ಯಾರೇ ಸಚಿವರು ಬರಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಬರಲಿ ಕರ್ನಾಟಕದ ಒಂದು ಇಂಚು ಭೂಮಿ ಸಹ ಮಹಾರಾಷ್ಟ್ರಕ್ಕೆ ಹೋಗಲ್ಲ ಮಹಾಜನ್ ವರದಿ ಕೊಟ್ಟು, ಅದರ ಮೂಲಕ ಸಮಸ್ಯೆ ಪರಿಹಾರ ಆಗಿದೆ ಆದ್ರೂ, ಆಗಾಗ ಗಡಿ ವಿವಾದವನ್ನು ಅಲ್ಲಿಯವರು ಎಬ್ಬಿಸುತ್ತಾರೆ ಎಂದು ಗಡಿ ವಿವಾದದ ಕುರಿತ ಮಾಜಿ ಸಚಿವ ಈಶ್ವರಪ್ಪ ಕಿಡಿಕಾರಿದ್ದಾರೆ.
ಪಕ್ಷಾತೀತವಾಗಿ ಎಲ್ಲರೂ ಒಟ್ಟಾಗಿದ್ದೇವೆ ಒಂದಿಂಚು ಭೂಮಿ ಕೂಡ ಹೋಗಲ್ಲ ನಮ್ಮ ಆರುವರೆ ಕೋಟಿ ಕನ್ನಡಿಗರು ಒಗ್ಗಟ್ಟಿಗೆ ಇದ್ದಾರೆ ಅಲ್ಲಿ ಕುಡಿಯುವುದಕ್ಕೆ ನೀರು ಸಹ ಇಲ್ಲ ಗಡಿ ಭಾಗದ ಜನ ಕರ್ನಾಟಕಕ್ಕೆ ಸೇರಲು ಬಯಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಇರಲ್ಲ ಕರ್ನಾಟಕಕ್ಕೆ ಹೋಗ್ತಿವಿ ಎಂದು ಜನ ಒಪ್ಪುತ್ತಿದ್ದಾರೆ ರಾಜ್ಯದ ಒಂದಿಂಚು ಭೂಮಿಯನ್ನು ಹೊರಗೆ ಕಳುಹಿಸಲ್ಲ ಎಂ ದು ಮಾತನಾಡುವ ವೇಳೆ ಪ್ರತಿಪಾದಿಸಿದ್ದಾರೆ.
ನರೇಂದ್ರ ಮೋದಿ 100 ತಲೆ ರಾವಣ ಎಂಬ ಖರ್ಗೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಕೆ.ಎಸ್.ಈ ಖರ್ಗೆ ಹಿರಿಯರು ನನಗೆ ದೊಡ್ಡಣ್ಣನ ಸಮಾನ ಪ್ರಪಂಚವೇ ಮೆಚ್ಚುವ ಮೋದಿ ಬಗ್ಗೆ ರಾವಣ ಎಂದು ಮಾತನಾಡಿದ್ದಾರೆ. ಒಂದು ತಲೆನು ಇಲ್ಲದ ಖರ್ಗೆ ಮೋದಿ ಬಗ್ಗೆ ಮಾತನಾಡಿದ್ದಾರೆ ಹಿರಿಯರಾದ ಖರ್ಗೆ ಬಾಯಲ್ಲಿ ಈ ರೀತಿ ಬರಬಾರದು. ಮೋದಿಯನ್ನು ಪ್ರಪಂಚವೇ ಮೆಚ್ಚಿದೆ. ಮೋದಿ ಜನನಾಯಕ, ಆದರ್ಶ ರಾಜಕಾರಣಿ ಅದಕ್ಕೆ ಹೆಸರು ಹೇಳಿ ಓಟು ಕೇಳ್ತೀವಿ ಎಂದಿದ್ದಾರೆ.
ನೀವು ಸೋನಿಯಾ, ರಾಹುಲ್, ಪ್ರಿಯಾಂಕಗಾಂಧಿ ಮುಖ ಇಟ್ಟುಕೊಂಡು ಹೋಗಿ ಮತ ಕೇಳಿ ಇವರ ಮುಖ ನೋಡಿ ಕಾಂಗ್ರೆಸ್ ಸೋತು, ಸೋತು ಕಳೆದು ಹೋಗ್ತಾ ಇದೆ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಖರ್ಗೆರವರು ರಬ್ಬರ್ ಸ್ಟಾಂಪ್ ಆಗಿದ್ದು, ಅವರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದ ಟೀಕಿಸಿದ್ದಾರೆ.

