• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಸಂಕಷ್ಟ ಕಾಲದಲ್ಲಿ ಶ್ರೀಲಂಕಾದ ಕೈ ಬಿಟ್ಟ ಚೀನಾ: ಭಾರತ ಆಗಲಿದೆಯೇ ಅದರ ಮಿತ್ರರಾಷ್ಟ್ರ? ಭಾಗ – 1

ಫಾತಿಮಾ by ಫಾತಿಮಾ
July 20, 2022
in ದೇಶ, ವಿದೇಶ
0
ಸಂಕಷ್ಟ ಕಾಲದಲ್ಲಿ ಶ್ರೀಲಂಕಾದ ಕೈ ಬಿಟ್ಟ ಚೀನಾ: ಭಾರತ ಆಗಲಿದೆಯೇ ಅದರ ಮಿತ್ರರಾಷ್ಟ್ರ? ಭಾಗ – 1
Share on WhatsAppShare on FacebookShare on Telegram

ಶ್ರೀಲಂಕಾವು ಆರ್ಥಿಕ ಮತ್ತು ರಾಜಕೀಯವಾಗಿ ಅಧಪತನಕ್ಕಿಳಿದಿರುವುದು ನಿಸ್ಸಂದೇಹವಾಗಿ ಭಾರತಕ್ಕೆ ಗಂಭೀರ ಆತಂಕದ ವಿಷಯವಾಗಿದೆ. ಯಾಕೆಂದರೆ ಶ್ರೀಲಂಕಾವು ಭಾರತಕ್ಕೆ ಕೇವಲ ನೆರೆಯ ರಾಷ್ಟ್ರ ಮಾತ್ರವಲ್ಲ ಹಿಂದೂ ಮಹಾಸಾಗರದಲ್ಲಿ ಅದು ನಿರ್ವಹಿಸುತ್ತಿರುವ ಆಯಕಟ್ಟಿನ ಪಾತ್ರಕ್ಕಾಗಿಯೂ ಭಾರತಕ್ಕೆ ಆ ರಾಷ್ಟ್ರದ ಆಗುಹೋಗು ಮುಖ್ಯವಾಗುತ್ತದೆ. 

ADVERTISEMENT

ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದ್ದು ದೀರ್ಘಾವಧಿಯ ಅಸ್ಥಿರತೆಯು ಶ್ರೀಲಂಕಾ ಅಥವಾ ಭಾರತ ಎರಡಕ್ಕೂ ಒಳ್ಳೆಯದಲ್ಲ. ಎರಡೂ ದೇಶಗಳ ಭವಿಷ್ಯವು ಭೌಗೋಳಿಕ ಸಾಮೀಪ್ಯ ಮತ್ತು ನಾಗರಿಕತೆಯ ಬಂಧಗಳ  ಕಾರಣದಿಂದ ಪರಸ್ಪರ ಹೆಣೆದುಕೊಂಡಿದೆ.  ಶ್ರೀಲಂಕಾವು ಏಷ್ಯಾದ ಎರಡು ಪ್ರಮುಖ ಶಕ್ತಿಗಳ ಪೈಪೋಟಿಗೆ ಅಖಾಡವಾಗಿದೆ  ಎಂಬುದು ಮತ್ತೊಂದು ಆಯಾಮವಾಗಿದ್ದು, ಅಲ್ಲಿನ ಪ್ರಕ್ಷುಬ್ಧತೆಯ ಬಗ್ಗೆ ಭಾರತ ಗಮನಹರಿಸಲೇಬೇಕಾಗಿದೆ.

ರಾಜಪಕ್ಸೆ ಅವರು ಚೀನಾದ ಬಗ್ಗೆ ಹೆಚ್ಚಿನ ಒಲವನ್ನು ಹೊಂದಿದ್ದವರಾಗಿದ್ದು ಅಧಿಕಾರದಲ್ಲಿದ್ದಾಗ ಭಾರತದ ಭದ್ರತಾ ಕಾಳಜಿಯ ಕಡೆಗೆ ಅಲ್ಪಗಮನವನ್ನೂ ಹರಿಸಿರಲಿಲ್ಲ. ಹೀಗಿದ್ದರೂ, ಕೊಲಂಬೊದಲ್ಲಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಸರ್ಕಾರ ಇಲ್ಲದಿರುವುದು ಭಾರತದ ಆತಂಕವನ್ನು ಹೆಚ್ಚಿಸಿದೆ. ಅಲ್ಲದೆ ದ್ವೀಪ ರಾಷ್ಟ್ರದ ಜರ್ಜರಿತ ಆರ್ಥಿಕತೆ ಮರಳಿ ಹಳಿಗೆ ಬರದಿದ್ದರೆ ಲಂಕಾದ ನಿರಾಶ್ರಿತರ ಸಮಸ್ಯೆಯೂ ಭಾರತಕ್ಕೆ ಕಾಡುವ ಅಪಾಯವಿದೆ.

