ರಾಜ್ಯದಲ್ಲಿ ಸಿಇಟಿ (CET) ಬರೆಯಲು ಬಂದ ವಿದ್ಯಾರ್ಥಿಗೆ ಜನಿವಾರ ಹಾಕಿದ್ದ ಕಾರಣಕ್ಕೆ ಪರೀಕ್ಷೆ ಬರೆಯಲು ಅವಕಾಶ ನೀಡದ ವಿಚಾರಕ್ಕೆ ಸಂಬಂಧಪಟ್ಟಂತೆಮಾಜಿ ಸಂಸದ ಪ್ರತಾಪ್ ಸಿಂಹ (Prathap simha) ಮಾತನಾಡಿದ್ದಾರೆ.ಪರೀಕ್ಷಾ ಸಿಬ್ಬಂದಿ,ಜನಿವಾರವೇ ಒಂದು ಸಮಸ್ಯೆ ಅಂತ ಕಂಡು ಜನಿವಾರ ತೆಗೆಸಿದ್ದಾರೆ.ನಾನು ಸಿದ್ದರಾಮಯ್ಯಗೆ (Siddaramaiah) ಪ್ರಶ್ನೆ ಮಾಡ್ತೀನಿ.ಹಿಂದೂಗಳ ಶೃದ್ಧೆ ಮೇಲೆ ಹೊಡೆತ ಕೊಟ್ರು,ಯಾಕೆ ಸಿದ್ದರಾಮಯ್ಯ ಸುಮ್ಮನೆ ಇದೀರಾ..? ಎಂದಿದ್ದಾರೆ.

ಇದು ಹಿಂದೂಗಳ ಮೇಲೆ ಮಾಡ್ತೀರುವ ಆಕ್ರಮಣ.ಜನಿವಾರ ತೆಗೆಸಿದ್ದು ಹಿಂದೂಗಳ ಮೇಲೆ ಆಕ್ರಮಣ ಮಾಡಿದಂತೆಯೇ.ಬ್ರಾಹ್ಮಣರು ಒಟ್ಟಾಗಿ ಪ್ರತಿಭಟನೆ ಮಾಡಲ್ಲ ಎಂಬ ಮನಸ್ಥಿತಿ ಸಿದ್ದರಾಮಯ್ಯಗೆ ಇದೆ. ಹೀಗಾಗಿ ಈ ರೀತಿ ನಡೆಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇನ್ನು ಸೆಕ್ಯುರಿಟಿ ವಿಚಾರ ಇಟ್ಟುಕೊಂಡು ವಿದ್ಯಾರ್ಥಿಗಳು ಹಾಕಿದ್ದ ಜನಿವಾರ ತೆಗೆಸಿ, ಕಸದ ಬುಟ್ಟಿಗೆ ಹಾಕುವ ಕೆಲಸ ಮಾಡಿದ್ದಾರೆ.ಈ ಘಟನೆಯನ್ನ ನಾನು ಖಂಡಿಸ್ತೇನೆ.ಈ ಕುರಿತು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು.

ಸೌಮ್ಯ ಸ್ವಭಾವದ ಬ್ರಾಹ್ಮಣ ಸಮಾಜದ ಸರಳತೆಯನ್ನ ಅಧಿಕಾರಿಗಳು ಈ ರೀತಿ ನಡೆಸಿಕೊಂಡಿದ್ದು ತಪ್ಪು. ಹಿಂದೂ ಧರ್ಮದ ಮೇಲೆ ಪ್ರಹಾರ ಆಗ್ತಿದೆ.ಹೀಗಾಗಿ ಕೇವಲ FIR ಸಾಕಾಗಲ್ಲ.ಈ ಕುರಿತು ಬರುವ ದಿನದಲ್ಲಿ ಎಚ್ಚರಿಕೆ ಕ್ರಮ ಆಗಬೇಕು.ಹಿಂದೆ ಈ ರೀತಿ ಆಗ್ತಿರಲಿಲ್ಲ, ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಸರ್ಕಾರದ ಶಹಬಾಸ್ ಗಿರಿ ಪಡೆಯಲು ಅಧಿಕಾರಿಗಳು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.