ಡಿಸಿಎಂ ಡಿಕೆ ಶಿವಕುಮಾರ್ (Dk Shivakumar) ಮೊನ್ನೆ ಕಾಂಗ್ರೆಸ್ ಪಕ್ಷದ ಹೋರಾಟದಲ್ಲಿ ಮಾತನಾಡುವ ವೇಳೆ ಚಂಗಲು ಪದಬಳಕೆ ಮಾಡಿದ್ದು ಈ ಕುರಿತು ಶಾಸಕ ಮುನಿರತ್ನ (Muniratna) ಪ್ರತಿಕ್ರಿಯಿಸಿದ್ದಾರೆ. ನಮ್ಮ ರಾಜ್ಯದ ಡಿಸಿಎಂ ಡಿ.ಕೆ ಶಿವಕುಮಾರ್ ಅವನು ಯಾವನೋ ಒಬ್ಬ ಚಂಗ್ಲು ಎಂಬ ಪದಬಳಕೆಯನ್ನು ಎಂದು ಡಿ.ಕೆ ಶಿವಕುಮಾರ್ ಮಾಡಿದ್ದಾರೆ.ನಾನು ವರ್ಡ್ ಬ್ಯಾಂಕ್ ಹೆಸರಿನಲ್ಲಿ ಸಾಲ ತಂದು ಇವರ ಲಾಭಕ್ಕಾಗಿ ರಾಜಕಾಲುವೆಗಾಗಿ ಭ್ರಷ್ಟಾಚಾರ ನಡೆದಿದೆ ಎಂದು ರಾಜ್ಯಪಾಲರಿಗೆ ದೂರು ಕೊಟ್ಟಿದ್ದೇನೆ ಎಂದಿದ್ದಾರೆ.

ಈ ಬಗ್ಗೆ ಮಾತನಾಡಬೇಕಿದ್ದರೆ,ಶಾಸಕ ಕೊಟ್ಟಿರುವ ದೂರು ಸತ್ಯಕ್ಕೆ ದೂರವಾಗಿದೆ ಎಂದು ಹೇಳಬೇಕು.ಆದರೆ ಡಿ.ಕೆ ಶಿವಕುಮಾರ್ ನನ್ನ ಮೇಲೆ ಚಂಗ್ಲು ಎಂಬ ಪದಬಳಕೆ ಮಾಡಿದ್ದಾರೆ.ಅದು ಸರಿಯಲ್ಲ.ನಾನು ಕೊಟ್ಟಿರುವ ದೂರಿಗೆ ನಾನು ಈಗಲೂ ಬದ್ಧವಾಗಿದ್ದೇನೆ ಎಂದು ಶಾಸಕ ಮುನಿರತ್ನ ಹೇಳಿದ್ದಾರೆ. ಇನ್ನು ನಿಮಗೆ ಚಂಗ್ಲು ಎನ್ನುವ ಪದದ ಅರ್ಥ ಏನು ಗೊತ್ತಾ..? ಕಾಂಗ್ರೆಸ್ ಪಕ್ಷ ಬಿಟ್ಟ ಮೇಲೆ ನಾನು ಸರಿಯಾಗಿ ಇದ್ದೇನೆ.ನಿಜವಾದ ಚಂಗಲು ಎಂದರೆ ಅದು ಡಿಕೆ ಶಿವಕುಮಾರ್ ಅವರು ಎಂದು ಮುನಿರತ್ನ ವಾಗ್ದಾಳಿ ನಡೆಸಿದ್ದಾರೆ.

ಡಿಕೆ ಶಿವಕುಮಾರ್ ಕಾಂಗ್ರೆಸ್ ನಲ್ಲಿ ಇದ್ದು ಅಮಿತ್ ಶಾರನ್ನ ಭೇಟಿ ಮಾಡೋದು. ಪ್ರಯಾಗರಾಜ್ ಹೋಗೋದು ಗಂಗಾ ನದಿಯಲ್ಲಿ ಮುಳುಗುವುದು.ಪಿಎಂ ಬಂದಾಗ ಡಿಸಿಎಂ ಕೆಲಸ ಸ್ವಾಗತ ಮಾಡೋದು.ಇವರು ಕಾರ್ಯಕರ್ತರ ರೀತಿಯಲ್ಲಿ ಪಿಎಂ ಬಂದಾಗ ಲೈನ್ ನಲ್ಲಿ ನಿಂತಿರುತ್ತಾರೆ. ಹೀಗೆ ಥಟ್ ಅಂತ ಬದಲಾವಣೆ ಆಗುವವರಿಗೆ ಚಂಗ್ಲು ಅಂತ ಪದ ಪ್ರಯೋಗ ಮಾಡ್ತಾರೆ.ಹೀಗಾಗಿ ಆ ಚಂಗಲು ನೀವೇ ಎಂದಿದ್ದಾರೆ.