• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಭಯೋತ್ಪಾದಕರೊಂದಿಗಿನ ಹೋರಾಟದಿಂದ ಖಗೋಳ ಶಾಸ್ತ್ರಜ್ಞರವರೆಗೆ ಮಕ್ಕಳ ಸಾಧನೆಯ ಹಾದಿ

ಫಾತಿಮಾ by ಫಾತಿಮಾ
January 30, 2022
in ಅಭಿಮತ, ವಿಶೇಷ
0
ಭಯೋತ್ಪಾದಕರೊಂದಿಗಿನ ಹೋರಾಟದಿಂದ ಖಗೋಳ ಶಾಸ್ತ್ರಜ್ಞರವರೆಗೆ ಮಕ್ಕಳ ಸಾಧನೆಯ ಹಾದಿ
Share on WhatsAppShare on FacebookShare on Telegram

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು 2022ನೇ ಸಾಲಿನ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪುರಸ್ಕೃತರನ್ನು ಪ್ರಕಟಿಸಿದ್ದು
21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 15 ಬಾಲಕರು ಮತ್ತು 14 ಬಾಲಕಿಯರನ್ನು ಒಳಗೊಂಡಂತೆ ಒಟ್ಟು 29 ಮಕ್ಕಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸಂಶೋಧನೆ, ಸಮಾಜ ಸೇವೆ, ಪಾಂಡಿತ್ಯ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ ಮತ್ತು ಶೌರ್ಯ ವಿಭಾಗಗಳಲ್ಲಿ ಮಕ್ಕಳನ್ನು ಗುತುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 1 ಲಕ್ಷ ಮೌಲ್ಯದ ನಗದು ಬಹುಮಾನವನ್ನು ಹೊಂದಿದೆ, ಇದನ್ನು ಆಯಾ ವಿಜೇತರ ಬ್ಯಾಂಕ್ ಖಾತೆಗಳಿಗೆ ಆನ್ಲೈನ್ನಲ್ಲಿ ವರ್ಗಾಯಿಸಲಾಗಿದೆ.

ADVERTISEMENT

ಪ್ರಶಸ್ತಿ ಪಡೆದ ಮಕ್ಕಳ ಪಟ್ಟಿ ಮತ್ತು ಅವರ ಸಾಧನೆಗಳು ಇಲ್ಲಿವೆ.

ಸಂಶೋಧನಾ ಕ್ಷೇತ್ರ

  1. ಶಿವಂ ರಾವತ್ (18)

ಉತ್ತರಾಖಂಡದ ಶಿವಂ ರಾವತ್ ಅವರು ಬಯೋಇನ್ಫರ್ಮ್ಯಾಟಿಕ್ಸ್ ಅನ್ನು ಬಳಸಿಕೊಂಡು ಭಾರತೀಯ ಸಾಸಿವೆ ಬೆಳೆ ಉತ್ಪಾದಕತೆಯನ್ನು ಹೆಚ್ಚಿಸುವತ್ತ ಗಮನಹರಿಸಿದ್ದಾರೆ. ಅವರು ಹಲವಾರು ಇತರ ರಾಜ್ಯ ಮಟ್ಟದ ಪ್ರಶಸ್ತಿಗಳಿಗೆ ಸಹ ಪಾತ್ರರಾಗಿದ್ದಾರೆ ಮತ್ತು ಪ್ರಸ್ತುತ ಬೆಳೆ ಉತ್ಪಾದಕತೆಯನ್ನು ಹೆಚ್ಚಿಸುವ ಇತರ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

  1. ವಿಶಾಲಿನಿ ಎನ್ ಸಿ (8)

ತಮಿಳುನಾಡಿನ ವಿಶಾಲಿನಿ ಎನ್ ಸಿ ಭಾರತದಲ್ಲಿ ಪೇಟೆಂಟ್ ಹೊಂದಿರುವವರಲ್ಲಿ ಅತ್ಯಂತ ಕಿರಿಯರಾಗಿದ್ದರೆ. ತನ್ನ ಸಂಶೋಧನೆಗಾಗಿ ಆರನೇ ವಯಸ್ಸಿನಲ್ಲಿ, ಅವರು ಪೇಟೆಂಟ್ಗೆ ಅರ್ಜಿ ಸಲ್ಲಿಸಿ ಅದಕ್ಕೆ ಅನುಮೋದನೆ ಪಡೆದಿದ್ದರು. ಪ್ರವಾಹದ ಸಮಯದಲ್ಲಿ ಮುಳುಗುವುದನ್ನು ತಡೆಯಲು ಸಹಾಯ ಮಾಡುವ ‘ಆಟೋಮ್ಯಾಟಿಕ್ ಮಲ್ಟಿ-ಫಂಕ್ಷನಲ್ ಲೈಫ್ ರೆಸ್ಕ್ಯೂ ಫ್ಲಡ್ ಹೌಸ್’ ಅನ್ನು ಕಂಡುಹಿಡಿದಿದ್ದಾರೆ. ಆಕೆಯ ಆವಿಷ್ಕಾರವಾದ ಫ್ಲೋಟಿಂಗ್ ಹೌಸ್ ಕಾಂಟ್ರಾಪ್ಶನ್, ಪ್ರವಾಹದ ಸಮಯದಲ್ಲಿ ಮಕ್ಕಳು, ಗರ್ಭಿಣಿಯರು, ವಯಸ್ಸಾದವರು ಮತ್ತು ವಿಕಲಚೇತನರು, ಸಾಕುಪ್ರಾಣಿಗಳು ಮತ್ತು ದೈಹಿಕವಾಗಿ ದುರ್ಬಲವಾಗಿರುವ ಜನರ ಜೀವಗಳನ್ನು ಉಳಿಸಲು ಬಳಸಬಹುದು. ಈ ಫ್ಲೋಟಿಂಗ್ ಹೌಸ್, ಝಿಪ್ಪರ್ಡ್ ಟಾಪ್ನೊಂದಿಗೆ, ಆಮ್ಲಜನಕ ಸಿಲಿಂಡರ್, ಆಹಾರದ ಚೀಲ, ನೀರು ಮತ್ತು ಪ್ರಥಮ ಚಿಕಿತ್ಸಾ ಕಿಟ್ ಅನ್ನು ಇರಿಸಿಕೊಳ್ಳಲು ಸ್ಥಳಾವಕಾಶ ಹೊಂದಿದೆ.