ಶ್ರೀಲಂಕಾದಲ್ಲಿನ ರಾಜಕೀಯ ನಿರ್ವಾತವು $3 ಬಿಲಿಯನ್ ಬೇಲ್‌ಔಟ್ ಪ್ಯಾಕೇಜ್‌ಗಾಗಿ ಅಂತರರಾಷ್ಟ್ರೀಯ ಹಣಕಾಸು ನಿಧಿಯೊಂದಿಗೆ  ಪ್ರಸ್ತುತ ನಡೆಯುತ್ತಿರುವ ಮಾತುಕತೆಗಳನ್ನು ವಿಳಂಬಗೊಳಿಸಬಹುದು. ಇದು ದ್ವೀಪ ರಾಷ್ಟ್ರದ ಆರ್ಥಿಕ ಸಂಕಷ್ಟಗಳನ್ನು ಇನ್ನಷ್ಟು ಉಲ್ಬಣಗೊಳಿಸಬಹುದು.  ಶ್ರೀಲಂಕಾವನ್ನು ಅನಿರ್ದಿಷ್ಟವಾಗಿ ಆರ್ಥಿಕವಾಗಿ ಬೆಂಬಲಿಸಲು ಭಾರತಕ್ಕೂ ಸಾಧ್ಯವಿಲ್ಲ.

ಮತ್ತೊಂದೆಡೆ ದ್ವೀಪ ರಾಷ್ಟ್ರದ ಸರ್ಕಾರವು ದಿವಾಳಿತನವನ್ನು ಘೋಷಿಸಲು ಕಾರಣವಾದ ಆರ್ಥಿಕ ಬಿಕ್ಕಟ್ಟು ದೀರ್ಘಕಾಲದಿಂದಲೇ ದೇಶದಲ್ಲಿ ಅಸ್ತಿತ್ವದಲ್ಲಿದ್ದರೂ ಸಹ ಗೋಟಬಯ ರಾಜಪಕ್ಸೆ ಅವರ ನಿರಂಕುಶ ಆಡಳಿತಕ್ಕೆ ಇಂತಹ ಅಕಾಲಿಕ ಅಂತ್ಯವನ್ನು ಯಾರೂ ನಿರೀಕ್ಷಿಸಿರಲಿಲ್ಲ. ಮೇಲಾಗಿ ಜುಲೈ 9 ರಂದು ಶ್ರೀಲಂಕಾದ ಅಧ್ಯಕ್ಷೀಯ ನಿವಾಸದಿಂದ ಪಲಾಯನ ಮಾಡಲು ಗೋಟಬಯ ಮಾಲ್ಡೀವ್ಸ್‌ನಲ್ಲಿ ಆಶ್ರಯ ಪಡೆದಿದ್ದರೂ ಅಲ್ಲಿಯೂ ಜನರಿಂದ ವಿರೋಧ ಎದುರಿಸಬೇಕಾಯಿತು. 

2019 ರಲ್ಲಿ ಸಿಂಹಳ-ಬೌದ್ಧ ಬಹುಮತದ ಮೇಲೆ ಕೇಂದ್ರೀಕೃತವಾದ  ಚುನಾವಣಾ ಪ್ರಚಾರ ನಡೆಸಿ ತಾನೊಬ್ಬ ಶಕ್ತಶಾಲಿ ನಾಯಕನಾಗಿದ್ದು ತನ್ನ ನಾಯಕತ್ವದಲ್ಲಿ ಮಾತ್ರ ದೇಶದ ಭದ್ರತೆ ಸುರಕ್ಷಿತವಾಗಿರುತ್ತದೆ ಎಂಬಂತೆ ಚಿತ್ರಿಸಿ ಅಧಿಕಾರದ ಗದ್ದುಗೆ ಏರಿದ್ದರು ರಾಜಪಕ್ಸೆ.  ಈಸ್ಟರ್ ಭಾನುವಾರದಂದೇ ನಡೆದ ಬಾಂಬ್ ದಾಳಿಯ ಸುಳಿವು ಅವರ ಭದ್ರತಾ ಪಡೆಗಳಿಗೆ ಸಿಕ್ಕಿರಲಿಲ್ಲ ಎನ್ನುವುದೂ ಚುನಾವಣೆಯ ಮೇಲೆ ಪ್ರಭಾವ ಬೀರಲಿಲ್ಲ. 

