ಬೆಂಗಳೂರು : ರಾಮ ಮಂದಿರ ನಿರ್ಮಾಣವನ್ನು ವಿರೋಧಿಸಿದ್ದ ಕಾಂಗ್ರೆಸ್ ಇದೀಗ ಹುಂಡಿ ಅಕ್ರಮದ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ಸಂಸದೆ ಕಂಗನಾ ರನೌತ್ ಕಿಡಿಕಾರಿದ್ದಾರೆ. ರಾಮ ಮಂದಿರ ಕಾಣಿಕೆ ಹುಂಡಿಯ ಲೂಟಿಯ ವಿಚಾರದಲ್ಲಿ ವಿಪಕ್ಷಗಳು ಈಗಾಗಲೇ ನೇರವಾಗಿ ಆರ್ಎಸ್ಎಸ್ ಹಾಗೂ ಬಿಜೆಪಿ ವಿರುದ್ಧ ಆರೋಪಿಸುತ್ತಿವೆ.

ಈ ನಡುವೆಯೇ ಎಲ್ಲ ಆರೋಪಗಳಿಗೆ ತಿರುಗೇಟು ನೀಡಿರುವ ಕಂಗನಾ, ಇದು ಕೇವಲ ಹಣದ ಕಳ್ಳತನ ಮಾತ್ರವಲ್ಲ, ಬದಲಿಗೆ ಕೋಟ್ಯಾಂತರ ಭಕ್ತರ ನಂಬಿಕೆಗೆ ಘಾಸಿಗೊಳಿಸಿರುವ ಕೃತ್ಯವಾಗಿದೆ. ಕೋಟ್ಯಾಂತರ ಭಾರತೀಯರಿಗೆ ರಾಮನು ನಂಬಿಕೆಯ ಸಾಕಾರ ಮೂರ್ತಿಯಾಗಿದ್ದಾನೆ. ಶತಮಾನಗಳ ಹೋರಾಟ, ತ್ಯಾಗ ಹಾಗೂ ಭಕ್ತಿಯ ಬಳಿಕವಷ್ಟೇ ಈ ಭವ್ಯ ರಾಮ ಮಂದಿರದ ನಿರ್ಮಾಣದ ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ಅಲ್ಲದೆ ಹಿಮಾಚಲ ಪ್ರದೇಶದ ಸರ್ಕಾರ ದೇವಸ್ಥಾನದ ಹಣವನ್ನು ಸರ್ಕಾರದ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುತ್ತಿದೆ. ದೇವಸ್ಥಾನದ ಆಸ್ತಿ, ಸಂಪತ್ತುಗಳ ವಿಚಾರದಲ್ಲಿ ಗಂಭೀರತೆಯನ್ನು ಇಟ್ಟುಕೊಳ್ಳದ ಕಾಂಗ್ರೆಸ್ ಸರ್ಕಾರ ಈಗ ದೇವಾಲಯಗಳ ವಿಚಾರದಲ್ಲಿ ಬಾಯಿ ಬಡುತ್ತಿದೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ : Shapoor Zadran: ದೆಹಲಿಯಲ್ಲಿ ಅಫ್ಘಾನ್ ಮಾಜಿ ವೇಗಿ ಶಪೂರ್ ಝದ್ರಾನ್ ನಿಧ**
ಬಿಜೆಪಿ ಯಾವತ್ತೂ ಸನಾತನ ಸಂಸ್ಕೃತಿ, ನಂಬಿಕೆ ಹಾಗೂ ಭಾರತದ ಭವ್ಯ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಬದ್ಧವಾಗಿದೆ. ನಾವು ಎಂದಿಗೂ ವೋಟ್ ಬ್ಯಾಂಕ್ ರಾಜಕಾರಣದ ಮೊರೆ ಹೋಗಿಲ್ಲ. ಆದರೆ ಅದನ್ನು ದೇಶದ ಸಾಂಸ್ಕೃತಿಕ ಅಸ್ಮಿತೆಯ ಅವಿಭಾಜ್ಯ ಅಂಗವಾಗಿ ಗೌರವಿಸುತ್ತೇವೆ. ಈಗ ಜನರಿಗೆ ಕಾಂಗ್ರೆಸ್ನ ಅಸಲಿಯತ್ತು ಹಾಗೂ ನಿಜವಾದ ಮುಖವಾಡ ತಿಳಿಯುತ್ತಿದೆ. ಹಿಮಾಚಲದ ಜನರಿಗೆ ಉತ್ತಮ ಆಡಳಿತ, ಜನಪರ ಕೆಲಸಗಳು ಬೇಕಾಗಿವೆ. ಧರ್ಮದ ಮೇಲೆ ಭಾವನಾತ್ಮಕವಾಗಿ ರಾಜಕೀಯ ಮಾಡುವ ಕಾಂಗ್ರೆಸ್ ಸಂಸ್ಕೃತಿ ಬೇಡವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.