  1. ಜುಯಿ ಅಭಿಜಿತ್ ಕೇಸ್ಕರ್ (16)

ಜುಯಿ ಅಭಿಜಿತ್ ಕೇಸ್ಕರ್ ಅವರು JTremor3D ಎಂಬ ಕೈಗವಸಿನಂತೆ ಧರಿಸಬಹುದಾದ ನಡುಕವನ್ನು ದಾಖಲಿಸುವ ಸಾಧನವನ್ನು ಕಂಡುಹಿಡಿದಿದ್ದಾರೆ. ಪಾರ್ಕಿನ್ಸನ್ ಕಾಯಿಲೆಯೊಂದಿಗೆ ಹೋರಾಡುತ್ತಿರುವ ತನ್ನ ಚಿಕ್ಕಪ್ಪನಿಗೆ ಸಹಾಯ ಮಾಡುವ ಪ್ರಯತ್ನದಲ್ಲಿ, ಪುಣೆಯ 16 ವರ್ಷದ ಹುಡುಗಿ ಬಾಲ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಅವರು ಅಭಿವೃದ್ಧಿ ಪಡಿಸಿರುವ JTremor-3D ರೋಗಿಗಳಲ್ಲಿ ಅನಿಯಂತ್ರಿತ ನಡುಕವನ್ನು ಅಳೆಯಲು ಸಹಾಯ ಮಾಡುತ್ತದೆ ಮತ್ತು ಕ್ಲೌಡ್ ಡೇಟಾಬೇಸ್ ಮೂಲಕ ವೈದ್ಯರಿಗೆ ಡೇಟಾವನ್ನು ಕಳುಹಿಸುತ್ತದೆ. ಈ ಪ್ರಯತ್ನಕ್ಕಾಗಿ ಅವರು ಕೇಂದ್ರ ಸರ್ಕಾರದಿಂದ ಬ್ರಾಡ್ಕಾಮ್-ಐಆರ್ಐಎಸ್ ಗ್ರ್ಯಾಂಡ್ ಅವಾರ್ಡ್ 2020-21 ಸೇರಿದಂತೆ ಅನೇಕ ಪುರಸ್ಕಾರಗಳನ್ನು ಗೆದ್ದಿದ್ದಾರೆ.

  1. ಪುಹಾಬಿ ಚಕ್ರವರ್ತಿ (15)

ಪುಹಾಬಿ ಚಕ್ರವರ್ತಿ ಅವರು ತ್ರಿಪುರಾ ರಾಜ್ಯದ AI ಅಪ್ಲಿಕೇಶನ್ ಡೆವಲಪರ್, ಮತ್ತು ತಾನು ಡೆವಲಪ್ ಮಾಡಿದ ಅಪ್ಲಿಕೇಶನ್ ಗೆ ಪೇಟೆಂಟ್ ಹೊಂದಿದ್ದಾರೆ. ಅಷ್ಟು ಮಾತ್ರವಲ್ಲದೆ ಕಿಕ್ ಬಾಕ್ಸರ್ ಸಹ ಹೌದು. ‘AthleteX ಎನ್ನುವ AI ಆಧಾರಿತ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದ್ದಾರೆ . ಇದು ಗಾಯಗಳನ್ನು ನಿಖರವಾಗಿ ಪತ್ತೆಹಚ್ಚುವ ಮೂಲಕ ಕ್ರೀಡಾಪಟುಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ

  1. ಅಶ್ವಥ ಬಿಜು (14)

ಅಶ್ವಥ ಬಿಜು ಅವರ ಪಳೆಯುಳಿಕೆಗಳ ಮೇಲಿನ ಆಕರ್ಷಣೆಯು ಐದನೇ ವಯಸ್ಸಿನಲ್ಲಿ ಪ್ರಾರಂಭವಾಯಿತು. ಅವರನ್ನು ಹೆಚ್ಚು ಆಕರ್ಷಿಸಿದ್ದು ಅಮ್ಮೋನೈಟ್ ಪಳೆಯುಳಿಕೆಯ ಚಿತ್ರ. ಇಂದು ಅವರು ಒಬ್ಬ ಉದಯೋನ್ಮುಖ ಪ್ರಾಗ್ಜೀವಶಾಸ್ತ್ರಜ್ಞರಾಗಿದ್ದಾರೆ. ಅವರು ಕಶೇರುಕಗಳು, ಅಕಶೇರುಕಗಳು, ಸೂಕ್ಷ್ಮ ಪಳೆಯುಳಿಕೆಗಳು ಇತ್ಯಾದಿಗಳ ವಿವಿಧ ಪಳೆಯುಳಿಕೆ ಮಾದರಿಗಳನ್ನು ಸಂಗ್ರಹಿಸುತ್ತಿದ್ದಾರೆ. ಅವರು ಈ ಕ್ಷೇತ್ರದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.

