• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, July 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಬಿಟ್ ಕಾಯಿನ್ ಹಗರಣ : CBI ಅಥವಾ NIA ತನಿಖೆಗೆ ವಿಪಕ್ಷಗಳ ಆಗ್ರಹ

Shivakumar A by Shivakumar A
March 8, 2022
in ಕರ್ನಾಟಕ, ರಾಜಕೀಯ
0
ಬಿಟ್ ಕಾಯಿನ್ ಹಗರಣ : CBI ಅಥವಾ NIA ತನಿಖೆಗೆ ವಿಪಕ್ಷಗಳ ಆಗ್ರಹ
Share on WhatsAppShare on FacebookShare on Telegram

ರಾಜ್ಯ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದ ಬಿಟ್ ಕಾಯಿನ್ ಹಗರಣ (Bit Coin Scam) ಮತ್ತೆ ಮುನ್ನೆಲೆಗೆ ಬಂದಿದೆ. ರಾಜ್ಯದ ಗೃಹ ಮಂತ್ರಿಗಳಾದ ಆರಗ ಜ್ಞಾನೇಂದ್ರ (Araga Jnanendra) ಬಿಟ್ ಕಾಯಿನ್ ಹಗರಣದ ಕುರಿತು ವಿಧಾನ ಪರಿಷತ್ತಿನಲ್ಲಿ ನೀಡಿರುವ ಉತ್ತರದಿಂದ ಅಸಂತುಷ್ಟರಾಗಿರುವ ವಿಪಕ್ಷ ನಾಯಕರು, ಹಗರಣದ ಕುರಿತು ಸಿಬಿಐ ಅಥವಾ ಎನ್ಐಎ ತನಿಖೆಯಾಗಬೇಕು ಎಂದು ಪಟ್ಟು ಹಿಡಿದಿದ್ದಾರೆ.

ADVERTISEMENT

ಆಗಸ್ಟ್ 2016ರಲ್ಲಿ ಬಿಟ್ ಫೈನೆಕ್ಸ್ ಎಂಬ ಕ್ರಿಪ್ಟೋ ಕರೆನ್ಸಿಯನ್ನು 4.5 ಬಿಲಿಯನ್ ಡಾಲರ್ ಮೊತ್ತದ ಬಿಟ್ ಕಾಯಿನ್ ಗಳಾಗಿ ಪರಿವರ್ತಿಸಿರುವ ಕುರಿತು ಅಮೇರಿಕಾ ಮೂಲದ ಏಜೆನ್ಸಿ ತನಿಖೆ ನಡೆಸಿತ್ತು. ಈ ತನಿಖೆಯಲ್ಲಿ ಹಗರಣ ಹಾಗೂ ಭಾರತ/ಕರ್ನಾಟಕದ ನಡುವೆ ಯಾವುದೇ ಸಂಬಂಧವಿಲ್ಲವೆಂದು ಏಜೆನ್ಸಿ ತಿಳಿಸಿದೆ ಎಂದು ಆರಗ ಜ್ಞಾನೇಂದ್ರ ಸದನದಲ್ಲಿ ಹೇಳಿದರು.

“ಹಗರಣಕ್ಕೆ ಸಂಬಂಧಿಸಿ ಅಮೇರಿಕಾದ ಏಜೆನ್ಸಿ (america agency) ಇಬ್ಬರು ಅಮೇರಿಕನ್ ಪ್ರಜೆಗಳನ್ನು ಈಗಾಗಲೇ ಬಂಧಿಸಿದೆ. ಹ್ಯಾಕಿಂಗ್ ಮೂಲಕ ಪಡೆಯಲಾಗಿದ್ದ ಸಂಪೂರ್ಣ ಹಣವನ್ನು ಅವರು ಜಪ್ತಿಗೊಳಿಸಿದ್ದಾರೆ. ಆದರೆ, ಈ ಪ್ರಕರಣ ಹಾಗೂ ಭಾರತದ ನಡುವೆ ಯಾವುದೇ ಸಂಬಂಧ ಇರುವ ಕುರಿತು ಅವರಿಗೆ ಮಾಹಿತಿ ಲಭಿಸಿಲ್ಲ,” ಎಂದು ಜ್ಞಾನೇಂದ್ರ ಹೇಳಿದ್ದಾರೆ.

