ನವದೆಹಲಿ : ಇಡಿ ಅಧಿಕಾರಿಗಳು ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರಿದ 5 ಸ್ಥಳಗಳಲ್ಲಿ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಅಕ್ರಮ ಹಣ ವರ್ಗಾವಣೆಯ ಪ್ರಕರಣದ ಭಾಗವಾಗಿ ನಡೆದಿರುವ ದಾಳಿಯಲ್ಲಿ ಟಿಎಂಸಿ ಪಕ್ಷಕ್ಕೆ ಸಂಬಂಧಿಸಿದ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡಲಾಗಿದ್ದು, ಪ್ರಮುಖವಾಗಿ 44.20 ಕೋಟಿ ರೂಪಾಯಿ ಹಣದ ಮೇಲೆ ನಿಗಾವಹಿಸಿದೆ.

ಅಕ್ರಮ ಹಣ ವರ್ಗಾವಣೆಯ ಕಾಯ್ದೆ 17 (1-A) ಅಡಿಯಲ್ಲಿ ನಡೆದಿರುವ ಈ ದಾಳಿಯಲ್ಲಿ ಟಿಎಂಸಿ ಪಕ್ಷದ ಖಾತೆಗಳ ಮೂಲಕ ಅಕ್ರಮವಾಗಿ ಹಣವನ್ನು ಬೇರೆಡೆ ವರ್ಗಾಯಿಸಲಾಗಿದೆ ಎಂಬ ಆರೋಪದ ಮೇಲೆ ಈ ದಾಳಿಯನ್ನು ಇಡಿ ನಡೆಸಿದೆ. ಇನ್ನೂ ಇಡೀ ದಾಳಿಯ ಕ್ಷೇತ್ರವ್ಯಾಪ್ತಿಯು ಏವಿಯೇಷನ್ಗೆ ಸಂಬಂಧಿಸಿದ ಕೇರ್ವೆಲ್ ಗ್ರೂಪ್ ಆಫ್ ಕಂಪನಿಯ ಸ್ಥಳಗಳಿಗೆ ವಿಸ್ತರಿಸಿದೆ.
ಕಳೆದ 2023 ರಿಂದ ಜೂನ್ 2026ರ ಅವಧಿಯಲ್ಲಿ ಬರೊಬ್ಬರಿ 160 ಕೋಟಿ ರೂಪಾಯಿ ಹಣವನ್ನು ಟಿಎಂಸಿ ಖಾತೆಯಿಂದ ಕೇರ್ವೆಲ್ ಏವಿಯೇಷನ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಗ್ರೂಪ್ಗೆ ವರ್ಗಾಯಿಸಲಾಗಿದೆ ಎಂದು ತನಿಖೆಯಲ್ಲಿ ಬಯಲಾಗಿರುವ ಬಗ್ಗೆ ಮೂಲಗಳು ತಿಳಿಸಿವೆ. ಅಲ್ಲದೆ ಈ ಏವಿಯೇಷನ್ ಕಂಪನಿಯಿಂದ 82.96 ಕೋಟಿ ರೂಪಾಯಿ ಹಣವನ್ನು ಇನ್ನೊಂದು ನೂತನವಾಗಿ ಆರಂಭವಾಗಿರುವ ಸಂಸ್ಥೆಗೆ ವರ್ಗಾಯಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಕೇಂದ್ರ ವಿತ್ತ ಸಚಿವಾಲಯದ ಭಾಗವಾಗಿರುವ ಸಂಸ್ಥೆಯೊಂದು ಅದು ಕೂಡ ರಾಜಕೀಯ ಪಕ್ಷವೊಂದರ ಆದಾಯ, ಖರ್ಚು ವೆಚ್ಚಗಳ ವಿಚಾರದಲ್ಲಿ ಇದೇ ಮೊದಲ ಬಾರಿಗೆ ದಾಳಿ ನಡೆಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇದನ್ನೂ ಓದಿ : Shapoor Zadran: ದೆಹಲಿಯಲ್ಲಿ ಅಫ್ಘಾನ್ ಮಾಜಿ ವೇಗಿ ಶಪೂರ್ ಝದ್ರಾನ್ ನಿಧ**
ಈ ದಾಳಿಯಲ್ಲಿ ಪತ್ತೆಯಾಗಿರುವ ಅಂಶಗಳ ಪ್ರಕಾರ, ದಾಳಿಗೊಳಗಾದ ಕಂಪನಿಯು 112 ಕೋಟಿ ರೂಪಾಯಿ ವೆಚ್ಚಗಳಲ್ಲಿ ಎಂಬ್ರೇಸರ್ ಲೆಗಸಿ 600 ವಿಮಾನ ಹಾಗೂ ಆಗಸ್ಟಾ 109 ಎಸ್ಪಿ ಹೆಲಿಕಾಪ್ಟರ್ ಖರೀದಿಯಲ್ಲಿ ಹೂಡಿಕೆ ಮಾಡಲಾಗಿದೆ. ಇದಲ್ಲದೆ ಹೀಗೆ ಖರೀದಿಸಿದ್ದ ಹೆಲಿಕಾಪ್ಟರ್, ವಿಮಾನವನ್ನು ಬಾಡಿಗೆ ಆಧಾರದಲ್ಲಿ ಇದೇ ಟಿಎಂಸಿ ಪಕ್ಷಕ್ಕೆ ನೀಡಲಾಗಿತ್ತು ಎಂಬ ಅಂಶ ಬಯಲಾಗಿದೆ. ಮುಖ್ಯವಾಗಿ ಪಕ್ಷದ ಖಾತೆಯಿಂದ ನಡೆದ ವಹಿವಾಟುಗಳು ಅನುಮಾನ ಹುಟ್ಟಿಸುವಂತಿದ್ದು, ನೈಜತೆಯನ್ನು ಮುಚ್ಚಿಡುವ ಉದ್ದೇಶವನ್ನು ಹೊಂದಿವೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೈಗೊಂಡಿರುವ ದಾಳಿ ಹಾಗೂ ತನಿಖೆಯು ಅಕ್ರಮ ಹಣ ವರ್ಗಾವಣೆ ಕಾಯ್ದೆ 2002ರ ಅನ್ವಯ ನಡೆದಿದೆ. ಅಲ್ಲದೆ ದೂರಿನ ಆಧಾರದ ಮೇಲೆಯೇ ಇಡಿ ದಾಳಿ ನಡೆದಿರುತ್ತದೆ. ಆದರೆ ಇದುವರೆಗೂ ದಾಳಿ ನಡೆದು ತನಿಖೆಯಲ್ಲಿ ಬಯಲಾದ ವಿಚಾರವೆಲ್ಲ ಪ್ರಾಥಮಿಕವಾಗಿ ಲಭ್ಯವಾಗಿರುವ ಮಾಹಿತಿಯಾಗಿದೆ. ಈ ಇಡೀ ದಾಳಿಯ ವಿಚಾರದಲ್ಲಿ ದೂರಿನ ಅಂಶಗಳೇನು ಎನ್ನುವುದು ಪ್ರಶ್ನೆಯಾಗಿದೆ.
ಕಳೆದ ಕೆಲ ದಿನಗಳಿಂದಲೂ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳೂ ಸಹ ಈ ದಾಳಿಯ ಭಾಗವಾಗಿರುವುದನ್ನು ಇಲ್ಲಿ ತಳ್ಳಿ ಹಾಕುವಂತಿಲ್ಲ. ತೃಣಮೂಲ ಕಾಂಗ್ರೆಸ್ ಅಧಿಪತ್ಯಕ್ಕೆ ಅಂತ್ಯ ಹಾಡುವ ಮೂಲಕ ಭರ್ಜರಿ ಬಹುಮತದಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಟಿಎಂಸಿಯನ್ನು ಗುರಿಯಾಗಿಸಲಾಗುತ್ತಿದೆ ಎಂಬ ಆರೋಪಗಳ ನಡುವೆ ಈ ದಾಳಿ ನಡೆದಿದೆ. ಹೀಗಾಗಿ ಟಿಎಂಸಿ ಹೋಳಾಗಿರುವ ಸನ್ನಿವೇಶದಲ್ಲಿ ನಡೆದಿರುವ ಈ ಸಮಯದಲಿ ನಡೆದಿರವು ಈ ದಾಳಿಯು ಹಲವು ರೀತಿಯ ಚರ್ಚೆಗಳಿಗೆ ನಾಂದಿ ಹಾಡಿದೆ.






