• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಭಾರತದ ಮೇಲೆ ವಾಟ್ಸಪ್ ಹೇರುತ್ತಿರುವ ಹೊಸ ಗೌಪ್ಯತಾ ನೀತಿ ಯುರೋಪಿನಲ್ಲಿ ನಿಷೇಧ ಸಾಧ್ಯತೆ

ಫಾತಿಮಾ by ಫಾತಿಮಾ
May 19, 2021
in ದೇಶ
0
ಭಾರತದ ಮೇಲೆ ವಾಟ್ಸಪ್ ಹೇರುತ್ತಿರುವ ಹೊಸ ಗೌಪ್ಯತಾ ನೀತಿ ಯುರೋಪಿನಲ್ಲಿ ನಿಷೇಧ ಸಾಧ್ಯತೆ
Share on WhatsAppShare on FacebookShare on Telegram

ADVERTISEMENT

ವಾಟ್ಸಾಪ್‌ನ ಹೊಸ ಗೌಪ್ಯತಾ ನೀತಿಯು ತನ್ನ ಮೂಲ ಕಂಪೆನಿ ಫೇಸ್‌ಬುಕ್‌ನೊಂದಿಗೆ ಡೇಟಾ ಹಂಚುವುದನ್ನು ಅನುಮತಿಸುತ್ತದೆ ಎನ್ನುವುದರ ಹಿನ್ನೆಲೆಯಲ್ಲಿ ಜರ್ಮನಿಯು ವಾಟ್ಸಪ್ ಅಪ್ಡೇಟ್ ನ್ನು ಬ್ಯಾನ್ ಮಾಡಿರುವುದರಿಂದ ವಾಟ್ಸಪ್‌ಗೆ ಹಿನ್ನಡೆಯಾಗಿದೆ. ಅಲ್ಲದೆ ಪ್ರಕರಣವನ್ನು ಯುರೋಪಿಯನ್ ಡಾಟಾ ಪ್ರೊಟೆಕ್ಷನ್ ಬೋರ್ಡಿಗೆ ಸಲ್ಲಿಸುವ ಮೂಲಕ ಜರ್ಮನಿಯು ಯುರೋಪಿನಾದ್ಯಂತ ವ್ಯಾಪಕ ನಿಷೇಧಕ್ಕಾಗಿ ಕೋರಿದೆ ಎಂದು ಹೇಳಲಾಗುತ್ತಿದೆ.

ಅಪ್ಲಿಕೇಶನ್‌ನ ಹೊಸ ನಿಯಮಗಳಿಗೆ ಒಪ್ಪಿಕೊಳ್ಳುವಂತೆ ಭಾರತದಲ್ಲೂ ಕಳೆದ ವಾರದಿಂದ ಮೇಲಿಂದ ಮೇಲೆ ನೋಟಿಫಿಕೇಶನ್‌ಗಳು ಬರುತ್ತಲೇ ಇದೆ. ವಾಟ್ಸಪ್‌ನ ಈ ‘ಟೇಕಿಟ್ ಅಥವಾ ಲೀವಿಟ್’ ನೀತಿಯ ವಿರುದ್ಧ ಜಗತ್ತಿನಾದ್ಯಂತ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅಪ್ಡೇಟ್ ಮಾಡಲೇಬೇಕೆಂದು ವಿಧಿಸಲಾಗಿದ್ದ ಫೆಬ್ರವರಿಯ ಗಡುವನ್ನು ಮೇ ವರೆಗೆ ವಿಸ್ತರಿಸಲಾಗಿತ್ತು.

ಈಗ ಜರ್ಮನಿಯು ನವೀಕರಣಕ್ಕೆ ನಿಷೇಧ ಹೇರಿರುವುದರಿಂದ ಅಪ್ಲಿಕೇಶನ್‌ನಿಂದ ಹಣ ಗಳಿಸುವ ವಾಟ್ಸಾಪ್‌ನ ಮಹತ್ವಾಕಾಂಕ್ಷೆಗೆ ಹಿನ್ನಡೆಯಾದಂತಾಗಿದೆ.

ವಾಟ್ಸಾಪ್‌ನ ಅತಿ ದೊಡ್ಡ ಮಾರುಕಟ್ಟೆಯಾಗಿರುವ ಭಾರತದಲ್ಲಿ ಈ ಅಪ್ಲಿಕೇಶನ್‌ಗೆ 40 ಕೋಟಿ ಗ್ರಾಹಕರಿದ್ದಾರೆ. ತನ್ನ ಡೇಟಾವನ್ನು ಇತರ ಕಂಪೆನಿಗಳೊಂದಿಗೆ ವಾಟ್ಸಪ್ ಹಂಚಿಕೊಳ್ಳಲಿದೆ ಎಂದು ಮೊದಲು ಘೋಷಣೆಯಾದಾಗ ಯುರೋಪಿನ ಬಳಕೆದಾರರಂತೆ ಭಾರತೀಯರು ಸಹ ಇತರ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳಾದ ಸಿಗ್ನಲ್, ಟೆಲಿಗ್ರಾಂನಂತಹ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಪ್ರತಿಭಟಿಸಿದ್ದರು. ಭಾರತೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಭಾಗವಾಗಿ ವಾಟ್ಸಪ್ ದೇಶದ ಎಲ್ಲಾ ಪ್ರಮುಖ ದಿನಪತ್ರಿಕೆಗಳಲ್ಲಿ ಮೊದಲ ಪುಟದ ಜಾಹೀರಾತು ನೀಡಿತ್ತು. ಭಾರತದ ಬೃಹತ್ ಡಿಜಿಟಲ್ ಆರ್ಥಿಕತೆಯಲ್ಲಿ ಹೊಸ ಬೆಳವಣಿಗೆ ನಿರೀಕ್ಷಿಸುವ ವಾಟ್ಸಪ್ ಯಾವ ಕಾರಣಕ್ಕೂ ಇಲ್ಲಿನ ಬಳಕೆದಾರರ ಅನ್ನು ಕಳೆದುಕೊಳ್ಳಲು ಇಚ್ಛಿಸಲು ಸಾಧ್ಯವೇ ಇಲ್ಲ.

ಆದರೆ ಗೌಪ್ಯತಾ ಕಾನೂನಗಳಂತಹ ಕಠಿಣ ಕಾನೂನುಗಳನ್ನು ಭಾರತ ಹೊಂದಿಲ್ಲದೇ ಇರುವುದರಿಂದ ಭಾರತೀಯ ಬಳಕೆದಾರರ ಗೌಪ್ಯತೆಯನ್ನು ಪಣಕ್ಕಿಟ್ಟಂತಾಗಿದೆ. ಭಾರತದಲ್ಲಿ ವೈಯಕ್ತಿಕ ಡಾಟಾ ಕಾಯ್ದೆಯನ್ನು ಇನ್ನೂ ಜಾರಿಗೆ ತರಲಾಗಿಲ್ಲ. 

ವಾಟ್ಸಾಪ್ ತನ್ನ ಗೌಪ್ಯತೆ ನವೀಕರಣವನ್ನು ಮೊದಲು ಘೋಷಿಸಿದಾಗ ನವೀಕರಣದ ಕಡ್ಡಾಯ ಸ್ವರೂಪವನ್ನು ಖಂಡಿಸಿ competition commission of India ತನಿಖೆಗೆ ಕರೆ ನೀಡಿತು.  ಭಾರತೀಯ ಮಾರುಕಟ್ಟೆಯಲ್ಲಿ ವಾಟ್ಸಾಪ್ ಮತ್ತು ಫೇಸ್‌ಬುಕ್ ತಮ್ಮ ನೆಟ್‌ವರ್ಕ್‌ನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆಯೋಗ ಟೀಕಿಸಿತು. ಆದರೆ ಭಾರತದಲ್ಲಿ ಪ್ರಾಯೋಗಿಕವಾಗಿ ಬಳಕೆದಾರರಿಗೆ ಪ್ಲ್ಯಾಟ್‌ಫಾರ್ಮ್‌ಗಳನ್ನು ಬದಲಾಯಿಸಲು ಸೀಮಿತ ಆಯ್ಕೆಗಳು ಮಾತ್ರ ಇವೆ.

ದೆಹಲಿ ಹೈಕೋರ್ಟಿನಲ್ಲಿ ಫೇಸ್‌ಬುಕ್‌ ‌ನ ಲಾಭಕ್ಕಾಗಿ “ಬಳಕೆದಾರರ ವೈಯಕ್ತಿಕ ಡಾಟಾದ ಮೇಲಿನ ಆಕ್ರಮಣ” ಮತ್ತು ಹೊಸ ಅಪ್ಡೇಟ್ “ಬಳಕೆದಾರರ ಮೇಲಿರುವ ಎರಡಲಗಿನ ಕತ್ತಿ” ಎಂದು ಪ್ರಕರಣ ದಾಖಲಾಗಿದೆ. ಹೈ ಕೋರ್ಟ್ ಮೇ 21ರಂದು ಈ ಸಂಬಂಧ ವಿಚಾರಣೆ ನಡೆಸಲಿದೆ. 

ಈ ಮಧ್ಯೆ ಬಳಕೆದಾರರ ಮಾಹಿತಿಯನ್ನು ಸರ್ಕಾರದ ಕೋರಿಕೆಯ ಮೇರೆಗೆ ಆಡಳಿತಕ್ಕೆ ನೀಡಬೇಕು ಎಂದು ಒತ್ತಾಯಿಸುವ ಹೊಸ ಇಂಟರ್ನೆಟ್ ನೀತಿಯನ್ನು ಜಾರಿಗೊಳಿಸಲು ಭಾರತ ಸರ್ಕಾರ ಹೊರಟಿದೆ. ಇದು ‘ಡಿಜಿಟಲ್ ಸರ್ವಾಧಿಕಾರ’ಕ್ಕೆ ಕಾರಣವಾಗುತ್ತದೆ ಎಂಬ ಟೀಕೆಗಳು ದೇಶಾದ್ಯಂತ ವ್ಯಕ್ತವಾದರೂ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯುವಂತೆ ತೋರುತ್ತಿಲ್ಲ.

ವಾಟ್ಸಾಪ್ ಅನ್ನು ದೈನಂದಿನ ಜೀವನದಲ್ಲಿ ‘ಅತಿ ಅವಶ್ಯಕ’ ಎಂದು ಪರಿಗಣಿಸಲಾಗಿರುವುದರಿಂದ ಮತ್ತು ಗೌಪ್ಯತಾ ನಿಯಮಗಳನ್ನು ನಿಷೇಧಿಸುವ ನಿಯಮಗಳು ಇಲ್ಲಿ ಇಲ್ಲದೇ ಇರುವುದರಿಂದ ಅದರ ಹೆಚ್ಚಿನ ಬಳಕೆದಾರರು ಅಂತಿಮವಾಗಿ ಹೊಸ ಗೌಪ್ಯತೆ ನೀತಿಯನ್ನು ಸ್ವೀಕರಿಸುತ್ತಾರೆ.  ಅಂತಿಮವಾಗಿ ವಾಟ್ಸಪ್ಗೆ ಭಾರತೀಯ ಬಳಕೆದಾರರ ಡೇಟಾವೇ ಮೊದಲ ಟಾರ್ಗೆಟ್ ಆಗಿರುವುದರಿಂದ ಇಲ್ಲಿ ಅದು ತನ್ನ ಗೌಪ್ಯತಾ ನೀತಿಗಳನ್ನು ಬದಲಾಯಿಸುತ್ತದೆ ಎಂದು ಯಾವ ನಿರೀಕ್ಷೆಗಳನ್ನೂ ಇಟ್ಟುಕೊಳ್ಳುವಂತಿಲ್ಲ.

Previous Post

ಶೈಲಜಾರಿಗಿಲ್ಲ ಸ್ಥಾನ: ಚರ್ಚೆಗೆ ಗ್ರಾಸವಾಯ್ತು ಕೇರಳ ನೂತನ ಸಚಿವ ಸಂಪುಟ!

Next Post

ಕರೋನಾ ಮುಕ್ತ ಗ್ರಾಮಕ್ಕೆ ಸಂಕಲ್ಪ: ಲಸಿಕೆ ಅಭಿಯಾನ ಚುರುಕುಗೊಳಿಸಲು ಪ್ರಧಾನಿ ಮೋದಿ ನಿರ್ದೇಶನ

Related Posts

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ
ಅಭಿಮತ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

by ಪ್ರತಿಧ್ವನಿ
April 27, 2026
0

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ 'ಗ್ಲೋಬಲ್ ರಾಜಸ್ಥಾನ ಅಗ್ರಿಟೆಕ್ ಮೀಟ್ 2026' ಅಂಗವಾಗಿ ಬೆಂಗಳೂರಿನ ರೋಡ್ ಶೋನಲ್ಲಿ ಹೂಡಿಕೆಗೆ ಕೈಗಾರಿಕೆಗಳ ಆಸಕ್ತಿ...

Read moreDetails
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

April 23, 2026
Next Post
ಕರೋನಾ ಮುಕ್ತ ಗ್ರಾಮಕ್ಕೆ ಸಂಕಲ್ಪ: ಲಸಿಕೆ ಅಭಿಯಾನ ಚುರುಕುಗೊಳಿಸಲು ಪ್ರಧಾನಿ ಮೋದಿ ನಿರ್ದೇಶನ

ಕರೋನಾ ಮುಕ್ತ ಗ್ರಾಮಕ್ಕೆ ಸಂಕಲ್ಪ: ಲಸಿಕೆ ಅಭಿಯಾನ ಚುರುಕುಗೊಳಿಸಲು ಪ್ರಧಾನಿ ಮೋದಿ ನಿರ್ದೇಶನ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada