ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಬಿಡದಿ ಟೌನ್ಶಿಪ್ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿಂದು ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಬಿಡದಿ ಬಳಿಯ ಪ್ರಸ್ತಾವಿತ ಗ್ರೇಟರ್ ಬೆಂಗಳೂರು ಪಟ್ಟಣ ಯೋಜನೆಯನ್ನು ಕರ್ನಾಟಕ ಸರ್ಕಾರವು ಅಧಿಕೃತವಾಗಿ ರಿಯಲ್ ಎಸ್ಟೇಟ್ ವ್ಯವಹಾರವನ್ನಾಗಿ ಪರಿವರ್ತಿಸುತ್ತಿದೆ. ಇದಕ್ಕೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆಯನ್ನು ತಕ್ಷಣವೇ ಸರ್ಕಾರ ನಿಲ್ಲಿಸಬೇಕೆಂದು ಕಿಡಿಕಾರಿದ್ದಾರೆ.
ನಗರಾಭಿವೃದ್ಧಿ, ಸಮಗ್ರ ಪಟ್ಟಣಗಳು ಮತ್ತು ವ್ಯಾಪಾರ ಕಾರಿಡಾರ್ಗಳ ನೆಪದಲ್ಲಿ ಈ ರಾಜ್ಯ ಸರ್ಕಾರ ಎಂಟು ಹಳ್ಳಿಗಳ ಫಲವತ್ತಾದ ಕೃಷಿ ಭೂಮಿಯನ್ನು ಗುರಿಯಾಗಿಸಿಕೊಂಡಿದೆ. ಬಿಡದಿ ಟೌನ್ಶಿಪ್ನಲ್ಲಿ ನಿವೇಶನ ಮಾರಾಟ, ತೆರಿಗೆ ಹೀಗೆ ಇತರ ಮೂಲಗಳಿಂದ 15 ವರ್ಷಗಳಲ್ಲಿ 33,000 ಕೋಟಿ ಆದಾಯ ಬರುತ್ತದೆ ಅಂತ ಅಧ್ಯಯನ ವರದಿಯಲ್ಲಿ ತಿಳಿಸಿದ್ದಾರೆ. ಸಚಿವ ಸಂಪುಟ ಸಭೆಯಲ್ಲೂ ಇದನ್ನು ಒಪ್ಪಿದ್ದಾರೆ. ಸರ್ಕಾರ ರಿಯಲ್ ಎಸ್ಟೇಟ್ ದಲ್ಲಾಳಿಯಂತೆ ಕೆಲಸ ಮಾಡುತ್ತಿದೆ ಎಂದು ಲೇವಡಿ ಮಾಡಿದ್ದಾರೆ.
ರಾಮನಗರದ ಬಿಡದಿ ಬಳಿಯ ಈಗಲ್ಟನ್ ರೆಸಾರ್ಟ್ ಸುತ್ತಮುತ್ತಲಿನ ಗ್ರಾಮಗಳನ್ನೇ ಟೌನ್ಶಿಪ್ಗೆ ಆಯ್ಕೆ ಮಾಡುವುದಾಗಿ ಮುಂದಾಗಿದ್ದಾರೆ. ಈ ರೆಸಾರ್ಟ್ ಒಟ್ಟು 77 ಎಕರೆ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿತ್ತು. ಆ ಜಮೀನಿಗೆ ತಲಾ ಎಕರೆಗೆ 12 ಕೋಟಿಯಂತೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದಿದ್ದಾರೆ.
ಇದನ್ನೂ ಓದಿ : ಧೋನಿ ಯಾವಾಗ ಕಣಕ್ಕಿಳಿಯುತ್ತಾರೆ?; ಸಿಎಸ್ಕೆ ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ
ರಿಯಲ್ ಎಸ್ಟೇಟ್ ನ ವ್ಯವಹಾರಕ್ಕೆ ಸಿದ್ದರಾಮಯ್ಯ ಅವರೇ ಬ್ರೋಕರಾಗಿ ನಿಂತಿದ್ದಾರೆ. ಕೆಂಚಗಾನಹಳ್ಳಿ, ಬೈರಮಂಗಲದಲ್ಲಿ ಈ ಕೆಲಸ ಶುರು ಮಾಡಿದ್ದಾರೆ
ನಾನು ಸಿಎಂ ಆದಾಗ 2006 ರಲ್ಲಿ ಹೊಸಕೋಟೇ, ಸೋಲುರು, ಸಾತನೂರು ಸೇರಿದಂತೆ ಐದು ಕಡೆ ಟೌನ್ ಶಿಫ್ ಮಾಡಲು ಪ್ಲಾನ್ ಮಾಡಿದ್ದೆಮೀನ್ಸ್ ಸ್ಕ್ವೇರ್ ನಿಂದ ಹೆಬ್ಬಾಳದವರೆಗೆ 30 ಕೋಟಿ ವೆಚ್ಚದಲ್ಲಿ ಟನಲ್ ಗೆ ಪ್ಲಾನ್ ಮಾಡಿದ್ದೆ, 2018 ರಲ್ಲಿ ಸಿಲ್ಕ್ ಬೋರ್ಡ್ನಿಂದ ಎಸ್ಟಿಮಾಲ್ ವರೆಗೆ ಎಲಿವೆಟೆಡ್ ಕಾರಿಡಾರ್ ಗೆ ಪ್ಲಾನ್ ಮಾಡಿದ್ದೆ ಎಂದು ಕುಮಾರಸ್ವಾಮಿ ತಮ್ಮ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಜೆಡಿಎಸ್ ಕೇವಲ ರೈತರಿಗಾಗಿ ಇರುವ ಪಕ್ಷವಲ್ಲ, ರೈತರ ಸಾಲ ಮನ್ನಾ ಅಷ್ಟೆ ಅಲ್ಲ, ಬೆಂಗಳೂರು ನಗರಕ್ಕೆ ಹಲವಾರು ರೋಡ್ ತರಲು ಚಿಂತಿಸಿದ್ದೆ. ಈಗ ಕಾಂಗ್ರೆಸ್ ಸರ್ಕಾರ ಬ್ಯುಸಿನೆಸ್ ಕಾರಿಡಾರ್ ಮಾಡಲು ಹೊರಟಿದೆ, 28 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಮೇಜರ್ ಇಂಟಿಗ್ರೇಟೆಡ್ ಆಥಾರಿಟಿ ಅಂತಾನು ಮಾಡಲು ಹೊರಟಿದ್ದಾರೆ. ಎಚ್. ಕೆ. ಪಾಟೀಲರ ಸತ್ಯಶೋದನಾ ರಿಪೋರ್ಟ್ ಎಲ್ಲಿಹೋಯ್ತು ? ನಾನು ಟೌನ್ ಶಿಫ್ ಮಾಡಲು ಹೋದಾಗ ಲ್ಯಾಂಡ್ ಹೊಡೆಯಲು ಹೊರಟಿದ್ದಾಗಿ ಆರೋಪ ಮಾಡಿದ್ರು. ಈಗ ಯಾಕೆ ಸತ್ಯಶೋಧನಾ ರಿಪೋರ್ಟ್ ಬಹಿರಂಗ ಪಡಿಸಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಂಕಿಯುಗುಳಿದ್ದಾರೆ.
ಯಾವುದೋ ಒಬ್ಬ ವ್ಯಕ್ತಿಯ ದಾಕ್ಷಿಣ್ಯಕ್ಕೆ ಬಲಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಿಯಲ್ ಎಸ್ಟೇಟ್ ದಲ್ಲಾಳಿ ಆಗಬಾರದು. ಆ ವ್ಯಕ್ತಿ ಹೇಳಿದಂತೆ ಕೇಳಿದರೆ ಇನ್ನೂ ಎರಡು ವರ್ಷ ಕುರ್ಚಿ ಉಳಿಯಬಹುದು ಎಂದು ಸಿದ್ದರಾಮಯ್ಯ ಹೀಗೆ ಮಾಡುತ್ತಿದ್ದಾರೆ. ಕುರ್ಚಿ ಉಳಿಸಿಕೊಳ್ಳಲು ತಮ್ಮ ಸಹಿಯನ್ನು ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಅವರು ಅಧಿಕಾರದ ಕೊನೆಯ ಗಾಲದಲ್ಲಿ ಹೆಸರು ಕೆಡಿಸಿಕೊಳ್ಳದೆ ಹೋಗಿ ಎಂದು ಸಿದ್ದರಾಮಯ್ಯಗೆ ಹಳೆಯ ಗೆಳೆಯ ಕುಮಾರಸ್ವಾಮಿ ಕಿವಿಮಾತು ಹೇಳಿದ್ದಾರೆ.






