ಗದಗ : ಬೇಸಿಗೆ ಕಾಲ ಆರಂಭವಾಗಿದ್ದು, ಬಿರು ಬಿಸಿಲಿನ ಬೇಗೆಗೆ ಜನರು ತತ್ತರಿಸಿದ್ದಾರೆ. ಜಿಲ್ಲೆಯಲ್ಲಂತೂ ದಿನದಿಂದ ದಿನಕ್ಕೆ ಸೂರ್ಯ ಕಾವೇರುತ್ತಿದ್ದಾನೆ. ಬಿಸಿಲಿನ ಹೊಡೆತ ತಾಳಲಾರದೆ ಜನರು ಹೈರಾಣಾಗಿದ್ದಾರೆ.

40 ಡಿಗ್ರಿ ಸೆಲ್ಸಿಯಸ್ ಆಸುಪಾಸು ತಲುಪುತ್ತಿರುವ ಜಿಲ್ಲೆಯಲ್ಲಿನ ಉಷ್ಣಾಂಶವು ಗದಗ-ಬೆಟಗೇರಿ ಅವಳಿ ನಗರದ ನಾಗರಿಕರನ್ನು ಚಿಂತಾಕ್ರಾಂತರಾಗುವಂತೆ ಮಾಡಿದೆ. ಈ ನಡುವೆಯೇ ಇಲ್ಲಿನ ಜಿಲ್ಲಾಸ್ಪತ್ರೆ ಜಿಮ್ಸ್ ಫುಲ್ ಅಲರ್ಟ್ ಆಗಿದ್ದು, ಬಿಸಿಲಿನ ಪ್ರಖರತೆಗೆ ಆಗುತ್ತಿರುವ ಸಮಸ್ಯೆಗಳನ್ನು ತಪ್ಪಿಸಲು ಮುಂದಾಗಿದೆ.
ಜಿಲ್ಲಾಸ್ಪತ್ರೆಯು ಜನಸ್ನೇಹಿಯಾಗಿ ಇಟ್ಟಿರುವ ಹೆಜ್ಜೆಯಿಂದ ನಾಗರಿಕರು ಹಾಗೂ ರೋಗಿಗಳು ನಿಟ್ಟುಸಿರುವ ಬಿಡುವಂತಾಗಿದೆ. ಅಲ್ಲದೆ ಸಾಮಾನ್ಯ ಜನ ಭಯ ಪಡುವ ಅವಶ್ಯಕತೆಯಿಲ್ಲದಂತಹ ವಾತಾವರಣ ಸೃಷ್ಟಿಸಿದ್ದಾರೆ.
ಮುಖ್ಯವಾಗಿ ಬಿಸಿಲಿನ ತಾಪಕ್ಕೆ ತುತ್ತಾದವರು ಇನ್ನು ಮುಂದೆ ಆತಂಕ ಪಡುವ ಅವಶ್ಯಕೆಯಿಲ್ಲ, ಅಂತವರಿಗೆಗಾಗಿಯೇ ವಿಶೇಷ ಚಿಕಿತ್ಸೆ ನೀಡಲು ವೈದ್ಯರ ತಂಡದ ಸಿದ್ಧವಾಗಿದೆ. ಬೇಸಿಗೆಯನ್ನೇ ಗಮನದಲ್ಲಿಟ್ಟುಕೊಂಡು, ಬಿಸಿಲಿನಿಂದ ಉಂಟಾಗುವ ಆರೋಗ್ಯಕರ ಸಮಸ್ಯೆಗಳಿಂದ ಜನರಿಗೆ ಅಭಯ ನೀಡುವ ನಿಟ್ಟಿನಲ್ಲಿ ಸುಸಜ್ಜಿತ ಕಟ್ಟಡದಲ್ಲಿ, ವ್ಯವಸ್ಥಿತ ಸೌಲಭ್ಯಗಳೊಂದಿಗೆ ಆಸ್ಪತ್ರೆಯು ಕಾರ್ಯ ನಿರ್ವಹಿಸುತ್ತಿದೆ.
ಇದನ್ನೂ ಓದಿ : ಫಾರಿನ್ ಸ್ಟೈಲ್ ಲವ್ & ಮರ್ಡರ್ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..
ಅಗತ್ಯ ಮೂಲಭೂತ ಸೌಕರ್ಯಗಳ ಜೊತೆಗೆ ರೋಗಿಗಳಿಗೆ ಸ್ವಚ್ಛ ಆಹಾರ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಗರ್ಭಿಣಿಯರು, ಬಾಣಂತಿಯರು, ಮಕ್ಕಳು, ವಯಸ್ಸಾದವರು ಯಾರೇ ಇದ್ದರೂ ಸಹ ಅಂತವರಿಗೆ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ.
ವ್ಯಕ್ತಿಯು ಹೆಚ್ಚು ಕಾಲ ಬಿಸಿಲಿನಲ್ಲೆ ಕಾಲ ಕಳೆದರೆ ಹಿಟ್ ಸ್ಟ್ರೋಕ್ ಬರುವ ಸಂಭವ ಹೆಚ್ಚಾಗಿದೆ. ಅಂತವರಿಗೆಗಾಗಿಯೇ ಈ ಸರ್ಕಾರಿ ಆಸ್ಪತ್ರೆಯಲ್ಲಿ ತಕ್ಷಣ ಚಿಕಿತ್ಸೆ ನೀಡುವ ಮೂಲಕ ಉತ್ತಮ ಸೇವೆ ನೀಡುವ ಆಸ್ಪತ್ರೆಯಾಗಿ ಗಮನ ಸೆಳೆಯುತ್ತಿದೆ. ಹೀಗಾಗಿ ಇಲ್ಲಿನ ವೈದ್ಯರು ಹಾಗೂ ಸಿಬ್ಬಂದಿಗಳ ತಂಡವೂ ರೋಗಿಗಳ ಅಥವಾ ಆಸ್ಪತ್ರೆಗೆ ಆಗಮಿಸುವ ಹೊರ ರೋಗಿಗಳಿಗೆ ಸೇವೆ ಒದಗಿಸುವ ಮೂಲಕ ಬಡುವರ ಹಾಗೂ ರೋಗಿಗಳ ಪಾಲಿಗೆ ಆಶಾಕಿರಣವಾಗಿದ್ದಾರೆ ಎಂದರೆ ತಪ್ಪಾಗಲಾರದು.