  1. ಬನಿತಾ ಡ್ಯಾಶ್

ಬನಿತಾ ಡ್ಯಾಶ್ ಒಬ್ಬ ಉದಯೋನ್ಮುಖ ಖಗೋಳ ಭೌತಶಾಸ್ತ್ರಜ್ಞರಾಗಿದ್ದು, ಅವರು ಕ್ಷುದ್ರಗ್ರಹಗಳಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ್ದಾರೆ. ಸ್ವಯಂಚಾಲಿತ ಸ್ಯಾನಿಟೈಸಿಂಗ್ ಸ್ಕೂಲ್ ಬ್ಯಾಗ್ ಅನ್ನು ವಿನ್ಯಾಸಗೊಳಿಸಿದ ಬನಿತಾ ಹಲವಾರು ಜಾಗತಿಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ನಾಸಾ ಮತ್ತು ಐಎಎಸ್ಸಿ ಆಕೆಗೆ ಸಿಟಿಜನ್ ಸೈಂಟಿಸ್ಟ್ ಎಂಬ ಬಿರುದು ನೀಡಿ ಗೌರವಿಸಿದೆ. ಒಡಿಶಾದ ಸ್ಥಳೀಯ ಕಲಾ ಪ್ರಕಾರವಾದ ಪಟ್ಟಚಿತ್ರದಲ್ಲಿ ಆಕೆಗೆ ಹೆಚ್ಚಿನ ಆಸಕ್ತಿ ಇದೆ.

  1. ತನಿಷ್ ಸೇಥಿ (14)

ತನಿಶ್ ಸೇಥಿ ಹರಿಯಾಣದ ಸಿರಾ
ದ ಯುವ ಅಪ್ಲಿಕೇಶನ್ ಡೆವಲಪರ್ ಆಗಿದ್ದಾರೆ. ಅವರು ‘ಪಶು ಮಾಲ್’ ಎಂಬ ವಿಶಿಷ್ಟ ಇ-ಕಾಮರ್ಸ್ ಪ್ಲಾಟ್ಫಾರ್ಮ್ ಅಭಿವೃದ್ಧಿಪಡಿಸಿದ್ದಾರೆ, ಇದು ಆನ್ಲೈನ್ ಪ್ಲಾಟ್ಫಾರ್ಮ್ ಮೂಲಕ ಜಾನುವಾರುಗಳ ಖರೀದಿದಾರರು ಮತ್ತು ಮಾರಾಟಗಾರರನ್ನು ಸಂಪರ್ಕಿಸುತ್ತದೆ. ಈ ಅಪ್ಲಿಕೇಶನ್ ಪ್ರಸ್ತುತ ಹರಿಯಾಣ ಮತ್ತು ಪಂಜಾಬ್ ರಾಜ್ಯಗಳಲ್ಲಿ ಬಳಕೆಯಲ್ಲಿದೆ.
ಸಮಾಜ ಸೇವೆ

  1. ಮೀಧಾಂಶ್ ಕುಮಾರ್ ಗುಪ್ತಾ (11)
    ಮೀಧಾಂಶ್ ಒಬ್ಬ ಯುವ ಅಪ್ಲಿಕೇಶನ್ ಡೆವಲಪರ್ ಆಗಿದ್ದು, ಅವರು COVID-19 ನಲ್ಲಿ ಎಲ್ಲಾ ಮಾಹಿತಿಯನ್ನು ಒದಗಿಸಲು ಮೀಸಲಾಗಿರುವ ವೆಬ್ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸುವಲ್ಲಿ ಕೆಲಸ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಪಂಜಾಬ್ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ವಿವಿಧ ಜಾಗೃತಿ ವೀಡಿಯೊಗಳೊಂದಿಗೆ ಐಟಿ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದ ‘ಮಿಷನ್ ಫತೇಹ್’ ಹೆಸರಿನ ರಾಜ್ಯ ಮಟ್ಟದ ಕರೋನಾ ತಡೆಗಟ್ಟುವ ಯೋಜನೆಯಲ್ಲಿ ಅವರು ಭಾಗವಹಿಸಿದರು. ಈ ಕೆಲಸಕ್ಕಾಗಿ, ಅವರಿಗೆ ಪಂಜಾಬ್ ಸರ್ಕಾರದಿಂದ ಪ್ರಶಂಸಾ ಪ್ರಮಾಣಪತ್ರವನ್ನು ಸಹ ಪಡೆದಿದ್ದಾರೆ.
  2. ಅಭಿನವ್ ಕುಮಾರ್ ಚೌಧರಿ (16)

ಅಭಿನವ್ ಕುಮಾರ್ ಚೌಧರಿ ಅವರು ಯುವ ಉದ್ಯಮಿಯಾಗಿದ್ದು, COVID-19 ಲಾಕ್ಡೌನ್ ಸಮಯದಲ್ಲಿ ವೆಬ್ಸೈಟ್ ಮೂಲಕ ಸೆಕೆಂಡ್ ಹ್ಯಾಂಡ್ ಪುಸ್ತಕಗಳನ್ನು ಸಂಗ್ರಹಿಸುವ ಮೂಲಕ 10,000 ಹಿಂದುಳಿದ ಮಕ್ಕಳಿಗೆ ಸಹಾಯ ಮಾಡಿದ್ದಾರೆ. ಸ್ಯಾನಿಟರಿ ನ್ಯಾಪ್ಕಿನ್ಗಳ ಬಳಕೆಯನ್ನು ಉತ್ತೇಜಿಸಲು ಮತ್ತು ಅವುಗಳ ಪರಿಸರ ಸ್ನೇಹಿ ವಿಲೇವಾರಿಗಾಗಿ, ವಿವಿಧ ರೋಗಗಳು ಹರಡುವುದನ್ನು ತಡೆಯಲು ಅವರು ಯಂತ್ರವೊಂದನ್ನು ಅಭಿವೃದ್ಧಿಪಡಿಸಿದ್ದಾರೆ.

