ಬಿಜೆಪಿ ಹೈಕಮಾಂಡ್ ಆದೇಶದ ಮೇರೆಗೆ ಇತ್ತೀಚೆಗೆ ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ ಬೆನ್ನಲ್ಲೇ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಮಾಜಿ ಸಿಎಂ ಎಸ್.ಆರ್ ಬೊಮ್ಮಾಯಿ (S.R Bommai) ಪುತ್ರ ಬಸವರಾಜ್ ಬೊಮ್ಮಾಯಿ (Basavaraj Bommai) ಪ್ರಮಾಣವಚನ ಸ್ವೀಕರಿಸಿದ್ದಾರೆ. ಹಲವು ಮಹತ್ತರ ರಾಜಕೀಯ ಬೆಳವಣಿಗೆಗಳ ನಡುವೆಯೂ ರಾಷ್ಟ್ರೀಯ ನಾಯಕರು ಮತ್ತು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕೃಪಾ ಕಟಾಕ್ಷದಿಂದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
Also Read: ಗೃಹಸಚಿವರಾಗಿ ವಿಫಲರಾದ ಬೊಮ್ಮಾಯಿ, ಸಿಎಂ ಆಗಿ ಸಫಲರಾಗಬಲ್ಲರೇ?
ಇನ್ನು, ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಸವರಾಜ್ ಬೊಮ್ಮಾಯಿ, ನನ್ನದು ಜನಪರ ಆಡಳಿತ. ಯಾವುದೇ ರಾಷ್ಟ್ರೀಯ ನಾಯಕರ ಹಸ್ತಕ್ಷೇಪ ಇರುವುದಿಲ್ಲ. ಹೀಗಾಗಿ ರಾಜ್ಯದಲ್ಲಿ ದಕ್ಷ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡುವುದಾಗಿ ಘೋಷಿಸಿದ್ದಾರೆ. ಹೀಗಿರುವಾಗ ಗೃಹ ಮಂತ್ರಿಯಾಗಿ ಇಲಾಖೆಯನ್ನು ಸರಿಯಾಗಿ ನಿಭಾಯಿಸದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಹೇಗೆ ರಾಜ್ಯದ ಆಡಳಿತ ನಡೆಸಲಿದ್ದಾರೆ ಎಂಬ ಪ್ರಶ್ನೆಗಳು ಹಲವರಲ್ಲಿ ಹುಟ್ಟಿಕೊಂಡಿವೆ.

ಹೌದು, ಬಿ.ಎಸ್ ಯಡಿಯೂರಪ್ಪ (B S Yediyurappa) ತನ್ನ ಆಡಳಿತದಲ್ಲಿ ರಾಜ್ಯಕ್ಕೇ ಯಾರು ಮಾಡದಷ್ಟು ಡ್ಯಾಮೇಜ್ ಮಾಡಿ ಹೋಗಿ ಆಗಿದೆ. ಈಗ ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ತೆರವಾಗಿದ್ದ ಸಿಎಂ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಬಂದಿದ್ದಾರೆ. ಅದು ಬಿ.ಎಸ್ ಯಡಿಯೂರಪ್ಪ ರಾಷ್ಟ್ರೀಯ ನಾಯಕರ ಮೇಲೆ ಹೇರಿದ ಒತ್ತಡ ಕಾರಣಕ್ಕೆ ಬಸವರಾಜ ಬೊಮ್ಮಾಯಿಗೆ ಸಿಎಂ ಸ್ಥಾನ ಒಲಿದು ಬಂದಿದೆ. ಇಂತಹ ಸಂದರ್ಭದಲ್ಲಿ ಯಡಿಯೂರಪ್ಪ ಬಸವರಾಜ ಬೊಮ್ಮಾಯಿ ಆಡಳಿತದಲ್ಲಿ ಯಾರು ಹಸ್ತಕ್ಷೇಪ ಮಾಡೋದಿಲ್ಲ ಎಂಬುದು ಶುದ್ದ ಸುಳ್ಳು. ಈ ಸರ್ಕಾರದಲ್ಲಿ ಯಡಿಯೂರಪ್ಪರದ್ದೇ ಕಾರುಬಾರು ಎಂಬ ಮಾತುಗಳು ಕೇಳಿ ಬಂದಿವೆ.
ವಾಸ್ತವದಲ್ಲಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಆಡಳಿತದ ಹಾದಿ ಅಷ್ಟೇನು ಸುಲಭವಾಗಿಲ್ಲ. ಒಂದೆಡೆ ಕರೋನಾ ಮೂರನೇ ಅಲೆ ಎದುರಾಗುವ ಆತಂಕ, ಇನ್ನೊಂದೆಡೆ ಮುಂದಿನ ಚುನಾವಣೆಗಾಗಿ ಬಿಜೆಪಿ ಬಲಪಡಿಸುವ ಸವಾಲು. ಅಲ್ಲದೆ, ಸಂಪೂರ್ಣ ತಣ್ಣಗಾಗದ ಬಿಜೆಪಿ ಆಂತರಿಕ ಭಿನ್ನಮತವನ್ನೂ ತಣಿಸಬೇಕಿದೆ. ಹೀಗೆ ಹಲವು ಸವಾಲುಗಳನ್ನ ಬಸವರಾಜ ಬೊಮ್ಮಾಯಿ ಎದುರಿಸಬೇಕಿದೆ.
Also Read: ʼಆದೇಶದ ಅನುಷ್ಠಾನಕ್ಕೆ ಆದ್ಯತೆʼ ʼಪ್ರಧಾನಿ ಭೇಟಿ ಬಳಿಕ ಸಂಪುಟ…
ಸದ್ಯದಲ್ಲೇ ಬೊಮ್ಮಾಯಿ ಸಚಿವ ಸಂಪುಟ ರಚನೆ ಮಾಡಬೇಕಿದೆ. ಈ ವೇಳೆ ಪಕ್ಷದ ಹಿರಿಯ ನಾಯಕರು, ವಲಸಿಗ ನಾಯಕರು ಹಾಗೂ ಮೂಲ ಬಿಜೆಪಿಗರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ. ಎಲ್ಲರನ್ನು ಅಳೆದು ತೂಗಿ ಸಂಪುಟಕ್ಕೆ ಸೇರಿಸಿಕೊಳ್ಳುವ ಸವಾಲು ಬೊಮ್ಮಾಯಿ ಮುಂದಿದೆ. ಹಾಗೆಯೇ ಸಂಪುಟ ರಚನೆ ಬಳಿಕ ಸರ್ಕಾರ ನಡೆಸಲು ಅತ್ಯುತ್ತಮ ತಂಡವೊಂದು ಕಟ್ಟಿಕೊಳ್ಳಬೇಕಿದೆ.

ಸಂಪುಟದ ಸಹೋದ್ಯೋಗಿಗಳನ್ನ ಒಟ್ಟಿಗೆ ತೆಗೆದುಕೊಂಡು ಹೋಗಬೇಕಿದೆ. ಪಕ್ಷದಲ್ಲಿ ಬಿ.ಎಸ್ ಯಡಿಯೂರಪ್ಪ ಬಣವೇ ಇವರಿಗೂ ಕಾಡುವ ಸಾಧ್ಯತೆ ಇದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಬೇಕಿದೆ. ಸದ್ಯದಲ್ಲೇ ಮೂರನೇ ಅಲೆ ಎದುರಾಗಲಿದ್ದು, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.
Also Read : ಅಡಿಗೆ ಬಿದ್ದರೂ ಮೀಸೆ ಮಣ್ಣಾಗದ ‘ರಾಜಾಹುಲಿ’ಯ ಅಸಲೀ ಆಟ ಈಗ ಆರಂಭವಾಗಿದೆ..
ಕರೋನಾದಿಂದ ಮುಂದೂಡಲಾಗಿರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕ್ ಪಂಚಾಯಿತಿ ಚುನಾವಣೆ ಸಮರ್ಥವಾಗಿ ನಡೆಸಬೇಕಿದೆ. ಮುಂದಿನ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕಿದೆ. ಈ ಚುನಾವಣೆ ನಡೆಸೋದು ಸದ್ಯದ ಪರಿಸ್ಥಿತಿಯಲ್ಲಿ ಬೊಮ್ಮಾಯಿ ಸರ್ಕಾರದ ಪಾಲಿಗೆ ಸವಾಲಾಗಲಿದೆ.
ಅವಧಿಗೆ ಮುನ್ನ ಬಿ.ಎಸ್. ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ ಪರಿಣಾಮ ಬಿಜೆಪಿಗೆ ಭಾರೀ ಡ್ಯಾಮೇಜ್ ಆಗಿದೆ. ಇದಕ್ಕೆ ಬೊಮ್ಮಾಯಿ ಉತ್ತಮ ಆಡಳಿತ ನಡೆಸುವ ಮೂಲಕ ಸರ್ಕಾರದ ಇಮೇಜ್ ಹೆಚ್ಚಿಸಬೇಕಾಗಿದೆ. ಇದಾದ ಬಳಿಕ 2023ರಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಅಧಿಕಾರಕ್ಕೆ ತರಬೇಕಿದೆ.
Also Read : ಹೈಕಮಾಂಡ್ ನಾಯಕರೆದುರು ಸೋತು ಗೆದ್ದ ಯಡಿಯೂರಪ್ಪ!
ಬಿ.ಎಸ್ ಯಡಿಯೂರಪ್ಪ ಕೃಪಾಕಟಾಕ್ಷದಿಂದಲೇ ಸಿಎಂ ಆದ ಬಸವರಾಜ ಬೊಮ್ಮಾಯಿ ಯಾವುದೇ ಕಾರಣಕ್ಕೂ ಇವರ ಮಾತು ಮೀರಲು ಆಗೋದಿಲ್ಲ. ಹೀಗಾಗಿ ತಾನು ಸಿಎಂ ಆಗಲು ಕಾರಣರಾದ ಪಕ್ಷದ ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪ ಎದುರು ಹಾಕಿಕೊಂಡು ಆಡಳಿತ ನಡೆಸೋದು ಮಾತ್ರ ಅಸಾಧ್ಯ. ಇದರ ಬಗ್ಗೆಯೂ ಬೊಮ್ಮಾಯಿ ಗಮನಹರಿಸಬೇಕಿದೆ. ಪಕ್ಷ ಮತ್ತು ಸರ್ಕಾರದಲ್ಲಿ ಐಕ್ಯತೆ ಕಾಪಾಡಬೇಕಾಗುತ್ತದೆ. ಬಿಎಸ್ವೈ ಆಡಳಿತದಲ್ಲಿ ಹಲವು ಬಾರಿ ಖಜಾನೆ ಖಾಲಿಯಾಗಿದೆ. ಸರ್ಕಾರದ ಖಜಾನೆ ಖಾಲಿಯಾದರೂ ಅಭಿವೃದ್ದಿ ಕೆಲಸ ಮಾಡೋದು ಬೊಮ್ಮಾಯಿಗೆ ಸವಾಲು ಕೆಲಸ. ಕ್ಯಾಬಿನೆಟ್ ರಚನೆ ಬಳಿಕ ಹಿರಿಯರಿಂದ ಅಪಸ್ವರ ಕೇಳಿಬರುವುದು ಸಹಜ. ಇದನ್ನು ಸರಿಯಾಗಿ ಸಂಭಾಳಿಸಿಕೊಂಡು ಹೋಗಬೇಕು.





