
ಪಟ್ಟಣಗೆರೆ ಶೆಡ್ನಲ್ಲಿ ಡಿ ಗ್ಯಾಂಗ್ನ ಕೃತ್ಯದ ಭಯಾನಕ ಸತ್ಯ ಮತ್ತಷ್ಟು ಬಹಿರಂಗವಾಗ್ತಿದೆ. ಕೊಲೆ ನಡೆದಾಗ ನಾನು ಅಲ್ಲಿ ಇರಲಿಲ್ಲ ಎಂದಿದ್ದಕ್ಕೆ ಪೊಲೀಸ್ರು ಮತ್ತಷ್ಟು ಸಾಕ್ಷ್ಯಗಳನ್ನು ಸಂಗ್ರಹ ಮಾಡುವ ಕೆಲಸ ಮಾಡಿದ್ದಾರೆ.

ಪವಿತ್ರಾಗೌಡ ಮೋಹಕ್ಕೆ ಬಿದ್ದು ಪಟ್ಟಣಗೆರೆ ಶೆಡ್ನಲ್ಲಿ ಕೂಗಾಡಿದ್ದ ದರ್ಶನ್, ಜೈಲು ಸೇರಿ ಇದೀಗ ಬೆನ್ನು ನೋವಿಂದ ಆಸ್ಪತ್ರೆ ಸೇರಿದ್ದಾರೆ. ಆದರೆ ರೇಣುಕಾಸ್ವಾಮಿ ಕೊಲೆ ದಿನ ದರ್ಶನ್ ಶೆಡ್ನಲ್ಲಿದ್ರೂ ಅನ್ನೋದಕ್ಕೆ ಮತ್ತೊಂದು ಸಾಕ್ಷ್ಯ ಪೊಲೀಸರಿಗೆ ಸಿಕ್ಕಿದೆ.

ರೇಣುಕಾಸ್ವಾಮಿ ಕೊಲೆಯಾದ ಸ್ಥಳದಲ್ಲೇ ಅಭಿಮಾನಿಗಳ ಜೊತೆ ದರ್ಶನ್ ಫೋಟೋಗೆ ಪೋಸ್ ಕೊಟ್ಟಿದ್ದಾರೆ.. ಕೊಲೆ ಕೇಸ್ನಲ್ಲಿ A6 ಜಗದೀಶ್, A7 ಅನುಕುಮಾರ್, A8 ರವಿಶಂಕರ್ ಜೊತೆ ತೆಗೆಸಿಕೊಂಡ ಫೋಟೋಗಳು ಪೊಲೀಸರಿಗೆ ಸಿಕ್ಕಿವೆ.

ಪಟ್ಟಣಗೆರೆ ಶೆಡ್ನಲ್ಲೇ ಫೋಟೋ ತೆಗೆಸಿಕೊಂಡ ಬಗ್ಗೆ ಸಾಕ್ಷಿ ಪುನೀತ್ ಪೊಲೀಸ್ರ ಮುಂದೆ ಬಾಯ್ಬಿಟ್ಟಿದ್ರು. ಆ ಫೋಟೋಗಳನ್ನ ಡಿಲೀಟ್ ಮಾಡಿದ್ದಾಗಿಯೂ ಪುನೀತ್ ಒಪ್ಪಿಕೊಂಡಿದ್ದರು.. ಹೀಗಾಗಿ ಪುನೀತ್ ಮೊಬೈಲ್ ಅನ್ನು ಹೈದ್ರಾಬಾದ್ CSFLಗೆ ಕಳುಹಿಸಿ ರಿಟ್ರೀವ್ ಮಾಡಿಸಿದ್ದಾರೆ. ರಿಟ್ರೀವ್ ಆದ ಪೋಟೋದಲ್ಲಿ ಬ್ಲೂ ಕಲರ್ ಟೀ ಶರ್ಟ್ ಹಾಗೂ ಬ್ಲಾಕ್ ಕಲರ್ ಪ್ಯಾಂಟ್ ಹಾಕ್ಕೊಂಡು ದರ್ಶನ್ ಪೋಸ್ ಕೊಟ್ಟಿದ್ದಾರೆ.







