ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ || ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆಯ ವೇಳೆ ಆಯೋಜಕರು ಹಾಗು ಮಾಜಿ ಮೇಯರ್ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ.
ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಮಾಜಿ ಮೇಯರ್ ಪುರುಷೋತ್ತಮ್ ವೇದಿಕೆ ಮೇಲೆ ಕಿಡಿಕಾರಿದ್ದಾರೆ.
ಅಂಬೇಡ್ಕರ್ ಪ್ತತಿಮೆಗೆ ಪುಷ್ಟಾಪರ್ಚನೆ ಮಾಡು ವೇಳೆ ವೇದಿಕೆ ಮೇಲಿದ್ದ ಬಂತೇಜಿ ಸ್ವಾಮೀಜಿಗಳನ್ನ ಕರೆಯದೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಪುರುಷೋತ್ತಮ್ ಆಯೋಜಕರ ಮೇಲೆ ಹರಿಹಾಯ್ದರು.
ಇದಾದ ಬಳಿಕ ವೇದಿಕೆಯತ್ತ ಬಂದ ಡಿಸಿ ಕೆ.ವಿ.ರಾಜೇಂದ್ರ, ಶಾಸಕ ರಾಮ್ದಾಸ, ಮೇಯರ್ ಶಿವಕುಮಾರ್ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು ಮತ್ತು ಪರಿಸ್ಥಿತಿ ತಿಳಿಗೊಳಿಸಿ ಕಾರ್ಯಕ್ರಮವನ್ನ ಮುಂದುವರೆಸಿದ್ದರು.