2018ರ ರಾಜ್ಯ ವಿಧಾನಸಭೆ ಚುನಾವಣೆ ಸಮಯದಲ್ಲಿ ತೀವ್ರ ಗದ್ದಲ ಎಬ್ಬಿಸಿದ ವೀಋಶೈವ-ಲಿಂಗಾಯತ ಪ್ರತ್ಯೇಕ ಧರ್ಮ ರಚನೆ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು ಈ ಬಗ್ಗೆ ಮಾಜಿ ಸಚಿವ ಎಂ.ಬಿ.ಪಾಟೀಲ್ ಮತ್ತೆ ಸುದ್ದಿಯಲ್ಲಿದ್ದಾರೆ.
ಲಿಂಗಾಯತ ಸಮುದಾಯವನ್ನ ಕೂಡಿಸುವ ಕೆಲಸದ ಬಗ್ಗೆ ನಾನು ಮಾತನಾಡುತ್ತೇನೆ. ಯಾಕೆ ನಾವು ಕೂಡುವುದು ಇಷ್ಟವಿಲ್ಲವೇ ಎಲ್ಲಾ ಉಪಪಂಗಡಗಳಿಗೆ ಒಳ್ಳೆಯದಾಗಬೇಕು ಎಂಬುದು ನಮ್ಮ ಆಶಯ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ಮುಗಿದ ಬಳಿಕ ಉಪಪಂಗಡಗಳ ಎಲ್ಲಾ ಮಠಾಧೀಶರನ್ನು ಒಂದೆಡೆಗೆ ಸೇರಿಸಿ ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ.
ನಾನು ಪ್ರಚಾರ ಸಮಿತಿ ಅಧ್ಯಕ್ಷನಾದ ಮೇಲೆ ಪಕ್ಷ ಸಂಘಟನೆಯ ವಿಚಾರವಾಗಿ ಕಲಬುರಗಿಯಿಂದ ರಾಜ್ಯ ಪ್ರವಾಸವನ್ನ ಆರಂಭಿಸಿದ್ದೇನೆ ಜಿಲ್ಲಾವಾರು ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಅಭಿಪ್ರಾಯವನ್ನ ಸಂಗ್ರಹಿಸಿದ್ದೇನೆ.
ಡಬಲ್ ಇಂಜಿನ್ ಸರ್ಕಾರದ ವೈಫಲ್ಯಗಳನ್ನು ಜನರ ಮುಂದೆ ತೆಗೆದುಕೊಂಡು ಹೋಗುತ್ತಿದ್ದೇವೆ. ನಮ್ಮ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕೆಡಸಲಾಗುತ್ತಿದೆ. ಕರ್ನಾಟಕ ಮಾದರಿ ಬಿಟ್ಟು ಉತ್ತರಪ್ರದೇಶ ಮಾದರಿ ಎಂದು ಹೇಳುತ್ತಿದ್ದಾರೆ ಯುಪಿ ಅಭೀವೃದ್ದಿ ವಿಚಾರದಲ್ಲಿ ಕಡೆಯ ಸ್ಥಾನದಲ್ಲಿದೆ ನಮ್ಮಗೆ ಅವರ ಮಾದರಿ ಬೇಕಾ ಎಂದು ಪ್ರಶ್ನಿಸಿದ್ದಾರೆ.
ಹಾಲಿ ಬಿಜೆಪಿ ಸರ್ಕಾರದ ಅನೇಕ ಸಚಿವರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ ಆದರೆ, ಇವರುಗಳ ಮೇಲೆ ಇಡಿ, ಐಟಿ ದಾಳಿಯಾಗುತ್ತಿಲ್ಲ. ಅಭಿವೃದ್ದಿ ಕೆಲಸಗಳ ಬಗ್ಗೆ ಮಾತನಾಡದೆ ಹಿಜಾಬ್, ಅಜಾನ್ನಂತಹ ವಿಚಾರಗಳನ್ನ ಮುಂದಕ್ಕೆ ತಂದು ವಾತವರಣವನ್ನ ಕೆಡಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಈ ಸರ್ಕಾರ ನಡೆಯುತ್ತಿಲ್ಲ ನಾವೇ ಸುಮ್ಮನೆ ಮುಂದಕ್ಕೆ ತಳ್ಳಿಕೊಂಡು ಹೋಗುತ್ತಿದ್ದೇವೆ ಎಂದು ಸ್ವತಃ ಸಚಿವರಾದ ಮಾಧುಸ್ವಾಮಿಯವರೇ ಹೇಳಿದ್ದಾರೆ. ಅಂದ ಮೇಲೆ ಈ ಸರ್ಕಾರ ನಿಕ್ರಿಯವಾಗಿದೆ ಎಂದು ಟೀಕಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಮಾಂಸಹಾರ ತಿಂದು ದೇಗುಲ ಪ್ರವೇಶಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ ಅವರೇ ಸ್ವತಃ ಮಾಂಸಹಾರ ತಿಂದಿಲ್ಲ ಎಂದು ಹೇಳಿರುವಾಗ ಈ ವಿಚಾರವನ್ನ ಎಳೆದುಕೊಂಡು ಹೋಗುವಂತಹ ಅವಶ್ಯಕತೆಯಿಲ್ಲ ಇದೆಲ್ಲಾ ವಿಷಯವೇ ಅಲ್ಲಾ ಎಂದು ಹೇಳಿ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.