ಜಾತಿ ಗಣತಿ (Caste census) ವಿಚಾರದಲ್ಲಿ ಲಿಂಗಾಯತ ಹಾಗೂ ಒಕ್ಕಲಿಗರ ಎರಡು ಸಮುದಾಯದ ಪ್ರಶ್ನೆ ಮಾತ್ರವಲ್ಲ.ಬಹುತೇಕರಿಗೆ ಇದರಿಂದ ತೊಂದರೆ ಆಗಿದೆ.ಈ ವರದಿ ಸುಮಾರು ಹತ್ತು ವರ್ಷಗಳ ಹಿಂದಿನ ವರದಿಯಾಗಿದೆ.ಹೀಗಾಗಿ ಇನ್ನೊಮ್ಮೆ ಜಾತಿ ಸಮೀಕ್ಷೆ ಮಾಡುವುದು ಸೂಕ್ತ ಎಂದು ದಾವಣಗೆರೆಯಲ್ಲಿ ಸಾಣಿಹಳ್ಳಿ ಮಠದ ಡಾ. ಪಂಡಿತಾರಾಧ್ಯ ಸ್ವಾಮೀಜಿ ಹೇಳಿದ್ದಾರೆ.

ಈಗಾಗಲೇ ಬಹುತೇಕ ಕಡೆಯಿಂದ ಈ ವರದಿ ಬಗ್ಗೆ ವಿರೋಧ ವ್ಯಕ್ತವಾಗಿದೆ.ಈ ಜಾತಿಯ ವರದಿಯಲ್ಲಿ ಲಿಂಗಾಯತ ಸಂಖ್ಯೆಯೇ ಕಡಿಮೆ ಇದೆ.ಇನ್ನೊಂದು ವರ್ಗದ ಸಂಖ್ಯೆ ಹೆಚ್ಚಿಗೆ ಇದೆ.ಹೀಗಾಗಿ ಸರ್ಕಾರಕ್ಕೆ ಸಲಹೆ ಕೊಡಿತ್ತೇವೆ.ಹತ್ತು ವರ್ಷದ ಹಿಂದಿನ ವರದಿ ಜಾರಿ ಮಾಡುವುದು ಬೇಡ.ಇನ್ನೊಮ್ಮೆ ವೈಜ್ಞಾನಿಕ ವರದಿ ಆಗಲಿ ಎಂದಿದ್ದಾರೆ.

ಇದೆಲ್ಲಕ್ಕಿಂತ ಮೇಲಾಗಿ ಈ ಜಾತಿ ವರದಿಗೆ ಸ್ವತಃ ಆಡಳಿತ ಪಕ್ಷದ ಸಚಿವ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ.ನಮ್ಮ ನಿರೀಕ್ಷೆಯಂತೆ ಈ ವರದಿ ರಾಜ್ಯ ಸರ್ಕಾರ ಬಿಡುಗಡೆ ಮಾಡಲ್ಲ ಎಂದ ಸಾಣಿಹಳ್ಳಿ ಶ್ರೀಗಳು ಹೇಳಿದ್ದಾರೆ.