ಈಶ್ವರಪ್ಪ ಕಡು ಭ್ರಷ್ಟ- ಅಭಿವೃದ್ಧಿ ಆಗಿಲ್ಲ ಎಂದು ಸಿದ್ದು-ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿ ಅವರಿಬ್ಬರೂ ನಾನಿದ್ದಾಗ ಬರಲಿ ಕರ್ಕೊಂಡ್ ಹೋಗಿ ತೋರಿಸ್ತೇನೆ. ಜಿಲ್ಲೆಯಲ್ಲಿ ಅಭಿವೃದ್ಧಿ ಮಾಡಿದ್ದನ್ನು ಕರೆದುಕೊಂಡು ಹೋಗಿ ತೋರಿಸುತ್ತೇನೆ ರಾತ್ರಿ ಹೊತ್ತು ಅವರ ಸ್ನೇಹಿತರು ಹೇಳಿದ್ದನ್ನ ಬೆಳಿಗ್ಗೆ ಬಂದು ಮಾಧ್ಯಮದ ಮುಂದೆ ಹೇಳಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಶಿವಮೊಗ್ಗದ ಜನ ಮತ್ತೆ ಮತ್ತೆ ಯಾಕೆ ವೋಟ್ ಕೊಡುತ್ತಿದ್ದಾರೆ 46 ಸಾವಿರ ವೋಟ್ ನಲ್ಲಿ ನನ್ನ ಗೆಲ್ಲಿಸಿದ್ರು…ಮಹಾನಗರ ಪಾಲಿಕೆಯಲ್ಲಿ ಯಾಕೆ ಬಹುಮತ ಕೊಟ್ರು ಅಭಿವೃದ್ಧಿ ಕೆಲಸಗಳಾಗಿರುವುದಕ್ಕೆ ಜನ ಓಟ್ ಕೊಟ್ಟಿದ್ದಾರೆ.
ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಹೋದಲ್ಲೆಲ್ಲಾ ಬಿಜೆಪಿ, ಹಿಂದುತ್ವ, ಆರ್ಎಸ್ ಎಸ್ ಟೀಕೆ ಮಾಡೋದೆ ಕೆಲಸ ಹೀಗೆ ಮಾತಾನಾಡಿದ್ರೇ ಭದ್ರಾವತಿಯಲ್ಲಿ ಇರುವ ಒಂದು ಸ್ಥಾನವನ್ನು ಕಳೆದುಕೊಳ್ತಾರೆ. ಸಿದ್ದರಾಮಯ್ಯ ತಿಹಾರ್ ಜೈಲಿಗೆ ಹೋಗಿ ಬಂದ ಡಿಕೆಶಿ ಪಕ್ಕದಲ್ಲಿಟ್ಟುಕೊಂಡು ನನ್ನ ಟೀಕೆ ಮಾಡುತ್ತಾರೆ ಡಿಕೆ ಶಿವಕುಮಾರ್ ಜೈಲಿಗೆ ಹೋಗಿ ಬಂದಿದ್ದು ಕೂಡ ಭ್ರಷ್ಟಾಚಾರದಲ್ಲಿ ಎಂದು ಆರೋಪಿಸಿದ್ದಾರೆ.
ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಅವರನ್ನು ಒಳಗೊಳಗೆ ದ್ವೇಷ ಮಾಡಿ ಮೇಲ್ನೋಟಕ್ಕೆ ತೃಪ್ತಿಪಡಿಸೋ ಕೆಲಸ ಮಾಡ್ತಿದ್ದಾರೆ. ಅದೇ ರೀತಿ ಡಿಕೆಶಿ ಕೂಡ ಮೇಲ್ನೋಟಕ್ಕೆ ಸಿದ್ದರಾಮಯ್ಯರನ್ನು ಹೊಗಳುತ್ತಿದ್ದಾರೆ ಒಳಗಿಂದ ದ್ವೇಷ ಮಾಡುತ್ತಿದ್ದಾರೆ. ಇಬ್ಬರೂ ಕೂಡ ಒಬ್ಬರಿಗೊಬ್ಬರು ಚಾಕು ಹಾಕಿಕೊಳ್ಳುವ ಸ್ಥಿತಿಯಲ್ಲಿದ್ದಾರೆ ಎಂದು ಲೇವಡಿಯಾಡಿದ್ದಾರೆ.
ಒಬ್ಬರ ಕಂಡರೆ ಒಬ್ಬರಿಗೆ ಆಗಲ್ಲ ಇವರು ಕುರುಬರು ನಮ್ಮ ಜೊತೆ ಬನ್ನಿ ನಾನು ಸಿಎಂ ಆಗ್ತೀನಿ ಅವರು ನನ್ನ ಜೊತೆ ಬನ್ನಿ ನಾನು ಸಿಎಂ ಆಗ್ತೀನಿ ಅನ್ನುತ್ತಿದ್ದಾರೆ ಹಾಗಾದ್ರೆ ಇವರಿಗೆ ಬೇರೆ ಜನರ ವೋಟ್ ಬೇಡವೇ ರಡೇ ಜಾತಿ ಓಟ್ ಸಾಕೆ ಎಂದು ಪ್ರಶ್ನಿಸಿದ್ದಾರೆ.






