• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 2, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

2021-22 ಫ್ರೆಬ್ರವರಿ ವರೆಗೆ ರಾಜ್ಯದಲ್ಲಿ 5,860 ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲು!

ಪ್ರತಿಧ್ವನಿ by ಪ್ರತಿಧ್ವನಿ
March 8, 2022
in ಕರ್ನಾಟಕ
0
2021-22 ಫ್ರೆಬ್ರವರಿ ವರೆಗೆ ರಾಜ್ಯದಲ್ಲಿ 5,860 ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲು!
Share on WhatsAppShare on FacebookShare on Telegram

ಮಹಿಳೆಯರ ಮೇಲಿನ ದೌರ್ಜನ್ಯ, ಶೋಷಣೆ (Violence against women) ದಿನಕಳೆದಂತೆ ಜಾಸ್ತಿಯಾಗುತ್ತಲೇ ಇದೆ. ಗಂಡಿನ ಅಹಂಗೆ ಮಹಿಳೆಯರ ಜೊತೆಗೆ ಮಕ್ಕಳು ಸಹ ಬಲಿಯಾಗುತ್ತಿದ್ದಾರೆ. ಹೀಗಾಗಿ ಮಹಿಳೆಯರಿಗೆ ಮಕ್ಕಳಿಗೆ ನೈತಿಕ (Women and Childrens) ಹಾಗೂ ಕಾನೂನಾತ್ಮಕ ನೆರವು ನೀಡಲು ಪೊಲೀಸ್ ಇಲಾಖೆ ಈಗ ಒಂದು ಹೆಜ್ಜೆ ಮುಂದಿಟ್ಟಿದೆ.

ADVERTISEMENT

ಜಗತ್ತು ಆಧುನಿಕತೆಗೆ ಎಷ್ಟೇ ತೆರೆದುಕೊಂಡರೂ ಮಹಿಳೆಯರು ಇಂದಿಗೂ ಹಲವು ರೀತಿಯಲ್ಲಿ ತುಳಿತಕ್ಕೆ ಒಳಗಾಗುತ್ತಿದ್ದಾರೆ. ಹೆಣ್ಣಿನ ಮೇಲಿನ ಶೋಷಣೆ, ದೌರ್ಜನ್ಯ ಹಿಂದತೆ ಇಂದಿಗೂ ಮುಂದುವರಿದು ಕೊಂಡು ಬಂದಿದೆ. ಈ ಹಿನ್ನಲೆ ಸೇವ್ ಸಿಟಿ ಪ್ಲಾನ್ ಅಡಿಯಲ್ಲಿ ಬೆಂಗಳೂರಿನಲ್ಲಿ ಈಗ ಮೊಟ್ಟ ಮೊದಲ ಭಾರಿಗೆ ನಿರ್ಭಯ ಕೇಂದ್ರ – ಸಖಿ ಒನ್ ಸ್ಟಾಪ್ ಸೆಂಟರ್ ಆರಂಭಗೊಂಡಿದೆ. ಮಹಿಳೆಯರು ಮತ್ತು ಮಕ್ಕಳಿಗಾಗಿ ನಿರ್ಭಯ ಕೇಂದ್ರ-ಸಖಿ ಒನ್ ಸ್ಟಾಪ್ ಸೆಂಟರ್ ಬೆಂಗಳೂರಿನ ಮೆಜೆಸ್ಟಿಕ್ ನ ಬಿಎಂಟಿಸಿ ಏರ್ಪೋರ್ಟ್ ಬಸ್ ಕೌಂಟರ್ ಬಳಿ ಆರಂಭವಾಗಿದೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ಕಾನೂನು ಸಲಹೆ, ವೈದ್ಯಕೀಯ ಚಿಕಿತ್ಸೆ, ಪೊಲೀಸ್ ನೆರವು, ಆಪ್ತ ಸಮಾಲೋಚನೆ, ತಾತ್ಕಾಲಿಕ ಆಶ್ರಯ, ರಕ್ಷಣೆಯನ್ನು ಈ ಕೇಂದ್ರದ ಮೂಲಕವೇ ನೀಡಲಾಗುತ್ತದೆ.

ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯ ಪ್ರಕರಣ ನಡೆದ ಬಳಿಕ ನಮ್ಮ ರಾಜ್ಯ ಸರ್ಕಾರದ ವತಿಯಿಂದ ಮಹಿಳೆಯರ ರಕ್ಷಣೆಗೆ ಗೆಳತಿ ಕೇಂದ್ರ ಆರಂಭಿಸಲಾಗಿತ್ತು. ಬಳಿಕ ಕೇಂದ್ರ ಸರ್ಕಾರದ ವತಿಯಿಂದ ಮಹಿಳೆಯರ ರಕ್ಷಣೆಗೆ ಎಲ್ಲಾ ರಾಜ್ಯದಲ್ಲಿ ಸಖಿ ಯೋಜನೆ ಪರಿಚಯಿಸಿತು. ಅದಾದ ಮೇಲೆ ಸಖಿ ಒನ್ ಸ್ಟಾಪ್ ಸೆಂಟರ್ ಆರಂಭವಾಯಿತು. ಆದರೆ ಈಗ ಸೇವ್ ಸಿಟಿ ಪ್ಲಾನ್ ಅಡಿಯಲ್ಲಿ ಪೊಲೀಸ್ ಇಲಾಖೆ ಹಾಗೂ ಸಖಿ ಒನ್ ಸ್ಟಾಪ್ ಸೆಂಟರ್ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ನಿರ್ಭಯ ಕೇಂದ್ರ-ಸಖಿ ಒನ್ ಸ್ಟಾಪ್ ಸೆಂಟರ್ ಆರಂಭಗೊಂಡಿದೆ.

ಸಖಿ ಒನ್ ಸ್ಟಾಪ್ ಸೆಂಟರ್ ಉದ್ದೇಶವೇನು.!?

  • ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ಕಾನೂನು ಸಲಹೆ, ವೈದ್ಯಕೀಯ ಚಿಕಿತ್ಸೆ, ಪೊಲೀಸ್ ನೆರವು, ಆಪ್ತ ಸಮಾಲೋಚನೆ, ತಾತ್ಕಾಲಿಕ ಆಶ್ರಯ
  • 24 ಗಂಟೆಗಳ ಕಾಲ ಉಚಿತ ಸೌಲಭ್ಯ
  • FIR ದಾಖಲಿಸಿ ಪ್ರಕರಣ ಪೊಲೀಸ್ ಠಾಣೆಗೆ ವರ್ಗಾವಣೆ
  • ಸರ್ಕಾರದಿಂದ ಗುರುತಿಸಲ್ಪಟ್ಟ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಆಶ್ರಯ

ಇಲ್ಲಿ ಮಹಿಳೆಯರು, ಮಕ್ಕಳು ತಮ್ಮ ಯಾವುದೇ ಸಮಸ್ಯೆಯನ್ನು ಮುಕ್ತವಾಗಿ ಹೇಳಿಕೊಳ್ಳಬಹುದು. ಒಂದು ವೇಳೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದರೆ ಈ ಕೇಂದ್ರದಿಂದ ನೇರವಾಗಿ ಕೋರ್ಟ್ ಗೆ ವೀಡಿಯೋ ಕಾಲ್ ಅಲ್ಲಿ ವಿಚಾರಣೆ ನಡೆಸುವ ಅವಕಾಶವಿದೆ. ಮಕ್ಕಳು ಕೆಲವೊಮ್ಮೆ ಸ್ಟೇಶನ್ನಲ್ಲಿ ಮಾತನಾಡೋದಕ್ಕೆ ಕೂಡ ಭಯ ಪಡುವಂತಹ ಸನ್ನಿವೇಶ ಇರುತ್ತೆ. ಅಂತಹ ಸಂದರ್ಭದಲ್ಲಿ ಈ ಸೆಂಟರ್ ಅಲ್ಲಿ ಆ ಮಕ್ಕಳು ಮನಸಿನ ಮಾತನ್ನು ಮುಕ್ತವಾಗಿ ಹೇಳುವ ಅವಕಾಶವಿದೆ. ಜೊತೆಗೆ ಕೆಲವೊಂದು ಸಂದರ್ಭದಲ್ಲಿ ಸಂತ್ರಸ್ತರು ಉಳಿದು ಕೊಳ್ಳಲು ಸ್ಥಳ ಇಲ್ಲದಿದ್ದಾಗ ಈ ನಿರ್ಭಯ ಕೇಂದ್ರದಲ್ಲಿ 5 ದಿನಗಳ ವರೆಗೆ ಉಳಿದುಕೊಳ್ಳುವ ಅವಕಾಶವಿದೆ. 5 ದಿನ ಆದ ಮೇಲೆ ಸ್ವಧಾರ್ ಗೃಹ್ ಯೋಜನೆಯ ಅಡಿಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕೂಡ ಮಾಡಲಾಗುತ್ತದೆ.

ರಾಜಧಾನಿಯಲ್ಲಿ ಪ್ರತಿ ನಿತ್ಯ 5 ರಿಂದ 6 ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿದೆ. ರಾಜ್ಯದಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್ನಲ್ಲಿ ಈವರೆಗೆ ಇದೇ ರೀತಿ ಸಾವಿರಾರು ಸಂಖ್ಯೆಯಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ನಮೂದಾಗಿದೆ. 2021-22 ಫೆಬ್ರವರಿ ವರೆಗೆ ರಾಜ್ಯದ ಸಖಿ ಒನ್ ಸ್ಟಾಪ್ ನಲ್ಲಿ 5860 ಮಹಿಳಾ ದೌರ್ಜನ್ಯ ಕೇಸ್ ದಾಖಲಾಗಿದೆ. ಈ ಪೈಕಿ ರಾಜ್ಯದ ರಾಜಧಾನಿಯಲ್ಲಿ 800 ರಕ್ಕೂ ಅಧಿಕ ದೌರ್ಜನ್ಯ ಕೇಸ್ ಗಳು ದಾಖಲಾಗಿವೆ. ಈ 5860 ಪ್ರಕರಣಗಳಲ್ಲಿ ಸ್ವಯಂ ರಕ್ಷಣೆಗಾಗಿ ಮತ್ತು ದೌರ್ಜನ್ಯದ ಬಗ್ಗೆ ದಾಖಲಾದ ಕೇಸುಗಳೇ ಹೆಚ್ಚು. ಇದರ ಹೊರತಾಗಿ ಅತ್ಯಚಾರ, ಕೌಟುಂಬಿಕ ಹಿಂಸೆ, ಲೈಂಗಿಕ ಕಿರುಕುಳ, ಆಸಿಡ್ ದಾಳಿ, ಸಂತಾನೋತ್ಪತ್ತಿ ದಬ್ಬಾಳಿಕೆ, ಹೆಣ್ಣು ಶಿಶುಹತ್ಯೆ, ಪ್ರಸವಪೂರ್ವ ಲೈಂಗಿಕ ಆಯ್ಕೆ ಹಾಗೂ ಅಪಹರಣ ಮತ್ತು ಬಲವಂತದ ಮದುವೆ ಇತ್ಯಾದಿ ಪ್ರಕರಣಗಳೂ ಇವೆ. ಒಟ್ಟಾರೆಯಾಗಿ ಮಹಿಳೆಯರು ಮತ್ತು ಮಕ್ಕಳು ಮುಕ್ತವಾಗಿ ತಮ್ಮ ಸಮಸ್ಯೆ ಹೇಳಿಕೊಂಡು ಆ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಲು ಈ ನಿರ್ಭಯ ಕೇಂದ್ರ-ಸಖಿ ಒನ್ ಸ್ಟಾಪ್ ಸೆಂಟರ್ ಪೂರಕವಾಗಿದೆ ಎನ್ನವುದರಲ್ಲಿ ಯಾವುದೇ ಅನುಮಾನವಿಲ್ಲ.

Tags: Covid 19Violence against womenWomen and Childrensಕರೋನಾದೌರ್ಜನ್ಯನಿರ್ಭಯ ಕೇಂದ್ರ - ಸಖಿ ಒನ್ ಸ್ಟಾಪ್ ಸೆಂಟರ್ಬಿಜೆಪಿಮಹಿಳೆಯರಿಗೆ ಮಕ್ಕಳಿಗೆಶೋಷಣೆ
Previous Post

ಬಿಟ್ ಕಾಯಿನ್ ಹಗರಣ : CBI ಅಥವಾ NIA ತನಿಖೆಗೆ ವಿಪಕ್ಷಗಳ ಆಗ್ರಹ

Next Post

ರಸ್ತೆ ಕಾಮಗಾರಿಗಾಗಿ ಹಳೇಬೀಡಿನ ಐತಿಹಾಸಿಕ ಕೋಟೆ ಬಲಿ!

Related Posts

ಡಿ.ಕೆ. ಶಿವಕುಮಾರ್ ಮನೆಗೆ ಲಕ್ಷ್ಮಿ ಆಗಮನ: ಅಜ್ಜನಾದ ಡಿಕೆಶಿ, ಸಂಭ್ರಮದ ಕ್ಷಣ ವೈರಲ್   
ಕರ್ನಾಟಕ

ಮೊದಲ ದಿನವೇ ಕೆಡಿ ಭರ್ಜರಿ ಓಪನಿಂಗ್:  ಮೊದಲ‌ ದಿನದ ಕಲೆಕ್ಷನ್ ಎಷ್ಟು ?

by ಪ್ರತಿಧ್ವನಿ
May 1, 2026
0

ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಕೆಡಿ ಚಿತ್ರ ಏಪ್ರಿಲ್ 30ರಂದು ಭರ್ಜರಿಯಾಗಿ ಬಿಡುಗಡೆಯಾಗಿ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಸುಮಾರು 400ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ...

Read moreDetails
ಡಿ.ಕೆ. ಶಿವಕುಮಾರ್ ಮನೆಗೆ ಲಕ್ಷ್ಮಿ ಆಗಮನ: ಅಜ್ಜನಾದ ಡಿಕೆಶಿ, ಸಂಭ್ರಮದ ಕ್ಷಣ ವೈರಲ್   

ಡಿ.ಕೆ. ಶಿವಕುಮಾರ್ ಮನೆಗೆ ಲಕ್ಷ್ಮಿ ಆಗಮನ: ಅಜ್ಜನಾದ ಡಿಕೆಶಿ, ಸಂಭ್ರಮದ ಕ್ಷಣ ವೈರಲ್  

May 1, 2026
ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?

ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?

May 1, 2026
ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

May 1, 2026
ದೇಶದ ತಂತ್ರಜ್ಞಾನ, ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ : ಸಚಿವ ಪ್ರಿಯಾಂಕ್‌ ಖರ್ಗೆ..

ದೇಶದ ತಂತ್ರಜ್ಞಾನ, ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ : ಸಚಿವ ಪ್ರಿಯಾಂಕ್‌ ಖರ್ಗೆ..

May 1, 2026
Next Post
ರಸ್ತೆ ಕಾಮಗಾರಿಗಾಗಿ ಹಳೇಬೀಡಿನ ಐತಿಹಾಸಿಕ ಕೋಟೆ ಬಲಿ!

ರಸ್ತೆ ಕಾಮಗಾರಿಗಾಗಿ ಹಳೇಬೀಡಿನ ಐತಿಹಾಸಿಕ ಕೋಟೆ ಬಲಿ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada