ಮಠದಲ್ಲಿ ವಾಸವಿದ್ದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನಿಡಿದ ಆರೋಪದ ಮೇಲೆ ಜೈಲ್ಲಿನಲ್ಲಿರುವ ಮುರುಘಾ ಶ್ರೀಗಳ ಬಂಧನದ ನಂತರ ಮುರುಘಾ ಮಠದ ಆಡಳಿತದಲ್ಲಿ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.
ಇದೀಗ ಮರುಘಾ ಮಠಕ್ಕೆ ಸಂಬಂಧಿಸಿದ SJM ವಿದ್ಯಾಪೀಠಕ್ಕೆ ನೂತನ ಮುಖ್ಯಸ್ಥ(CEO)ರಾಗಿ ಅನಿವಾಸಿ ಭಾರತೀಯ ಭರತ್ ಕುಮಾರ್ರನ್ನು ನೇಮಕ ಮಾಡಲಾಗಿದೆ.
ಮೂಲತಃ ಚಿತ್ರದುರ್ಗ ತಾಲ್ಲೂಕಿನ ಚಿಕ್ಕಸಿದ್ದವನಹಳ್ಳಿ ಮೂಲದವರಾದ ಭರತ್ ಕುಮಾರ್ ಅಮೆರಿಕಾದ ಪ್ರತಿಷ್ಠಿತ ಕಂಪನಿ OSIನಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಮತ್ತು ತನ್ನ ತಾಯ್ನಾಡಿನಲ್ಲಿ ಸೇವೆ ಸಲ್ಲಿಸುವ ಹಂಬಲದಿಂದ ಭಾರತಕ್ಕೆ ಮರಳಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿಂದೆ SJM ಆಡಳಿತ ಮಂಡಳಿ ಸದಸ್ಯರು ಮುರುಘಾ ಶ್ರೀಗಳ ಬಂಧನದ ನಂತರ ಸ್ಥಾನಗಳು ತೆರವಾಗಿದ್ದ ಕಾರಣ ಇದೀಗ ವಿದ್ಯಾಪೀಠದ ನೂತನ ಮುಖ್ಯಸ್ಥರಾಗಿ ಭರತ್ಕುಮಾರ್ರನ್ನು ಮಠದ ಆಡಳಿತ ಮಂಡಳಿ ನೇಮಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಭರತ್ ಕುಮಾರ್ ಇದು ಬಹಳ ಖುಷಿಯ ವಿಚಾರ ಹಾಗೂ ಅತ್ಯಂತ ಜವಾಬ್ದಾರಿಯುತ ಕೆಲಸವಾಗಿದೆ . ಮಠದ ವ್ಯಾಪ್ತಿಗೆ ಬರುವ ಶಾಲಾ-ಕಾಲೇಜುಗಳ ಅಬೀವರದ್ದಿ ಮಾಡುವುದು ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಕಲ್ಪಿಸಿಕೊಡುವುದು ನನ್ನ ಉದ್ದೇಶ ಎಂದು ಹೇಳಿದ್ದಾರೆ.






