ಮಠದ ವಸತಿ ನಿಲಯದಲ್ಲಿ ವಾಸವಿದ್ದ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿರುವ ಮರುಘಾ ಶ್ರೀಗಳಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ.
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದಲ್ಲೂ ವಿಚಾರಣೆ ನಡೆಯುತ್ತಿದೆ ಎಂದು ಆಯೋಗದ ಅಧ್ಯಕ್ಷ ನಾಗಣ್ಣ ಗೌಡ ತಿಳಿಸಿದ್ದಾರೆ.

ಈ ಕುರಿತು ಕೋಲಾರದಲ್ಲಿ ಮಾತನಾಡಿದ ನಾಗಣ್ಣ ಗೌಡ ಲೈಂಗಿಕ ದೌರ್ಜನ್ಯ ವಿಚಾರವಾಗಿ ಮಕ್ಕಳ ಆಯೋಗದಿಂದಲೂ ತನಿಖೆ ನಡೆಸಲಾಗುತ್ತಿದೆ ಪ್ರಕರಣ ಏಕೆ ತಡವಾಗಿ ಬೆಳಕಿಗೆ ಬಂತು, ಘಟನೆ ನಡೆದಾಗ ಪೊಲೀಸ್ ವರಿಷ್ಠಾಧಿಕಾರಿ ಯಾರಿದ್ದರು, ಮಠದಲ್ಲಿನ ಅಧಿಕಾರಿಗಳು ಇಷ್ಟು ವರ್ಷ ಇದನ್ನ ಏಕೆ ಮುಚ್ಚಿಟಿದ್ದರು, ಪೊಲೀಸರು ಯಾವ ವಿಚಾರದಲ್ಲಿ ವಿಫಲರಾದರು, ಕ್ರಮ ಜರುಗಿಸಲು ಉಂಟಾದ ಅಡೆತಡೆ ಏನು ಎಂಬುದರ ಬಗ್ಗೆ ಮಾಹಿತಿ ಕಲೆಹಾಕಲಾಗಿದ್ದು ಹಲವರ ವಿರುದ್ದ ಕ್ರಮ ಜರುಗಿಸಲಾಗಿದೆ ಎಂದು ಹೇಳಿದ್ದರು.
ದೌರ್ಜನ್ಯ ಎಸಗಿದ ವ್ಯಕ್ತಿ ಸಮಾಜದಲ್ಲಿ ಎಷ್ಟೇ ದೊಡ್ಡವನ್ನು ಆಗಿರಲಿ ಅಂತಹವರಿಗೆ ಶಿಕ್ಷೆ ಆಗಲೇಬೇಕು ಮತ್ತು ಇಂತಹ ಘಟನೆಗಳು ನಡೆದಾಗ ಸಮಾಜ ಯಾರಿಗೂ ಹೆದಬಾರದು. ಮಕ್ಕಳನ್ನು ಕಳೆದುಕೊಂಡು ಸಮಾಜವನ್ ಕಟ್ಟುವುದು ಹೇಗೆ ಮಕ್ಕಳ ಜೀವ ತೆಗೆಯಲು ಅಥವಾ ಜೀವನ ಹಾಳು ಮಾಡಲು ಯಾರಿಗೂ ಅಧಿಕಾರವಿಲ್ಲ ಮೊದಲೇ ಈ ವಿಛಾರ ಬೆಳಕಿಗೆ ಬಂದಿದ್ದರೆ ಮಕ್ಕಳಿಗೆ ಯಾವುದೇ ತೊಂದರೆ ಆಗುತ್ತಿರಲಿಲ್ಲ ಮತ್ತು ಮಠದ ಮಾನ ಉಳಿಯುತ್ತಿತ್ತು ಈಗ ಎಲ್ಲಾ ಸೇರಿ ಮುಳುಗಿಸಿದ್ದಾರೆ ಎಂದು ಮಾತನಾಡುವ ವೇಳೆ ಹೇಳಿದ್ದಾರೆ.






