ಪ್ರಧಾನಿ ಮೋದಿ ಕುರಿತ ಹಾಡೊಂದು ವೈರಲ್ ಆಗುತ್ತಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮೂರು ನಿಮಿಷ ಐವತ್ತು ಸೆಕೆಂಡ್ಗಳ ಈ ಹಾಡಿನಲ್ಲಿ ಮೋದಿ ಆತಂಕದಲ್ಲಿದ್ದೂ, ಮಾತು ಮಾತಿಗೂ ಹೆದರುತ್ತಿದ್ದಾರೆ. ಕುರ್ಚಿ ಅಲುಗಾಡುತ್ತಿದೆ’ ಎಂದು ವ್ಯಂಗ್ಯ ಮಾಡಿದೆ.
![](https://pratidhvani.com/wp-content/uploads/2024/04/IMG_6939-1024x397.jpeg)
ಖ್ಯಾತ ಪತ್ರಕರ್ತ ಪರಂಜಯ್ ಗುಹಾ ಠಾಕರ್ತಾ ನಿರ್ಮಿಸಿರುವ ಈ ಗೀತೆಗೆ ಸಾಹಿತ್ಯ ರಾಜೇಶ್ ನಿರ್ಮಲ್, ಸಂಗೀತ ಸಂಯೋಜನೆ ವೇದಿ ಸಿನ್ಹಾ, ಸಂಗೀತ ನಿರ್ಮಾಣವನ್ನು ಅಮರ್ತ್ಯ ಘೋಷ್ ಮಾಡಿದ್ದು, ಅದಿತಿ ಹಾಡಿದ್ದಾರೆ.
![](https://pratidhvani.com/wp-content/uploads/2024/04/IMG_6940-1024x400.jpeg)
ರಾಮನ ಹೆಸರಿನಲ್ಲಿ ಮುಖವಾಡ ತೊಟ್ಟು ದೇಶವನ್ನೂ ಲೂಟಿ ಮಾಡಿದೆ, ದೇಶದ ಜನರನ್ನು ಭ್ರಮೆಯಲ್ಲಿ ಇರಿಸಿದೆ, ಧರ್ಮದ ಹೆಸರಿನಲ್ಲಿ ಒಡೆದು ಆಳಿದೆ ಎಂದು ಪ್ರಧಾನಿಯನ್ನು ಗುರಿಯಾಗಿಸಿಕೊಂಡಿರುವ ಹಾಡಿನ ಮೂಲಕ ಟೀಕಿಸಲಾಗಿದೆ.
![](https://pratidhvani.com/wp-content/uploads/2024/04/IMG_6941-1024x415.jpeg)
ಬದಲಾವಣೆಯ ಮುನ್ಸೂಚನೆ ಸಿಕ್ಕಿದೆ, ಅಧಿಕಾರವೂ ಕೊನೆಯಾಗಲಿದೆ ಎಂಬ ಭರವಸೆಯೊಂದಿಗೆ ಹಾಡು ಕೊನೆಯಾಗಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಈ ಹಾಡು ಹೆಚ್ಚು ಮಹತ್ವ ಪಡೆದುಕೊಂಡಿದ್ದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.