• Home
  • About Us
  • ಕರ್ನಾಟಕ
Wednesday, January 14, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಫ್ಯಾಕ್ಟ್ ಚೆಕ್ಕರ್ ಆದ ಬೆಂಗಳೂರಿನ ಟೆಕ್ಕಿ: ಜುಬೈರ್ ಬದುಕಿನ ಸ್ಪೂರ್ತಿದಾಯಕ ಕಥೆ

ಫಾತಿಮಾ by ಫಾತಿಮಾ
July 5, 2022
in Top Story, ದೇಶ
0
ʼನಮ್ಮ ಕೆಲಸವನ್ನು ದಮನಿಸುವ ಪ್ರಯತ್ನವಿದು’ : ದೆಹಲಿ ಪೊಲೀಸರ  ಆರೋಪಗಳನ್ನು ತಳ್ಳಿಹಾಕಿದ  ಆಲ್ಟ್ ನ್ಯೂಸ್
Share on WhatsAppShare on FacebookShare on Telegram

ಭಾರತದ ಪ್ರತಿಷ್ಠಿತ ಸತ್ಯ-ಪರಿಶೀಲನಾ(fact checking) ಸಂಸ್ಥೆಗಳಲ್ಲಿ ಒಂದಾದ ಆಲ್ಟ್‌ನ್ಯೂಸ್‌ನ ಸಹ-ಸಂಸ್ಥಾಪಕ ಜುಬೈರ್ ಅವರನ್ನು 2018 ರಲ್ಲಿ ಹಿಂದೂ ದೇವರು ಹನುಮಂತನನ್ನು ಅನ್ನು ಉಲ್ಲೇಖಿಸಿ ಮಾಡಿದ ಟ್ವೀಟ್‌ಗಾಗಿ ಈ ವಾರ ಬಂಧಿಸಲಾಯಿತು.  ಆದರೆ ಟ್ವಿಟ್ಟರ್‌ನಲ್ಲಿ ಅರ್ಧ ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಅವರಿಗೆ ಈ‌ ಕ್ಷೇತ್ರಕ್ಕೆ ಬರುವ ಮೊದಲು ರಾಜಕೀಯದಲ್ಲಿ ಆಸಕ್ತಿಯೇ ಇರಲಿಲ್ಲ, ಸ್ಥಳೀಯ ಶಾಸಕರು ಯಾರು ಎಂದು ಸಹ ತಿಳಿದಿರಲಿಲ್ಲ ಎನ್ನುತ್ತಾರೆ ಅವರ ಆಪ್ತರು.

ADVERTISEMENT

ತನ್ನ ತಂದೆಯ ಸಲಹೆಯಂತೆ ಜುಬೈರ್  ಬೆಂಗಳೂರಿನ ಪ್ರತಿಷ್ಠಿತ ಎಂಎಸ್ ರಾಮಯ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದಿದ್ದರು. ಆ ನಂತರ ಬೆಂಗಳೂರಿನ ಏರ್‌ಟೆಲ್ ಮತ್ತು ಸಿಸ್ಕೋದಂತಹ ಪ್ರತಿಷ್ಠಿತ ಕಂಪನಿಗಳಲ್ಲಿ ಟೆಲಿಕಾಂ ಎಂಜಿನಿಯರ್ ಆಗಿ ಕೆಲಸ ಮಾಡಿದ್ದರು. ಬಳಿಕ ಸುಮಾರು‌ ಒಂದು ದಶಕಗಳ ಸುದೀರ್ಘ ಕಾಲ‌ ನೋಕಿಯಾದಲ್ಲಿ ಕೆಲಸ ಮಾಡಿದ ಅವರು ಆನ್‌ಸೈಟ್ ಯೋಜನೆಗಳಿಗಾಗಿ ಫಿನ್ಲೆಂಡ್ ಮತ್ತು ಜಪಾನಿಗೂ ಹೋಗಿದ್ದರು ಎಂದು ಅವರ ಸ್ನೇಹಿತರು ನೆನಪಿಸಿಕೊಳ್ಳುತ್ತಾರೆ.

ಬೆಂಗಳೂರಿನ ಅತ್ಯಂತ ಯಶಸ್ವಿ ಟೆಕ್ಕಿ ಜೀವನ‌ ನಡೆಸುತ್ತಿದ್ದ ಜುಬೈರ್ ಫ್ಯಾಕ್ಟ್ ಚೆಕ್ ಕ್ಷೇತ್ರಕ್ಕೆ ಕಾಲಿಟ್ಟದ್ದೇ ಆಕಸ್ಮಿಕವಾಗಿ. ಸಾಮಾಜಿಕ ಮಾಧ್ಯಮದಲ್ಲಿ ಕ್ರಿಯಾಶೀಲರಾಗಿರುವ ಜುಬೈರ್ ಅವರಿಗೆ 2014ರಲ್ಲಿ‌ ಫೇಸ್‌ಬುಕ್‌ನಲ್ಲಿ ಆಗಿನ‌ ಯುಪಿಎ ಸರ್ಕಾರವನ್ನು ಟೀಕಿಸಿದ ರಾಜಕೀಯ‌‌ ಪುಟಗಳು ಕಂಡುಬರುತ್ತದೆ. ಅದೇ ವರ್ಷ ಜೂನ್‌ನಲ್ಲಿ ಬಿಜೆಪಿ ನಾಯಕ ಸುಬ್ರಮಣ್ಯ ಸ್ವಾಮಿಯ ಹೆಸರಲ್ಲಿ ತಮ್ಮದೇ ಪುಟವೊಂದನ್ನು ಪ್ರಾರಂಭಿಸಿ ವಿಶ್ವವಿಖ್ಯಾತ ಮೊನಾಲಿಸಾ ಚಿತ್ರಕ್ಕೆ ಬಿಂದಿ ಮತ್ತು ಸೀರೆಯನ್ನು ಧರಿಸಿರುವಂತೆ ಫೊಟೋಶಾಪ್ ಮಾಡಿ “ಮೋನಾಲಿಸಾ ಭಾರತೀಯಳು ಎಂದು ನಿಮಗೆ ತಿಳಿದಿದೆಯೇ?” ಎಂದು ವ್ಯಂಗ್ಯವಾಗಿ ಪೋಸ್ಟ್ ಮಾಡುತ್ತಾರೆ.

ಆನಂತರ ಸ್ವತಃ ಸುಬ್ರಹ್ಮಣ್ಯ ಸ್ವಾಮಿಯವರಿಂದ ಲೀಗಲ್ ನೋಟಿಸ್ ಪಡೆಯುವ ಜುಬೈರ್ ತಮ್ಮ ಪೇಜ್‌ನ ಹೆಸರಿನ‌ ಮುಂದೆ ‘ಅನ್‌ಅಫಿಷಿಯಲ್’ ಎಂಬ ಪದವನ್ನು ಸೇರಿಸಿ ಪೋಸ್ಟ್ ಮಾಡುವುದನ್ನು ಮುಂದುವರೆಸುತ್ತಾರೆ. ಇದೇ ಅವಧಿಯಲ್ಲಿ ಅವರು ಅಹಮದಾಬಾದ್ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಪ್ರತೀಕ್ ಸಿನ್ಹಾ ಅವರ ಸಂಪರ್ಕಕ್ಕೆ ಬಂದರು. ಪ್ರತೀಕ್ ಅವರ ತಂದೆ ಮುಕುಲ್ ಮತ್ತು ತಾಯಿ‌ ನಿರ್ಝರಿ ಅವರು ವಿಜ್ಞಾನಿಗಳಾಗಿದ್ದು, ಅಹಮದಾಬಾದ್‌ನ Physical Research Laboratoryಯಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಡುವ ಕಾರ್ಮಿಕರನ್ನು ಸಂಘಟಿಸುವಲ್ಲಿ ತೊಡಗಿಸಿಕೊಂಡ ನಂತರ ತಮ್ಮ ಕೆಲಸವನ್ನು ಕಳೆದುಕೊಂಡವರು. ಪ್ರತೀಕ್ ಅವರು ಮತ್ತೊಂದು ಜನಪ್ರಿಯ ಫೇಸ್‌ಬುಕ್ ಪುಟ ಮತ್ತು ವೆಬ್‌ಸೈಟ್  ‘ಟ್ರುತ್ ಆಫ್ ಗುಜರಾತ್’  ಅನ್ನು ನಡೆಸುತ್ತಿದ್ದರು.

ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಪ್ರತೀಕ್ 2013 ರಲ್ಲಿ, ಮುಕುಲ್‌ಗೆ ಕ್ಯಾನ್ಸರ್ ಇರುವುದು ಪತ್ತೆಯಾದಾಗ, ಅಹಮದಾಬಾದ್‌ಗೆ  ಹಿಂತಿರುಗಿದ್ದರು. ಮೊದಲ ಬಾರಿ ಪ್ರತೀಕ್  ಜುಬೈರ್ ಅವರನ್ನು , ‘ಟ್ರೂತ್ ಆಫ್ ಗುಜರಾತ್’ ಪುಟದಿಂದ ಯಾವುದೇ ಕಾರಣವಿಲ್ಲದೆ ಒಂದು ಪೋಸ್ಟನ್ನು ತೆಗೆದುಕೊಂಡಿದ್ದಕ್ಕಾಗಿ ಅವರನ್ನು ಖಂಡಿಸಲು ಸಂಪರ್ಕಿಸಿದ್ದರು. “ಆದರೆ ಅತ್ಯಂತ ಶೀಘ್ರವಾಗಿ ಅವರಿಬ್ಬರ ಯೋಚನೆಗಳಲ್ಲಿ ಎಷ್ಟು ಸಾಮ್ಯತೆ ಇದೆ ಎಂಬುವುದನ್ನು ಅವರು ಅರಿತುಕೊಂಡರು” ಎನ್ನುತ್ತಾರೆ ನಿರ್ಝರಿ.   ಇಬ್ಬರೂ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿದ್ದು, ಕೆಲಸ ಮಾಡುತ್ತಲೇ ಜನಪ್ರಿಯ ಸಾಮಾಜಿಕ ಮಾಧ್ಯಮ ಪುಟಗಳನ್ನು ನಿರ್ವಹಿಸುತ್ತಿದ್ದರು.  ಅವರಿಬ್ಬರೂ ಜನರನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿ ಮಾಡಲು ಉತ್ಸುಕರಾಗಿದ್ದರು ಮತ್ತು ಆನ್‌ಲೈನ್‌ನಲ್ಲಿ ‘ಸುದ್ದಿ’ಯಾಗಿ ಹರಡುವ ತಪ್ಪು ಮಾಹಿತಿ ಮತ್ತು ದ್ವೇಷದ ಬಗ್ಗೆ ಸಮಾನವಾಗಿ ಚಿಂತೆಗೊಳಗಾಗಿದ್ದರು.

2016 ರಲ್ಲಿ,  ಕೆಲಸದ ನಿಮಿತ್ತ ಅಹಮದಾಬಾದ್‌ಗೆ ಪ್ರಯಾಣ ಬೆಳೆಸಿದ ಜುಬೈರ್ ಅಲ್ಲಿ  ಸಿನ್ಹಾರನ್ನು ಭೇಟಿಯಾದರು, ‘ಆಲ್ಟ್ ನ್ಯೂಸ್’ ಅನ್ನು ಪ್ರಾರಂಭಿಸುವ ಕಲ್ಪನೆ ಮೊದಲು ಅಲ್ಲಿ ಹುಟ್ಟಿಕೊಂಡಿತು.  “ಭಾರತೀಯ ಮಾಧ್ಯಮದಲ್ಲಿ  ವೆಬ್‌ಸೈಟ್‌ಗಳು ಅಸ್ತಿತ್ವದಲ್ಲಿಲ್ಲದ ಸಮಯದಲ್ಲಿ ನಾವು ಸತ್ಯ ಪರಿಶೀಲನೆಯ ವೆಬ್‌ಸೈಟನ್ನು ಪ್ರಾರಂಭಿಸಲು ಹೊರಟೆವು” ಎಂದು ನಿರ್ಝರಿ ನೆನಪಿಸಿಕೊಳ್ಳುತ್ತಾರೆ.

ದನದ ಚರ್ಮ ಸುಲಿದದ್ದಕ್ಕಾಗಿ ದಲಿತರನ್ನು ಸಾರ್ವಜನಿಕವಾಗಿ ಥಳಿಸಿರುವುದನ್ನು ವಿರೋಧಿಸಿ ನೂರಾರು ಪ್ರತಿಭಟನಾಕಾರರು ಅಹಮದಾಬಾದ್‌ನಿಂದ ಉನಾಕ್ಕೆ ಸುಮಾರು 300 ಕಿಲೋಮೀಟರ್‌ಗಳಷ್ಟು ಕಾಲ್ನಡಿಗೆ ಜಾಥಾ ಹೊರಟಾಗ, ಆ ಪ್ರತಿಭಟನೆಯಲ್ಲಿ ತನ್ನ ತಾಯಿಯೊಂದಿಗೆ ಭಾಗವಹಿಸಿದ ಪ್ರತೀಕ್ , #ChaloUna ಹ್ಯಾಶ್‌ಟ್ಯಾಗ್‌ನೊಂದಿಗೆ ಇಡೀ ಪ್ರತಿಭಟನೆಯನ್ನು ಆನ್‌ಲೈನ್‌ಗೆ ಅಪ್ಲೋಡ್ ಮಾಡಿದ್ದರು. ಮುಖ್ಯ ವಾಹಿನಿಯ ಮಾಧ್ಯಮಗಳಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದ ಈ ಪ್ರತಿಭಟನೆ ಆನ್‌ಲೈನ್ ಟ್ರೆಂಡ್ ಆಯಿತು. ಆ ಹೊತ್ತಿಗೆ ಪ್ರತೀಕ್ ಅವರಿಗೆ ತಾವಿದ್ದ ಸಾಫ್ಟ್ವೇರ್ ಕೆಲಸವನ್ನು ಬಿಟ್ಟು ಸತ್ಯ ಪರಿಶೋಧನೆಯಲ್ಲಿ ತಮ್ಮನ್ನು ತಾವು ಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಅನಿಸಿತು.

ಕೌಟುಂಬಿಕ ಕಟ್ಟುಪಾಡುಗಳಿಂದಾಗಿ ಜುಬೈರ್ ಇನ್ನೂ ಪೂರ್ಣಾವಧಿಗೆ ಸೇರ್ಪಡೆಯಾಗದಿದ್ದರೂ, ಫೆಬ್ರವರಿ 2017 ರಲ್ಲಿ ಆಲ್ಟ್ ನ್ಯೂಸ್ ವೆಬ್‌ಸೈಟ್ ಅನ್ನು ಪ್ರಾರಂಭಿಸಲಾಯಿತು. ಇದನ್ನು ಡೊನಾಲ್ಡ್ ಟ್ರಂಪ್ “ಬಿಜೆಪಿಗೆ ಮತ ನೀಡಿ” ಎಂಬ ಫೋಲ್ಡರ್ ಅನ್ನು ಹಿಡಿದಿರುವ ಜಿಐಎಫ್ ಅನ್ನು ಡಿಬಂಕ್ ಮಾಡುವುದರ ಮೂಲಕ  ಪ್ರಾರಂಭಿಸಲಾಯಿತು. ಜುಬೈರ್ ಸೆಪ್ಟೆಂಬರ್ 2018 ರಲ್ಲಿ ಆಲ್ಟ್ ನ್ಯೂಸ್‌ಗೆ ಪೂರ್ಣಾವಧಿಗೆ ಸೇರುತ್ತಾರೆ. ಅವರು ಸತ್ಯ-ಪರಿಶೀಲನೆಯ ಕಾರ್ಯಯೋಜನೆಗಳನ್ನು (fact checking) ನಿರ್ವಹಿಸುತ್ತಾರೆ ಮತ್ತು  ಬೆಳೆಯುತ್ತಿರುವ ಸಾಮಾಜಿಕ ಮಾಧ್ಯಮ ಉಪಸ್ಥಿತಿಯನ್ನು ಬಳಸಿಕೊಂಡು ತಪ್ಪು ಮಾಹಿತಿಯತ್ತ ಗಮನ ಸೆಳೆಯುತ್ತಾರೆ.  Alt News ತನ್ನ ಸತ್ಯ-ಪರಿಶೀಲನೆಯ ಕಥೆಗಳನ್ನು ನಿಖರವಾದ ಪುರಾವೆಗಳೊಂದಿಗೆ ಜನರ ಮುಂದಿಡುತ್ತಿತ್ತು.  ಉದಾಹರಣೆಗೆ, 2015 ರ ಶಾಖದ ಅಲೆಯ ಚಿತ್ರಗಳನ್ನು ಬಾಲಕೋಟ್ ವೈಮಾನಿಕ ದಾಳಿಯದ್ದು ಎಂದು ಉದ್ದೇಶಪೂರ್ವಕವಾಗಿ ಹಂಚಿಕೊಳ್ಳಲಾಗುತ್ತಿದೆ ಎಂಬುವುದನ್ನು ರಿವರ್ಸ್ ಇಮೇಜ್ ಮೂಲಕ ಅವರು ಸಾಬೀತು ಪಡಿಸಿದರು.

ಆದರೆ ಜುಬೈರ್ ಮತ್ತು ಸಿನ್ಹಾ ಅವರಿಗೆ ತಪ್ಪು ಮಾಹಿತಿಗಳು ಆಕಸ್ಮಿಕವಾಗಿ ಹರಡುತ್ತಿಲ್ಲ, ಅವರು ಡಿಬಂಕಿಂಗ್ ಮಾಡುತ್ತಿದ್ದ ಸುದ್ದಿಗಳಲ್ಲಿ ಒಂದು ವಿಶಿಷ್ಟ ಮಾದರಿಗಳು ಇದೆ ಎಂಬುವುದು ಬಲುಬೇಗ ಅರಿವಿಗೆ ಬಂತು. ಅವರು ಮಾಡಿದ್ದ ಗಮನಾರ್ಹ ಸಂಖ್ಯೆಯ ಸತ್ಯ-ತಪಾಸಣೆಗಳು  ಅಲ್ಪಸಂಖ್ಯಾತರನ್ನು ಗುರಿಯನ್ನಾಗಿಸಿಕೊಂಡಿದ್ದ ದ್ವೇಷ ಭಾಷಣವನ್ನು ಹೊಂದಿದ್ದವು. ಉದಾಹರಣೆಗೆ, “ಪಾಕಿಸ್ತಾನ ಜಿಂದಾಬಾದ್” ಅನ್ನುವ ವಿಡಿಯೋವನ್ನು ಭಾರತದ್ದು ಎಂದು ಹಂಚಿಕೊಳ್ಳಲಾಗಿತ್ತು. ಆದರೆ ಆ ವೀಡಿಯೊ ಕರಾಚಿ ಅಥವಾ ಬಾಂಗ್ಲಾದೇಶ ಮೂಲದ್ದು ಎಂದು ಆ ನಂತರ ಸಾಬೀತಾಯಿತು “ಎಂದು ನಿರ್ಝರಿ ಹೇಳುತ್ತಾರೆ.

ಪಟ್ಟುಬಿಡದೆ ಸತ್ಯವನ್ನು ಪರಿಶೀಲಿಸುವ ‘ಆಲ್ಟ್ ನ್ಯೂಸ್’ ಜನಪ್ರಿಯ ವೆಬ್‌ಸೈಟ್‌ಗಳ ಹಿಂದಿನ ಜನರು ಮತ್ತು ರಾಜಕೀಯ ಪಕ್ಷಗಳೊಂದಿಗೆ ಅವರಿಗಿರುವ ಲಿಂಕ್‌ಗಳ ಬಗ್ಗೆ ತನಿಖೆ ನಡೆಸಿತು.  “ಅವರು ದಿನನಿತ್ಯ ಅಂತರ್ಜಾಲದಲ್ಲಿ ಹರಿದಾಡುವ ವಿಡಿಯೋಗಳ  ಸತ್ಯ-ಪರೀಶೀಲನೆಯನ್ನು ಮೀರಿ ಆಡಳಿತ ಪಕ್ಷಕ್ಕೆ ಸಂಬಂಧಿಸಿರುವ ನಕಲಿ ಸುದ್ದಿ ಸೈಟ್‌ಗಳ ಬೆನ್ನುಬಿದ್ದಾಗ ಸಮಸ್ಯೆಗಳು ಪ್ರಾರಂಭವಾದವು” ಎನ್ನುತ್ತಾರೆ ನಿರ್ಝರಿ .

ಮೇ 2017 ರಲ್ಲಿ, ಆಲ್ಟ್ ನ್ಯೂಸ್ ಜನಪ್ರಿಯ ಸುದ್ದಿ ಸೈಟ್ ಮತ್ತು ಬಿಜೆಪಿ ಐಟಿ ಸೆಲ್ ನಡುವಿನ ಸಂಪರ್ಕವನ್ನು ಬಹಿರಂಗಪಡಿಸುವ ಕಥೆಯನ್ನು ಪ್ರಕಟಿಸಿತು. ಅವರ ಕೆಲಸ,  ಹೋರಾಟ ಮತ್ತು ಆಡಳಿತ ಪಕ್ಷಕ್ಕೆ  ಪ್ರಶ್ನೆಗಳನ್ನು ಕೇಳುವುದು ಬಿಜೆಪಿ ನಾಯಕರಿಂದ ಪರಿಶೀಲನೆಗೆ ಒಳಗಾಗಲು ಪ್ರಾರಂಭಿಸಿತು.  ಜುಬೈರ್ ವಿರುದ್ಧ ಅಪ್ರಾಪ್ತರಿಗೆ  ಕಿರುಕುಳ ಮತ್ತು ಚಿತ್ರಹಿಂಸೆ ನೀಡಿದ ಎರಡು ಪ್ರಕರಣಗಳು ದಾಖಲಾಯಿತು. ಅವರನ್ನು ಇಂಟರ್ನೆಟ್‌ನಲ್ಲಿ ನಿಂದಿಸಿದಾಗ ಆ  ಬಳಕೆದಾರರ ಡಿಸ್‌ಪ್ಲೇ  ಚಿತ್ರದಲ್ಲಿದ್ದ ಮಗುವಿನ ಚಿತ್ರವನ್ನು ಬ್ಲರ್ ಮಾಡಿದ ಜುಬೈರ್  “ನಿಮ್ಮ ಮುದ್ದಾದ ಮೊಮ್ಮಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಜನರನ್ನು ನಿಂದಿಸುವ ನಿಮ್ಮ ಪಾರ್ಟ್‌ಟೈಮ್ ಕೆಲಸದ ಬಗ್ಗೆ ತಿಳಿದಿದೆಯೇ?  ನಿಮ್ಮ ಪ್ರೊಫೈಲ್ ಚಿತ್ರವನ್ನು ಬದಲಾಯಿಸಲು ನಾನು ನಿಮಗೆ ಸಲಹೆ ನೀಡುತ್ತೇನೆ” ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಎಫ್‌ಐಆರ್ ದಾಖಲಾಗಿದ್ದರೂ ಸಹ ಸ್ವತಃ ದೆಹಲಿ ಪೊಲೀಸರೇ “ಜುಬೈರ್ ಅವರ ಟ್ವೀಟ್ ಯಾವುದೇ ಗುರುತರ ಅಪರಾಧವನ್ನು ಹೊಂದಿಲ್ಲ” ಎಂದು  ಈ ವರ್ಷದ ಮೇಯಲ್ಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ಈ ವರ್ಷದ ಜೂನ್‌ನಲ್ಲಿ, ಹಿಂದುತ್ವದ ನಾಯಕರಾದ ಬಜರಂಗ ಮುನಿ ಮತ್ತು ಯತಿ ನರಸಿಂಹಾನಂದರನ್ನು ‘ದ್ವೇಷದ ದೊರೆಗಳು’ (hate mongers)ಎಂದು ಕರೆದಿದ್ದಕ್ಕಾಗಿ ಜುಬೇರ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.  ಈ ಹಿಂದೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಯತಿ ನರಸಿಂಹಾನಂದ್ ವಿರುದ್ಧ ದ್ವೇಷಪೂರಿತ ಭಾಷಣ ಮಾಡಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿತ್ತು.  ಬಲಪಂಥೀಯ ನಾಯಕರು ಜುಬೈರ್ ವಿರುದ್ಧ ಎಷ್ಟು ದ್ವೇಷ ಹೊಂದಿದ್ದರು ಎಂದರೆ,  2018 ರಿಂದ ಜುಬೈರ್ ಅವರು ಪೋಸ್ಟ್ ಮಾಡಿದ್ದ ವಿಡಂಬನಾತ್ಮಕ ಪೋಸ್ಟ್ ಅನ್ನು ರಿಪೋರ್ಡ್ ಮಾಡಿದ ‘ದಿ ಹಾಕ್ ಐ’ ಎಂಬ ಟ್ವಿಟರ್ ಖಾತೆಯು  ಜುಬೈರ್ ಅವರನ್ನು ಬಂಧಿಸಲು ಆನ್‌ಲೈನ್ ಅಭಿಯಾನ ನಡೆಸಿತ್ತು.  “ದೇವರುಗಳು, ಧರ್ಮ, ಸಂಸ್ಕೃತಿ ಮತ್ತು ಧರ್ಮಗ್ರಂಥಗಳನ್ನು ಅವಹೇಳನ ಮಾಡುವವರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳುವಂತೆ” ಕೇಳಿಕೊಳ್ಳಲಾಗಿತ್ತು.

ಈ ಅಭಿಯಾನ ಮತ್ತಷ್ಟು ತೀವ್ರವಾದದ್ದು ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಕಾಮೆಂಟ್‌ಗಳನ್ನು ಜುಬೈರ್ ಹೈಲೈಟ್ ಮಾಡಿದ ನಂತರ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಅಮಾನತುಗೊಳಿಸಿದ ನಂತರ. ತನ್ನನ್ನು ತಾನು ಟೆಕ್ ಬಿಲಿಯನೇರ್ ಎಂದು ಕರೆದುಕೊಳ್ಳುವ ಅರುಣ್ ಪುದೂರ್ ಎಂಬ ವ್ಯಕ್ತಿ ಜುಬೈರ್ ಮತ್ತು ಆಲ್ಟ್ ನ್ಯೂಸ್ ವಿರುದ್ಧ ಕಾನೂನು ಕ್ರಮವನ್ನು ಪ್ರಾರಂಭಿಸಲು ಸಿದ್ಧರಿರುವ ಯಾರಿಗಾದರೂ ಹಣವನ್ನು ನೀಡುವ ಭರವಸೆಯನ್ನೂ ನೀಡಿದ್ದರು. 

ಈ ಎಲ್ಲಾ ಆನ್‌ಲೈನ್ ಒತ್ತಡಗಳು ಅಂತಿಮವಾಗಿ ಜೂನ್ 27 ರಂದು ದೆಹಲಿ ಪೊಲೀಸರಿಂದ ಜುಬೈರ್‌ರ ಬಂಧನದಲ್ಲಿ ಕೊನೆಗೊಂಡವು. “ನಾವು ಇದನ್ನು ನಿರೀಕ್ಷಿಸಿದ್ದೆವು.  ಅವರ  ಕೆಲಸವು ಅನೇಕ ಸುಳ್ಳುಗಳನ್ನು ಬಹಿರಂಗಪಡಿಸಿದೆ ಮತ್ತು ಅದನ್ನು ಒಕ್ಕೂಟ ಸರ್ಕಾರವು ವಿರೋಧಿಸುತ್ತದೆ. ಅವರು ಸುಳ್ಳು ಸುಳ್ಳಾಗಿಯೇ ಉಳಿಯಬೇಕೆಂದು ಬಯಸಿದ್ದರು” ಎಂದು ನಿರ್ಝರಿ ಹೇಳುತ್ತಾರೆ.

ಒಂದು ವಾರದಿಂದ ಪೊಲೀಸ್ ಕಸ್ಟಡಿಯಲ್ಲಿರುವ ಜುಬೈರ್‌ಗೆ  ಆಲ್ಟ್ ನ್ಯೂಸ್‌ನ  ಸಹ ಸಂಸ್ಥಾಪಕರು ಬೆಂಬಲ ನೀಡಿದ್ದಾರೆ.  ತನಿಖೆಯ ವೇಳೆ ಜುಬೈರ್‌ನ ಲ್ಯಾಪ್‌ಟಾಪ್ ಮತ್ತು ಹಾರ್ಡ್-ಡಿಸ್ಕ್ ಅನ್ನು ವಶಪಡಿಸಿಕೊಂಡಿರುವ ಪೊಲೀಸರ ಕ್ರಮವನ್ನು ಟೀಕಿಸಿರುವ ಅವರು  “ಟ್ವಿಟ್ ಆನ್‌ಲೈನ್‌ನಲ್ಲಿದೆ ಮತ್ತು ಅದನ್ನು ಅವರ ಹಿಂದಿನ ಫೋನ್‌ನಿಂದ ಮಾಡಲಾಗಿದೆ. ಪೊಲೀಸರು ಅವರ ಲ್ಯಾಪ್‌ಟಾಪ್ ಮತ್ತು ಸದ್ಯಕ್ಕೆ ಚಾಲ್ತಿಯಲ್ಲಿರುವ ಫೋನ್ ಅನ್ನು ವಶಪಡಿಸಿಕೊಂಡು ‌ಘಟನೆಗೆ ಸಂಬಂಧವೇ‌ ಇಲ್ಲದ ವಿಚಾರವನ್ನು ತನಿಖೆ ಮಾಡುತ್ತಿದ್ದಾರೆ ” ಎಂದು ನಿರ್ಝರಿ ಹೇಳುತ್ತಾರೆ. “ನಾವು ಪ್ರಜಾಪ್ರಭುತ್ವವನ್ನು ಬಲಪಡಿಸಲು ಅವರ ಪ್ರತಿಭೆಯನ್ನು ಬಳಸಿಕೊಳ್ಳಬೇಕು ಮತ್ತು ಅವರನ್ನು ಗುರಿಯಾಗಿಸಿ ದುರ್ಬಲಗೊಳಿಸಬಾರದು” ಎಂದೂ ಅವರು ಹೇಳುತ್ತಾರೆ.

Tags: BJPCongress PartyCovid 19ಕೋವಿಡ್-19ನರೇಂದ್ರ ಮೋದಿಬಿಜೆಪಿ
Previous Post

ಬೇರ್ ಸ್ಟೊ-ರೂಟ್ ಫಿಫ್ಟಿ: ಕುತೂಹಲ ಘಟ್ಟದಲ್ಲಿ ಭಾರತ-ಇಂಗ್ಲೆಂಡ್ ಟೆಸ್ಟ್

Next Post

ಶಾಸಕ ಜಮೀರ್ ಅಹ್ಮದ್ಗೆ ಎಸಿಬಿ ಶಾಕ್

Related Posts

BBK 12: ಕರವೇ ಮಹಿಳಾ ಘಟಕದ ಅಧ್ಯಕ್ಷೆಗೆ ಕನ್ನಡ ಬರೆಯಲು ಬರಲ್ಲ-ಅಶ್ವಿನಿ ಗೌಡ ವಿರುದ್ಧ ಭಾರೀ ಟೀಕೆ
Top Story

BBK 12: ಕರವೇ ಮಹಿಳಾ ಘಟಕದ ಅಧ್ಯಕ್ಷೆಗೆ ಕನ್ನಡ ಬರೆಯಲು ಬರಲ್ಲ-ಅಶ್ವಿನಿ ಗೌಡ ವಿರುದ್ಧ ಭಾರೀ ಟೀಕೆ

by ಪ್ರತಿಧ್ವನಿ
January 14, 2026
0

ಬೆಂಗಳೂರು: ಕನ್ನಡದ ವಿಚಾರದಲ್ಲಿ ಸದಾ ಧ್ವನಿ ಎತ್ತುತ್ತಾ ಬಂದಿರುವ ಬಿಗ್‌ಬಾಸ್ ಕನ್ನಡ ಸ್ಪರ್ಧಿ ಅಶ್ವಿನಿ ಗೌಡ ಇದೀಗ ಫಿನಾಲೆ ವೀಕ್ ಟಾಸ್ಕ್‌ನಲ್ಲಿ ಮಾಡಿದ ತಪ್ಪಿನಿಂದ ಭಾರೀ ಟ್ರೋಲ್‌ಗೆ...

Read moreDetails
Sankranti 2026: ಎಳ್ಳು ಬೆಲ್ಲದ ನಡುವೆ ಲೌಕಿಕ ಬದುಕಿನ ಸಿಕ್ಕುಗಳು..!

Sankranti 2026: ಎಳ್ಳು ಬೆಲ್ಲದ ನಡುವೆ ಲೌಕಿಕ ಬದುಕಿನ ಸಿಕ್ಕುಗಳು..!

January 14, 2026
Daily Horoscope: ಸಂಕ್ರಾಂತಿಗೆ ಅದೃಷ್ಟ ಹೊತ್ತು ತರುವ ರಾಶಿಗಳಿವು..!

Daily Horoscope: ಸಂಕ್ರಾಂತಿಗೆ ಅದೃಷ್ಟ ಹೊತ್ತು ತರುವ ರಾಶಿಗಳಿವು..!

January 14, 2026

ಸಿದ್ದು, ಬಿಎಸ್ವೈ ಅವರಂತೆ ಕೆಲಸಮಾಡಿ ಜನಪ್ರಿಯ ನಾಯಕಿಯಾಗೋ ಹುಚ್ಚಿದೆ : ಲಕ್ಷ್ಮಿ ಹೆಬ್ಬಾಳ್ಕರ್ ಭಾವನಾತ್ಮಕ ಮಾತು..

January 13, 2026

ಇತಿಹಾಸ ಸೃಷ್ಟಿಸಿದ ಕುಣಿಗಲ್ ಉತ್ಸವ ! 35 ಸಾವಿರ ಜನ ಜನರ ಉಪಸ್ಥಿತಿಯಲ್ಲಿ ನಡೆದ ಬೃಹತ್ ತಾರಾಮೇಳ !

January 13, 2026
Next Post
ಜಾತಿ, ಧರ್ಮಗಳನ್ನು ಮೀರಿದ್ದು ಮಾನವೀಯತೆ : ಶಾಸಕ ಜಮೀರ್ ಅಹ್ಮದ್

ಶಾಸಕ ಜಮೀರ್ ಅಹ್ಮದ್ಗೆ ಎಸಿಬಿ ಶಾಕ್

Please login to join discussion

Recent News

BBK 12: ಕರವೇ ಮಹಿಳಾ ಘಟಕದ ಅಧ್ಯಕ್ಷೆಗೆ ಕನ್ನಡ ಬರೆಯಲು ಬರಲ್ಲ-ಅಶ್ವಿನಿ ಗೌಡ ವಿರುದ್ಧ ಭಾರೀ ಟೀಕೆ
Top Story

BBK 12: ಕರವೇ ಮಹಿಳಾ ಘಟಕದ ಅಧ್ಯಕ್ಷೆಗೆ ಕನ್ನಡ ಬರೆಯಲು ಬರಲ್ಲ-ಅಶ್ವಿನಿ ಗೌಡ ವಿರುದ್ಧ ಭಾರೀ ಟೀಕೆ

by ಪ್ರತಿಧ್ವನಿ
January 14, 2026
Sankranti 2026: ಎಳ್ಳು ಬೆಲ್ಲದ ನಡುವೆ ಲೌಕಿಕ ಬದುಕಿನ ಸಿಕ್ಕುಗಳು..!
Top Story

Sankranti 2026: ಎಳ್ಳು ಬೆಲ್ಲದ ನಡುವೆ ಲೌಕಿಕ ಬದುಕಿನ ಸಿಕ್ಕುಗಳು..!

by ನಾ ದಿವಾಕರ
January 14, 2026
Daily Horoscope: ಸಂಕ್ರಾಂತಿಗೆ ಅದೃಷ್ಟ ಹೊತ್ತು ತರುವ ರಾಶಿಗಳಿವು..!
Top Story

Daily Horoscope: ಸಂಕ್ರಾಂತಿಗೆ ಅದೃಷ್ಟ ಹೊತ್ತು ತರುವ ರಾಶಿಗಳಿವು..!

by ಪ್ರತಿಧ್ವನಿ
January 14, 2026
Top Story

ಸಿದ್ದು, ಬಿಎಸ್ವೈ ಅವರಂತೆ ಕೆಲಸಮಾಡಿ ಜನಪ್ರಿಯ ನಾಯಕಿಯಾಗೋ ಹುಚ್ಚಿದೆ : ಲಕ್ಷ್ಮಿ ಹೆಬ್ಬಾಳ್ಕರ್ ಭಾವನಾತ್ಮಕ ಮಾತು..

by ಪ್ರತಿಧ್ವನಿ
January 13, 2026
Top Story

ಇತಿಹಾಸ ಸೃಷ್ಟಿಸಿದ ಕುಣಿಗಲ್ ಉತ್ಸವ ! 35 ಸಾವಿರ ಜನ ಜನರ ಉಪಸ್ಥಿತಿಯಲ್ಲಿ ನಡೆದ ಬೃಹತ್ ತಾರಾಮೇಳ !

by ಪ್ರತಿಧ್ವನಿ
January 13, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

BBK 12: ಕರವೇ ಮಹಿಳಾ ಘಟಕದ ಅಧ್ಯಕ್ಷೆಗೆ ಕನ್ನಡ ಬರೆಯಲು ಬರಲ್ಲ-ಅಶ್ವಿನಿ ಗೌಡ ವಿರುದ್ಧ ಭಾರೀ ಟೀಕೆ

BBK 12: ಕರವೇ ಮಹಿಳಾ ಘಟಕದ ಅಧ್ಯಕ್ಷೆಗೆ ಕನ್ನಡ ಬರೆಯಲು ಬರಲ್ಲ-ಅಶ್ವಿನಿ ಗೌಡ ವಿರುದ್ಧ ಭಾರೀ ಟೀಕೆ

January 14, 2026
ನಡುರಸ್ತೆಯಲ್ಲಿ ರೌಡಿ ಶೀಟರ್ ಬರ್ಬರ ಹತ್ಯೆ

ನಡುರಸ್ತೆಯಲ್ಲಿ ರೌಡಿ ಶೀಟರ್ ಬರ್ಬರ ಹತ್ಯೆ

January 14, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada