ಜಿಲ್ಲಾ ಕುರುಬರ ಸಂಘದ ವತಿಯಿಂದ ಮೈಸೂರಿನ ಕಲಾಮಂದಿರದಲ್ಲಿ ಕನಕದಾಸ ಜಯಂತಿ-ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕೇಕ್ ಕಟ್ ಮಾಡಲು ಪರದಾಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ 75 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಅಭಿಮಾನಿಗಳು ಹಾಗೂ ಹಿತೈಷಿಗಳು 75 ಕೆಜಿಯ ಬೃಹತ್ ಕೇಕ್ ಸಿದ್ದಪಡಿಸಿದ್ದರು ಮತ್ತು ಕೇಕಿನ ಮೇಲೆ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಬರೆಸಲಾಗಿತ್ತು.
ಕೇಕ್ ಮೇಲ ಬರೆದಿದ್ದ ಪ್ರತಿಯೊಂದು ಸಾಲುಗಳನ್ನ ಓದಿದ ಸಿದ್ದರಾಮಯ್ಯ ನಂತರ ಕೇಕ್ ಕತ್ತರಿಸಲು ಚಾಕು ಇಲ್ಲದೆ ಪರದಾಡಿದರು ನಂತರ ಕೈಯಲ್ಲೇ ಕಟ್ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ.

ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದರಾಮಯ್ಯ ಒಂದು ಕಾಲದಲ್ಲಿ ಕುರುಬರು ಅಂತಾ ಹೇಳಿಕೊಳ್ಳಲು ನಾಚಿಕೆ ಪಡುತ್ತಿದ್ದರು ಕಾಲೇಜುಗಳಲ್ಲಿ ಕುರುಬರು ಅಂತಾ ಹೇಳಲು ಹಿಂಜರಿಕೆ ಇತ್ತು ಹೀಗಾಗಿ ಗೌಡರು ಅಂತಾ ಹೇಳಿಕೊಳ್ಳುತ್ತಿದ್ದರು. ನನ್ನ ಸಹೋದರರ ಎಲ್ಲರ ಹೆಸರಿನಲ್ಲಿ ಗೌಡ ಅಂತಾ ಇದೆ ನಮ್ಮ ಊರಿನವರು ಎಲ್ಲರೂ ಗೌಡರು ಅಂತಾ ಬರೆದುಕೊಳ್ಳುತ್ತಿದ್ದರು.
ನನಗೆ ಮಾತ್ರ ನಮ್ಮ ಮೇಷ್ಟ್ರು ಸಿದ್ದರಾಮಯ್ಯ ಅಂತಾ ಬರೆದುಕೊಂಡರು ಕಾಳಿದಾಸ ವಿದ್ಯಾರ್ಥಿ ಬಳಗ ಅಂತಾ ನಾನು ವಿಶ್ವನಾಥ್ ಸೇರಿ ಮಾಡಿದ್ದು ನಾನು ಅಧ್ಯಕ್ಷ ಅವನು ಪ್ರಧಾನ ಕಾರ್ಯದರ್ಶಿ ಇಡೀ ಮೈಸೂರು ಎಲ್ಲಾ ಕಾಲೇಜಲ್ಲು ಒಡಾಡಿದ್ವಿ ಕೆಲವರು ಜಾತಿ ಹೆಸರು ಹೇಳಿಕೊಳ್ಳಲು ನಾಚಿಕೊಳ್ಳುತ್ತಿದ್ದರು. ಹೇಗೋ ಎಲ್ಲರನ್ನೂ ಹುಡುಕಿ ಸೇರಿಸಿ ಸಂಘ ಉದ್ಘಾಟನೆ ಮಾಡಿದ್ವಿ ಎಂದು ಮಾತನಾಡುವ ವೇಳೆ ಹೇಳಿದ್ದಾರೆ.
ನಮ್ಮ ದೇಶದಲ್ಲಿ ಜಾತಿ ವ್ಯವಸ್ಥೆ ನಿಂತ ನೀರಾಗಿದೆ ಚಲನೆ ಇಲ್ಲದ ಕಡೆ ಬದಲಾವಣೆ ಸಾಧ್ಯವಿಲ್ಲ ನಾನು ಬಾಲ್ಯದಲ್ಲಿ ಬಾವಿಯಿಂದ ನೀರು ತಂದು ದನ ಕರುಗಳಿಗೆ ನೀರು ಕುಡಿಸುವ ಕೆಲಸ ಮಾಡುತ್ತಿದ್ದೆ ಬಾವಿಯಲ್ಲಿ ಕಸ ತುಂಬಿರುತಿತ್ತು ಅದನ್ನು ತರಿಸಿ ನೀರು ತರುತ್ತಿದ್ದೆ ಸರಿಸಿದ ನಂತರ ಮತ್ತೆ ಕಸ ಸೇರುತಿತ್ತು ನಮ್ಮ ಜಾತಿ ವ್ಯವಸ್ಥೆ ಅದೇ ರೀತಿ ಇದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.






