
ಉತ್ತರ ಪ್ರದೇಶ ಸರ್ಕಾರದ ವರದಿಗಳ ಪ್ರಕಾರ, ಇಂದು (ಜ.13) ಬೆಳಿಗ್ಗೆ 7:30 ರ ಹೊತ್ತಿಗೆ 35 ಲಕ್ಷ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ವರದಿಯಾಗಿದೆ. ಆ ಮೂಲಕ 144 ವರ್ಷಗಳಿಗೆ ಬರುವ ಮಹಾ ಕುಂಭಮೇಳದ ಆಧ್ಯಾತ್ಮಿಕ ನವೀಕರಣದ ಪ್ರಯಾಣ ಪ್ರಾರಂಭವಾಗಿದೆ. ಒಟ್ಟು 45 ದಿನಗಳ ಕಾಲ ನಡೆಯುವ ಕುಂಭ ಮೇಳಕ್ಕೆ ಇನ್ನು ಲಕ್ಷಾಂತರ ಸಂಖ್ಯೆಯಲ್ಲಿ ಜನರು ಪ್ರಯಾಗ್ ರಾಜ್ ನತ್ತ ಹರಿದು ಬರುತ್ತಿದ್ದಾರೆ. ಫೇವ್ರವರಿ 26ರ ವರೆಗೆ ಮಹಾ ಕುಂಭಮೇಳ ನಡೆಯಲಿದೆ.

ಪ್ರಯಾಗ್ ರಾಜ್ನಲ್ಲಿರುವ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಪುಣ್ಯ ಸಂಗಮ ಕ್ಷೇತ್ರ ತ್ರಿವೇಣಿ ಸಂಗಮದಲ್ಲಿ ಬರೋಬ್ಬರಿ 12 ವರ್ಷಕ್ಕೊಮ್ಮೆ ಈ ಮಹಾ ಕುಂಭಮೇಳ ನಡೆಯುತ್ತದೆ. ಕಳೆದ ಬಾರಿಗಿಂತ ಈ ಬಾರಿಯ ಕುಂಭಮೇಳ ವಿಜೃಂಭಣೆಯಿಂದ ನಡೆಯುತ್ತಿದೆ. ಈ ಮಹಾ ಉತ್ಸವದಲ್ಲಿ ಕೇವಲ ಹಿಂದೂಗಳು ಮಾತ್ರವಲ್ಲ , ದೇಶ ಹೊರ ದೇಶಗಳಿಂದ ಕೋಟ್ಯಂತರ ಜನ ಭಾಗಿಯಾಗುತ್ತಾರೆ. ಹೀಗಾಗಿ ಈ ಬಾರಿ ಜಗತ್ತಿನಾದ್ಯಂತದಿಂದ 40 ಕೋಟಿ ಭಕ್ತರು ಮಹಾ ಕುಂಭಮೇಳಕ್ಕೆ ಆಗಮಿಸುವ ನಿರೀಕ್ಷೆ ಇದೆ.

ಈ ಐತಿಹಾಸಿಕ ಕುಂಭಮೇಳಕ್ಕೆ ಯಾತ್ರಿಕರು ಎಲ್ಲಾ ಧರ್ಮದ ವಿಭಾಗಗಳಿಂದ ಬರುತ್ತಾರೆ, ಅದರಲ್ಲಿ ‘ಸಾಧನೆ’ಯನ್ನು ಅಭ್ಯಾಸ ಮಾಡುವ ಮತ್ತು ಕಟ್ಟುನಿಟ್ಟಾದ ಆಧ್ಯಾತ್ಮಿಕ ಶಿಸ್ತಿನ ಮಾರ್ಗವನ್ನು ಅನುಸರಿಸುವ ಸಾಧುಗಳು (ಸಂತರು) ಮತ್ತು ನಾಗಾ ಸಾಧುಗಳು, ಕುಂಭಮೇಳದ ಸಮಯದಲ್ಲಿ ಮಾತ್ರ ತಮ್ಮ ಏಕಾಂತತೆಯನ್ನು ತೊರೆದು ನಾಗರಿಕತೆಯನ್ನು ಭೇಟಿ ಮಾಡಲು ಬರುವ ಸನ್ಯಾಸಿಗಳು, ಆಧ್ಯಾತ್ಮಿಕ ಅನ್ವೇಷಕರು ಮತ್ತು ಹಿಂದೂ ಧರ್ಮವನ್ನು ಆಚರಿಸುವ ಸಾಮಾನ್ಯ ಜನರು ಸೇರಿದ್ದಾರೆ.

ಕುಂಭಮೇಳದ ಸಮಯದಲ್ಲಿ, ಹಲವಾರು ಸಮಾರಂಭಗಳು ನಡೆಯುತ್ತವೆ; ಆನೆ ಬೆನ್ನಿನ ಮೇಲೆ ‘ಪೇಶ್ವಾಯಿ’ ಎಂದು ಕರೆಯಲ್ಪಡುವ ಅಖಾಡಗಳ ಸಾಂಪ್ರದಾಯಿಕ ಮೆರವಣಿಗೆ, ‘ಶಾಹಿ ಸ್ನಾನ’ ಸಮಯದಲ್ಲಿ ನಾಗಾ ಸಾಧುಗಳ ಹೊಳೆಯುವ ಕತ್ತಿಗಳು ಮತ್ತು ಆಚರಣೆಗಳು ಮತ್ತು ಕುಂಭಮೇಳಕ್ಕೆ ಹಾಜರಾಗಲು ಲಕ್ಷಾಂತರ ಯಾತ್ರಿಕರನ್ನು ಆಕರ್ಷಿಸುವ ಅನೇಕ ಇತರ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತವೆ.2025 ರ ಮಹಾ ಕುಂಭಮೇಳ ಪ್ರಯಾಗ್ರಾಜ್ನಲ್ಲಿ ಜನವರಿ 13, 2025 ರಿಂದ ಫೆಬ್ರವರಿ 26, 2025 ರವರೆಗೆ ನಡೆಯಲಿದೆ.