ಮೂರು ತಿಂಗಳ ಹಿಂದೆ ದ್ವೀಪ ರಾಷ್ಟ್ರದಲ್ಲಿ ಮತ್ತು ಕೊಲಂಬೊದ ಕಡಲತೀರದ ಗಾಲ್ ಫೇಸ್‌ನಲ್ಲಿ ಪ್ರಾರಂಭವಾದ ದೇಶವ್ಯಾಪಿ ಪ್ರತಿಭಟನೆಗಳು ಜುಲೈ 9 ರಂದು ಅಧ್ಯಕ್ಷೀಯ ನಿವಾಸದ ಮೇಲೆ ದಾಳಿ ಮಾಡುವಲ್ಲಿ ಅಂತ್ಯಗೊಂಡವು. ತನ್ನ ಕೋಟೆಯ ಮೇಲೆ ದಾಳಿ ನಡೆಯಲಿದೆ ಎನ್ನುವ ಸೂಚನೆ ಸಿಕ್ಕ ರಾಜಪಕ್ಸೆ ಅಷ್ಟರಲ್ಲಾಗಲೇ ಅಲ್ಲಿಂದ ಪಲಾಯನ ಮಾಡಿದ್ದರು. ಅಲ್ಲಿನ‌ ಪ್ರಜೆಗಳು ಅಧ್ಯಕ್ಷೀಯ ನಿವಾಸದ ಕೊಳದಲ್ಲಿ ಸ್ನಾನ ಮಾಡುವ, ಹಾಸಿಗೆಗಳ ಮೇಲೆ ವಿಶ್ರಾಂತಿ ಪಡೆಯುವ, ಜಿಮ್ ಉಪಕರಣಗಳನ್ನು ಬಳಸುವ ಮತ್ತು ಗ್ರ್ಯಾಂಡ್ ಪಿಯಾನೋದಲ್ಲಿ ಸಂಗೀತ ನುಡಿಸುವ ಫೋಟೋಗಳು ಮತ್ತು ವೀಡಿಯೊಗಳು ವಿಶ್ವಾದ್ಯಾಂತ ವೈರಲ್ ಆಗಿವೆ.

ಮುಂದುವರೆಯುವುದು….

Tags: BJPCongress Partyನರೇಂದ್ರ ಮೋದಿಬಿಜೆಪಿ
Previous Post

ಅಕ್ರಮ-ಸಕ್ರಮ ತಡೆಯಾಜ್ಞೆ: ಬಡ, ಮಧ್ಯಮ ವರ್ಗದ ವಿನಾಯಿತಿಗೆ ಮನವಿ ಸಲ್ಲಿಸಲು ಅಭ್ಯಂತರವಿಲ್ಲ- ʼನಮ್ಮ ಬೆಂಗಳೂರು ಫೌಂಡೇಷನ್ʼ

Next Post

ಶೀಘ್ರವೇ ಲೋಕಾರ್ಪಣೆಗೊಳ್ಳಲಿದೆ ಗಾಂಧಿನಗರದ ಬಿಬಿಎಂಪಿ ಬಹುಮಹಡಿ ಪಾರ್ಕಿಂಗ್

Related Posts

ಪಾಕ್–ಅಫ್ಘಾನ್ ಗಡಿಯಲ್ಲಿ ತೀವ್ರ ಉದ್ವಿಗ್ನತೆ: ಪಾಕಿಸ್ತಾನದ ವೈಮಾನಿಕ ದಾಳಿ, ತಾಲಿಬಾನ್ ಖಂಡನೆ
ವಿದೇಶ

ಪಾಕ್–ಅಫ್ಘಾನ್ ಗಡಿಯಲ್ಲಿ ತೀವ್ರ ಉದ್ವಿಗ್ನತೆ: ಪಾಕಿಸ್ತಾನದ ವೈಮಾನಿಕ ದಾಳಿ, ತಾಲಿಬಾನ್ ಖಂಡನೆ

by ಪ್ರತಿಧ್ವನಿ
May 1, 2026
0

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಗಡಿ ಭಾಗದಲ್ಲಿ ಉದ್ವಿಗ್ನತೆ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಇತ್ತೀಚೆಗೆ ಪಾಕಿಸ್ತಾನ ಸೇನೆ ಗಡಿಯುದ್ದಕ್ಕೂ ವೈಮಾನಿಕ ದಾಳಿ ನಡೆಸಿದ್ದು, ಪರಿಸ್ಥಿತಿ ಮತ್ತಷ್ಟು...

Read moreDetails
ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

April 30, 2026
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

April 30, 2026
ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

April 29, 2026
“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

April 29, 2026
Next Post
ಶೀಘ್ರವೇ ಲೋಕಾರ್ಪಣೆಗೊಳ್ಳಲಿದೆ ಗಾಂಧಿನಗರದ ಬಿಬಿಎಂಪಿ ಬಹುಮಹಡಿ ಪಾರ್ಕಿಂಗ್

ಶೀಘ್ರವೇ ಲೋಕಾರ್ಪಣೆಗೊಳ್ಳಲಿದೆ ಗಾಂಧಿನಗರದ ಬಿಬಿಎಂಪಿ ಬಹುಮಹಡಿ ಪಾರ್ಕಿಂಗ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada