‘ಬೇ……. ಅಧಿಕಾರಿಗಳಾ ಬೇಗ ರಸ್ತೆ ಸರಿ ಮಾಡ್ರೋ.. ಎಂಬ ಪೋಸ್ಟರ್ ಅನ್ನು ಮಲೇಶ್ವರಂನಲ್ಲಿನ ಕರೆಂಟ್ ಕಂಬಕ್ಕೆ ಅಂಟಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹಲವು ತಿಂಗಳಿನಿಂದ ಶಾಸಕ ಅಶ್ವಥ್ ನಾರಾಯಣ್ ಕ್ಷೇತ್ರವಾಗಿರುವ ಮಲ್ಲೇಶ್ವರಂನಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ಮುಖ್ಯ ರಸ್ತೆಗಳ ಸಂಪರ್ಕಕ್ಕೆ ಸಾಧ್ಯವಾಗದೆ ಇಲ್ಲಿನ ಜನ ಬೇಸತ್ತಿದ್ದಾರೆ. ಈ ರಸ್ತೆಯಿಂದಾಗಿಯೇ ಅಲ್ಲಿ ಟ್ರಾಫಿಕ್ ಜಾಮ್ನಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪ್ರತೀ ದಿನ ನೂರಾರು ಸಂಖ್ಯೆಯಲ್ಲಿ ಜನ ಶಾಪಿಂಕ್, ತಿಂಡಿ ತಿನ್ನಲು ಮಲ್ಲೇಶ್ವರಂಗೆ ಸೇರುತ್ತಾರೆ. ಹೀಗಿರುವಾಗ ಇಲ್ಲಿನ ರಸ್ತೆ ಕಾಮಗಾರಿ ಜನರಿಗೆ ಕಿರಿಕಿರಿಯನ್ನುಂಟು ಮಾಡಢ ಮಾಡುತ್ತೆ.
ಕಳೆದ ಹಲವು ದಿನಗಳಿಂದ ಸುರಿದ ಮಳೆಯಿಂದಾಗಿ ಮಲ್ಲೇಶ್ವರಂ ರೋಡ್ಗಳಲ್ಲಿ ಓಡಾಡುವುದು ಕಷ್ಟಕರವಾಗಿದೆ. ಅಗೆದ ರಸ್ತೆಗಳಲ್ಲಿ ನೀರು ತುಂಬಿ ಕಸಣ್ಣ ಕೆರೆಗಳೇ ನಿರ್ಮಾಣವಾಗಿದೆ.
ಕಳೆದ ಹಲವು ತಿಂಗಳಿನಿಂದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದು ಜನಸಾಮಾನ್ಯರು ಹೈರಾಣಾಗಿದ್ದಾರೆ ಎನ್ನುವುದಕ್ಕೆ ಇಂದು ವಿದ್ಯುತ್ ಕಂಬಕ್ಕೆ ಅಂಟಿಸಿದ ಪೋಸ್ಟ್ ಸಾಕ್ಷಿಯಾಗಿದೆ. ಈತರದ ಪೋಸ್ಟ್ ಕೂಡ ಅಧಿಕಾರಿಗಳಿಗೆ ಅಲ್ಲಿನ ಜನಪ್ರತಿನಿಧಿಗಳಿಗೆ ಮುಜುಗರ ತರುವಂತದ್ದೆ.