  1. ಪಾಲ್ ಸಾಕ್ಷಿ (8)

ಪಾಲ್ ಸಾಕ್ಷಿ ಎಂಟನೇ ವಯಸ್ಸಿನಲ್ಲಿ PM CARES ನಿಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರು ಆನ್ಲೈನ್ ಮ್ಯೂಸಿಕಲ್ ಚಾರಿಟಿ ಶೋ ನಡೆಸುವ ಮೂಲಕ ಹಣವನ್ನು ಸಂಗ್ರಹಿಸಿದರು. ಇದಲ್ಲದೆ, ಅವರು COVID-19 ಕುರಿತು ಜಾಗೃತಿ ಮೂಡಿಸಲು ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದ್ದಾರೆ ಮತ್ತು ಸುರಕ್ಷಿತವಾಗಿರಲು ಒಬ್ಬರು ಕೈಗೊಳ್ಳಬಹುದಾದ ವಿವಿಧ ಮುನ್ನೆಚ್ಚರಿಕೆ ಕ್ರಮಗಳನ್ನು ಸಹ ಪಟ್ಟಿ ಮಾಡಿದ್ದಾರೆ. ಅವರು ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಸ್ವಯಂಸೇವಕರೂ ಆಗಿದ್ದಾರೆ.

  1. ಆಕರ್ಷ್ ಕೌಶಲ್ (16)

ಪಂಜಾಬ್ನ ಕರ್ನಾಲ್ನ ನಿವಾಸಿ ಆಕರ್ಷ್ ಕೌಶಲ್ ಅವರು ಕೋವಿಡ್ ಪ್ರಕರಣಗಳ ಉಲ್ಬಣ ಮತ್ತು ಕುಸಿತದ ಮೇಲೆ ನಿಗಾ ಇಡಲು ಜನಸಾಮಾನ್ಯರು ಮತ್ತು ಅಧಿಕಾರಿಗಳಿಗೆ ಸಹಾಯ ಮಾಡಲು ವೆಬ್ಸೈಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. COVID-19 ರ ಎರಡನೇ ಅಲೆಯಲ್ಲಿ ರೋಗಿಗಳಿಗೆ ಅನುಕೂಲವಾಗುವಂತೆ ವೆಬ್ ಪೋರ್ಟಲ್ ಒಂದನ್ನು ರಚಿಸಿದ್ದರು ಮತ್ತು ನಂತರ ಜಿಲ್ಲಾಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆಗಾಗಿ ಮತ್ತೊಂದು ಪೋರ್ಟಲ್ ಅನ್ನು ರಚಿಸಿದ್ದಾರೆ.
ಕ್ರೀಡೆ

  1. ಅರುಷಿ ಕೊತ್ವಾಲ್ (17)
    ಅರುಷಿ ಕೊತ್ವಾಲ್ ಅವರು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದಿಂದ ಚೆಸ್ನ ಎಲ್ಲಾ ಮೂರು ಸ್ವರೂಪಗಳಲ್ಲಿ (ಕ್ಲಾಸಿಕಲ್, ರಾಪಿಡ್ ಮತ್ತು ಬ್ಲಿಟ್ಜ್) ಪದಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿರುವ ಏಕೈಕ ಚೆಸ್ ಆಟಗಾರರಾಗಿದ್ದಾರೆ. ವುಮನ್ ಕ್ಯಾಂಡಿಡೇಟ್ ಮಾಸ್ಟರ್ (WCM) ಪ್ರಶಸ್ತಿಯನ್ನು ಹೊಂದಿರುವ ಜಮ್ಮು ಮತ್ತು ಕಾಶ್ಮೀರದ ಏಕೈಕ ಆಟಗಾರ್ತಿಯೂ ಹೌದು.
  2. ಶ್ರಿಯಾ ಲೋಹಿಯಾ (13)

ಹಿಮಾಚಲ ಪ್ರದೇಶದ ಶ್ರೀಯಾ ಲೋಹಿಯಾ ಅಂತರಾಷ್ಟ್ರೀಯ ಮೋಟಾರ್ ಸ್ಪೋರ್ಟ್ ಕಾರ್ಟಿಂಗ್ ರೇಸರ್. ಕೆಡೆಟ್ ವಿಭಾಗದಲ್ಲಿ 2019 ರ JKTYRE FMSCI IAME X30 ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ವೈಸ್-ಚಾಂಪಿಯನ್, 2019 ರ JKTYRE FMSCI D2BD ನಲ್ಲಿ ಮೊದಲ ಸ್ಥಾನ – 8-12 ವರ್ಷಗಳಲ್ಲಿ ರಾಷ್ಟ್ರೀಯ ಚಾಂಪಿಯನ್ಶಿಪ್ GOT ಸೇರಿದಂತೆ ತನ್ನ ಆರಂಭಿಕ ವೃತ್ತಿಜೀವನದಲ್ಲೇ ಇದುವರೆಗೆ ಹಲವಾರು ಟ್ರೋಫಿಗಳು ಮತ್ತು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
3.ತೇಲುಕುಂಟಾ ವಿರಾಟ್ ಚಂದ್ರ

ತೇಲುಕುಂಟಾ ವಿರಾಟ್ ಚಂದ್ರ ಅವರು 2021 ರಲ್ಲಿ ಆಫ್ರಿಕಾದ ಖಂಡದ ಅತ್ಯುನ್ನತ ಶಿಖರವಾದ ಕಿಲಿಮಂಜಾರೋ ಪರ್ವತವನ್ನು ಏರಿದ ಯುವ ಪರ್ವತಾರೋಹಿಯಾಗಿದ್ದಾರೆ. ಅವರು ತಮ್ಮ ಕಠಿಣ ಸಾಧನೆಗಾಗಿ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದ್ದಾರೆ.

  1. ಚಂದರಿ ಸಿಂಗ್ ಚೌಧರಿ (13)

ಚಂದರಿ ಸಿಂಗ್ ಚೌಧರಿ ಯುವ ರೋಲರ್ ಸ್ಕೇಟರ್ ಆಗಿದ್ದು, ಅವರು ಹಲವಾರು ಪದಕಗಳನ್ನು ಗೆದ್ದಿದ್ದಾರೆ. ಅವರು 96 ಗಂಟೆಗಳ ಸ್ಕೇಟಿಂಗ್ ದಾಖಲೆ ಹೊಂದಿರುವ ಸ್ಕೇಟರ್. ಅವರು ದೇಶದ ಅತ್ಯುತ್ತಮ ಯುವ ರೋಲರ್ ಸ್ಕೇಟರ್ಗಳಲ್ಲಿ ಒಬ್ಬರು. ಸ್ಕೇಟಿಂಗ್ ಜೊತೆಗೆ, ಈಜು, ಟೇಕ್ವಾಂಡೋ ಮತ್ತು ಶೂಟಿಂಗ್ನಲ್ಲಿಯೂ ಅವರು ನಿಪುಣರಾಗಿದ್ದಾರೆ.

  1. ಜಿಯಾ ರೈ (13)

ಜಿಯಾ ರೈ ಅವರು ಹುಟ್ಟುತ್ತಲೇ ಅಂಗವೈಕಲ್ಯವನ್ನು ಹೊಂದಿದ್ದು , ಅವರು ತೆರೆದ ನೀರಿನ ಪ್ಯಾರಾ-ಈಜಿನಲ್ಲಿ ಭಾರತದ ಅಗ್ರ ಶ್ರೇಯಾಂಕಿತೆ. ಆಕೆ ತನ್ನ ಸಾಧನೆಗಾಗಿ ಏಷ್ಯಾ ಬುಕ್ ಆಫ್ ರೆಕಾರ್ಡ್ನಲ್ಲೂ ಸ್ಥಾನ ಪಡೆದುಕೊಂಡಿದ್ದಾರೆ. ಬಾಂದ್ರಾ-ವರ್ಲಿ ಸೀ ಲಿಂಕ್ನಿಂದ ಈಜಲು ಶುರುಮಾಡಿ 8 ಗಂಟೆ 40 ನಿಮಿಷಗಳಲ್ಲಿ 36 ಕಿಮೀ ಈಜಿ ಗೇಟ್ವೇ ಆಫ್ ಇಂಡಿಯಾ ತಲುಪಿದ ದಾಖಲೆಯೂ ಅವರ ಹೆಸರಿಗಿದೆ.

  1. ಸ್ವಯಂ ಪಾಟೀಲ್ (14)

ಡೌನ್ ಸಿಂಡ್ರೋಮ್ನಿಂದ ಬಳಲುತ್ತಿರುವ ಸ್ವಯಂ ಪಾಟೀಲ್ ಎಲಿಫೆಂಟ್ ಕೇವ್ಸ್ನಿಂದ ಗೇಟ್ವೇ ಆಫ್ ಇಂಡಿಯಾದವರೆಗಿನ 14 ಕಿಲೋಮೀಟರ್ ದೂರವನ್ನು ನಾಲ್ಕು ಗಂಟೆ ಒಂಬತ್ತು ನಿಮಿಷಗಳಲ್ಲಿ ಈಜಿ ದಾಖಲೆ ನಿರ್ಮಿಸಿದ್ದಾರೆ . ಸ್ವಯಂ ಅವರು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ 2017, ವಿಕಲಾಂಗ ವ್ಯಕ್ತಿಗಳ ಸಬಲೀಕರಣಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ 2018, ವಂಡರ್ ಬುಕ್ ಆಫ್ ಇಂಟರ್ನ್ಯಾಷನಲ್ ರೆಕಾರ್ಡ್ 2018, ಜಿಲ್ಲಾ ಪ್ರಶಸ್ತಿ 2020 ಮತ್ತು ವರ್ಲ್ಡ್ ರೆಕಾರ್ಡ್ ಇಂಡಿಯಾ ಪ್ರಶಸ್ತಿಗಳನ್ನೂ ಪಡೆದುಕೊಂಡಿದ್ದಾರೆ

  1. ತರುಷಿ ಗೌರ್ (12)

ತರುಷಿ ಗೌರ್ ಟೇಕ್ವಾಂಡೋ ಮಾರ್ಷಲ್ ಆರ್ಟ್ಸ್ನಲ್ಲಿ ಗಿನ್ನೆಸ್ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. ಅವರು ಈ ಕ್ರೀಡೆಯಲ್ಲಿ 151 ಚಿನ್ನ, 40 ಬೆಳ್ಳಿ ಮತ್ತು 34 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಅವರು ಒಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸುವ ಮತ್ತು ದೇಶಕ್ಕಾಗಿ ಚಿನ್ನದ ಪದಕವನ್ನು ಗೆಲ್ಲುವ ಹಂಬಲವನ್ನು ಹೊಂದಿದ್ದಾರೆ. ತರುಷಿ ಭಾರತದಲ್ಲಿ ಟೇಕ್ವಾಂಡೋದಲ್ಲಿ ಡಿಗ್ರಿ 1 ಮತ್ತು ಡಿಗ್ರಿ 2 ಬ್ಲಾಕ್ ಬೆಲ್ಟ್ ಗೆದ್ದ ಅತ್ಯಂತ ಕಿರಿಯ ಹುಡುಗಿ.

  1. ಅನ್ವಿ ವಿಜಯ್ ಜಂಜಾರುಕಿಯಾ (13)

ಅನ್ವಿ ವಿಜಯ್ ಜಂಜಾರುಕಿಯಾ ಅವರನ್ನು ಸೂರತ್ನ ‘ರಬ್ಬರ್-ಹುಡುಗಿ’ ಎಂದೂ ಕರೆಯಲಾಗುತ್ತದೆ. ಈಗಾಗಲೇ ತೆರೆದ ಶಸ್ತ್ರ ಚಿಕಿತ್ಸೆಗೂ ಒಳಗಾಗಿರುವ ಅವರು ಹುಟ್ಟಿದಂದಿನಿಂದಲೂ ಶೇಕಡಾ 75 ರಷ್ಟು ಬೌದ್ಧಿಕ ಅಸಾಮರ್ಥ್ಯ ಹೊಂದಿರುವ ಅವರು ಟ್ರಿಸೋಮಿ 21, ಹೃದಯ ದೋಷ ಮತ್ತು ಹಿರ್ಷ್ಸ್ಪ್ರಂಗ್ ಕಾಯಿಲೆ ಹೊಂದಿದ್ದಾರೆ. ಇದರ ಹೊರತಾಗಿಯೂ ಕಳೆದ ಮೂರು ವರ್ಷಗಳಿಂದ ಯೋಗ ಕಲಿಯುತ್ತಿರುವ ಇವರು ಯೋಗದಲ್ಲಿ ವಿವಿಧ ರಾಜ್ಯ ಮತ್ತು ರಾಷ್ಟ್ರಮಟ್ಟದ ಚಾಂಪಿಯನ್ಶಿಪ್ಗಳಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಗಳಲ್ಲಿ ಮೂರು ಚಿನ್ನದ ಪದಕ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಒಟ್ಟು 42 ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ 51 ಪದಕಗಳನ್ನು ಗೆದ್ದಿದ್ದಾರೆ.
ಶೌರ್ಯ

  1. ಗುರುಗು ಹಿಮಪ್ರಿಯಾ (12)

2018 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ತನ್ನ ತಾಯಿ ಮತ್ತು ಇಬ್ಬರು ಕಿರಿಯ ಸಹೋದರರನ್ನು ರಕ್ಷಿಸಿ ಗುರುಗು ಹಿಮಪ್ರಿಯಾ ಅವರು ಅಸಾಮಾನ್ಯ ಧೈರ್ಯವನ್ನು ಪ್ರದರ್ಶಿಸಿದ್ದರು. ಆಗ ಹಿಮಪ್ರಿಯಾಗೆ ಕೇವಲ ಎಂಟು ವರ್ಷ. ಜಮ್ಮುವಿನ ಸುಂಜುವಾನ್ನಲ್ಲಿರುವ ಸೇನಾ ವಸತಿ ಕ್ವಾರ್ಟರ್ಸ್ನಲ್ಲಿ ಜೈಶ್-ಎ-ಮೊಹಮ್ಮದ್ ಉಗ್ರರು ದಾಳಿ ನಡೆಸಿದ್ದಾಗ, ಗ್ರೆನೇಡ್ ಸ್ಫೋಟದಲ್ಲಿ ಗಾಯಗೊಂಡು ಪ್ರಜ್ಞಾಹೀನರಾಗುವ ಮೊದಲು ಮೂರು ಗಂಟೆಗಳ ಕಾಲ ಭಯೋತ್ಪಾದಕರು ಮಲಗುವ ಕೋಣೆಗೆ ಪ್ರವೇಶಿಸದಂತೆ ತಡೆಯುವಲ್ಲಿ ಹಿಮಪ್ರಿಯಾ ಯಶಸ್ವಿಯಾಗಿದ್ದರು. ಹಿಮಪ್ರಿಯಾ ಅವರ ಸಮಯೋಚಿತ ಮತ್ತು ಕೆಚ್ಚೆದೆಯ ಕಾರ್ಯವು ಘಟನೆಯ ಭೀಕರತೆಯನ್ನು ತಗ್ಗಿಸುವಲ್ಲಿ ಮತ್ತು ಪ್ರತ್ಯೇಕತಾವಾದಿಗಳನ್ನು ಹಿಡಿಯುವಲ್ಲಿ ಸೈನ್ಯಕ್ಕೆ ಸಹಾಯ ಮಾಡಿತು.
2.ಶಿವಾಂಗಿ ಕಾಳೆ (6)

ಆರು ವರ್ಷದ ಶಿವಾಂಗಿ ಕಾಳೆ ವಿದ್ಯುದಾಘಾತಕ್ಕೆ ಒಳಗಾಗಿದ್ದ ತನ್ನ ತಾಯಿ ಹಾಗೂ ತಂಗಿಯನ್ನು ರಕ್ಷಿಸಿದ್ದರು.

  1. ಧೀರಜ್ ಕುಮಾರ್ (14)

ಬಿಹಾರದ ಗಂಡಕ್ ನದಿಯಲ್ಲಿ ಅಲಿಗೇಟರ್ನಲ್ಲಿ ಸಿಕ್ಕಿಬಿದ್ದ ತನ್ನ ಕಿರಿಯ ಸಹೋದರನನ್ನು ರಕ್ಷಿಸುವ ಮೂಲಕ ಧೀರಜ್ ಕುಮಾರ್ ತಮ್ಮ ಸಾಹಸವನ್ನು ಪ್ರದರ್ಶಿಸಿದ್ದರು. ಧೀರಜ್ ನದಿಗೆ ಧುಮುಕಿ, ಅಲಿಗೇಟರ್ ಅನ್ನು ತೆಗೆದುಕೊಂಡು ತನ್ನ ಸಹೋದರನನ್ನು ಉಳಿದಿದ್ದಾರೆ. ಧೀರಜ್ ಮತ್ತು ಅವರ ಸಹೋದರ ಇಬ್ಬರೂ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರ. ಇಬ್ಬರಿಗೂ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಕಲೆ ಮತ್ತು ಸಂಸ್ಕೃತಿ

  1. ಗೌರಿ ಮಹೇಶ್ವರಿ (13)

ಗೌರಿ ಮಹೇಶ್ವರಿ ಅವರು 100 ಕ್ಕೂ ಹೆಚ್ಚು ಕ್ಯಾಲಿಗ್ರಫಿ ಶೈಲಿಗಳನ್ನು ಕರಗತ ಮಾಡಿಕೊಂಡಿದ್ದಾರೆ ಮತ್ತು ಕಿರಿಯ ಕ್ಯಾಲಿಗ್ರಾಫರ್ಗಳಲ್ಲಿ ಒಬ್ಬರಾಗಿ ಅನೇಕ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಗೌರಿ ಶ್ರೇಷ್ಠ ಕ್ಯಾಲಿಗ್ರಾಫರ್ ಮಾತ್ರವಲ್ಲ 700 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈ ಕಲೆಯನ್ನು ಕಲಿಸಿದ್ದಾರೆ. ಇದರಿಂದ ಅವರು ಗಳಿಸುವ ಹಣವನ್ನು ವಿವಿಧ ಸಾಮಾಜಿಕ ಕಾರಣಗಳಿಗಾಗಿ ಬಳಸಲಾಗುತ್ತದೆ ವಿಶೇಷವಾಗಿ ಭಾರತೀಯ ಸೈನ್ಯ ಮತ್ತು ಹಿಂದುಳಿದವರಿಗೆ ಸಹಾಯ ಮಾಡಲು ಬಳಸಲಾಗುತ್ತದೆ.

  1. ರೆಮೋನಾ ಎವೆಟ್ಟೆ ಪೆರೇರಾ (16)

ರೆಮೋನಾ ಎವೆಟ್ಟೆ ಪೆರೇರಾ ಯುವ ಭರತನಾಟ್ಯ ಕಲಾವಿದೆಯಾಗಿದ್ದು, ಅವರು 13 ವರ್ಷಗಳಿಂದ ಈ ಕಲಾ ಪ್ರಕಾರವನ್ನು ಅಭ್ಯಾಸ ಮಾಡುತ್ತಿದ್ದಾರೆ. ವಿವಿಧ ಪ್ರಶಸ್ತಿಗಳಲ್ಲದೆ, ಆಕೆಯ ಹೆಸರನ್ನು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ – ಲಂಡನ್ 2017 ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ 2017 ರಲ್ಲಿ ದಾಖಲಿಸಲಾಗಿದೆ. ರೆಮೋನಾ ಪಾಶ್ಚಾತ್ಯ ನೃತ್ಯ, ಜಾನಪದ ನೃತ್ಯ ಮತ್ತು ಇತರ ಭಾರತೀಯ ನೃತ್ಯ ಶೈಲಿಗಳನ್ನು ಸಹ ಕಲಿಯುತ್ತಿದ್ದಾರೆ.

  1. ದೇವಿಪ್ರಸಾದ್ (14)

ದೇವಿಪ್ರಸಾದ್ ಯುವ ಕರ್ನಾಟಕ ಸಂಗೀತ ತಾಳವಾದಕ ಮತ್ತು ಒಬ್ಬ ನಿಪುಣ ಮೃದಂಗ ವಾದಕ. ಅವರು ಅನೇಕ ಕರ್ನಾಟಕ ಸಂಗೀತ ಕಛೇರಿಗಳಲ್ಲಿ ಪ್ರದರ್ಶನ ನೀಡಿದ್ದಾರೆ ಮತ್ತು ಚಿಕ್ಕ ವಯಸ್ಸಿನಿಂದಲೂ ಅನೇಕ ಹೆಸರಾಂತ ಸಂಗೀತಗಾರರ ಜೊತೆ ಮೃದಂಗ ನುಡಿಸಿದ್ದಾರೆ. ಆರನೇ ವಯಸ್ಸಿನಲ್ಲಿ ಕಲಿಯಲು ಆರಂಭಿಸಿದ ದೇವಿಪ್ರಸಾದ್ ಅವರು ಅಂದಿನಿಂದಲೂ ಪ್ರತಿದಿನ ಮೂರು ಗಂಟೆಗಳ ಕಾಲ ತಾಳವಾದ್ಯವನ್ನು ಅಭ್ಯಾಸ ಮಾಡುತ್ತಿದ್ದಾರೆ.

  1. ಸೈಯದ್ ಫತೀನ್ ಅಹ್ಮದ್ (14)

ಸೈಯದ್ ಫತೀನ್ ಅಹ್ಮದ್ ಅವರು ಶ್ರೇಷ್ಠ ಪಿಯಾನೋ ವಾದಕ ಮತ್ತು ಸಂಗೀತ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಭಾರತೀಯರು ಎಷ್ಟು ಸಮರ್ಥರು ಎಂಬುವುದನ್ನು ಜಗತ್ತಿಗೆ ತೋರಿಸಿದ ಸಾಧಕ. ಅವರು UNESCO ವಿಶ್ವ ಕಲಾ ದಿನದಲ್ಲೂ ಪ್ರದರ್ಶನ ನೀಡಿದ್ದಾರೆ. ಹಲವಾರು ಅಂತರರಾಷ್ಟ್ರೀಯ ಪಿಯಾನೋ ಸ್ಪರ್ಧೆಗಳನ್ನು ಗೆದ್ದಿರುವ ಅವರು ಸಂಗೀತದಲ್ಲಿ ಡಿಪ್ಲೊಮಾ ಗಳಿಸಿದ ಕಿರಿಯ ಭಾರತೀಯರಲ್ಲಿ ಒಬ್ಬರು.

