ಬೆಂಗಳೂರು : ಏ.11: ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ರೇವಣ್ಣಗೆ ಸವಾಲು ಹಾಕಿದ್ದ ವಿಚಾರದ ಬಗ್ಗೆ ಈ ಹಿಂದೆಯೇ ಮಾತನಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ, ಪ್ರೀತಂಗೌಡ ದೇವೇಗೌಡರ ಕುಟುಂಬಕ್ಕೆ ಸವಾಲು ಹಾಕುವುದು ಬೇಕಿಲ್ಲ, ಓರ್ವ ಸಾಮಾನ್ಯ ಕಾರ್ಯಕರ್ತರನ್ನು ಪ್ರೀತಂಗೌಡ ವಿರುದ್ಧ ಅಖಾಡಕ್ಕೆ ಇಳಿಸಿ ಗೆಲ್ಲಿಸುವ ತಾಕತ್ತು ಜೆಡಿಎಸ್ ಇದೆ. ರೇವಣ್ಣ ಕುಟುಂಬವೇ ಸ್ಪರ್ಧೆ ಮಾಡುವ ಅಗತ್ಯ ಬೇಕಿಲ್ಲ ಎಂದಿದ್ದರು. ಇದೀಗ ನಾನು ಈ ಹಿಂದೆ ಹೇಳಿದ ಮಾತಿನಂತೆ ಓರ್ವ ಜೆಡಿಎಸ್ ಕಾರ್ಯಕರ್ತನನ್ನು ಅಖಾಡಕ್ಕೆ ಇಳಿಸಿ ಪ್ರೀತಂಗೌಡ ವಿರುದ್ಧ ಗೆಲ್ಲಿಸಿಕೊಂಡು ಬರುತ್ತೇನೆ ಎನ್ನುವುದು ಕುಮಾರಸ್ವಾಮಿ ಹಠಕ್ಕೆ ಕಾರಣ.
ಇನ್ನು ಹಾಸನ ಜಿಲ್ಲೆಯ ವಿಚಾರದಲ್ಲಿ ರೇವಣ್ಣ ನಿರ್ಧಾರವೇ ಅಂತಿಮ ಎನ್ನುವುದು ಅಲಿಖಿತ ನಿಯಮ. ಆದರೆ ಕುಮಾರಸ್ವಾಮಿ ಮಾತ್ರ ಈ ಬಾರಿ ನಾವು ಅಧಿಕಾರಕ್ಕೆ ಬರಬೇಕು ಎಂದಾಗ ಕುಟುಂಬ ರಾಜಕಾರಣ ಎನ್ನುವ ಹಣೆ ಪಟ್ಟಿ ಕಳಚಿಕೊಳ್ಳಬೇಕಿದೆ. ರೇವಣ್ಣ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲಿದ್ದು, ಪ್ರಜ್ವಲ್ ಸಂಸದನಾಗಿದ್ದಾರೆ. ಮತ್ತೋರ್ವ ಪುತ್ರ ಪರಿಷತ್ ಸದಸ್ಯರಿದ್ದಾರೆ. ಭವಾನಿಯೂ ಅಭ್ಯರ್ಥಿ ಆದರೆ ನನ್ನ ಶ್ರಮಕ್ಕೆ ಹಿನ್ನಡೆ ಆಗುತ್ತದೆ ಎನ್ನುವುದು ಕುಮಾರಸ್ವಾಮಿ ಮನಸ್ಸಿನ ಮಾತು.
ಕೃಷ್ಣಮಣಿ