ಪ್ರಭಾವಿಗಳ ಒತ್ತಡಕ್ಕೆ ಮಣಿದು ಸಂಸದ ಪ್ರತಾಪ್ ಸಿಂಹ ಬೇರೆಡೆ ಹೋಗುತ್ತಿದ್ದ ರೈಲ್ವೆ ಮಾರ್ಗವನ್ನ ನಮ್ಮ ಊರಿನ ಕಡೆ ಹೋಗುವಂತೆ ಮಾಡಿದ್ದಾರೆ ಎಂದು ಆರೋಪಿಸಿ ಹುಣಸೂರು ತಾಲ್ಲೂಕಿನ ಚಿಕ್ಕಬಿಚ್ಚನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಮೈಸೂರು ಕುಶಾಲನಗರ ಮಾರ್ಗದ ರೈಲ್ವೆ ರಸ್ತೆಯನ್ನು ಎರಡು ಭಾರಿ ಮಾರ್ಗ ಬದಲಾವಣೆ ಮಾಡಿದ್ದಾರೆ ಈಗ ಅರ್ಧ ಎಕರೆ ಹತ್ತು ಗುಂಟೆ ಜಮೀನು ಇರುವ ಬಡ ರೈತರ ಜೀವನವನ್ನು ಕಿತ್ತುಕೊಳ್ಳಲು ಮುಂದಾಗಿದ್ದಾರೆ ನಮ್ಮ ಪ್ರಾಣ ಕೊಟ್ಟರು ಜಮೀನು ಕೊಡುವುದಿಲ್ಲ ಎಂದು ಪ್ರತಿಭಟನಾ ನಿರತ ರೈತರು ತಿಳಿಸಿದ್ದಾರೆ.
ನಮ್ಮ ಜೀವನಕ್ಕೆ ದಾರಿ ತೋರಿ ಆಮೇಲೆ ನಮ್ಮ ಜಮೀನು ತಗೆದುಕೊಳ್ಳಿ ಇರುವ ಮನೆಯನ್ನು ಕಳೆದುಕೊಂಡು ನಾವು ಎಲ್ಲಿ ಹೋಗಬೇಕು ಹಾಗೇನಾದರೂ ನಮ್ಮ ಜಮೀನು ಕಿತ್ತುಕೊಂಡರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ರಾಜ್ಯ ಸರ್ಕಾರ ಹಾಗೂ ಸಂಸದ ಪ್ರತಾಪ್ ಸಿಂಹಾಗೆ ಬೆದರಿಕೆ ಹಾಕಿದ್ದಾರೆ. ʼ