Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಪಂಜಾಬ್ ಕಾಂಗ್ರೆಸ್ಸನ್ನು ಸಿಧು ಕಾಂಗ್ರೆಸ್ ಆಗಿ ಪರಿವರ್ತಿಸುತ್ತಿದ್ದಾರೆಯೇ ನವಜೋತ್ ಸಿಂಗ್ ಸಿಧು?

ಚುನಾವಣಾ ಹೊಸ್ತಿಲಲ್ಲಿರುವ ಪಂಜಾಬ್ ಕಾಂಗ್ರೆಸಿನ ಭದ್ರಕೋಟೆಯಾಗಿಯೇ ಇರಲು ಸಿಧು ವರ್ತನೆ ಬದಲಾಯಿಸಬೇಕು ಎಂಬುದು ರಾಜಕೀಯ ಚಾಣಾಕ್ಷರ ಅಭಿಮತವಾಗಿದೆ. ಪಕ್ಷದ ರಾಷ್ತ್ರೀಯ ನಾಯಕರನ್ನು ಒಪ್ಪದ ರಾಜ್ಯ ನಾಯಕರು ಯಾವತ್ತೂ ಆ ಪಕ್ಷಕ್ಕೆ ಅಪಾಯಕಾರಿ ಎಂಬ ಮಾತೂ ಸಿಧುಗೆ ಅನ್ವಯಿಸುತ್ತದೆ.
ಅಬೂಮನ್ಹ ಪಡಿಕಲ್

ಅಬೂಮನ್ಹ ಪಡಿಕಲ್

You can display an author avatar, a short bio, links to social media, and a link to the author profile page that lists all their articles. This can be a great way to add a good looking author bio widget to your WordPress sidebar. The plugin set up is fairly straightforward, and it uses an auto-detect feature to find the correct post author and display their bio instantly.

January 14, 2022
Share on FacebookShare on Twitter

ಪಂಜಾಬ್ ವಿಧಾನಸಭೆ ಚುನಾವಣೆಗೆ ಸಮೀಪಿಸಿರುವಾಗಲೇ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಕಾಂಗ್ರೆಸ್ ಹೈ ಕಮಾಂಡ್ಗೆ ಮತ್ತೊಂದು ಸಂದೇಶ ರವಾನಿಸಿದ್ದಾರೆ. ಈ ಬಗ್ಗೆ ಪಂಜಾಬ್ ರಾಜಕೀಯದಲ್ಲಿ ಭಾರಿ ಚರ್ಚೆಯಾಗುತ್ತಿದೆ.

ಹೆಚ್ಚು ಓದಿದ ಸ್ಟೋರಿಗಳು

ಭಾರತದ ವಿದೇಶಿ ವಿನಿಮಯ ಆಪದ್ಧನ ಏಕೆ ಕರಗುತ್ತಿದೆ?

ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಾಲ್ ರಾಜೀನಾಮೆ‌

ಗುಜರಾತ್‌ ನಲ್ಲಿ ಗೋಡೆ ಕುಸಿದು 12 ಮಂದಿ ದುರ್ಮರಣ

ಪಂಜಾಬಿನ ಮುಖ್ಯಮಂತ್ರಿ ಯಾರಾಗಬೇಕು ಎಂದು ತೀರ್ಮಾನ ಮಾಡುವುದು ಪಂಜಾಬಿನ ಜನರೇ ಹೊರೆತು ಕಾಂಗ್ರೆಸ್ ಹೈ ಕಮಾಂಡ್ ಅಲ್ಲ ಎಂದು ಹೇಳುವ ಮೂಲಕ ಮತ್ತೆ ಕಾಂಗ್ರೆಸ್ ಹೈಕಮಾಂಡ್ಗೆ ಸಿದ್ದು ಪರೋಕ್ಷ ಟಾಂಗ್‌ ನೀಡಿದ್ದಾರೆ.

ಚುನಾವಣೆಯ ಹೊಸ್ತಿಲಲ್ಲಿರುವ ಪಂಜಾಬ್ ನಲ್ಲಿ ತಮ್ಮ ವಶದಲ್ಲಿರುವ ರಾಜ್ಯವೊಂದನ್ನು ಉಳಿಸಿಕೊಳ್ಳುವ ಬಗ್ಗೆ ದೇಶಾದ್ಯಂತ ಕಾಂಗ್ರೆಸಿಗರು ಚಿಂತಿಸುತ್ತಿದ್ದಾರೆ. ಈತ್ತ ಆಮ್ ಆದ್ಮಿ ಪಕ್ಷ ದಿನದಿಂದ ದಿನಕ್ಕೆ ತಮ್ಮ ಬೇರನ್ನು ಗಟ್ಟಿಗೊಳಿಸುತ್ತಿದೆ. ಆಂತರಿಕ ಕಲಹದಿಂದಾಗಿ ಅಮರಿಂಧರ್ ಸಿಂಗ್ ರನ್ನು ಈಗ ಕಾಂಗ್ರೆಸ್ ಕಳೆದುಕೊಂಡಿದೆ.

2017ರಲ್ಲಿ ಕಾಂಗ್ರೆಸ್ ಸೇರಿದ ಸಿಧು ವಿಧಾನಸಭೆಗೆ ಆಯ್ಕೆಯಾಗಿ, ಅಮರೀಂದರ್ ಸಂಪುಟದಲ್ಲಿ ಡಿಸಿಎಂ ಪಟ್ಟಕ್ಕಾಗಿ ಪಟ್ಟುಹಿಡಿದು ನಂತರದಲ್ಲಿ ಪದೇ ಪದೇ ಅಮರೀಂದರ್ ವಿರುದ್ಧ ಟೀಕಾಪ್ರಹಾರ ನಡೆಸುತ್ತಲೇ ಬಂದರು. ಸಚಿವ ಹುದ್ದೆಯಲ್ಲಿದ್ದರೂ ಸರ್ಕಾರವನ್ನು ಟೀಕಿಸುವುದು ಬಿಡಲಿಲ್ಲ.
ಈ ನಡುವೆ ರಾಜ್ಯಾಧ್ಯಕ್ಷ ಪಟ್ಟಕ್ಕೆ ಸಿಧು ಸ್ಕೆಚ್ ಹಾಕಿ ಹೈಕಮಾಂಡ್ ಒಪ್ಪದಿದ್ದಾಗ ಆಮ್ಆದ್ಮಿ ಸೇರಲು ಸಿದ್ಧತೆ ನಡೆಸಿದ್ದರು. ಕೊನೆಗೆ ರಾಜ್ಯದಲ್ಲಿ ಪಕ್ಷ ಉಳಿಸಿಕೊಳ್ಳುವ ಸಲುವಾಗಿ ಸಿಧುಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಲಾಯಿತು. ಆ ಹುದ್ದೆ ವಹಿಸಿಕೊಂಡ ಬಳಿಕವೂ ಆಡಳಿತ ವಿರುದ್ಧವಾಗಿ ಚಟುವಟಿಕೆ ನಡೆಸಿಕೊಂಡೇ ಬಂದು ಎಲ್ಲರ ಕೆಂಗಣ್ಣಿಗೆ ಗುರಿಯಾಗುತ್ತಲೇ ಇದ್ದಾರೆ.

ಸಿಧು ಬಿಸಿತುಪ್ಪವಾಗಿ ಕಾಂಗ್ರೆಸನ್ನು ಕಾಡುತ್ತಿದ್ದು, ಬರುವ ಚುನಾವಣೆಯಲ್ಲಿ ಪಂಜಾಬ್ ಅನ್ನು ಕಳೆದುಕೊಳ್ಳುವಂತಹ ಬೆಳವಣಿಗೆಗಳು ಕಾಂಗ್ರೆಸಲ್ಲಿ ನಡೆಯುತ್ತಿರುವುದು ನಿಂತಿಲ್ಲ. ಮೊದಲು ಸಿಎಂ ಆಗಿದ್ದ ಅಮರೀಂದರ್ ಸಿಂಗ್ ಅವರ ವಿರುದ್ದ ಮುನಿಸಿಕೊಂಡಿದ್ದ ಸಿಧು ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿ ತಣ್ಣಗಾಗಿಸುವ ಪ್ರಯತ್ನವನ್ನು ಹೈಕಮಾಂಡ್ ಮಾಡಿದ್ದರೂ ಆದರ ನಂತರ ಪಂಜಾಬ್ ಕಾಂಗ್ರೆಸ್ ಘಟಕದಲ್ಲಿ ಭಿನ್ನಮತ ತಾರಕಕ್ಕೇರಲಾರಂಭಿಸುತ್ತಿದೆ.

ರಾಜ್ಯ ಪೊಲೀಸ್ ಮಾಹಾ ನಿರ್ದೇಶಕ ನೇಮಕ ಸೇರಿದಂತೆ ಹಲವು ವಿಚಾರಗಳ ಬಗ್ಗೆ ತಮ್ಮ ಸರ್ಕಾರದ ವಿರುದ್ಧವೇ ಸಿಡಿದೆದ್ದಿದ್ದ ಸಿಧು, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. ಆನೆ ನಡೆದದ್ದೇ ದಾರಿ ಎಂಬಂತೆ ಸಿಧು ತಾನೋರ್ವ ಪಕ್ಷದ ರಾಜ್ಯಾಧ್ಯಕ್ಷ ಎಂಬುದನ್ನು ಮರೆತು ವರ್ತಿಸಿದ್ದೇ ಅಧಿಕವಾಗಿದೆ. ಅಮರಿಂಧರ್ ಸಿಂಗರನ್ನು ಸಿಧುಗಾಗಿ ಕಾಂಗ್ರೆಸ್ ಕಳೆದುಕೊಂಡಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರ ರಾಜೀನಾಮೆಗೆ ಪ್ರಮುಖ ಕಾರಣಕರ್ತರಾದ ಪಂಜಾಬ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ನವಜೋತ್ ಸಿಂಗ್ ಸಿಧು, ಇದೀಗ ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರು ಆಗುತ್ತಾರೆ ಎನ್ನುವ ವಿಚಾರದಲ್ಲಿ ಹೈಕಮಾಂಡ್ ತಲೆಬಿಸಿಯಾಗುವ ಹೇಳಿಕೆಯನ್ನು ನೀಡಿದ್ದಾರೆ.

ಕಾಂಗ್ರೆಸ್ ವಕ್ತಾರ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಮುಂಬರುವ ಚುನಾವಣೆಗೆ ಪಂಜಾಬ್ನಲ್ಲಿ ಚರಂಜಿತ್ ಸಿಂಗ್ ಚನ್ನಿ, ನವಜೋತ್ ಸಿಂಗ್ ಸಿಧು ಮತ್ತು ಸುನೀಲ್ ಜಾಖರ್ ಒಟ್ಟಾಗಿ ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದರೆ .ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧುರವರ ಪತ್ರಿಕಾಗೋಷ್ಠಿಯ ಬ್ಯಾನರ್ನಲ್ಲಿ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಮತ್ತು ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಸುನೀಲ್ ಜಾಖರ್ ಭಾವಚಿತ್ರಗಳು ಇರಲೇ ಇಲ್ಲ. ಇದು ಈಗಲೂ ಪಂಜಾಬ್ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಸಾರಿ ಹೇಳಿದ್ದಲ್ಲದೆ ಚರಣ್ ಚಿತ್ ಸಿಂಗ್ ಚನ್ನಿಯವರಿಗೆ ಭಾರಿ ಮುಖಭಂಗ ಮಾಡಿದೆ.

ಮುಂದಿನ ತಿಂಗಳು ಪಂಜಾಬ್ ನಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದೆ. ಅದಕ್ಕೆ ಮುನ್ನ ಪಕ್ಷದಲ್ಲಿ ಆಂತರಿಕ ಗೊಂದಲ ಉಂಟಾದರೆ, ಚುನಾವಣೆಯನ್ನು ಗೆಲ್ಲುವುದು ಕಷ್ಟ ಎಂದು ಸಾಧ್ಯವಾದಷ್ಟು ಸ್ಥಳೀಯ ಮುಖಂಡರನ್ನು ಸಮಾಧಾನ ಪಡಿಸುವ ಕೆಲಸವನ್ನು ಕಾಂಗ್ರೆಸ್ ವರಿಷ್ಠರು ಮಾಡುತ್ತಿದ್ದಾರೆ. ಆದರೆ, ಸಿಧು ರಾಜ್ಯ ಕಾಂಗ್ರೆಸ್ ಪಕ್ಷದ ಎಲ್ಲಾ ಆಗುಹೋಗುಗಳ ಮೇಲೆ ಹಿಡಿತ ಸಾಧಿಸಲು ನಿತ್ಯ ಒಂದೊಂದು ವರಸೆ ತೋರಿಸುತ್ತಿದ್ದಾರೆ.

ಒಟ್ಟಿನಲ್ಲಿ ಸಿಧು ಕಾಂಗ್ರೆಸಿಗೆ ಹಾನಿಯಾಗುವಂತಹ ಆಂತರಿಕ ಕಲಹಕ್ಕೆ ಬಹಳಷ್ಟು ಕೊಡುಗೆ ನೀಡಿದವರಾಗಿದ್ದಾರೆ. ಈಗಿನ ಹೇಳಿಕೆಯೂ ನಾನು ಹೈಕಮಾಡನ್ನೇ ಕೇರ್ ಮಾಡಲ್ಲ ಎಂಬ ಸಂದೇಶವಾಗಿದೆ. ಚುನಾವಣಾ ಹೊಸ್ತಿಲಲ್ಲಿರುವ ಪಂಜಾಬ್ ಕಾಂಗ್ರೆಸಿನ ಭದ್ರಕೋಟೆಯಾಗಿಯೇ ಇರಲು ಸಿಧು ವರ್ತನೆ ಬದಲಾಯಿಸಬೇಕು ಎಂಬುದು ರಾಜಕೀಯ ಚಾಣಾಕ್ಷರ ಅಭಿಮತವಾಗಿದೆ. ಪಕ್ಷದ ರಾಷ್ತ್ರೀಯ ನಾಯಕರನ್ನು ಒಪ್ಪದ ರಾಜ್ಯ ನಾಯಕರು ಯಾವತ್ತೂ ಆ ಪಕ್ಷಕ್ಕೆ ಅಪಾಯಕಾರಿ ಎಂಬ ಮಾತೂ ಸಿಧುಗೆ ಅನ್ವಯಿಸುತ್ತದೆ.

RS 500
RS 1500

SCAN HERE

don't miss it !

ಐಪಿಎಲ್ ನಲ್ಲಿ 6500 ರನ್ ಪೂರೈಸಿದ ಮೊದಲಿಗ ವಿರಾಟ್ ಕೊಹ್ಲಿ!
ಕ್ರೀಡೆ

ಐಪಿಎಲ್ ನಲ್ಲಿ 6500 ರನ್ ಪೂರೈಸಿದ ಮೊದಲಿಗ ವಿರಾಟ್ ಕೊಹ್ಲಿ!

by ಪ್ರತಿಧ್ವನಿ
May 14, 2022
ಪತ್ರಿಕಾ ಸ್ವಾತಂತ್ರ್ಯಕ್ಕೆ ಹಾಕುವ ಕಡಿವಾಣದಿಂದ ನಾಗರಿಕರ ಸ್ವಾತಂತ್ರ್ಯಕ್ಕೂ ಧಕ್ಕೆ !
ಅಭಿಮತ

ಪತ್ರಿಕಾ ಸ್ವಾತಂತ್ರ್ಯಕ್ಕೆ ಹಾಕುವ ಕಡಿವಾಣದಿಂದ ನಾಗರಿಕರ ಸ್ವಾತಂತ್ರ್ಯಕ್ಕೂ ಧಕ್ಕೆ !

by Shivakumar A
May 13, 2022
ಅಂಡರ್ ಕವರ್ ಪೊಲೀಸ್ ಅಧಿಕಾರಿಯಾಗಿ ಡಾಲಿ ಧನಂಜಯ್ ಎಂಟ್ರಿ 
ಇದೀಗ

ಅಂಡರ್ ಕವರ್ ಪೊಲೀಸ್ ಅಧಿಕಾರಿಯಾಗಿ ಡಾಲಿ ಧನಂಜಯ್ ಎಂಟ್ರಿ 

by ಪ್ರತಿಧ್ವನಿ
May 17, 2022
ಗ್ಯಾನ್‌ ವಾಪಿ ಮಸೀದಿ ಸರ್ವೆ ಪೂರ್ಣ: ಬಾವಿಯಲ್ಲಿ ಶಿವಲಿಂಗ ಪತ್ತೆ!
ದೇಶ

ಗ್ಯಾನ್‌ ವಾಪಿ ಮಸೀದಿ ಸರ್ವೆ ಪೂರ್ಣ: ಬಾವಿಯಲ್ಲಿ ಶಿವಲಿಂಗ ಪತ್ತೆ!

by ಪ್ರತಿಧ್ವನಿ
May 16, 2022
ಕೆಜಿಎಫ್-‌ 2 ಮೊದಲ ದಿನವೇ 200 ಕೋಟಿ ದಾಖಲೆ ಸಂಗ್ರಹ?
ಸಿನಿಮಾ

ಅಕ್ಟೋಬರ್ ನಲ್ಲಿ ಕೆಜಿಎಫ್-3 ಶೂಟಿಂಗ್ ಶುರು: ನಿರ್ಮಾಪಕರು ಹೇಳಿದ್ದೇನು?

by ರಮೇಶ್ ಎಸ್‌.ಆರ್
May 14, 2022
Next Post
ಭದ್ರತಾ ಲೋಪ : ಪ್ರಧಾನಿ ಮೋದಿಗೆ ಕ್ಷಮೆಯಾಚಿಸಿದ ಪಂಜಾಬ್ ಸಿಎಂ ಚನ್ನಿ

ಭದ್ರತಾ ಲೋಪ : ಪ್ರಧಾನಿ ಮೋದಿಗೆ ಕ್ಷಮೆಯಾಚಿಸಿದ ಪಂಜಾಬ್ ಸಿಎಂ ಚನ್ನಿ

ಡೊಮಹಾನಿ ರೈಲು ದುರಂತ ; 9 ಸಾವು,  40 ಮಂದಿಗೆ ಗಾಯ

ಡೊಮಹಾನಿ ರೈಲು ದುರಂತ ; 9 ಸಾವು,  40 ಮಂದಿಗೆ ಗಾಯ

ಯುಪಿ ಬಿಜೆಪಿಗೆ ಮತ್ತೊಂದು ಆಘಾತ ; ರಾಜೀನಾಮೆ ಘೋಷಿಸಿದ ಮಿತ್ರ ಪಕ್ಷದ ಶಾಸಕರು

ಯುಪಿ ಬಿಜೆಪಿಗೆ ಮತ್ತೊಂದು ಆಘಾತ ; ರಾಜೀನಾಮೆ ಘೋಷಿಸಿದ ಮಿತ್ರ ಪಕ್ಷದ ಶಾಸಕರು

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist