿಡಿಯದೇ ಇದ್ದಾಗ ರಾಜಕೀಯಕ್ಕೆ ಮರಳಿದ್ದರು. ಇವರ ಕ್ರಿಕೆಟ್ ಜೀವನದ ಕುರಿತ ಸಂಕ್ಷಿಪ್ತ ವಿವರ ಇಲ್ಲಿದೆ.  ತೇಜಸ್ವಿ ಯಾದವ್ ಅವರ ಮೊದಲ ಆಯ್ಕೆ ರಾಜಕೀಯ ಆಗಿರಲೇ ಇಲ್ಲ. ಕ್ರಿಕೆಟ್’ನಲ್ಲಿಯೇ ತಮ್ಮ ವೃತ್ತಿಜೀವನವನ್ನು ಮುಂದುವರೆಸಬೇಕೆಂಬುದು ಅವರ ಉದ್ದೇಶವಾಗಿತ್ತು. ಆದರೆ, ಕ್ರಿಕೆಟ್’ನಲ್ಲಿ ಅಂದುಕೊಂಡಿದ್ದು ಸಾಧಿಸಲು ಸಾಧ್ಯವಾಗದೇ ಇದ್ದಾಗ ಅನಿವಾರ್ಯವಾಗಿ ರಾಜಕೀಯದೆಡೆಗೆ ಮುಖ ಮಾಡಬೇಕಾಯಿತು.  2008ರಲ್ಲಿ ತೇಜಸ್ವಿ ಯಾದವ್ ಐಪಿಎಲ್’ನಲ್ಲಿಯೂ ಕಾಣಿಸಿಕೊಂಡಿದ್ದರು. ಡೆಲ್ಲಿ ಡೇರ್ ಡೆವಿಲ್ಸ್ (ಇಂದಿನ ಡೆಲ್ಲಿ ಕ್ಯಾಪಿಟಲ್ಸ್) ತಂಡದಲ್ಲಿ ನಾಲ್ಕು ವರ್ಷ ಗುರುತಿಸಿಕೊಂಡಿದ್ದರು. ಆದರೆ, 2008 ರಿಂದ 2012ರವರೆಗೆ ಒಂದೇ ಒಂದು ಪಂದ್ಯವನ್ನಾಡುವ ಅವಕಾಶ ಅವರಿಗೆ ಒದಗಿ ಬಂದಿಲ್ಲ.  ಕ್ರೀಡೆಯಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರೆಸಲು ಹತ್ತನೇ ತರಗತಿಯಲ್ಲಿಯೇ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದರು. ದೆಹಲಿಯ ಡೆಲ್ಲಿ ಪಬ್ಲಿಕ್ ಸ್ಕೂಲ್’ನಲ್ಲಿ ವ್ಯಾಸಂಗ ಮಾಡುತ್ತಿರುವಾಗ ಮಿಡಲ್ ಆರ್ಡರ್ ಬ್ಯಾಟ್ಸ್’ಮನ್ ಆಗಿ ಮಿಂಚಿದ್ದರು. ದೆಹಲಿಯ ಅಂಡರ್ -17 ಮತ್ತು ಅಂಡರ್-19 ತಂಡಗಳಲ್ಲಿಯೂ ಅವರು ಆಡಿದ್ದರು. ಇದೇ ಸಮಯದಲ್ಲಿ ಭಾರತೀಯ ಕ್ರಿಕೆಟ್’ನ ಮಿನುಗು ತಾರೆ ವಿರಾಟ್ ಕೊಹ್ಲಿಯೂ ಅವರ ತಂಡದಲ್ಲಿದ್ದರು.  ತೇಜಸ್ವಿ ಅವರಿಗೆ 2009ರಲ್ಲಿ ಜಾರ್ಖಂಡ್ ಪರ ರಣಜಿಯಲ್ಲಿಯೂ ಅವಕಾಶ ದೊರೆಯಿತು. ವಿದರ್ಭಾ ಎದುರಿನ ಪಂದ್ಯದ ಪ್ಲೇಯಿಂಗ್ ಎಲೆವೆನ್’ನಲ್ಲಿ ಸ್ಥಾನ ಪಡೆದ ತೇಜಸ್ವಿ ತಮ್ಮ ರಣಜಿ ಪಾದಾರ್ಪಣಾ ಪಂದ್ಯದಲ್ಲಿ ಕೇವಲ ಒಂದು ರನ್ ಗಳಿಸಿ ಔಟಾದರು.  ಅಂಡರ್-19 ತಂಡದಲ್ಲಿ ಆಡುತ್ತಿರುವಾಗ, ವಿಶ್ವಕಪ್ ತಂಡಕ್ಕೂ ಆಯ್ಕೆಯಾಗುವುದರಿಂದ ಸ್ವಲ್ಪದರಲ್ಲಿ ವಂಚಿತರಾದರು. ತಂಡದ ಮೀಸಲು ಆಟಗಾರರಾಗಿ ಆಯ್ಕೆಯಾದ ತೇಜಸ್ವಿ ಯಾದವ್, ಆಡುವ ಬಳಗದಲ್ಲಿ ಗುರುತಿಸಿಕೊಂಡಿಲ್ಲ.  ಐಪಿಎಲ್’ನಲ್ಲಿ ನಾಲ್ಕು ವರ್ಷ ಬೆಂಚ್ ಬಿಸಿ ಮಾಡಿದ ಬಳಿಕ, ಕ್ರಿಕೆಟ್’ನಲ್ಲಿ ಆಸಕ್ತಿ ಕಳೆದುಕೊಂಡ ತೇಜಸ್ವಿ ಯಾದವ್ ನಂತರ ರಾಜಕೀಯದ ಕಡೆಗೆ ತಮ್ಮ ಗಮನವನ್ನು ಕೇಂದ್ರೀಕರಿಸಿದರು. ಅಲ್ಲಿಂದ ಇಲ್ಲಿಯವರೆಗೆ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡಿರುವ ಅವರು, ಇಂದು ನಿತೀಶ್ ಕುಮಾರ್ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. 

Read moreDetails

ಬಿಜೆಪಿ ಇನ್ನಷ್ಟು ಬಲವಾದರೆ ಜನರು ಮತದಾನದ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ -ಅಖಿಲೇಶ್ ಯಾದವ್

ಬಿಹಾರದ ರಾಜಕೀಯ ಸ್ಥಾನಪಲ್ಲಟದ ಕುರಿತು ಉತ್ತರ ಪ್ರದೇಶದ ಸಮಾಜವಾದಿ ಪಕ್ಷ ನಾಯಕ ಅಖಿಲೇಶ್ ಯಾದವ್ ಹರ್ಷ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಬಿಜೆಪಿ ದೇಶದಲ್ಲಿ ಇನ್ನಷ್ಟು ಬಲವಾದರೆ ಜನರು ಮತದಾನದ ಹಕ್ಕನ್ನೂ ಕಳೆದುಕೊಳ್ಳುತ್ತಾರೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.  “ನೆರೆ ರಾಷ್ಟ್ರ ಚೀನಾದಲ್ಲಿ ಮತದಾನದ ಹಕ್ಕಿದೆಯೇ? ರಷ್ಯಾದಲ್ಲಿ ಮತದಾನವೆಂಬುದು ಇದೆಯೇ? ಪಾಕಿಸ್ತಾನದಲ್ಲಿ ಸೇನೆಯು ತನಗೆ ಬೇಕಾದವರನ್ನು ಅಧಿಕಾರದಲ್ಲಿ ಕೂರಿಸುತ್ತದೆ. ಮಯನ್ಮಾರ್’ನಂತಹ ದೇಶಗಳಲ್ಲಿ ಚುನಾವಣೆ ಇದೆಯೇ? ಜಾಗರೂಕರಾಗಿರಿ,” ಎಂದು ಅವರು ಹೇಳಿದ್ದಾರೆ.  ದಲಿತ ಮತ್ತು ಹಿಂದುಳಿದ ವರ್ಗಗಳ ಮತಗಳನ್ನು ಪಡೆದ ಬಿಜೆಪಿ ಅವರಿಗೆ ನ್ಯಾಯಯುತವಾಗಿ ದಕ್ಕಬೇಕಾದ ಹಕ್ಕುಗಳನ್ನು ನೀಡಿಲ್ಲ. ನಮ್ಮ ಉದ್ಯೋಗಗಳನ್ನು ಕಸಿದುಕೊಂಡು ನೇರವಾಗಿ ಸಂವಿಧಾನದ ಮೇಲೆ ದಾಳಿ ನಡೆಸುತ್ತಿದ್ದಾರೆ. ಬಿಜೆಪಿ ದೇಶದಲ್ಲಿ ಇನ್ನಷ್ಟು ಸದೃಢಗೊಂಡರೆ ನಿಮ್ಮ ಮತದಾನದ ಹಕ್ಕನ್ನು ಕೂಡಾ ನಿಮ್ಮಿಂದ ಕಸಿದುಕೊಳ್ಳುತ್ತಾರೆ. ಇದು ತಮಾಷೆಯಲ್ಲ, ಎಂದು ಎಚ್ಚರಿಕೆ ನೀಡಿದ್ದಾರೆ.  ಇಂದಿನ ಬಿಜೆಪಿ ಸರ್ಕಾರ ದೇಶದ ಆಸ್ತಿಯನ್ನೆಲ್ಲಾ ಉದ್ಯಮಿಗಳಿಗೆ ಮಾರಿದೆ. ಮುಂದೆ ದೇಶವನ್ನೂ ಮಾರಲಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ನಾವೆಲ್ಲಾ ಉದ್ಯಮಿಗಳ ಗುಲಾಮರಾಗಿ ಬದುಕಲಿದ್ದೇವೆ. ಬ್ರಿಟಿಷರು ದೇಶದಲ್ಲಿ ವ್ಯಾಪಾರ ಮಾಡಲು ಬಂದರು. ನಂತರ ಕಾನೂನುಗಳನ್ನು ಬದಲಾವಣೆ ಮಾಡಿ ಸರ್ಕಾರವನ್ನೇ ರಚಿಸಿದರು. ಇಂದಿನ ಸರ್ಕಾರ ಕೂಡಾ ಉದ್ಯಮಿಗಳ ಸರ್ಕಾರವಷ್ಟೇ ಹೊರತು ಜನರ ಸರ್ಕಾರವಲ್ಲ, ಎಂದಿದ್ದಾರೆ.  ಬಿಹಾರ ಬೆಳವಣಿಗೆಯ ಕುರಿತು ಮಾತನಾಡಿರುವ ಅವರು, ‘ಬಿಜೆಪಿ ಭಾರತ ಬಿಟ್ಟು ತೊಲಗಲಿ’ ಎಂಬ ಧ್ಯೇಯ ವಾಕ್ಯಕ್ಕೆ ಬಿಹಾರದಲ್ಲಿ ಉತ್ತಮ ಆರಂಭ ಲಭಿಸಿದೆ. ‘ಬ್ರೀಟಿಷರೇ ಭಾರತ ಬಿಟ್ಟು ತೊಲಗಿ’ ಎಂಬ ಧ್ಯೇಯ ವಾಕ್ಯ ಆರಂಭವಾದ ದಿನವೇ ‘ಬಿಜೆಪಿ ಭಾರತ ಬಿಟ್ಟು ತೊಲಗಲಿ’ ಎಂಬ ಧ್ಯೇಯ ವಾಕ್ಯವೂ ಹುಟ್ಟಿಕೊಂಡಿದೆ. ಶೀಘ್ರದಲ್ಲಿಯೇ ಆಯಾ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಬಿಜೆಪಿಯ ವಿರುದ್ಧ ರಣಕಹಳೆ ಮೊಳಗಿಸುವ ಸಾಧ್ಯತೆಯಿದೆ, ಎಂದಿದ್ದಾರೆ. 

Read moreDetails

ಬಿಹಾರ: ಗೃಹ ಖಾತೆ, ಸ್ಪೀಕರ್ ಸ್ಥಾನದ ಮೇಲೆ RJD ಕಣ್ಣು; ನಾಲ್ಕು ಸಚಿವ ಸ್ಥಾನಕ್ಕೆ ಕಾಂಗ್ರೆಸ್ ಬೇಡಿಕೆ

ಬಿಹಾರ ರಾಜಕೀಯ ಬೆಳವಣಿಗೆಗಳು ಕ್ಷಣಕ್ಕೊಂದು ತಿರುವು ಪಡೆದು ಜೆಡಿಯುಬಿಜೆಪಿ ನಡುವಿನ ಬಿಕ್ಕಟ್ಟಿನಿಂದ ಆರ್ ಜೆ ಡಿ, ಕಾಂಗ್ರೆಸ್’ಗೆ ಅಧಿಕಾರ ಒಲಿದು ಬಂದಿದೆ. ಈಗ ಜೆಡಿಯು-ಆರ್ ಜೆಡಿ-ಕಾಂಗ್ರೆಸ್ ಹಾಗು ಇತರ ಪಕ್ಷಗಳು ಮುಂದಿನ ಹಂತದ ರಾಜಕೀಯ ಹಗ್ಗಜಗ್ಗಾಟಕ್ಕೆ ಸಿದ್ಧತೆ ನಡೆಸುತ್ತಿವೆ.  ಮಹಾಘಟಬಂಧನ್ ಸರ್ಕಾರದಲ್ಲಿ ಯಾರಿಗೆ ಯಾವ ಖಾತೆ ನೀಡಬೇಕೆಂಬ ಕುರಿತು ಈಗಾಗಲೇ ಚರ್ಚೆ ಆರಂಭವಾಗಿದೆ. ಮೂಲಗಳ ಪ್ರಕಾರ, ಈವರೆಗೆ ನಿತೀಶ್ ಕುಮಾರ್ ತನ್ನ ಪಕ್ಷದಲ್ಲಿಯೇ ಉಳಿಸಿಕೊಂಡಿದ್ದ ಗೃಹಖಾತೆಯ ಮೇಲೆ ಆರ್ ಜೆ ಡಿ ಕಣ್ಣಿಟ್ಟಿದೆ. ಇದರೊಂದಿಗೆ ಸ್ಪೀಕರ್ ಸ್ಥಾನವನ್ನೂ ಕೇಳಿದೆ. ಇನ್ನೊಂದೆಡೆ ಕಾಂಗ್ರೆಸ್’ಗೆ ಮೂರು ಸ್ಥಾನದ ಬದಲು ನಾಲ್ಕು ಕ್ಯಾಬಿನೆಟ್ ದರ್ಜೆಯ ಸ್ಥಾನ ನೀಡಲು ಪಟ್ಟು ಹಿಡಿದಿದೆ.  2015ರಲ್ಲಿ ಕಾಂಗ್ರೆಸ್ ಬಳಿ 27 ಶಾಸಕರಿದ್ದರು. ಆರು ಶಾಸಕರಿಗೆ ಒಂದು ಸಚಿವ ಸ್ಥಾನ ಎಂಬಂತೆ ನಾಲ್ಕು ಸಚಿವ ಸ್ಥಾನಗಳನ್ನು ನೀಡಲಾಗಿತ್ತು. ಈ ಬಾರಿಯೂ ಅದೇ ಸೂತ್ರ ಅನುಸರಿಸಲು ಕಾಂಗ್ರೆಸ್’ಗೆ ಸುತರಾಂ ಇಷ್ಟವಿಲ್ಲ. ಈ ಬಾರಿಯೂ ಅದೇ ಸೂತ್ರ ಅನುಸರಿಸಿದರೆ ಕೇವಲ ಮೂರು ಸ್ಥಾನಗಳಿಗೆ ತೃಪ್ತಿಪಡಬೇಕಾಗುತ್ತದೆ. ಆ ಬದಲು ಈ ಬಾರಿ ನಾಲ್ಕು ಸ್ಥಾನಗಳು ಬೇಕೇ ಬೇಕು ಎಂಬ ಕೂಗು ಕಾಂಗ್ರೆಸ್ ಪಾಳಯದಿಂದ ಕೇಳಿ ಬರುತ್ತಿದೆ. ಕಾಂಗ್ರೆಸ್’ನಿಂದ ಈ ಬಾರಿ ಒಬ್ಬ ದಲಿತ, ಒಬ್ಬ ಮುಸ್ಲಿಂ ಮತ್ತು ಒಬ್ಬ ಮೇಲ್ಜಾತಿಯ ಶಾಸಕ ಸಚಿವರಾಗುವ ಸಾಧ್ಯತೆಯಿದೆ. ನಾಲ್ಕನೇ ಸ್ಥಾನ ಲಭಿಸಿದ್ದಲ್ಲಿ ಅದು ಯಾರ ಪಾಲಿನ ವರವಾಗುತ್ತದೆ ಎಂಬುದು ಇನ್ನೂ ನಿಗೂಢ.  ಮೇಲ್ಜಾತಿ ಕೋಟಾದಲ್ಲಿ, ಪಿಸಿಸಿ ಅಧ್ಯಕ್ಷ ಮದನ್ ಮೋಹನ್ ಝಾ, ಸಿಎಲ್’ಪಿ ನಾಯಕ ಸಜೀತ್ ಶರ್ಮಾ, ಹಾಘೂ ಹಿರಿಯ ನಾಯಕ ವಿಜಯ್ ಶಂಕರ್ ದುಬೆ ಸಚಿವ ಸ್ಥಾನದ ರೇಸ್’ನಲ್ಲಿದ್ದಾರೆ. ರಾಜೇಶ್ ರಾಮ್ ದಲಿತ ಕೋಟಾದಿಂದ ಸಚಿವರಾಗುವ ಸಾಧ್ಯತೆಗಳಿವೆ. ಮುಸ್ಲಿಂ ಸಮುದಾಯದ ನಾಯಕ ಹಾಗೂ ಕಾಂಗ್ರೆಸ್ ಶಾಸಕ ಶಕೀಲ್ ಅಹ್ಮದ್ ಕೂಡ ಸಚಿವ ಸ್ಥಾನ ಆಕಾಂಕ್ಷಿ. ಒಬ್ಬ ಒಬಿಸಿ ಶಾಸಕನಿಗೂ ಸಚಿವ ಸ್ಥಾನ ನೀಡುವಂತೆ ಒತ್ತಡ ಇರುವುದರಿಂದ ನಾಲ್ಕು ಸ್ಥಾನಗಳಿಗೆ ಬೇಡಿಕೆ ಇಡಲಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ. ಆರ್ ಜೆ ಡಿ ಬಲವಾಗಿ ಪಟ್ಟು ಹಿಡಿದಿದ್ದು, ಈ ಬಾರಿ ಗೃಹ ಖಾತೆ ಹಾಗೂ ಸ್ಪೀಕರ್ ಸ್ಥಾನವನ್ನು ನೀಡಲೇ ಬೇಕು ಎಂದು ಹೇಳಿದೆ. ತೇಜಸ್ವಿ ಯಾದವ್ ಈ ಕುರಿತು ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಎರಡು ಡಿಸಿಎಂಗಳು ಇರಬೇಕು ಎಂಬ ಸೋನಿಯಾ ಗಾಂಧಿ ಮನವಿಯನ್ನು ನೇರವಾಗಿ ತಿರಸ್ಕರಿಸಿದ್ದಾರೆ.  ಸದ್ಯಕ್ಕೆ ಬಿಹಾರದಲ್ಲಿ ಅತೀ ದೊಡ್ಡಪಕ್ಷವಾಗಿರುವ ಆರ್ ಜೆ ಡಿ ರಾಜ್ಯ ಕ್ಯಾಬಿನೆಟ್’ನಲ್ಲಿ ದೊಡ್ಡ ಪಾಲು ಪಡೆಯುವ ಸಾಧ್ಯತೆಗಳಿವೆ. ನಿತೀಶ್ ಕುಮಾರ್’ಗೆ ಸಿಎಂ ಸ್ಥಾನ ಲಭಿಸುವುದು ಖಚಿತವಾದ್ದರಿಂದ ಜೆಡಿಯು ಇತರೆ ಪ್ರಮುಖ ಸಚಿವ ಸ್ಥಾನ ಪಡೆಯಲು ಪಟ್ಟು ಹಿಡಿಯುವ ಹಾಗೆಯೂ ಇಲ್ಲ.  ಒಟ್ಟಿನಲ್ಲಿ, ಬಿಜೆಪಿಜೆಡಿಯು ನಡುವಿನ ವೈಮನಸ್ಯದಿಂದ ಆರ್ ಜೆ ಡಿ ಮತ್ತು ಕಾಂಗ್ರೆಸ್’ಗೆ ಶುಕ್ರದೆಸೆ ಆರಂಭವಾಗಿದೆ. ಹಾಗಾಗಿ, ಈ ಸಂದರ್ಭದಲ್ಲಿಯೇ ಪ್ರಮುಖ ಖಾತೆಗಳನ್ನು ಬಾಚಿಕೊಂಡರೆ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಯೂ ಸುಲಭವಾಗಲಿದೆ ಎನ್ನುವ ಕಾರಣಕ್ಕೆ ಮೂರೂ ಪಕ್ಷಗಳು ಜಿದ್ದಾಜಿದ್ದಿಗೆ ಬಿದ್ದಿವೆ. 

Read moreDetails

ಭಾನುವಾರ ಕೋವಿಡ್ ಪಾಸಿಟಿವ್, ಸೋಮವಾರ ಕೋವಿಡ್ ನೆಗೆಟಿವ್- ಇದು ಬಿಹಾರ ಸ್ಪೀಕರ್ ಕತೆ

ಬಿಹಾರದಲ್ಲಿ ನಡೆಯುತ್ತಿರುವ ರಾಜಕೀಯ ಬೃಹನ್ನಾಟಕದ ವೇದಿಕೆಯಲ್ಲಿ ಬಿಜೆಪಿ ಶಾಸಕ ಮತ್ತು ಬಿಹಾರ ವಿಧಾನಸಭೆ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ಅವರ ಪಾತ್ರವೂ ಜನಮೆಚ್ಚುಗೆ ಗಳಿಸಿದೆ. ನಿತೀಶ್ ಕುಮಾರ್ ಮೈತ್ರಿಕೂಟವನ್ನು ಬದಲಾಯಿಸುವ ನಿರ್ಧಾರ ಪ್ರಕಟಿಸಿದ ಕೂಡಲೇ ವಿಜಯ್ ಕುಮಾರ್ ಅವರು ಕೋವಿಡ್’ನಿಂದ ಗುಣಮುಖರಾಗಿದ್ದಾರೆ. ಅದೂ ಕೂಡಾ ಕೇವಲ ಒಂದು ದಿನದಲ್ಲಿ.  ಇದು ಆಶ್ಚರ್ಯವೆನಿಸಿದರೂ ಸತ್ಯ. ಜನಸಾಮಾನ್ಯರಿಗೆ ಕೋವಿಡ್ ತಗುಲಿದರೆ ಒಂದು ವಾರ ಐಸೋಲೇಷನ್, ಸಾಮಾಜಿಕ ಅಂತರ, ಮಾಸ್ಕ್ ಮುಂತಾದ ಮುಂಜಾಗ್ರತಾ ನಿಯಮಗಳ ಪಟ್ಟಿಯನ್ನು ಸರ್ಕಾರ ಈಗಾಗಲೇ ನೀಡಿದೆ. ಆದರೆ, ಇವೆಲ್ಲಾ ನಿಯಮಗಳು ರಾಜಕಾರಣಿಗಳಿಗೆ ಮಾತ್ರ ಅನ್ವಯಿಸುವುದಿಲ್ಲ ಎಂಬುದನ್ನು ಬಿಹಾರದ ಘಟನೆ ಮತ್ತೊಮ್ಮೆ ಸಾಬೀತು ಮಾಡಿದೆ.  ಆದದ್ದೇನೆಂದರೆ, ಆಗಸ್ಟ್ 7ರಂದು ಸಂಜೆ ಮೂರು ಗಂಟೆಯ ವೇಳೆಗೆ ವಿಜಯ್ ಕುಮಾರ್ ಸಿನ್ಹಾ ಅವರು ಟ್ವೀಟ್ ಮಾಡಿ, ನಾನು ಅಸ್ವಸ್ಥನಾಗಿರುವ ಕಾರಣ ಕೋವಿಡ್ ಪರೀಕ್ಷೆ ಮಾಡಿದ್ದೆ. ಅದರ ವರದಿಯ ಪ್ರಕಾರ ನನಗೆ ಕೊರೋನಾ ಸೋಂಕು ತಗುಲಿರುವುದು ಖಚಿತವಾಗಿದೆ. ನಿಯಮಗಳ ಪ್ರಕಾರ ನಾನು ಐಸೋಲೇಷನ್’ಗೆ ತೆರಳುತ್ತಿದ್ದೇನೆ. ನನ್ನ ಜೊತೆ ಯಾರೆಲ್ಲಾ ಸಂಪರ್ಕದಲ್ಲಿ ಇದ್ದೀರಿ ದಯವಿಟ್ಟು ನೀವೂ ಕೋವಿಡ್ ಪರೀಕ್ಷೆ ಮಾಡಿಸಿ ಎಂದು ಕಳಕಳಿ ವ್ಯಕ್ತಪಡಿಸಿದ್ದರು.  https://twitter.com/VijayKrSinhaBih/status/1556215247886659585 ಆದರೆ, ಆಗಸ್ಟ್ 8ರಂದು ಸಂಜೆ ಏಕಾಏಕಿ ಮತ್ತೆ ಕೋವಿಡ್ ಪರೀಕ್ಷೆ ನಡೆಸಿರುವ ವಿಜಯ್ ಕುಮಾರ್ ಸಿನ್ಹಾ, ಕೋವಿಡ್ ನೆಗೆಟಿವ್ ವರದಿ ತರಿಸಿಕೊಂಡಿದ್ದಾರೆ.  ಈ ಕುರಿತಾಗಿ ಮತ್ತೆ ಟ್ವೀಟ್ ಮಾಡಿರುವ ಅವರು, “ದೇವರ ಅದಮ್ಯ ಕೃಪೆಯಿಂದ ಹಾಗು ನನ್ನ ಹಿತೈಷಿಗಳ ಹಾರೈಕೆಯಿಂದ ಇವತ್ತಿನ ಕೋವಿಡ್ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ನಾನು ಮತ್ತೆ ‘ಕರ್ಮಪಥ’ಕ್ಕೆ ಮರಳುತ್ತಿದ್ದೇನೆ,” ಎಂದಿದ್ದಾರೆ.  https://twitter.com/VijayKrSinhaBih/status/1556602936037281793 ಬಿಜೆಪಿಯ ಮಂಗಲ್ ಪಾಂಡೆ ಬಿಹಾರ ರಾಜ್ಯದ ಆರೋಗ್ಯ ಮಂತ್ರಿಯಾಗಿರುವ ಸಂದರ್ಭದಲ್ಲಿ ಬಿಜೆಪಿ ನಾಯಕರೇ ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರುತ್ತಿರುವುದು ಚರ್ಚೆಗೆ ಕಾರಣವಾಗಿದೆ.  ಜೆಡಿಯು ಮತ್ತಿ ಬಿಜೆಪಿ ನಡುವಿನ ಮೈತ್ರಿ ಮುರಿದು ಬೀಳುವ ಸಂದರ್ಭದಲ್ಲಿ ವಿಜಯ್ ಕುಮಾರ್ ಸಿನ್ಹಾ ಅವರ ಪಾತ್ರ ಮಹತ್ವದ್ದಾಗಿದೆ. ಮಹಾಘಟಬಂಧನ್ ಸರ್ಕಾರ ಮತ್ತೆ ಅಸ್ಥಿತ್ವಕ್ಕೆ ಬರಬೇಕಾದರೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕಾದ ಅನಿವಾರ್ಯತೆ ಇದೆ. ಒಂದು ವೇಳೆ, ಈ ಸಂದರ್ಭದಲ್ಲಿ ವಿಜಯ್ ಕುಮಾರ್ ಅವರು ಕೋವಿಡ್ ನೆಪವೊಡ್ಡಿ ಮನೆಯಲ್ಲಿ ಕುಳಿತುಕೊಂಡರೆ, ಅವರ ಸ್ಥಾನದಲ್ಲಿ ಉಪಸಭಾಪತಿಯಾದ ಜೆಡಿಯುನ ಮಹೇಶ್ವರ್ ಹಝಾರಿ ಬರಲಿದ್ದಾರೆ.  ಈ ಕಾರಣಕ್ಕೆ ಸ್ಪೀಕರ್ ಸ್ಥಾನವನ್ನು ಮುಂದಿಟ್ಟುಕೊಂಡು ಬಿಜೆಪಿ ತನ್ನ ತಂತ್ರಗಾರಿಕೆಯನ್ನು ಮುಂದಿವರೆಸಲು ಪ್ರಯತ್ನಿಸುತ್ತಿದೆ. ಹಾಗಾಗಿ ಕೋವಿಡ್ ಪೀಡಿತ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ಅವರನ್ನು ಏಕಾಏಕಿ ಕೋವಿಡ್ ಮುಕ್ತರನ್ನಾಗಿಸಿದೆ ಎಂಬುದಂತು ಸ್ಪಷ್ಟ.  ಈಗಾಗಲೇ ಆರ್ ಜೆಡಿಯ 18 ಶಾಸಕರು ಸದನದಲ್ಲಿ ಅತಿರೇಕದ ವರ್ತನೆ ತೋರಿದ ಆರೋಪಕ್ಕೆ ಗುರಿಯಾಗಿದ್ದಾರೆ. ಅವರ ವಿರುದ್ದ ಶಿಸ್ತು ಸಮಿತಿ ವರದಿಯನ್ನೂ ನೀಡಿದೆ. ಈ ವರದಿಯ ಆಧಾರದ ಮೇಲೆ ಅವರನ್ನು ತಾತ್ಕಾಲಿಕವಾಗಿ ಅಮಾನತು ಮಾಡಿ ಬಹುಮತ ಸಾಬೀತು ಪ್ರಕ್ರಿಯೆಯಿಂದ ಹೊರಗಿರಿಸುವ ಸಾಧ್ಯತೆಗಳೂ ಇವೆ. 

Read moreDetails

ಚೀನೀ ಸ್ಮಾರ್ಟ್‌ಫೋನ್‌ಗಳಿಗೆ ಸಾಲು ಸಾಲು ಕಂಟಕ: ರಿಲಯನ್ಸ್‌ ಜಿಯೋಗೆ ರತ್ನಗಂಬಳಿ?

ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಾಗಿನಿಂದ ಅಂಬಾನಿ-ಅದಾನಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಟೀಕೆಯು ಪದೇ ಪದೇ ಮುನ್ನೆಲೆಗೆ ಬರುತ್ತಿದೆ. ಅದಕ್ಕೆ ಪೂರಕವೆಂಬಂತೆ 2014 ರಿಂದೀಚೆಗೆ ಉಭಯ...

Read moreDetails

4ನೇ ಚೆಸ್‌ ಒಲಿಂಪಿಯಾಡ್‌ ನಲ್ಲಿ ತಮಿಳು ಅಸ್ಮಿತೆ ಪ್ರತಿಪಾದಿಸಿದ ಎಂಕೆ ಸ್ಟಾಲಿನ್‌ ಸರ್ಕಾರ!

ತಮಿಳುನಾಡಿನ ಮಾಮಲ್ಲಪುರಂನಲ್ಲಿ ನಡೆಯುತ್ತಿರುವ 44ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಚೆಸ್ ಆಟಗಾರರು ತಮ್ಮ ಎದುರಾಳಿಗಳ ಮುಂದಿನ ನಡೆಗಳ ಮೇಲೆ ಕೇಂದ್ರೀಕರಿಸುತ್ತಿದ್ದರೆ, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸರ್ಕಾರವು ಒಕ್ಕೂಟ...

Read moreDetails

ಪ್ರವೀಣ್ ನೆಟ್ಟಾರ್ ಮನೆಗೆ ಅಮಿತ್ ಶಾ ಭೇಟಿ ಅನುಮಾನ; ಕಾರ್ಯಕರ್ತರಲ್ಲಿ ಮತ್ತೆ ಅಸಮಾಧಾನ

ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು ಇಲ್ಲಿನ ಮೂರೂ ಪಕ್ಷಗಳು ತಮ್ಮ ತಮ್ಮ ಮಟ್ಟದಲ್ಲಿ ಒಂದು ಹಂತದ ರಾಜಕೀಯ ತಂತ್ರಗಾರಿಕೆಯನ್ನು ಚುರುಕುಗೊಳಿಸಿವೆ. ಸದ್ಯಕ್ಕೆ ಚುನಾವಣೆ ಪೂರ್ವ ತಯಾರಿಯಲ್ಲಿ ಬಿಜೆಪಿಯೂ...

Read moreDetails

ಸಿದ್ದರಾಮೋತ್ಸವದಿಂದ ಬೆದರಿದ ಬಿಜೆಪಿ : ಅಮಿತ್ ಶಾ ದಿಢೀರ್ ಭೇಟಿಗೆ ಕಾರಣವೇನು?

ರಾಜ್ಯದಲ್ಲಿ ಕಳೆದೊಂದು ವಾರಗಳಿಂದ ಸದ್ದು ಮಾಡುತ್ತಿರುವ ಎರಡು ಸುದ್ದಿಗಳೆಂದರೆ, ಕರಾವಳಿಯಲ್ಲಿ ನಡೆದ ಸರಣಿ ಕೊಲೆಗಳು ಮತ್ತು ಸಿದ್ದರಾಮೋತ್ಸವ. ಅದರಲ್ಲೂ ಕಾಂಗ್ರೆಸ್ ಶಕ್ತಿ ಪ್ರದರ್ಶನದ ವೇದಿಕೆಯಾಗಿ ಮಾರ್ಪಾಡಾಗಿರುವ ಸಿದ್ದರಾಮೋತ್ಸವ...

Read moreDetails

ಕೊನೆಗೂ ಅಂತ್ಯಗೊಂಡ 5ಜಿ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ: ಅತಿದೊಡ್ಡ ಬಿಡ್‌ದಾರನಾಗಿ ಹೊರಹೊಮ್ಮಿದ ಜಿಯೋ

ಭಾರತದ ಅತಿದೊಡ್ಡ ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆ ಕೊನೆಗೂ ಸೋಮವಾರ ಅಂತ್ಯಗೊಂಡಿದೆ. ಬರೋಬ್ಬರಿ ಏಳು ದಿನಗಳ ಕಾಲ 40 ಸುತ್ತುಗಳಲ್ಲಿ ಬಿಡ್ಡಿಂಗ್‌ ಪ್ರಕ್ರಿಯೆ ನಡೆದಿದೆ. ಹರಾಜು ಪ್ರಕ್ರಿಯೆಯು ಮೂರು...

Read moreDetails

‘ಹಾರಾಡುವ ಶವ ಪೆಟ್ಟಿಗೆ’ ಎಂಬ ಕುಖ್ಯಾತಿಯ ಮತ್ತೊಂದು ಮಿಗ್-21 ಯುದ್ಧ ವಿಮಾನದ ಒಂದು ಸ್ಥೂಲ ನೋಟ!

ಹಾರಾಡುವ ಶವ ಪೆಟ್ಟಿಗೆ ಎಂಬ ಕುಖ್ಯಾತಿಯನ್ನು ಹೊತ್ತಿರುವ ಮಿಗ್ – 21 ಫೈಟರ್ ಜೆಟ್ ಮೂರು ದಿನಗಳ ಹಿಂದಷ್ಟೆ ಇನ್ನಿಬ್ಬರು ವೀರ ಯೋಧರ ಜೀವವನ್ನು ಬಲಿ ಪಡೆದುಕೊಂಡಿದೆ....

Read moreDetails

ಭಾರತಕ್ಕೂ ಲಗ್ಗೆಯಿಟ್ಟ ‘ಗೂಗಲ್ ಸ್ಟ್ರೀಟ್ ವ್ಯೂ’ ; ಏನಿದರ ವಿಶೇಷತೆ – ಹೇಗಿದು ಕಾರ್ಯನಿರ್ವಹಿಸುತ್ತದೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಗೂಗಲ್ ಸ್ಟ್ರೀಟ್ ವ್ಯೂ ಎಂಬ ವಿಶೇಷ ಸೌಲಭ್ಯವು ಇದೀಗ ಭಾರತಕ್ಕೂ ಕಾಲಿಟ್ಟಿದ್ದು ದೇಶದ 10 ನಗರಗಳಲ್ಲಿ ಈ ಸೇವೆ ಇದೀಗ ಪ್ರಾರಂಭಗೊಂಡಿದ್ದು ವರ್ಷಾಂತ್ಯದಲ್ಲಿ 50 ನಗರಗಳಿಗೆ ಈ...

Read moreDetails

ಮೈಕ್ರೋಸಾಫ್ಟ್ ಉದ್ಯೋಗಿ ವಿಕೆಂಡಿನಲ್ಲಿ Rapido ಡ್ರೈವರ್; ಇದು ಬೆಂಗಳೂರಿನ ‘ಟೆಕ್ಕಿ ಲೈಫ್’ನ ರಿಲಾಕ್ಸೇಷನ್ ಟೆಕ್ನಿಕ್!

ಕಾರ್ಪೊರೇಟ್ ವಲಯದಲ್ಲಿ ಉದ್ಯೋಗವೆಂಬುದು ಎಲ್ಲರ ಕನಸೇ ಸರಿ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ, ಅಲ್ಲಿರುವ ಅತ್ಯಾಧುನಿಕ ರೀತಿಯ ಕಾರ್ಯ ಸ್ಥಳ, ಆಕರ್ಷಕ ಪ್ಯಾಕೇಜ್, ಫಾರಿನ್ ಟ್ರಿಪ್ ಹೀಗೆ ಹತ್ತಾರು...

Read moreDetails

ಕಾಂಗ್ರೆಸ್ ಭಿನ್ನಾಭಿಪ್ರಾಯಕ್ಕೆ ಇತಿಶ್ರೀ ಹಾಡಿತೇ ಇಡಿ ವಿಚಾರಣೆ?

ಗಾಂಧಿ ಪರಿವಾರದ ವಿರುದ್ಧ ಇಡಿ ವಿಚಾರಣೆಯ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಪಕ್ಷ ಸಂಘಟನೆ ಮಡುವತ್ತ ಗಮನವನ್ನು ಕೇಂದ್ರೀಕರಿಸಿದೆ. ಪಕ್ಷದೊಳಗಿನ ಭಿನ್ನಮತವನ್ನು ನಿಧಾನವಾಗಿ ಹತ್ತಿಕ್ಕಲು ಇಡಿ ವಿಚಾರಣೆ ಅನುಕೂಲ...

Read moreDetails

ಕೋಮು ರಾಜಕೀಯದ ಪ್ರಯೋಗಶಾಲೆಯಲ್ಲಿ ಮತ್ತೊಂದು ಬಲಿ ; ಕೊನೆ ಎಂದು?

ದಕ್ಷಿಣ ಕನ್ನಡ… ಸುಂದರ ಕಡಲಿನ ಅಲೆ, ಸಮುದ್ರ ತೀರದಲ್ಲಿ ಬೀಸುವ ತಂಪಾದ ಗಾಳಿ, ಮತ್ಸ್ಯಪ್ರಿಯರ ಬಾಯಲ್ಲಿ ನೀರೂರಿಸುವ ಖಾದ್ಯಗಳು, ಯಕ್ಷಗಾನ, ಹುಲಿವೇಷ, ಮಂಗಳೂರು ದಸರಾ, ಕರ್ನಾಟಕದ ಶಿಕ್ಷಣ...

Read moreDetails

ಮೂರು ವರ್ಷಗಳಲ್ಲಿ ಮೂರು ಪಟ್ಟಾದ ಮನಿ‌ಲಾಂಡ್ರಿಂಗ್‌ ಪ್ರಕರಣಗಳ ಸಂಖ್ಯೆ: ಸರ್ಕಾರ ಹೇಳುವುದೇನು? 

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ, 1999 (ಫೆಮಾ) ಮತ್ತು ಮನಿ ಲಾಂಡ್ರಿಂಗ್ ಕಾಯ್ದೆ, 2002 (ಪಿಎಂಎಲ್‌ಎ) ಅಡಿಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ಕಳೆದ ಮೂರು ವರ್ಷಗಳಲ್ಲಿ ದಾಖಲಿಸಿಕೊಂಡಿರುವ...

Read moreDetails

ಎಲ್.ಡಿ.ಎಫ್. ಮೈತ್ರಿಕೂಟದ ಅತೃಪ್ತ ಪಕ್ಷಗಳಿಗೆ ಯು.ಡಿ.ಎಫ್. ಗಾಳ; ದೇವರ ನಾಡಿನಲ್ಲಿ ‘ಕೈ’ ಬಲಪಡಿಸಲು ನಾಯಕರ ಸಂಕಲ್ಪ

ತಿರುವನಂತಪುರಂ: ಕೇರಳ ಕಾಂಗ್ರೆಸ್ಸಿನಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ಪ್ರಾರಂಭಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ. ಆಡಳಿತಾರೂಢ ಎಡರಂಗ ನೇತೃತ್ವದ ಎಲ್.ಡಿ.ಎಫ್.ನಲ್ಲಿರುವ ತನ್ನ ಹಳೆಯ ಮಿತ್ರ ಪಕ್ಷಗಳಿಗೆ ಮತ್ತೆ ಬಾಗಿಲು ತೆರೆಯಲು...

Read moreDetails

ನಾಳೆಯಿಂದ ಮೋದಿ ಸರ್ಕಾರದ ನೂತನ GST ನೀತಿ ಜಾರಿ : ದಿನಬಳಕೆಯ ವಸ್ತುಗಳ ಬೆಲೆ ಹೆಚ್ಚಳ!

ಬೆಲೆ ಏರಿಕೆ ಸಂಕಷ್ಟದ ಸುಳಿಗೆ ಸಿಲುಕಿರೋ ಜನರಿಗೆ ನಾಳೆಯಿಂದ ಗಾಯದ ಮೇಲೆ ಬರೆ ಬೀಳಲಿದೆ. ಕೇಂದ್ರ ಸರ್ಕಾರ ಜಿಎಸ್ಟಿ ನೀತಿ ಬದಲಾವಣೆ ತಂದಿದ್ದು ಆಹಾರ ವಸ್ತು ಸೇರಿ...

Read moreDetails

ಉತ್ತರ ಪ್ರದೇಶ | ಎರಡನೇ ಅವಧಿಯ ಆದಿತ್ಯನಾಥ್ ಸರ್ಕಾರಕ್ಕೆ 100 ದಿನ : ಸಾಧನೆಗಳೇನು?

ಮಾರ್ಚ್ 25 ರಂದು ಪ್ರಮಾಣ ವಚನ ಸ್ವೀಕರಿಸಿದ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಜುಲೈ 5 ರಂದು ತನ್ನ ಎರಡನೇ ಅವಧಿಯ 100 ದಿನಗಳನ್ನು ಪೂರೈಸಲಿದೆ....

Read moreDetails

ವಹಿವಾಟು ಸ್ಥಗಿತಗೊಳಿಸುವುದಾಗಿ ಹೇಳಿಯೂ ರಷ್ಯಾದಿಂದ ಕಲ್ಲಿದ್ದಲು ಆಮದು ಮಾಡಿದ ಟಾಟಾ ಸ್ಟೀಲ್ಸ್

ಭಾರತದ ಪ್ರಮುಖ ಉಕ್ಕು ತಯಾರಕ ಕಂಪೆನಿಯಾಗಿರುವ ಟಾಟಾ ಸ್ಟೀಲ್ ಮೇ ತಿಂಗಳ ದ್ವಿತೀಯಾರ್ಧದಲ್ಲಿ ರಷ್ಯಾದಿಂದ ಸರಿ ಸುಮಾರು 75,000 ಟನ್ ಕಲ್ಲಿದ್ದಲನ್ನು ಆಮದು ಮಾಡಿಕೊಂಡಿದೆ ಎಂದು ವರದಿಯಾಗಿದೆ....

Read moreDetails

ಉತ್ತರ ಭಾರತದ ರಾಜ್ಯಗಳಲ್ಲಿ ಅಕ್ಷರಶಃ ಬೆಂಕಿ ಹೊತ್ತಿಸಿದ ʼಅಗ್ನೀಪಥ್‌ʼ ಯೋಜನೆ

ಸೇನಾ ನೇಮಕಾತಿಗಾಗಿ ತಂದಿರುವ ಸರ್ಕಾರದ ಹೊಸ ಯೋಜನೆ ಅಗ್ನಿಪಥ್‌ಗೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಯುಪಿ-ಬಿಹಾರದಿಂದ ಹರಿಯಾಣ ಮತ್ತು ರಾಜಸ್ಥಾನದವರೆಗೆ ಯುವಕರು ರಸ್ತೆಗೆ ಇಳಿದಿದ್ದಾರೆ. ರೈಲುಗಳಿಗೆ ಬೆಂಕಿ...

Read moreDetails
Page 3 of 10 1 2 3 4 10

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!