Also Read : ರಾಜ್ಯ ಬಿಜೆಪಿ ಸರ್ಕಾರಕ್ಕೆ ಸುನಾಮಿಯಂತೆ ಅಪ್ಪಳಿಸಲಿದೆಯೇ ʼಬಿಟ್‌ಕಾಯಿನ್‌ʼ ಹಗರಣ?

ಇದೇ ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿ (Srikrishna Ramesh alias Sriki) ಎಂಬ ಹ್ಯಾಕರ್ ನನ್ನು 2020 ನವೆಂಬರ್ ನಲ್ಲಿ ಬಂಧಿಸಿದ್ದರು. ಬಿಟ್ ಕಾಯಿನ್ ಬಳಸಿ ಡಾರ್ಕ್ ನೆಟ್’ನಿಂದ ಡ್ರಗ್ಸ್ ಖರೀದಿ ಹಾಗೂ ಬಿಟ್ ಕಾಯಿನ್ ಹ್ಯಾಕಿಂಗ್ ಮಾಡಿರುವ ಆರೋಪ ಶ್ರೀಕಿ ಮೇಲಿತ್ತು. ಕರ್ನಾಟಕ ಸರ್ಕಾರದ ವೆಬ್ಸೈಟ್ ಹಾಕಿ ಮಾಡಿ ಸುಮಾರು ರೂ.11.5 ಕೋಟಿ ಹಣ ದೋಚಿರುವ ಕುರಿತು ಹಾಗೂ ಬಿಟ್ ಫೈನೆಕ್ಸ್ ಕರೆನ್ಸಿ ಅದಲು ಬದಲು ಮಾಡಿರುವ ಕುರಿತಾಗಿ ಶ್ರೀಕಿ ತನಿಖೆ ವೇಳೆ ಬಾಯಿಬಿಟ್ಟಿದ್ದ.

ತನಿಖೆಯು ಹಳ್ಳ ಹಿಡಿಯುತ್ತಿರುವ ಕುರಿತು ಕಾಂಗ್ರೆಸ್ ಪರಿಷತ್ ಸದಸ್ಯ ಯು ಬಿ ವೆಂಕಟೇಶ್ ಅವರು ಸದನದಲ್ಲಿ ಪ್ರಸ್ತಾಪಿಸಿದ್ದರು. ಸರ್ಕಾರವು ತನಿಖೆಯಲ್ಲಿ ಪಾರದರ್ಶಕತೆಯನ್ನು ಕಾಪಾಡಿಲ್ಲ ಎಂದು ಆರೋಪಿಸಿದ್ದರು.

“ಹಣ ವರ್ಗಾವಣೆ ಮಾಡಲು ಭಾರತ ಮೂಲದ ಈಮೈಲ್ ಐಡಿಗಳನ್ನು ಬಳಸಲಾಗಿತ್ತು. ಭಾರತ ಮೂಲದ ಈಮೈಲ್ ಐಡಿಗಳನ್ನು ಬಳಸುವ ಅಗತ್ಯವೇನಿತ್ತು? ಈ ಹಾದಿಯಲ್ಲಿ ನೀವೇ ತನಿಖೆ ನಡೆಸ್ತೀರಾ? ಸಿಬಿಐ ಅಥವಾ ಎನ್ಐಎಗೆ ತನಿಖೆಯನ್ನು ವಹಿಸ್ತೀರಾ ಎಂಬ ಕುರಿತು ಸ್ಪಷ್ಟನೆ ನೀಡಿ,” ಎಂದು ವೆಂಕಟೇಶ್ ಹೇಳಿದ್ದಾರೆ.

ಇವರೊಂದಿಗೆ ದನಿಗೂಡಿಸಿದ ಕಾಂಗ್ರೆಸ್ ವಿಧಾನ ಪರಿಷತ್ ನಾಯಕ ಬಿ ಕೆ ಹರಿಪ್ರಸಾದ್, ಹಗರಣದಲ್ಲಿ ಹಲವು ವಿವಿಐಪಿಗಳ ಕೈವಾಡವೂ ಇದೆ. ಅವರೆಲ್ಲರ ಹೆಸರು ಹೊರಗೆ ಬರಬೇಕು. ಆ ಕಾರಣಕ್ಕಾಗಿ ಪಾರದರ್ಶಕ ತನಿಖೆಗೆ ಸರ್ಕಾರ ಆದೇಶ ನಿಡಬೇಕು. ಇದೊಂದು ಮಾಮೂಲಿ ಪ್ರಕರಣ ಅಲ್ಲ. ಹಗರಣದಲ್ಲಿ ಐಪಿಎಸ್ ಅಧಿಕಾರಿಗಳು, ರಾಜಕೀಯ ವ್ಯಕ್ತಿಗಳೂ ಇದ್ದಾರೆ. ಹಾಗಾಗಿ ಇದನ್ನು ಬೇರೆ ಏಜೆನ್ಸಿ ಮುಖಾಂತರವೇ ತನಿಖೆ ಮಾಡಬೇಕು, ಎಂದಿದ್ದಾರೆ.

Also Read : ಹ್ಯಾಕರ್ ಶ್ರೀಕಿ ಬಂಧನ : ಹೊಲ ಮೇಯ್ದ ಬೇಲಿಯ ರಕ್ಷಣೆಯ ತಂತ್ರವೇ?

ಈ ಪ್ರಕರಣದಲ್ಲಿ ಭ್ರಷ್ಟಾಚಾರ ನಡೆದಿರುವ ಕುರಿತು ವಿಪಕ್ಷಗಳು ಯಾವುದೇ ದಾಖಲೆಗಳನ್ನು ನೀಡಿದರೆ ಸರ್ಕಾರವು ಆ ದಾಖಲೆಗಳ ಆಧಾರದ ಮೇಲೆ ಉನ್ನತ ಮಟ್ಟದ ತನಿಖೆಯನ್ನು ನಡೆಸುತ್ತದೆ ಎಂದು ಗೃಹ ಸಚಿವರು ಹೇಳಿದ್ದಾರೆ.

“ಭಾರತೀಯ ಮೂಲದ ಈಮೈಲ್ ಐಡಿಗಳನ್ನು ಬಳಸಿರುವ ಕುರಿತು ದಾಖಲೆಗಳನ್ನು ನೀಡಿ. ನಾವು ತನಿಖೆ ನಡೆಸುತ್ತೇವೆ. ಈ ವಿಚಾರದ ಕುರಿತು ಕೂಲಂಕುಷವಾದ ಮಾಹಿತಿಯನ್ನು ಪಡೆದಿದ್ದೇನೆ. ಇದನ್ನು ದೊಡ್ಡ ವಿಚಾರವೆಂದು ಬಿಂಬಿಸಲಾಗುತ್ತಿದೆ. ಹಿರಿಯ ಅಧಿಕಾರಿಗಳ ಜೊತೆಯೂ ಮಾತನಾಡಿದ್ದೇನೆ. ಹಣ ಕಳೆದುಕೊಂಡವರು ಪ್ರಧಾನಿಯನ್ನು ಭೇಟಿಯಾಗಿದ್ದಾರೆ. ಆದರೆ, ಕೇಂದ್ರದಿಂದ ಈ ಕುರಿತಾಗಿ ಯಾವುದೇ ದಾಖಲೆಗಳನ್ನು ರಾಜ್ಯಕ್ಕೆ ನೀಡಿಲ್ಲ,” ಎಂದು ಅವರು ಹೇಳಿದರು.

Also Read : ಬಿಟ್ ಕಾಯಿನ್ ಹಗರಣ : ಶ್ರೀಕಿ ನಾಪತ್ತೆ ಕಥೆ ಹೇಳುತ್ತಿರುವುದೇನು?

ಈ ವೇಳೆ ಮಧ್ಯಪ್ರವೇಶಿಸಿದ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ, ಈ ಪ್ರಕರಣವನ್ನು ಸಿಬಿಐಗೆ ಏಕೆ ನೀಡುತ್ತಿಲ್ಲ? ಸರ್ಕಾರದ ಹಣವನ್ನೇ ದೋಚಿದ್ದರೂ ಮೀನಾಮೇಷ ಏಕೆ ಎಣಿಸುತ್ತಿದ್ದಾರೆ? ಸರ್ಕಾರದ ಈ ನಡೆ ಅನುಮಾನ ಹುಟ್ಟುಹಾಕುತ್ತಿದೆ. ಸಿಬಿಐ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿಗಳೇ ಘೋಷಿಸಲಿ, ಎಂದು ಅವರು ಆಗ್ರಹಿಸಿದರು.

Tags: america agencyAraga GnandraAraga JnanendraBit Coin ScameSrikrishna Ramesh alias Srikiಅಮೇರಿಕಾದ ಏಜೆನ್ಸಿಆರಗ ಜ್ಞಾನೇಂದ್ರಬಿಟ್ ಕಾಯಿನ್ ಹಗರಣಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿ
Previous Post

ಶಿವಮೊಗ್ಗ ಹರ್ಷ ಕೊಲೆ ಪ್ರಕರಣ : 10 ಆರೋಪಿಗಳ ವಿರುದ್ಧ UAPAʼಅಡಿ ಕೇಸ್‌ ದಾಖಲು

Next Post

2021-22 ಫ್ರೆಬ್ರವರಿ ವರೆಗೆ ರಾಜ್ಯದಲ್ಲಿ 5,860 ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲು!

Related Posts

ಕೃಷಿ ಇಲಾಖೆ ಮಿಂಚಿನ ಕಾರ್ಯಾಚರಣೆ: ಹಲವೆಡೆ ಅಕ್ರಮ ಬೀಜ ದಾಸ್ತಾನು ಜಪ್ತಿ
Top Story

ಕೃಷಿ ಇಲಾಖೆ ಮಿಂಚಿನ ಕಾರ್ಯಾಚರಣೆ: ಹಲವೆಡೆ ಅಕ್ರಮ ಬೀಜ ದಾಸ್ತಾನು ಜಪ್ತಿ

by ಪ್ರತಿಧ್ವನಿ
July 5, 2026
0

ಬೆಂಗಳೂರು: ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ನೇತೃತ್ವದ ಪ್ರತ್ಯೇಕ ತಂಡಗಳು ರಾಜ್ಯದ ಹಾಸನ ತುಮಕೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ವಿವಿಧ ರಸಗೊಬ್ಬರ ಮಾರಾಟ ಕೇಂದ್ರಗಳಿಗೆ ಭೇಟಿ...

Read moreDetails
ಬೆಳಗಾವಿಯಲ್ಲಿ RSS ಶಕ್ತಿ ಪ್ರದರ್ಶನ: ಪ್ರಿಯಾಂಕ್ ಖರ್ಗೆಗೆ ಪರೋಕ್ಷ ಟಾಂಟ್‌..?

ಬೆಳಗಾವಿಯಲ್ಲಿ RSS ಶಕ್ತಿ ಪ್ರದರ್ಶನ: ಪ್ರಿಯಾಂಕ್ ಖರ್ಗೆಗೆ ಪರೋಕ್ಷ ಟಾಂಟ್‌..?

July 5, 2026
Rain Damage

ಮಳೆಯ ಅವಾಂತರಕ್ಕೆ ಮನೆಯ ಮೇಲೆ ಬಿದ್ದ ಉರುಳಿಬಿದ್ದ ಬೃಹತ್‌ ಮರ : ಅಪಾರ ಹಾನಿ..!

July 5, 2026
ಪರಪ್ಪನ ಅಗ್ರಹಾರದಿಂದ 24 ಕೈದಿಗಳಿಗೆ ಬಿಡುಗಡೆ ಭಾಗ್ಯ..!

ಪರಪ್ಪನ ಅಗ್ರಹಾರದಿಂದ 24 ಕೈದಿಗಳಿಗೆ ಬಿಡುಗಡೆ ಭಾಗ್ಯ..!

July 5, 2026
Karnataka SIR: ಕಾಂಗ್ರೆಸ್‌ ಅಕ್ರಮ ಮತಗಳನ್ನು ಉಳಿಸಿಕೊಳ್ಳಲು ಹರಸಹಾಸ ಮಾಡ್ತಿದೆ: ಕುಮಾರಸ್ವಾಮಿ

Karnataka SIR: ಕಾಂಗ್ರೆಸ್‌ ಅಕ್ರಮ ಮತಗಳನ್ನು ಉಳಿಸಿಕೊಳ್ಳಲು ಹರಸಹಾಸ ಮಾಡ್ತಿದೆ: ಕುಮಾರಸ್ವಾಮಿ

July 5, 2026
Next Post
2021-22 ಫ್ರೆಬ್ರವರಿ ವರೆಗೆ ರಾಜ್ಯದಲ್ಲಿ 5,860 ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲು!

2021-22 ಫ್ರೆಬ್ರವರಿ ವರೆಗೆ ರಾಜ್ಯದಲ್ಲಿ 5,860 ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲು!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada