ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಇನ್ನೂ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಫೈನಲ್ ಮಾಡಿಲ್ಲ. ಅಂತಿಮ ಹಂತದ ಕಸರತ್ತುಗಳು ಇನ್ನೂ ನಡಿತಾನೆ ಇದೆ. ಈ ಎಲ್ಲದರ ಮಧ್ಯೆ ಜೆಡಿಎಸ್ ನಲ್ಲಿ ಮಾತ್ರ ಎಲ್ಲಾ ಗೊಂದಲಗಳಿಗೆ ತೆರೆಬಿದ್ದ ಹಾಗೆ ಕಾಣ್ತಿದೆ. ಯಾವುದೇ ಅಸಮಾಧಾನ ಅಂತಃಕಲಹ ಇಲ್ಲದೇ ಜೆಡಿಎಸ್ ತಮ್ಮ ಮೂರೂ ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಮಾಡಿ ಮುಗಿಸಿದೆ.
ಮೈತ್ರಿ ಪ್ರಕಾರ ಮಂಡ್ಯ,ಹಾಸನ್, ಮತ್ತು ಕೋಲಾರ ಮೂರು ಕ್ಷೇತ್ರಗಳನ್ನ ಬಿಜೆಪಿ ಜೆಡಿಎಸ್ ಗೆ ಬಿಟ್ಟುಕೊಟ್ಟಿರೋದ್ರಿಂದ ಈ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕಸರತ್ತು ಜೆಡಿಎಸ್ ಮುಂದಿತ್ತು. ಮಂಡ್ಯಂದಿಂದ ಸ್ವತಃ ಕುನರಸ್ವಾಮಿ ತಾವೇ ಕಣಕ್ಕೆ ಇಳಿಯೋದಾಗಿ ಹೇಳಿದ್ದಾರೆ. ಸುಮಲತಾ ಬಹುತೇಕ ರೇಸ್ ನಿಂದ ಹೊರಬಿದ್ದಿದ್ದಾರೆ. ಅಲ್ಲಿಗೆ ಹೆಚ್ಡಿಕೆ ಗೆಲುವು ನಿರಾಯಾಸ ಎಂದೇ ಹೇಳಬಹುದು.
ಇನ್ನು ಹಾಸನದಲ್ಲಿ ಯಾವುದೇ ಗೊಂದಲ ಇರಲಿಲ್ಲ. ಹೆಚ್ಚಿನ ಆಕಾಂಕ್ಷಿಗಳೂ ಇರಲಿಲ್ಲ. ಪ್ರಜ್ವಲ್ ರೇವಣ್ಣ ಆಯ್ಕೆ ನಿರೀಕ್ಷಿತವಾಗಿತ್ತು. ಅದೇ ಅಂತಿಮವಾಗಿದೆ. ಪ್ರೀತಂ ಗೌಡರ ಮುನಿಸನ್ನು ಸರಿಪಡಿಸಿಕೊಂಡರೆ ಅಲ್ಲಿಗೆ ಹಾಸನ ಗೆಲ್ಲೋದು ಜೆಡಿಎಸ್ ಗೆ ಕಷ್ಟದ ಕೆಲಸವೇನಲ್ಲ ಎಂದೇ ಭಾವಿಸಲಾಗ್ತಿದೆ. ಸೊ ಹಾಸನ ಮತ್ತು ಮಂಡ್ಯ ಕ್ಲಿಯರ್ ಆಯ್ತು. ಇನ್ನು ಉಳಿದದ್ದು ಕೋಲಾರ.
ಕೋಲಾರ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡಬೇಕೆ ಬೇಡವೇ ಎಂಬ ಮೀನಮೇಷ ಎಣಿಸಿ ಕೊನೆಗೂ ಬಿಜೆಪಿ ಅದನ್ನ ಜೆಡಿಎಸ್ ತೆಕ್ಕೆಗೆ ಹಾಕಿದೆ. ಎಲ್ಲಿ ಜೆಡಿಎಸ್ ಟಿಕೆಟ್ ಗಾಗಿ ಸ್ವಲ್ಪ ಹೆಚ್ಚಿನ ಆಕಾಂಕ್ಷಿಗಳೇ ಇದ್ದರು. ನಿಸರ್ಗ ನಾರಾಯಣ ಸ್ವಾಮಿ, ಸಮೃದ್ಧಿ ಮಂಜುನಾಥ , ಮಲ್ಲೇಶ್ ಬಾಬು ಹೀಗೆ. ಜೊತೆ ಬಿಜೆಪಿ ಮುನಿಸ್ವಾಮಿ ಕೂಡ ಕುಮಾರಸ್ವಾಮಿಯವರನ್ನ ಭೇಟಿ ಮಾಡಿದ್ರು. ಈ ಎಲ್ಲದರ ಮಧ್ಯೆ ಮಲ್ಲೇಶ್ ಬಾಬು ಹೆಸರು ಅಂತಿಮಗೊಂಡಿದೆ. ಇನ್ನೇನಿದ್ರೂ ಕಣಕ್ಕಿಳಿದು ಯುದ್ಧಕ್ಕೆ ಸಿದ್ಧರಾಗಬೇಕಿರೋದು ಮಾತ್ರ ಬಾಕಿ. ಇದೇ ೨೮ರ ನಂತರ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.