Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಮೂರು ವರ್ಷಗಳಲ್ಲಿ ಮೂರು ಪಟ್ಟಾದ ಮನಿ‌ಲಾಂಡ್ರಿಂಗ್‌ ಪ್ರಕರಣಗಳ ಸಂಖ್ಯೆ: ಸರ್ಕಾರ ಹೇಳುವುದೇನು? 

Shivakumar A

Shivakumar A

July 26, 2022
Share on FacebookShare on Twitter

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ, 1999 (ಫೆಮಾ) ಮತ್ತು ಮನಿ ಲಾಂಡ್ರಿಂಗ್ ಕಾಯ್ದೆ, 2002 (ಪಿಎಂಎಲ್‌ಎ) ಅಡಿಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ಕಳೆದ ಮೂರು ವರ್ಷಗಳಲ್ಲಿ ದಾಖಲಿಸಿಕೊಂಡಿರುವ ಪ್ರಕರಣಗಳ ಸಂಖ್ಯೆ ಎನ್.ಡಿ.ಎ. ನೇತೃತ್ವದ ಕೇಂದ್ರ ಸರಕಾರದ ಮೊದಲ ಅವಧಿಯಲ್ಲಿ ದಾಖಲಾಗಿರುವ ಪ್ರಕರಣಗಳಿಗಿಂತ ಮೂರು ಪಟ್ಟು ಅಧಿಕವಾಗಿದೆ ಎಂಬ ಕುತೂಹಲಕಾರಿ ಅಂಶವೊಂದು ಇದೀಗ ಬೆಳಕಿಗೆ ಬಂದಿದೆ.

ಹೆಚ್ಚು ಓದಿದ ಸ್ಟೋರಿಗಳು

ಮುಂದಿನ 25ವರ್ಷಗಳಲ್ಲಿ ಭಾರತ ಅಭಿವೃದ್ದಿ ಹೊಂದಿದ ದೇಶವಾಗಬೇಕು : ಪ್ರಧಾನಿ ಮೋದಿ

ನೀರಿನ ಕೊಡ ಮುಟ್ಟಿದ ದಲಿತ ಬಾಲಕನನ್ನು ಹೊಡೆದು ಕೊಂದ ಶಿಕ್ಷಕ

ಸರಕಾರದ ಜಾಹಿರಾತಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ನೆಹರುಗೆ ಕೊಕ್‍!

ಪ್ರಸ್ತುತ ನಡೆಯುತ್ತಿರುವ ಮಳೆಗಾಲದ ಅಧಿವೇಶನದಲ್ಲಿ ಹಣಕಾಸು ಇಲಾಖೆಯ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಯಲ್ಲಿ ಈ ಕುತೂಹಲಕಾರಿ ಮಾಹಿತಿಯನ್ನು ಸದನಕ್ಕೆ ನೀಡಿದ್ದಾರೆ. 2019-20 ಮತ್ತು 2021-22ರ ನಡುವೆ ಫೆಮಾ ಮತ್ತು ಪಿ.ಎಂ.ಎಲ್.ಎ. ಅಡಿಯಲ್ಲಿ ಒಟ್ಟು 14,143 ಪ್ರಕರಣಗಳು ದಾಖಲಾಗಿದ್ದು ಇದು 2014-15 ಮತ್ತು 2016-17ರಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಹೋಲಿಸಿದಲ್ಲಿ ಸರಿಸುಮಾರು 187% ಏರಿಕೆಯಾದಂತಾಗಿದೆ.

ಈ ಕೇಂದ್ರ ಸರಕಾರದ ಎರಡನೇ ಅವಧಿಯಲ್ಲಿ ಮೊದಲ ಮೂರು ವರ್ಷಗಳಲ್ಲಿ 11,420 ಫೆಮಾ ಪ್ರಕರಣಗಳನ್ನು ತನಿಖೆಗೆ ಎತ್ತಿಕೊಳ್ಳಲಾಗಿದ್ದರೆ ಈ ಸಂಖ್ಯೆ ಇದೇ ಸರ್ಕಾರದ ಪ್ರಥಮ ಅವಧಿಯಲ್ಲಿ 4,424 ಆಗಿತ್ತು, ಮತ್ತಿದರಲ್ಲಿ ಈ ಅವಧಿಯಲ್ಲಿ 158 ಪ್ರತಿಶತ ಏರಿಕೆಯಾದಂತಾಗಿದೆ.

ಅದರಲ್ಲೂ ಮನಿ ಲಾಂಡ್ರಿಂಗ್ ಕಾಯ್ದೆಯಡಿಯಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆ 2014-15 ಮತ್ತು 2016-17ಕ್ಕೆ ಹೋಲಿಸಿದರೆ 2019-20 ಮತ್ತು 2021-22ರ ಅವಧಿಯಲ್ಲಿ ಸುಮಾರು ಐದು ಪಟ್ಟು ಹೆಚ್ಚಳವಾದಂತಾಗಿದೆ. ಮೊದಲ ಅವಧಿಯ 2 ವರ್ಷಗಳಲ್ಲಿ ಒಟ್ಟು 489 ಪ್ರಕರಣಗಳಷ್ಟೇ ದಾಖಲಾಗಿದ್ದರೆ, ಈ ಅವಧಿಯ ಕಳೆದೆರಡು ವರ್ಷಗಳಲ್ಲಿ 2,723 ಪ್ರಕರಣಗಳು ದಾಖಲಾಗಿವೆ.

ಇನ್ನು ನಿರ್ಧಿಷ್ಟ ವರ್ಷವೊಂದರಲ್ಲಿ ದಾಖಲುಗೊಂಡಿರುವ ಪ್ರಕರಣಗಳ ಸಂಖ್ಯೆ ಮೇಲೆ ಕಣ್ಣಾಡಿಸಿದರೆ, 2021-22ರಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮನಿ ಲಾಂಡ್ರಿAಗ್ ಮತ್ತು ವಿದೇಶಿ ವಿನಿಮಯ ನಿಯಮ ಉಲ್ಲಂಘನೆಯ ಪ್ರಕರಣಗಳು ದಾಖಲಾಗಿವೆ. ಇದು ಪ್ರದಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ಕಳೆದ ಎಂಟು ವರ್ಷಗಳ ಅವಧಿಯಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯ ಪ್ರಕರಣ ದಾಖಲುಗೊಂಡಿರುವ ವರ್ಷವಾಗಿದೆ. ಈ ವರ್ಷದಲ್ಲಿ (2020-21), ಇ.ಡಿ.ಯು ಫೆಮಾ ಅಡಿಯಲ್ಲಿ 5,313 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರೆ, ಪಿ.ಎಂ.ಎಲ್.ಎ. ಅಡಿಯಲ್ಲಿ 1,180 ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಇವೆರಡೂ ಕಾಯ್ದೆಗಳಡಿಯಲ್ಲಿ ಈ ಹಿಂದೆ ಒಂದೇ ವರ್ಷದಲ್ಲಿ ಅತೀ ಹೆಚ್ಚಿನ ಪ್ರಕರಣಗಳು ದಾಖಲಾಗಿದ್ದ ಮಾಹಿತಿಯನ್ನು ನೋಡೋದಾದ್ರೆ ಫೆಮಾ ಅಡಿಯಲ್ಲಿ 2017-18 ಮತ್ತು 3,627 ಪ್ರಕರಣಗಳು ಮತ್ತು ಪಿಎಂಎಲ್‌ಎ ಅಡಿಯಲ್ಲಿ 2020-21ರಲ್ಲಿ 981 ಪ್ರಕರಣಗಳು ದಾಖಲುಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಕಳೆದ 10 ವರ್ಷಗಳಲ್ಲಿ ಜಾರಿ ನಿರ್ದೇಶನಾಲಯವು ಅಂದಾಜು 24,893 ಪ್ರಕರಣಗಳನ್ನು ಫೆಮಾ ಕಾಯ್ದೆಯಡಿಯಲ್ಲಿ ವಿಚಾರಣೆಗೆತ್ತಿಕೊಂಡಿದ್ದರೆ, ಪಿ.ಎಂ.ಎಲ್.ಎ. ಅಡಿಯಲ್ಲಿ 3,985 ಪ್ರಕರಣಗಳನ್ನು ವಿಚಾರಣೆತ್ತಿಕೊಂಡಿದೆ ಎಂದು ಸಚಿವರು ಜೆಡಿಯು ಸಂಸದ ರಾಜೀವ್ ರಂಜನ್ ಅವರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದ್ದಾರೆ.

ಆದರೆ, ಒಂದು ವಿಶ್ಲೇಷಣಾ ಮಾಹಿತಿಯ ಪ್ರಕಾರ ಬರೋಬ್ಬರಿ 23,130 ಫೆಮಾ ಪ್ರಕರಣಗಳು ಕಳೆದ ಎಂಟು  ವರ್ಷಗಳಲ್ಲಿ ದಾಖಲಾಗಿವೆ, ಅಂದರೆ, ಇಲ್ಲಿಯವರೆಗೆ ದಾಖಲುಗೊಂಡಿರುವ ಫೆಮಾ ಪ್ರಕರಣಗಳಲ್ಲಿ 80%ದಷ್ಟು ಪ್ರಕರಣಗಳು ಈ ಎಂಟು ವರ್ಷಗಳಲ್ಲಿ ದಾಖಲುಗೊಂಡಿರುವುದು ಗಮನಾರ್ಹ ವಿಚಾರವಾಗಿದೆ. ಅದೇ ರೀತಿ 3,555 ಪಿಎಂಎಲ್‌ಎ ಪ್ರಕರಣಗಳು ಕಳೆದ ಎಂಟುವರ್ಷಗಳಲ್ಲಿ ದಾಖಲುಗೊಂಡಿದ್ದು ಇದೂ ಒಂದು ದಾಖಲೆಯಾಗಿದೆ.

RS 500
RS 1500

SCAN HERE

[elfsight_youtube_gallery id="4"]

don't miss it !

ಲೋಕಾಯುಕ್ತ ದುರ್ಬಲಗೊಳಿಸಲು ರಾಜಕಾರಣಿಗಳಿಂದ ಕುತಂತ್ರ :ನ್ಯಾ. ಸಂತೋಷ್ ಹೆಗ್ಡೆ
ಕರ್ನಾಟಕ

ಲೋಕಾಯುಕ್ತ ದುರ್ಬಲಗೊಳಿಸಲು ರಾಜಕಾರಣಿಗಳಿಂದ ಕುತಂತ್ರ :ನ್ಯಾ. ಸಂತೋಷ್ ಹೆಗ್ಡೆ

by ಪ್ರತಿಧ್ವನಿ
August 12, 2022
ಗ್ರಾಮಸ್ಥರು, ಗಣ್ಯರ ವಿರೋಧದ ನಡುವೆಯೂ ಗೋಮಾಳ ಭೂಮಿ ಅಕ್ರಮ ಮಂಜೂರಾತಿಗೆ ಕಸರತ್ತು!
ಇದೀಗ

ಗ್ರಾಮಸ್ಥರು, ಗಣ್ಯರ ವಿರೋಧದ ನಡುವೆಯೂ ಗೋಮಾಳ ಭೂಮಿ ಅಕ್ರಮ ಮಂಜೂರಾತಿಗೆ ಕಸರತ್ತು!

by ಪ್ರತಿಧ್ವನಿ
August 15, 2022
ನಾನು ಸಹ ಸಿಎಂ ಸ್ಥಾನದ ಆಕಾಂಕ್ಷಿ : ಉಮೇಶ್ ಕತ್ತಿ
ಕರ್ನಾಟಕ

ನಾನು ಸಹ ಸಿಎಂ ಸ್ಥಾನದ ಆಕಾಂಕ್ಷಿ : ಉಮೇಶ್ ಕತ್ತಿ

by ಪ್ರತಿಧ್ವನಿ
August 9, 2022
ಅಗ್ನಿಪಥ್ ಯೋಜನೆಯು ಭಾರತೀಯ ಪ್ರಜಾಪ್ರಭುತ್ವದ ಶವಪೆಟ್ಟಿಗೆಗೆ ಹೊಡೆಯಲಿರುವ ಕೊನೆಯ ಮೊಳೆ? ಭಾಗ-೧
ಅಭಿಮತ

ಅಗ್ನಿಪಥ್ ಯೋಜನೆಯು ಭಾರತೀಯ ಪ್ರಜಾಪ್ರಭುತ್ವದ ಶವಪೆಟ್ಟಿಗೆಗೆ ಹೊಡೆಯಲಿರುವ ಕೊನೆಯ ಮೊಳೆ? ಭಾಗ-೧

by ಡಾ | ಜೆ.ಎಸ್ ಪಾಟೀಲ
August 12, 2022
ಮೈಸೂರು; ನಾಡಹಬ್ಬಕ್ಕೆ ಮುನ್ನುಡಿ ಬರೆದ ಗಜಪಡೆ
ಕರ್ನಾಟಕ

ದಸರಾ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಸ್ವಾಗತ ಕೋರಿದ ಸಚಿವ ಸೋಮಶೇಖರ್

by ಪ್ರತಿಧ್ವನಿ
August 10, 2022
Next Post
ವರ್ಷ ಎಂಟು ಅವಾಂತರ ನೂರೆಂಟು : ಮಾಜಿ ಸಿಎಂ ಸಿದ್ದರಾಮಯ್ಯ

ಜಮೀರ್ ಗೆ ಹೈಕಮಾಂಡ್ ಎಚ್ಚರಿಕೆ : ಸ್ಪಷ್ಟ ಉತ್ತರ ಕೊಡದೆ ನುಣುಚಿಕೊಂಡ ಸಿದ್ದರಾಮಯ್ಯ

ಪ್ರತಿಭಟನೆ ವೇಳೆ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಮುಂದಳೆ ಹಿಡಿದು ಎಳೆದಾಡಿದ ಪೊಲೀಸರು

ಪ್ರತಿಭಟನೆ ವೇಳೆ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಮುಂದಳೆ ಹಿಡಿದು ಎಳೆದಾಡಿದ ಪೊಲೀಸರು

ರಾಜಕೀಯ ನಿವೃತ್ತಿ ಸುಳಿವು ನೀಡಿದರೇ ಕೇಂದ್ರ ಸಚಿವ ನಿತಿನ್‌ ಗಡ್ಕರಿ?

ರಾಜಕೀಯ ನಿವೃತ್ತಿ ಸುಳಿವು ನೀಡಿದರೇ ಕೇಂದ್ರ ಸಚಿವ ನಿತಿನ್‌ ಗಡ್ಕರಿ?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist