• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, August 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನಾನು ಯಾರಿಗೂ ಹೆದರಲ್ಲ, ಯಾವುದಕ್ಕೂ ಬಗ್ಗಲ್ಲ : ವಿರೋಧಿಗಳ ವಿರುದ್ಧ ಗುಡುಗಿದ‌ ಬಾದಲ್..!

ಪಂಜಾಬ್‌ನ ಸಹೋದರತ್ವ, ಅಸ್ಮಿತೆಗೆ ಧಕ್ಕೆಯಾಗುವುದಕ್ಕೆ ನಾನು ಬಿಡಲ್ಲ : ಸುಖ್‌ಬೀರ್‌ ಸಿಂಗ್ ಬಾದಲ್‌ ವಾಗ್ದಾಳಿ..

ಪ್ರತಿಧ್ವನಿ by ಪ್ರತಿಧ್ವನಿ
August 14, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ನಾನು ಯಾರಿಗೂ ಹೆದರಲ್ಲ, ಯಾವುದಕ್ಕೂ ಬಗ್ಗಲ್ಲ : ವಿರೋಧಿಗಳ ವಿರುದ್ಧ ಗುಡುಗಿದ‌ ಬಾದಲ್..!
Share on WhatsAppShare on FacebookShare on Telegram

ಬೆಂಗಳೂರು : ಪಂಜಾಬಿನ ಶಿರೋಮಣಿ ಅಕಾಳಿದಳದ ಮುಖ್ಯಸ್ಥ ಸುಖ್‌ಬೀರ್‌ ಸಿಂಗ್‌ ಬಾದಲ್‌ ಅವರ ಮೇಲೆ ನಡೆದಿದ್ದ ಗುಂಡಿನ ದಾಳಿಯ ಬಗ್ಗೆ ಹಲವು ರೀತಿಯ ಅನುಮಾನಗಳು ಸೃಷ್ಟಿಯಾಗಿವೆ. ಪಂಜಾಬ್‌ನಿಂದ ಮಹಾರಾಷ್ಟ್ರದ ನಾಂದೇಡ್‌ನಲ್ಲಿರುವ ಗುರುದ್ವಾರ ಮಾತಾ ಸಾಹಿಬ್ ದೇವಾನ್ ಜಿ ಮುಗಾಟ್‌ಗೆ ಆಗಮಿಸುತ್ತಿದ್ದಂತೆಯೇ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ತೀವ್ರ ರಕ್ತಸ್ರಾವವಾಗುತ್ತಿದ್ದ ಗುರುವಾರ ಅವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಾಗಿಸಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.

ADVERTISEMENT
U. T. Khader : ಸಿದ್ದರಾಮಯ್ಯಗೆ ಥ್ಯಾಂಕ್ಸ್ ಹೇಳೋದನ್ನು ಮರೆಯಲಿಲ್ಲ ನೋಡಿ ಖಾದರ್...

ಆದರೆ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿರುವ ಬಾದಲ್‌, ತಮ್ಮ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿ, ಪಂಜಾಬ್ ಅನ್ನು ವಶಪಡಿಸಿಕೊಳ್ಳುವುದಕ್ಕಾಗಿ ನನ್ನ ಮೇಲೆ ದಾಳಿ ನಡೆಸಲಾಗಿದೆ. ಇದೊಂದು ಮಿಷನ್‌ನಂತೆ ರೂಪಿಸಲಾಗಿದ್ದು, ನಾನು ಇವುಗಳಿಗೆಲ್ಲ ಹೆದರುವುದಿಲ್ಲ. ಇಡೀ ರಾಜ್ಯದಲ್ಲಿ ಏಕತೆ, ಶಾಂತಿ, ನೆಮ್ಮದಿ ಕಾಪಾಡಿಕೊಳ್ಳಲು ನಮ್ಮ ಪಕ್ಷ ಬದ್ಧವಾಗಿದೆ ಎಂದು ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಬಾದಲ್‌ ವಿರೋಧಿಗಳ ವಿರುದ್ಧ ಗುಡುಗಿದ್ದಾರೆ.

ಪಂಜಾಬ್‌ನ ಅಸ್ಮಿತೆಯ ಉಳಿವಿಗಾಗಿ ನಮ್ಮ ಪಕ್ಷವೂ ಯಾವುದೇ ರೀತಿಯ ತ್ಯಾಗಕ್ಕೂ ಸಿದ್ಧವಾಗಿದೆ, ರಾಜ್ಯದ ಶಾಂತಿಗೆ ಭಂಗ ತರಲು ಯಾರೊಬ್ಬರಿಗೂ ಅವಕಾಶ ನೀಡುವುದಿಲ್ಲ. ಪಂಜಾಬ್‌ನ ಅಭಿವೃದ್ದಿ, ಧಾರ್ಮಿಕ ಸಾಮರಸ್ಯ ಹಾಗೂ ಎಲ್ಲರೂ ಒಂದೇ ಎಂಬ ಭಾವದಲ್ಲಿ ಸಾಗುವುದು ನಮ್ಮ ಮೊದಲ ಆದ್ಯತೆ ಎಂದು ಒತ್ತಿ ಹೇಳಿದ್ದಾರೆ.

ನಾವು ಪಂಜಾಬ್‌ ಅನ್ನು ಯಾರ ಕಂಟ್ರೋಲ್‌ಗೂ ನೀಡುವುದಿಲ್ಲ, ಹೀಗೆ ದಾಳಿಗಳನ್ನು ಮಾಡಿ ರಾಜ್ಯದಲ್ಲಿ ಶಾಂತಿ ಕದಡುವುದೆ ಕೆಲವು ದುಷ್ಟ ಶಕ್ತಿಗಳ ಉದ್ಧೇಶವಾಗಿದೆ. ಆದರೆ ಅಕಾಲಿದಳದ ಅಧ್ಯಕ್ಷನಾಗಿ ನಾನು ಆ ರೀತಿಯ ಬೆಳವಣಿಗೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ : ಅಂದು ಅಭಿಮಾನಿಯೊಬ್ಬರ ಅಂತ್ಯಕ್ರಿಯೆಗೆ ಯಶ್‌ ಹೋಗಲೇ ಇಲ್ಲ! ಅದಕ್ಕೆ ಕಾರಣವೇನು ಗೊತ್ತಾ?

ನಮ್ಮ ಪವಿತ್ರ ಸ್ಥಳಗಳ ಮೇಲೆ ಈಗಾಗಳೇ ಎರಡು ಬಾರಿ ದಾಳಿ ನಡೆಸಲಾಗಿದೆ, ಆದರೆ ಇಂತಹ ಬೆಳವಣಿಗೆಗಳಿಗೆ ನಾನು ಹೆದರುವುದಿಲ್ಲ. ಶಿರೋಮಣಿ ಅಕಾಲಿದಳ ಪಂಜಾಬ್‌ನ ಸಾಮರಸ್ಯ, ಸಹೋದರತ್ವ, ಏಕತೆಗೆ ಬದ್ಧವಾಗಿದೆ ಎಂದು ಪತ್ರಿಪಾದಿಸಿದ್ದಾರೆ.

ದಾಳಿಯ ರೂವಾರಿ ಜಸ್ಪಾಲ್‌ ಸಿಂಗ್..

ಪಂಜಾಬ್‌ನ ಮಾಜಿ ಡಿಸಿಎಂ ಬಾದಲ್‌ ಮೇಲಿನ ಈ ದಾಳಿಗೆ ಇದೇ ನಾಂದೇಡ್‌ನಲ್ಲಿ ಒಬ್ಬನೇ ವಾಸಿಸುತ್ತಿದ್ದ 62 ವರ್ಷದ ಜಸ್ಪಾಲ್ ಸಿಂಗ್ ಎಂಬ ವ್ಯಕ್ತಿ ಕಾರಣನಾಗಿದ್ದಾನೆ. ಅಕಾಲಿದಳದ ಮುಖ್ಯಸ್ಥರ ಮೇಲೆ ಯಾಕೆ ದಾಳಿ ನಡೆಸಲಾಗಿದೆ ಎಂಬ ಬಗ್ಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ, ಕೊಲೆಗೆ ಯತ್ನ, ಅಪಾಯಕಾರಿ ಆಯುಧಗಳಿಂದ ಗಾಯಗೊಳಿಸುವುದು ಹಾಗೂ ಸಾರ್ವಜನಿಕ ಸೇವೆಗಳನ್ನು ನಿರ್ವಹಿಸದಂತೆ ತಡೆಯಲು ಯತ್ನಿಸಿದ ಆರೋಪದ ಮೇಲೆ ಮಹಾರಾಷ್ಟ್ರ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Tags: AAPAttackBNS SectionsfiringPratidhvaniPunjab PoliticsSADSiromani Akali dalSukhbir Singh Badal
Previous Post

‘ಟಾಕ್ಸಿಕ್’ ಶೂಟಿಂಗ್‌ ವೇಳೆ ಗರ್ಭಿಣಿ ಕಿಯಾರಾಗೆ ಯಶ್‌-ಗೀತು ಬಾಡಿಗಾರ್ಡ್ ಆಗಿದ್ದರಂತೆ!

Next Post

ವಸಾಹತುಶಾಹಿಯ ಎರಡು ಮಗ್ಗುಲುಗಳು-ಭಾಗ 2

Related Posts

ವಸಾಹತುಶಾಹಿಯ ಎರಡು ಮಗ್ಗುಲುಗಳು-ಭಾಗ ೧
Top Story

ವಸಾಹತುಶಾಹಿಯ ಎರಡು ಮಗ್ಗುಲುಗಳು-ಭಾಗ 2

by ನಾ ದಿವಾಕರ
August 14, 2026
0

(ಕೃಪೆ : ಸಂವಾದ ಮಾಸಪತ್ರಿಕೆ ಆಗಸ್ಟ್ 2026) ಶೋಷಿತರ ಕಣ್ಣೋಟದಲ್ಲಿ ಚರಿತ್ರೆ ತಳಸಮುದಾಯಗಳ ದೃಷ್ಟಿಯಿಂದ ಬ್ರಿಟೀಷ್ ಆಳ್ವಿಕೆಯನ್ನು ನೋಡಬಹುದಾದ ಮತ್ತೊಂದು ಆಯಾಮ ಎಂದರೆ ಭೂಮಿಯ ಮೇಲಿನ ಹಕ್ಕುಗಳು...

Read moreDetails
‘ಟಾಕ್ಸಿಕ್’ ಶೂಟಿಂಗ್‌ ವೇಳೆ ಗರ್ಭಿಣಿ ಕಿಯಾರಾಗೆ ಯಶ್‌-ಗೀತು ಬಾಡಿಗಾರ್ಡ್ ಆಗಿದ್ದರಂತೆ!

‘ಟಾಕ್ಸಿಕ್’ ಶೂಟಿಂಗ್‌ ವೇಳೆ ಗರ್ಭಿಣಿ ಕಿಯಾರಾಗೆ ಯಶ್‌-ಗೀತು ಬಾಡಿಗಾರ್ಡ್ ಆಗಿದ್ದರಂತೆ!

August 14, 2026
80th Independence Day: ರಾಜ್ಯದ 17 ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ʼರಾಷ್ಟ್ರಪತಿ ಪದಕʼ ಗೌರವ

80th Independence Day: ರಾಜ್ಯದ 17 ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ʼರಾಷ್ಟ್ರಪತಿ ಪದಕʼ ಗೌರವ

August 14, 2026
ಪಿಎಸ್‌ಐಗೆ ಕಪಾಳಮೋಕ್ಷ: ಮಗಳ ಪರವಾಗಿ ಕ್ಷಮೆ ಕೇಳಿದ ಶಾಸಕ ಬಿ.ಸುರೇಶ್‌ಗೌಡ

ಪಿಎಸ್‌ಐಗೆ ಕಪಾಳಮೋಕ್ಷ: ಮಗಳ ಪರವಾಗಿ ಕ್ಷಮೆ ಕೇಳಿದ ಶಾಸಕ ಬಿ.ಸುರೇಶ್‌ಗೌಡ

August 14, 2026
ನನ್ನ ಅಧಿಕಾರವನ್ನು ಯಾರ ವಿರುದ್ಧವೂ ಬಳಸುವುದಿಲ್ಲ: ಸಿಎಂ ಡಿ.ಕೆ ಶಿವಕುಮಾರ್‌ ಭರವಸೆ

ನನ್ನ ಅಧಿಕಾರವನ್ನು ಯಾರ ವಿರುದ್ಧವೂ ಬಳಸುವುದಿಲ್ಲ: ಸಿಎಂ ಡಿ.ಕೆ ಶಿವಕುಮಾರ್‌ ಭರವಸೆ

August 14, 2026
Next Post
ವಸಾಹತುಶಾಹಿಯ ಎರಡು ಮಗ್ಗುಲುಗಳು-ಭಾಗ ೧

ವಸಾಹತುಶಾಹಿಯ ಎರಡು ಮಗ್ಗುಲುಗಳು-ಭಾಗ 2

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada