ಕಳೆದ 2 ವಾರದಿಂದ ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗ್ತಿದೆ. ಈ ಹಿನ್ನೆಲೆಯಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಪ್ರಯುಕ್ತ ಕೇಂದ್ರ ಸರ್ಕಾರ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೂಸ್ಟರ್ ಲಸಿಕಾ ಆಂದೋಲನಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಚಾಲನೆ ನೀಡಿದ್ರು. ಇನ್ನೂ ಸಿಎಂಗೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಆರೋಗ್ಯ ಸಚಿವ ಸುಧಾಕರ್ ಸಾಥ್ ನೀಡಿದ್ರು.
ರಾಜ್ಯಾದ್ಯಂತ ಕೊರೊನಾ ಲಸಿಕೆ ಅಮೃತ ಮಹೋತ್ಸವ ಅಭಿಯಾನ 75 ದಿನಗಳ ಕಾಲ ನಡೆಯಲಿದೆ. ಸೆ.30ರವರೆಗೂ ಉಚಿತ ಲಸಿಕೆ ನೀಡಲಾಗ್ತಿದೆ. ರಾಜ್ಯಾದ್ಯಂತ ಜಿಲ್ಲಾ, ತಾಲೂಕು, ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಲಸಿಕೆ ಲಭ್ಯವಿರಲಿದ್ದು, 18 ರಿಂದ 59 ವರ್ಷದವರಿಗೆ ಕೊರೊನಾ ಮೂರನೇ ಡೋಸ್ ಲಸಿಕೆ ವಿತರಣೆ ಮಾಡಲಾಗುತ್ತೆ. ಇದುವರೆಗೂ ರಾಜ್ಯದಲ್ಲಿ ಕೇವಲ ನಾಲ್ಕು ಲಕ್ಷ ಮಂದಿ ಮಾತ್ರವೇ ಶುಲ್ಕ ನೀಡಿ ಮೂರನೇ ಡೋಸ್ ಪಡೆದಿದ್ದಾರೆ. ಉಳಿದಂತೆ ನಾಲ್ಕು ಕೋಟಿಗೂ ಅಧಿಕ ಮಂದಿ ಅರ್ಹತೆ ಪಡೆದಿದ್ದರೂ, ಲಸಿಕೆ ಪಡೆದಿಲ್ಲ ಎಂದು ಹೇಳಲಾಗ್ತಿದೆ. ಉಚಿತವಾಗಿರುವ ಹಿನ್ನೆಲೆ ಹೆಚ್ಚಿನ ಮಂದಿ ಮೂರನೇ ಡೋಸ್ ಲಸಿಕೆ ಪಡೆಯುವ ನಿರೀಕ್ಷೆಯಲ್ಲಿದೆ ಆರೋಗ್ಯ ಇಲಾಖೆ.
ಕಳೆದ 3 ತಿಂಗಳ ಹಿಂದೆ ಕೇಂದ್ರ ಸರ್ಕಾರ 18 ವರ್ಷ ಮೋಲ್ಪಟ್ಟವರಿಗೆ ಹಣ ಕೊಟ್ಟು ಲಸಿಕೆ ಪಡೆಯುವಂತೆ ಯೋಜನೆ ರೂಪಿಸಿತ್ತು. ಆದರೆ ಆ ಕಾರ್ಯಕ್ರಮ ಅಂದುಕೊಂಡಂತೆ ಸಕ್ಸಸ್ ಆಗ್ಲಿಲ್ಲ ಶೇ 2-3% ಜನ ಮಾತ್ರ ಲಸಿಕೆ ಪಡೆದರು. ಸೋಂಕು ಹೆಚ್ಚಳವಾಗ್ತಿರೋದ್ರಿಂದ ಇಂದಿನಿಂದ ಉಚಿತ ಬೂಸ್ಟರ್ ಡೋಸ್ ನೀಡಲಾಗ್ತಿದೆ.
ರಾಜ್ಯ ರಾಜಧಾನಿಯಲ್ಲಿ 90 ಲಕ್ಷಕ್ಕೂ ಹೆಚ್ಚಿನ ಜನರು ಬೂಸ್ಟರ್ ಪಡೆಯಬೇಕಿದೆ. ಬೆಂಗಳೂರಿನಲ್ಲಿ ಈವರೆಗೆ ಬೂಸ್ಟರ್ ಪಡೆದಿರೋರ ಸಂಖ್ಯೆ ಕೇವಲ 2 ಲಕ್ಷ ಜನ ಮಾತ್ರ. ಇನ್ನೂ 88 ಲಕ್ಷಕ್ಕೂ ಹೆಚ್ಚು ಮಂದಿ ಜೀವಾಮೃತ ಪಡೆಯಬೇಕು. ಸದ್ಯ ಸಿಲಿಕಾನ್ ಸಿಟಿಯಲ್ಲಿ ನಿತ್ಯ 1 ಸಾವಿರಕ್ಕಿಂತ ಹೆಚ್ಚಿನ ಕೇಸ್ ಗಳು ಬರ್ತಿದ್ದು, ಇದರಿಂದ ಎಚ್ಚೆತ್ತ ಬಿಬಿಎಂಪಿ, ಆರೋಗ್ಯ ಇಲಾಖೆ ಬೂಸ್ಟರ್ ಗೆ ವೇಗ ಕೊಡಲು ಮುಂದಾಗಿದೆ. ಸದ್ಯ ಕೋವ್ಯಾಕ್ಸೀನ್ ಮತ್ತು ಕೋವಿಶೀಲ್ಡ್ ತಲಾ 2 ಲಕ್ಷ ಡೋಸ್ ಸ್ಟಾಕ್ ಇದ್ದು, ಅವಷ್ಯಕತೆಗೆ ತಕ್ಕಂತೆ ಕೇಂದ್ರ ಸರ್ಕಾರ ಪೂರೈಸಲಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗೆ ತಕ್ಕಂತೆ ಇಂದಿನಿಂದ ಎಲ್ಲಾ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಬಿಬಿಎಂಪಿ ಆಸ್ಪತ್ರೆಗಳಲ್ಲಿ ಅರ್ಹ ಪಲಾನುಭವಿಗಳಿಗೆ ಬೂಸ್ಟರ್ ಡೋಸ್ ಉಚಿತವಾಗಿ ಸಿಗಲಿದೆ.
ಜಗತ್ತಿನಲ್ಲೇ ಅತ್ಯಂತ ದೊಡ್ಡ ಲಸಿಕಾ ಅಭಿಯಾನ ಇದು : ಸಿಎಂ ಅಭಿಮತ.!!
ಕೇಂದ್ರ ಸರ್ಕಾರದ ಸಹಾಯದೊಂದಿಗೆ ರಾಜ್ಯದಲ್ಲಿ ಬೂಸ್ಟರ್ ಡೋಸ್ ಕೊಡಲಾಗುತ್ತಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಭಾಗವಾಗಿ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಇದು ಇದರ ಸಂಪೂರ್ಣ ಶ್ರೇಯ ಪ್ರಧಾನಿ ಮೋದಿಯವರಿಗೆ ಸಲ್ಲಬೇಕು. ವೈರಸ್ ವಿರುದ್ಧದ ಹೋರಾಟದಲ್ಲಿ ಲಸಿಕೆ ಮಹತ್ವದ ಪಾತ್ರವಹಿಸಿದೆ. ಕೊರೋನಾ ಬಂದ ಬಳಿಕ ವಿಜ್ಞಾನಿಗಳು, ವೈದ್ಯರು, ದಾದಿಯರು ಎಲ್ಲರೂ ಲೀಡರ್ ಗಳಾಗಿ ಮಾರ್ಪಾಡು ಆಗಿದ್ದಾರೆ. ಅವರು ಲೀಡರ್ ಆಗದೆ ಹೋಗಿದ್ದರೆ ಇದನ್ನು ಕಂಟ್ರೋಲ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. 5.94 ಕೋಟಿ ಮೊದಲ ಡೋಸ್ ಹಾಗೂ 5.42 ಕೋಟಿ ಎರಡನೇ ಡೋಸ್ ಲಸಿಕೆ ಕೊಡಲಾಗಿದೆ ರಾಜ್ಯದಲ್ಲಿ. ಸದ್ಯ ನಾವು ಹಾದು ಹೋಗುತ್ತಿರುವುದು ಟೇಪರಿಂಗ್ ಸಿಟಿವ್ಯೇಷನ್ ನಲ್ಲಿ. ಕೊರೋನಾ ಕಡಿಮೆ ಆಗಿ ಅದು ಫೇಡ್ ಔಟ್ ಆಗುತ್ತಿದೆ. ಈ ವೇಳೆಯಲ್ಲೂ ನಾವು ಕಾಳಜಿವಹಿಸಬೇಕು, ನಿರ್ಲಕ್ಷ್ಯಿಸಬಾರದು ಎಂದು ಹೇಳಿದರು.
ಇನ್ನೂ ಬೂಸ್ಟರ್ ಡೋಸ್ ವಿಚಾರಕ್ಕೆ ಸಾರ್ವಜನಿಕರು ಮಾತ್ರ ನೀರಾಶ್ತಿ ತೋರಿಸಿದ್ದಾರೆ. ಕೊರೊನಾ ಕಡಿಮೆ ಇರುವ ಕಾರಣಕ್ಕೆ ನಾವು ಬೂಸ್ಟರ್ ಡೋಸ್ ತೆಗೆದುಕೊಂಡಿಲ್ಲ. ಅದು ಅಲ್ದೆ ಮೊದಲು, ಎರಡನೇ ಲಸಿಕೆಯಿಂದ ತೊಂದ್ರೆ ಆಗಿದೆ. ಬಿಟ್ಟು ಬಿಟ್ಟು ಜ್ವರ ಬರ್ತೀದೆ. ಹಾರ್ಟ್ ಪ್ರಾಬ್ಲಂ, ಕೈಕಾಲು ನೋವು ಹಾಗೂ ನಿಶಕ್ತಿ ಮಾಡುತ್ತೆ ಎಂದು ಬೂಸ್ಟರ್ ಡೋಸ್ ಪಡೆದ ಪ್ರತಪ್ ಹೇಳಿದರು.
ಉಚಿತ ಬೂಸ್ಟರ್ ಡೋಸ್ ಗೆ ಖಾಸಗಿ ಆಸ್ಪತ್ರೆಗಳು ಅಸಮಾಧಾನ.!!
ಸರ್ಕಾರ ಬೂಸ್ಟರ್ ಡೋಸ್ ಉಚಿತವಾಗಿ ನೀಡ್ತಿರುವದ್ರಿಂದ ಖಾಸಗಿ ಆಸ್ಪತ್ರೆಗಳು ಅಸಮಾಧನ ವ್ಯಕ್ತಪಡಿಸಿದ್ದಾರೆ. ನಾವು ಬೂಸ್ಟರ್ ಡೋಸ್ ಲಸಿಕೆ ಖಾಸಗಿ ಆಸ್ಪತ್ರೆಗಳಲ್ಲಿ ಇಟ್ಟು ಕೊಂಡಿದ್ದೇವೆ. ಆದರೆ ಸರ್ಕಾರ ಈಗ ಉಚಿತ ನೀಡುವದ್ರಿಂದ ನಮಗೆ ತೊಂದ್ರೆ ಆಗಲಿದೆ. ಸ್ಟಾಕ್ ಇರುವ ಲಸಿಕೆ ಏನ್ ಮಾಡಬೇಕೆಂದು ಸರ್ಕಾರಕ್ಕೆ ಫನಾ ಅಧ್ಯಕ್ಷ ಪ್ರಸನ್ನ ಪ್ರಸನ್ನ ಪ್ರೆಶ್ನೆ ಮಾಡಿದ್ದಾರೆ. ಒಟ್ನಲ್ಲಿ ಕೊರೋನಾ ಹೆಚ್ಚಳ ಒಂದ್ಕ ಆದ್ರೆ ಈ ಮಧ್ಯೆ ಸರ್ಕಾರ ಉಚಿತವಾಗಿ ಬೂಸ್ಟರ್ ಡೋಸ್ ಕೊಡ್ತಿರೋದ್ರಿಂದ ಸಾರ್ವಜನಕರು ಮುಂದೆ ಬಂದು ಲಸಿಕೆ ತೆಗೆದುಕೊಳ್ತಾರೋ ಎಂಬುವುದು ಕಾದು ನೋಡಾಬೇಕಾಗಿದೆ.