ಕಳೆದ ವಾರ ಪಂಜಾಬಿಗೆ ಪ್ರಧಾನಿ ಭೇಟಿ ನೀಡಿದ ಸಮಯದಲ್ಲಿ ಭದ್ರತಾ ಲೋಪವಾದ ಕಾರಣ ಅವರು ತಮ್ಮ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ಹಿಂತಿರುಗಿದ್ದರು. ಈ ಕುರಿತು ದೇಶಾದ್ಯಂತ ವಾದ-ಪ್ರತಿವಾದಗಳೆ ಶುರುವಾಗಿದ್ದವು. ಈ ಕುರಿತು ನ್ಯಾಯಾಂಗ ತನಿಖೆಗೂ ಸಹ ಆದೇಶಿಸಲಾಗಿತ್ತು. ಆದರೆ, ಈ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ನಿನ್ನೆ ಕೋವಿಡ್ ನಿರ್ವಹಣೆ ಕುರಿತು ನಡೆಸಿದ ವರ್ಚುವಲ್ ಪರಿಶೀಲನಾ ಸಭೆಯಲ್ಲಿ ಕ್ಷಮೆಯಾಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಸಭೆಯಲ್ಲಿ ಮಾತನಾಡಿದ ಚನ್ನಿ ಪ್ರಧಾನಿ ಬಗ್ಗೆ ತಮ್ಮಗೆ ಅಪಾರವಾದ ಗೌರವವಿದೆ ಮತ್ತು ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸುವುದಾಗಿ ತಿಳಿಸಿದ್ದಾರೆ. ಈ ಕುರಿತು ಪದ್ಯವನ್ನು ಹಾಡಿದ ಚನ್ನಿ ʻʻತುಮ್ ಸಲಾಮತ್ ರಹೋ ಖಯಾಮತ್ ತಕ್, ಔರ್ ಖುದಾ ಕರೇ ಖಯಾಮತ್ ನಾ ಹೋʼʼ ಎಂದು ಪ್ರಧಾನಿಗೆ ಆ ದೇವರು ಧೀರ್ಘಾಯುಷ ಕರುಣಿಸಲಿ ಎಂದು ಪದ್ಯದ ಮೂಲಕ ವಿಷಾದವನ್ನ ವ್ಯಕ್ತಪಡಿಸಿದ್ದಾರೆ.