• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಕಾಂಗ್ರೆಸ್​​ಗೆ ಶುರುವಾಯ್ತು ಟಿಕೆಟ್​​ ಆಕಾಂಕ್ಷಿಗಳ ಅಸಮಾಧಾನ; ಎಲ್ಲರೂ ದಿಲ್ಲಿಗೆ ದೌಡು

ಪ್ರತಿಧ್ವನಿ by ಪ್ರತಿಧ್ವನಿ
December 12, 2022
in ಕರ್ನಾಟಕ, ರಾಜಕೀಯ
0
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್‌ ನಾಯಕರ ಸಭೆ
Share on WhatsAppShare on FacebookShare on Telegram

ಕಾಂಗ್ರೆಸ್​ ಪಕ್ಷ ಎಲ್ಲರಿಗೂ ಮುಂಚಿತವಾಗಿ ಟಿಕೆಟ್​ ಘೋಷಣೆ ಮಾಡುವ ಹುಮ್ಮಸ್ಸಿನಲ್ಲಿದೆ. ಈಗಾಗಲೇ ಟಿಕೆಟ್​ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನ ಮಾಡಿದ್ದ ಕಾಂಗ್ರೆಸ್​​, ಟಿಕೆಟ್​ ಆಕಾಂಕ್ಷಿಗಳ ಲೆಕ್ಕಚಾರದಲ್ಲಿ ಕ್ಷೇತ್ರವಾರು ಗೆಲ್ಲುವ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್​ಗೆ ಕಳುಹಿಸಿದ್ದು, ಟಿಕೆಟ್​ ಆಯ್ಕೆ ಪ್ರಕ್ರಿಯೆ ಶುರುವಾಗಿದೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​​ ಸೇರಿದಂತೆ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗು ಹಿರಿಯ ನಾಯಕರಿಗೆ ಹೈಕಮಾಂಡ್​ ಬುಲಾವ್​ ಕೊಟ್ಟಿದ್ದು, ಸೋಮವಾರ ಬೆಳಗ್ಗೆಯೇ  ದೆಹಲಿ ವಿಮಾನ ಹತ್ತಿದ್ದಾರೆ. ಇದರ ಬೆನ್ನಲ್ಲೇ ಡಿಕೆಶಿ ಬಣ ಸಿದ್ದರಾಮಯ್ಯ ಬಣ ಅನ್ನೋ ಗಲಾಟೆಗಳು ಅಲ್ಲಲ್ಲಿ ಜೋರಾಗುತ್ತಿರುವುದು ಕಾಂಗ್ರೆಸ್​ ನಾಯಕರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. 

ADVERTISEMENT

ಮೂಡಿಗೆರೆಯಲ್ಲಿ ಸಿದ್ದರಾಮಯ್ಯ Vs ಡಿಕೆ ಬಣ..!

ಕಳೆದ ವಾರ ಚಿಕ್ಕಮಗಳೂರಿನ ಮೂಡಿಗೆರೆ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದ ಡಿ.ಕೆ ಶಿವಕುಮಾರ್​​ಗೆ ಪ್ರತ್ಯೇಕವಾಗಿ ಬಣಗಳು ಸ್ವಾಗತ ಕೋರಿದ್ದ ಸುದ್ದಿ ಪ್ರಸಾರ ಆಗಿತ್ತು. ಟಿಕೆಟ್​ ಆಕಾಂಕ್ಷಿ ಆಗಿರುವ ಮಾಜಿ ಸಚಿವ ಮೋಟಮ್ಮ ಪುತ್ರಿ ನಯನಾ ಮೋಟಮ್ಮನ ಹಾಗೂ ಬೇರೊಂದು ಗುಂಪು ಪ್ರತ್ಯೇಕವಾಗಿ ಸ್ವಾಗತ ಮಾಡಿದ್ದವು. ಇದು ಟಿಕೆಟ್​ ಆಹ್ವಾನ ಮಾಡಿದ್ದಕ್ಕೆ ಸೃಷ್ಟಿಯಾದ ಭಿನ್ನಮತ ಎನ್ನುವ ಮಾತುಗಳು ಕೇಳಿಬಂದಿದ್ದವು. ಟಿಕೆಟ್​ ಯಾರಿಗೆ ಬೇಕು ಎಂದಾಗ ಸಾಮಾನ್ಯವಾಗಿ ಎಲ್ಲರೂ ಟಿಕೆಟ್​ ಬೇಕು ಎನ್ನುತ್ತಾರೆ. ಕಾಂಗ್ರೆಸ್​​ನಲ್ಲಿ ಇದೀಗ 224 ಕ್ಷೆತ್ರಗಳಿಗೆ 1300 ಆಕಾಂಕ್ಷಿಗಳು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಟಿಕೆಟ್​ ಸಿಗದಿದ್ದರೆ ಸಾಮಾನ್ಯವಾಗಿ ಭಿನ್ನಮತ ಸ್ಫೋಟವಾಗುತ್ತೆ, ಇಲ್ಲವೇ ಪಕ್ಷದಲ್ಲೇ ಇದ್ದರೂ ಸಂಘಟನೆ ಕೈಬಿಟ್ಟು ಮನೆಯಲ್ಲಿ ಉಳಿಯುತ್ತಾರೆ. 

ಸಿದ್ದರಾಮಯ್ಯ ಎದುರಲ್ಲೇ ಬಯಲಾಯ್ತು ಟಿಕೆಟ್​ ಭಿನ್ನಮತ..!

ಬೆಂಗಳೂರಿನ ಟಿ ದಾಸಹಳ್ಳಿ ಕ್ಷೇತ್ರದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪಕ್ಷಾತೀತ ಕಾರ್ಯಕ್ರಮ ಆಗಿತ್ತು. ಮಾಜಿ ಶಾಸಕ ಮುನಿರತ್ನ ಹಾಗು ಹಾಲಿ ಶಾಸಕ ಮಂಜುನಾಥ್​​ ಕೂಡ ಸಭೆಗೆ ಆಗಮಿಸಿದ್ದರು. ಆದರೆ ಸಭೆಗೂ ಮೊದಲೂ ತೆರೆದ ವಾಹನದಲ್ಲಿ ರೋಡ್​ ಶೋ ಮಾಡಿದ್ದ ಸಿದ್ದರಾಮಯ್ಯಗೆ ಡಾ ನಾಗಲಕ್ಷ್ಮೀ ಸಾಥ್​ ನೀಡಿದ್ದರು. ಸಿದ್ದರಾಮಯ್ಯ ಕಾರಿನಲ್ಲೇ ನಿಂತು ಜನರತ್ತ ಕೈ ಬೀಸಿದ್ದರು. ಜೊತೆಗೆ ಸಿದ್ದರಾಮಯ್ಯ ಭಾಷಣ ಮಾಡುವಾಗ ಜೊತೆಯಲ್ಲೇ ನಿಂತು ನಾನು ಮುಂದಿನ ಕಾಂಗ್ರೆಸ್​ ಅಭ್ಯರ್ಥಿ ಎನ್ನುವುದನ್ನು ಪರೋಕ್ಷವಾಗಿ ಜನರಿಗೆ ತಿಳಿಸುವ ಕೆಲಸ ಮಾಡಿದ್ದರು. ಆದರೆ ಅದೇ ಕಾರ್ಯಕ್ರಮದಲ್ಲಿ ಮಾತನಾಡಲು ಆಗಮಿಸಿದ ಗೀತಾ ಶಿವರಾಮ್​, ಭಾಷಣಕ್ಕೆ ಸ್ವತಃ ಸಿದ್ದರಾಮಯ್ಯ ಸಾಕು ಭಾಷಣ ನಿಲ್ಲಿಸಿ ಎನ್ನುವ ಮೂಲಕ ತಡೆದಿದ್ದಾರೆ. 

ಡಿಕೆಶಿ ಬಣ ಸಿದ್ದರಾಮಯ್ಯ ಬಣ..! ಕಾಂಗ್ರೆಸ್​​ ಬಣ ಛಿದ್ರ ಛಿದ್ರ..!

ಡಿಕೆ ಶಿವಕುಮಾರ್​ ಬೆಂಬಲಿಗಳು ಅನ್ನೋ ಕಾರಣಕ್ಕೆ ಗೀತಾ ಶಿವರಾಮ್​ ಅವರಿಗೆ ಮಾತನಾಡಲು ಅವಕಾಶ ಕೊಡಲಿಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ. ಆದರೆ ಸಿದ್ದರಾಮಯ್ಯ ಉದ್ದೇಶಪೂರ್ವಕವಾಗಿ ಮಾತನ್ನು ನಿಲ್ಲಿಸಿದ್ದಲ್ಲ. ಸಮಯ ಮೀರಿದ್ದರಿಂದ ಕಡಿಮೆ ಮಾತನಾಡುವಂತೆ ಎಲ್ಲರಿಗೂ ತಿಳಿಸಲಾಗಿತ್ತು ಎಂದು ಡಾ ನಾಗಲಕ್ಷ್ಮೀ ಸಮರ್ಥನೆ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ನಮ್ಮದು ಕಾಂಗ್ರೆಸ್​ ಪಕ್ಷ. ಡಿಕೆಶಿ ಬಣ, ಸಿದ್ದರಾಮಯ್ಯ ಬಣ ಅನ್ನೋದು ಕೇವಲ ಮಾಧ್ಯಮಗಳ ಸೃಷ್ಟಿ ಎಂದಿದ್ದಾರೆ. ಆದರೆ ಸಿದ್ದರಾಮಯ್ಯ ಭಾಷಣ ಮಾಡುವಾಗ ಗೀತಾ ಶಿವಕುಮಾರ್​​ ಹೆಸರು ಹೇಳಿದಾಗ ಸಭೆಯಲ್ಲಿ ಗೀತಾ ಶಿವರಾಮ್​ ಇರಲಿಲ್ಲ, ಅಷ್ಟು ಹೊತ್ತಿಗೆ ಮುನಿಸಿಕೊಂಡು ವೇದಿಕೆಯಿಂದ ಇಳಿದು ಹೋಗಿದ್ದರು. 

ಟಿಕೆಟ್​ ಫೈನಲ್​ ಮಾಡುವತ್ತ ಕಾಂಗ್ರೆಸ್​ ಹಿರಿಯರ ಟೀಂ..!

ದೆಹಲಿಯಲ್ಲಿ ಬೀಡು ಬಿಟ್ಟಿರುವ ರಾಜ್ಯ ಕಾಂಗ್ರೆಸ್​ ನಾಯಕರು, ಟಿಕೆಟ್​ ಅಂತಿಮ ಮಾಡುವ ಬಗ್ಗೆ ಹೈಕಮಾಂಡ್​ ಜೊತೆಗೆ ಚರ್ಚೆ ನಡೆಸುತ್ತಿದ್ದಾರೆ. ಈಗ ನಾಯಕರ ನಿಜಬಣ್ಣ ಹೊರಬೀಳುವ ಸಾಧ್ಯತೆಯಿದ್ದು, ಯಾರು ಮೇಲುಗೈ ಸಾಧಿಸಲಿದ್ದಾರೆ ಅನ್ನೋ ಕುತೂಹಲ ಮೂಡಿಸಿದೆ. ಒಂದು ವೇಳೆ ಟಿಕೆಟ್​ ಹಂಚಿಕೆಯಲ್ಲಿ ಸಮಬಲ ಸಾಧಿಸಿದರೆ, ಕ್ಷೇತ್ರದಲ್ಲಿ ಸೋಲು ಗೆಲುವಿನಲ್ಲಿ ಯಾವ ನಾಯಕರು ಯಾವ ಪಾತ್ರ ವಹಿಸಲಿದ್ದಾರೆ ಅನ್ನೋದನ್ನು ಕಾದು ನೋಡಬೇಕು. ಇದರ ನಡುವೆ ಎಐಸಿಸಿ ಅಧ್ಯಕ್ಷ ಆಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಗ್ರೂಪ್​ ಕೂಡ ಆ್ಯಕ್ಟೀವ್​ ಆಗಿದೆ ಎನ್ನುವ ಸಂದೇಶ ಕಾಂಗ್ರೆಸ್​ ವಲಯದಲ್ಲೇ ಹರಿದಾಡ್ತಿದೆ. ಇದು ಕಾಂಗ್ರೆಸ್​​ ಪಾಲಿಗೆ ಗೆಲ್ಲುವ ಕುದುರೆಗೆ ಕಂದಕ ತೋಡಿದಂತೆ ಎನ್ನುವುದು ರಾಜಕೀಯ ಪರಿಣಿತರ ಮಾತು

ಕೃಷ್ಣಮಣಿ

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಮತಾಂತರ ನಿಷೇಧ ಕಾನೂನು ತಂದಿರುವ ಹಿಂದಿನ ಉದ್ದೇಶವೇನು?

Next Post

ಮುರುಘಾ ಶ್ರೀ ಪ್ರಕರಣ; ಮಕ್ಕಳ ಆಯೋಗದಿಂದ ತನಿಖೆ

Related Posts

ಮೋದಿ ಭಾಷಣದ ಬಳಿಕ ರಾಜಕೀಯ ಕದನ: ಸಿದ್ದರಾಮಯ್ಯ–ಪ್ರಲ್ಹಾದ್ ಜೋಶಿ ನಡುವೆ ತೀವ್ರ ವಾಕ್ಸಮರ
ರಾಜಕೀಯ

ಮೋದಿ ಭಾಷಣದ ಬಳಿಕ ರಾಜಕೀಯ ಕದನ: ಸಿದ್ದರಾಮಯ್ಯ–ಪ್ರಲ್ಹಾದ್ ಜೋಶಿ ನಡುವೆ ತೀವ್ರ ವಾಕ್ಸಮರ

by ಪ್ರತಿಧ್ವನಿ
May 13, 2026
0

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿ ಮತ್ತು ರಾಜ್ಯ ಸರ್ಕಾರದ ವಿರುದ್ಧದ ಟೀಕೆಗಳ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ...

Read moreDetails
ಸಿಎಂ ಆದ ತಕ್ಷಣವೇ ವಿಜಯ್‌ರ ಮೊದಲ ಆದೇಶ: ದೇವಾಲಯ, ಶಾಲೆಗಳ ಬಳಿ ಈ ವಸ್ತು ಮಾರಾಟಕ್ಕೆ ಬ್ರೇಕ್!

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಸಂಚಲನ: ಶುಭೇಂದು ಅಧಿಕಾರಿಗೆ ಶಾಸಕನಿಂದ ಬಹಿರಂಗ ಬೆದರಿಕೆ!

May 12, 2026
ಕೋಚಿಂಗ್‌ ಸೆಂಟರ್‌ಗಳಿಂದಲೇ ಲೀಕಾಯ್ತಾ ನೀಟ್‌ ಪ್ರಶ್ನೆ ಪತ್ರಿಕೆ..‌? : ಸಚಿವ ಪಾಟೀಲ್ ಸ್ಫೋಟಕ ಆರೋಪಗಳೇನು..?

ಕೋಚಿಂಗ್‌ ಸೆಂಟರ್‌ಗಳಿಂದಲೇ ಲೀಕಾಯ್ತಾ ನೀಟ್‌ ಪ್ರಶ್ನೆ ಪತ್ರಿಕೆ..‌? : ಸಚಿವ ಪಾಟೀಲ್ ಸ್ಫೋಟಕ ಆರೋಪಗಳೇನು..?

May 12, 2026
ಭಾರತವು ಯಾವುದೇ ಇಂಧನ ಸಮಸ್ಯೆಗಳನ್ನು ಎದುರಿಸುತ್ತಿಲ್ಲ : ಹರ್ದೀಪ್‌ ಸಿಂಗ್‌ ಪುರಿ ಬಿಗ್‌ ಅಪ್ಡೇಟ್..!

ಭಾರತವು ಯಾವುದೇ ಇಂಧನ ಸಮಸ್ಯೆಗಳನ್ನು ಎದುರಿಸುತ್ತಿಲ್ಲ : ಹರ್ದೀಪ್‌ ಸಿಂಗ್‌ ಪುರಿ ಬಿಗ್‌ ಅಪ್ಡೇಟ್..!

May 12, 2026
ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಆಗೋ ಮುನ್ಸೂಚನೆ ಸಿಕ್ಕಿತ್ತಾ ..? : ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿತಾ NTA..?

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಆಗೋ ಮುನ್ಸೂಚನೆ ಸಿಕ್ಕಿತ್ತಾ ..? : ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿತಾ NTA..?

May 12, 2026
Next Post
ಚಿತ್ರದುರ್ಗ; ಮುರುಘಾ ಶರಣರ ಆಪ್ತನ ಬಂಧನ

ಮುರುಘಾ ಶ್ರೀ ಪ್ರಕರಣ; ಮಕ್ಕಳ ಆಯೋಗದಿಂದ ತನಿಖೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada