ಗದಗ : ರಾಜ್ಯ ವಿಧಾನಸಭಾ ಚುನಾವಣೆಗೆ ಈಗಾಗಲೇ ಕೇಂದ್ರ ಚುನಾವಣಾ ಆಯೋಗ ಮುಹೂರ್ತ ನಿಗದಿ ಮಾಡಿದೆ. ಬಿಜೆಪಿ ಬೇರೆ ಈ ಬಾರಿ ಹೊಸ ಮುಖಗಳಿಗೆ ಅವಕಾಶ ನೀಡುವ ಬಗ್ಗೆ ಮಾತನಾಡುತ್ತಿದೆ. ಈ ಎಲ್ಲದರ ನಡುವೆಯೇ ರೋಣ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ಕಳಕಪ್ಪ ಬಂಡಿ ತಮ್ಮ ಕುಟುಂಬಸ್ಥರಿಂದಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಳಕಪ್ಪ ಬಂಡಿ ಸೋದರ ಸಿದ್ದಪ್ಪ ಬಂಡಿ ಹಾಗೂ ಪತ್ನಿ ಸಂಯುಕ್ತಾ ಬಂಡಿ ಈ ಬಾರಿ ಕಳಕಪ್ಪ ಬದಲಾಗಿ ತಮಗೆ ಟಿಕೆಟ್ ನೀಡುವಂತೆ ಲಾಬಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬಿಜೆಪಿ ಈಗಾಗಲೇ ರೋಣ ಕ್ಷೇತ್ರದಲ್ಲಿ ಸಮೀಕ್ಷೆ ನಡೆಸಿದ್ದು ಇಲ್ಲಿ ಈ ಬಾರಿ ಕಳಕಪ್ಪ ಬಂಡಿ ಗೆಲುವು ಕಷ್ಟಕರ ಎಂದು ಹೇಳಲಾಗ್ತಿದೆ.ಇದನ್ನೇ ಲಾಭ ಮಾಡಿಕೊಳ್ಳಲು ಮುಂದಾಗಿರುವ ಸಂಯುಕ್ತಾ ಬಂಡಿ ಮತ್ತು ಸಿದ್ದಪ್ಪ ಬಂಡಿ ರಾಜ್ಯ ನಾಯಕರ ಬಳಿಕ ಟಿಕೆಟ್ಗಾಗಿ ಮನವಿ ಮಾಡುತ್ತಿದ್ದಾರೆ ಎನ್ನಲಾಗಿದೆ/