  1. ದೌಲಾಸ್ ಲಂಬಾಮಯುಮ್ (14)

ದೌಲಸ್ ಲಂಬಾಮಯುಮ್ ಅವರು ಚಿತ್ರಕಲೆ ಮತ್ತು ಛಾಯಾಗ್ರಹಣ ಕ್ಷೇತ್ರದಲ್ಲಿ ತಮ್ಮ ಕೌಶಲ್ಯವನ್ನು ತೋರಿಸಿದ್ದಾರೆ ಮತ್ತು ತಮ್ಮ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಅವರ ಕಲೆಯು ವಿವಿಧ ಪ್ರದರ್ಶನಗಳು ಮತ್ತು ಸ್ಪರ್ಧೆಗಳಲ್ಲಿ ಮೆಚ್ಚುಗೆಯನ್ನು ಪಡೆದಿದೆ.

  1. ಧೃತಿಷ್ಮಾನ್ ಚಕ್ರವರ್ತಿ (5)

ಧೃತಿಷ್ಮಾನ್ ಚಕ್ರವರ್ತಿ ಅವರು ಪ್ರತಿಭಾವಂತ ಗಾಯಕ. ಐದನೆಯ ವಯಸ್ಸಿನಲ್ಲೇ ಗಾಯನದಲ್ಲಿ ಅಸಾಧಾರಣ ಪ್ರತಿಭೆ ತೋರಿರುವ ಅವರು ಐದು ವಿಭಿನ್ನ ಭಾಷೆಗಳಲ್ಲಿ ಹಾಡಬಲ್ಲರು . ಅಸ್ಸಾಮಿ, ಸಂಸ್ಕೃತ, ಬಂಗಾಳಿ, ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಯಾವ ಹಾಡನ್ನೇ ಆದರೂ ಸುಲಲಿತವಾಗಿ ಹಾಡಬಲ್ಲರು. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, 2021 ರ ಅಡಿಯಲ್ಲಿ ಅವರಿಗೆ ಅತ್ಯಂತ ಕಿರಿಯ ಬಹುಭಾಷಾ ಗಾಯಕ ಎಂಬ ಬಿರುದನ್ನು ಸಹ ನೀಡಲಾಗಿದೆ.
ಪಾಂಡಿತ್ಯ

ಅವಿ ಶರ್ಮಾ (12)

ಅವಿ ಶರ್ಮಾ ಒಬ್ಬ ಲೇಖಕ ಮತ್ತು ಮೋಟಿವೇಷನಲ್ ಭಾಷಣಕಾರ. ಅವರು ವೇದ ಗಣಿತದ ಅತ್ಯಂತ ಸಣ್ಣ ವಯಸ್ಸಿನ ಮಾರ್ಗದರ್ಶಕರೂ ಹೌದು. ಮೋಟಿವೇಷನಲ್ ಭಾಷಣಕಾರರಾಗಿ, ಯುವ ಪೀಳಿಗೆಯಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಲು ಅವರು ವಿವಿಧ ವೇದಿಕೆಗಳಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ. 2020 ರಲ್ಲಿ ಅವಿ ಶರ್ಮಾ ರಾಮಾಯಣವನ್ನು ಬರೆದಿದ್ದು ಮತ್ತು 2021 ರಲ್ಲಿ ಉಚಿತ ವೇದ ಗಣಿತ ಮತ್ತು ಕೋಡಿಂಗ್ ಅನ್ನು ಆಸಕ್ತರಿಗೆ ಆನ್ಲೈನ್ನಲ್ಲಿ ಕಲಿಸಿದ್ದಾರೆ.

Tags: From Battling Terrorists to astrophysics: here is the Young Bal Puraskar Awardees of 2022
Previous Post

ಚುನಾವಣೆಯಲ್ಲಿ ಸುಧಾರಣೆ ತರುವುದು ಅಗತ್ಯ: ಸ್ಪೀಕರ್ ಕಾಗೇರಿ

Next Post

ಗಾಂಧಿ ಆದರ್ಶಗಳನ್ನು ಜನಪ್ರಿಯಗೊಳಿಸಲು ಸಾಮೂಹಿಕ ಪ್ರಯತ್ನ ಅತ್ಯಗತ್ಯ : ಪ್ರಧಾನಿ ಮೋದಿ

Related Posts

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ
ಅಭಿಮತ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

by ಪ್ರತಿಧ್ವನಿ
April 27, 2026
0

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ 'ಗ್ಲೋಬಲ್ ರಾಜಸ್ಥಾನ ಅಗ್ರಿಟೆಕ್ ಮೀಟ್ 2026' ಅಂಗವಾಗಿ ಬೆಂಗಳೂರಿನ ರೋಡ್ ಶೋನಲ್ಲಿ ಹೂಡಿಕೆಗೆ ಕೈಗಾರಿಕೆಗಳ ಆಸಕ್ತಿ...

Read moreDetails
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

April 17, 2026
Next Post
ಗಾಂಧಿ ಆದರ್ಶಗಳನ್ನು ಜನಪ್ರಿಯಗೊಳಿಸಲು ಸಾಮೂಹಿಕ ಪ್ರಯತ್ನ ಅತ್ಯಗತ್ಯ : ಪ್ರಧಾನಿ ಮೋದಿ

ಗಾಂಧಿ ಆದರ್ಶಗಳನ್ನು ಜನಪ್ರಿಯಗೊಳಿಸಲು ಸಾಮೂಹಿಕ ಪ್ರಯತ್ನ ಅತ್ಯಗತ್ಯ : ಪ್ರಧಾನಿ ಮೋದಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada