ರಮೇಶ್ ಜಾರಕಿಹೊಳಿ ಅತ್ಯಾಚಾರ ಪ್ರಕರಣ ಹಿನ್ನೆಲೆ, ಜಾರಕಿಹೊಳಿ ದಾಖಲಿಸಿದ ಬ್ಲ್ಯಾಕ್ ಮೇಲ್ ಪ್ರಕರಣದ ವಿಚಾರಣೆಗೆ ತಮ್ಮ ರಿಟ್ ಮನವಿ ಇತ್ಯಾರ್ಥವಾಗುವವರೆಗೆ ಮಧ್ಯಂತರ ತಡೆ ನೀಡಬೇಕು ಎಂದು ಕೋರಿ ಸಂತ್ರಸ್ತೆ ಯುವತಿ ಸಲ್ಲಿಸಿದ್ದ ಮನವಿ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟ್ ಜಾರಕಿಹೊಳಿ ಮತ್ತು ವಿಶೇಷ ತನಿಖಾ ದಳಕ್ಕೆ (ಎಸ್ಐಟಿ) ಗೆ ನೋಟಿಸ್ ಜಾರಿ ಮಾಡಿ ಉತ್ತರಿಸುವಂತೆ ಹೇಳಿದಿದೆ.
ಮಧ್ಯಾಂತರ ಕೋರಿಕೆಗೆ ಯುವತಿ ನೀಡಿದ ಆಧಾರಗಳು
ಸದಾಶಿವನಗರದಲ್ಲಿ ಜಾರಕಿಹೊಳಿ ಆಪ್ತರು ದಾಖಲಿಸಿರುವ ಬ್ಲ್ಯಾಕ್ ಮೇಲ್ ಪ್ರಕರಣವನ್ನು ಕಾನೂನಿನ ವೇದಿಕೆಯಾಗಿ ಬಳಿಸಿಕೊಂಡು ತಾನು ದಾಖಲಿಸಿರುವ ಅತ್ಯಾಚಾರ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ಮಾಡಲಾಗುತ್ತಿದೆ ಎಂದು ದೂರಲಾಗಿದೆ.
ಜಾರಕಿಹೊಳಿ ಅವರ ಒತ್ತಡಕ್ಕೆ ಸಿಲುಕಿದ ರಾಜ್ಯ ಸರ್ಕಾರವು ಅವರ ಹಿತಾಸಕ್ತಿ ಕಾಯುವುದಕ್ಕಾಗಿ ನನ್ನನ್ನು ತಪ್ಪಿತಸ್ಥೆಯಾಗಿಸುವುದರ ಜೊತೆಗೆ ಜಾರಕಿಹೊಳಿ ಅವರನ್ನು ಪ್ರಕರಣದಿಂದ ಪಾರು ಮಾಡಲು ಯತ್ನಿಸಲಾಗುತ್ತಿದೆ. ಇದರಿಂದ ನಾನು ಮಧ್ಯಂತರ ತಡೆ ನೀಡಬೇಕು ಎಂದು ಕೋರಿದ್ದೇನೆ ಎಂದು ಸಂತ್ರಸ್ತೆ ರಿಟ್ ಮನವಿಯಲ್ಲಿ ವಿವರಿಸಿದ್ದಾರೆ.
ಮಾರ್ಚ್ 13 ರಂದು ಸಂತ್ರಸ್ತೆ ಪರ ವಕೀಲ ದಿನೇಶ್ ಕಲ್ಲಹಳ್ಳಿ ಅವರು ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು, ಇದಕ್ಕೆ ಆಕ್ಷೇಪ ಅರ್ಹವಾಗಿ ಜಾರಕಿಹೊಳಿ ಆಪ್ತರಿಂದ ದೂರು ದಾಖಲಾಗಿದೆ. ಇದು ಪ್ರತಿ ದೂರಿನ ಯತ್ನವಾಗಿದೆ. ಹಾಗಾಗಿ ಇದು ವಜಾಗೊಳಿಸಲು ಅರ್ಹ ಎಂದು ಸಂತ್ರಸ್ಥೆ ದೂರಿನಲ್ಲಿ ದಾಖಲಿಸಿದ್ದಾಳೆ.

ಮಾಧ್ಯಮಗಳಲ್ಲಿ ಸೆಕ್ಸ್ ಸಿಡಿ ಪ್ರಸಾರವಾದರು ಮೇಲ್ನೋಟಕ್ಕೆ ಅವು ಗುರುತರವಾಗಿವೆ ಎಂಬುದನ್ನು ಪೊಲೀಸರು ಪರಿಗಣಿಸಿಲ್ಲ ಇದು ರಮೇಶ್ ಜಾರಕಿಹೊಳಿಯನ್ನು ರಕ್ಷಿಸುವ ಉದ್ದೇಶ ಎನ್ನಲಾಗಿದೆ. ಬ್ಲ್ಯಾಕ್ ಮೇಲ್ ಪ್ರಕರಣವನ್ನು ಮುಂದಿಟ್ಟುಕೊಂಡು ನಾನು ಸಲ್ಲಿಸಿದ ಅತ್ಯಾಚಾರದ ದೂರನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಸಲಾಗುತ್ತಿದೆ.

ಅತ್ಯಾಚಾರ ದೂರಿನ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿಗೆ ಕ್ಲೀನ್ ಚಿಟ್ ಪಡೆದುಕೊಳ್ಳಲು ಅನುಕೂಲವಾಗಲೆಂದು ಕ್ರೈಂ ನಂ. 21 /2021 ನ್ನು ನಮೂದಿಸಲಾಗಿದೆ ಎಂದು ಸಂತ್ರಸ್ತೆ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ ಎಸ್ಐಟಿಯ ಬದ್ಧತೆ ಮತ್ತು ತನಿಖೆಯ ವೈಖರಿಯ್ನನು ಸಂತ್ರಸ್ಥೆ ಅರ್ಜಿಯ್ಲಲಿ ಪ್ರಶ್ನಿಸಿದ್ದಾರೆ.
ಸೋಮುವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ಸುನಿಲ್ ದತ್ತ ಯಾದವ್ ಅವರಿದ್ದ ಏಕಸದಸ್ಯ ಪೀಠವು ಎಸ್ಐಟಿಗೆ ಹಾಗು ರಮೇಶ್ ಜಾರಕಿಹೊಳಿಗೆ ತುರ್ತು ಹಾಜರಾಗಲು ಆದೇಶಿಸಿ ನೋಟೀಸ್ ನೀಡಿ, ವಿಚಾರಣೆಯನ್ನು ಜೂನ್ 21ಕ್ಕೆ ಮುಂದೂಡಿದೆ.






