• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ರಾಜ್ಯವು ಕರೋನಾ ಸೋಂಕಿನಲ್ಲಿ ಸಿಲುಕಿ ನಲುಗುತ್ತಿದ್ದರೆ ಮೈಸೂರಿನ ಜಿಲ್ಲಾಧಿಕಾರಿಗಳ ನಿವಾಸದಲ್ಲಿ ಸ್ವಿಮ್ಮಿಂಗ್‌ಪೂಲ್ ನಿರ್ಮಾಣ..!

Any Mind by Any Mind
May 10, 2021
in ಕರ್ನಾಟಕ
0
ರಾಜ್ಯವು ಕರೋನಾ ಸೋಂಕಿನಲ್ಲಿ ಸಿಲುಕಿ ನಲುಗುತ್ತಿದ್ದರೆ ಮೈಸೂರಿನ  ಜಿಲ್ಲಾಧಿಕಾರಿಗಳ ನಿವಾಸದಲ್ಲಿ ಸ್ವಿಮ್ಮಿಂಗ್‌ಪೂಲ್ ನಿರ್ಮಾಣ..!
Share on WhatsAppShare on FacebookShare on Telegram

ADVERTISEMENT

ಇಂದು ಇಡೀ ದೇಶವೇ ಕರೋನಾ ಎರಡನೇ ಅಲೆಯ ಸೋಂಕಿಗೆ ಸಿಲುಕಿ ತತ್ತರಿಸಿ ಹೋಗಿದೆ. ನಿತ್ಯವೂ ದೇಶದಲ್ಲಿ ಸಾವಿರಾರು ಜನರು ಮಾರಕ ರೋಗಕ್ಕೆ ಬಲಿಯಾಗುತಿದ್ದಾರೆ. ರುದ್ರ ಭೂಮಿಗಳ ಮುಂದೆ ಉದ್ದನೆ ಕ್ಯೂ ಕರಗುತ್ತಿಲ್ಲ. ಇಂತಹ ಗಂಭಿರ ಪರಿಸ್ಥಿತಿಯಲ್ಲಿ ಮೈಸೂರಿನ ಜಿಲ್ಲಾಧಿಕಾರಿ  ರೋಹಿಣಿ ಸಿಂಧೂರಿ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಸ್ವಿಮ್ಮಿಂಗ್‌ಫೂಲ್‌ ನಿರ್ಮಾಣಕ್ಕೆ ಮುಂದಾಗಿರುವುದು ಜನತೆಯ ಆಕ್ರೋಶಕ್ಕೂ ಕಾರಣವಾಗಿದೆ. ಡಿಸಿ ಸಿಂಧೂರಿ ಅವರು  ಕಳೆದ ಸೋಮವಾರವಷ್ಟೆ  ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ  ಆಕ್ಸಿಜನ್‌ಕೊರತೆಯಿಂದಾಗಿ  ಮೃತಪಟ್ಟ 24 ಸೋಂಕಿತರ ಸಾವಿಗೆ ಪರೋಕ್ಷ ಕಾರಣ ಎಂಬ ಆರೋಪಗಳು ಬಂದಿದ್ದವು.  ಇವರು  ಚಾಮರಾಜನಗರಕ್ಕೆ ಸರಬರಾಜು ಆಗುವ ಆಕ್ಸಿಜನ್‌ನ ಮರುಭರ್ತಿ ಕೇಂದ್ರಕ್ಕೆ ಮೌಖಿಕ ಸೂಚನೆ ಕೊಟ್ಟು ತಾವು ತಿಳಿಸಿದರಷ್ಟೆ  ಆಕ್ಸಿಜನ್‌ಸರಬರಾಜು ಮಾಡಬೇಕು ಎಂದು ಹೇಳಿದ್ದಕ್ಕಾಗಿಯೇ  ಅಕ್ಸಿಜನ್‌ಸರಬರಾಜು ವಿಳಂಬವಾಯಿತು ಎಂಬ ಆರೋಪಗಳು ಕೇಳಿ ಬಂದಿದ್ದವು. ಆಗ  ಗದ್ಗದಿತರಾಗಿ ಮಾತನಾಡಿದ್ದ ಡಿ.ಸಿ ಸಿಂಧೂರಿ ಅವರು ತಾವು ಸರಬರಾಜು ಮಾಡಿದ ಆಕ್ಸಿಜನ್‌ಸಮಯ ಹಾಗೂ ಸಿಲಿಂಡರ್‌ಸಂಖ್ಯೆಗಳ ರಸೀತಿಯನ್ನೇ ಮಾಧ್ಯಮದವರ ಮುಂದಿಟ್ಟು ತಾವು ನಿರಪರಾಧಿ ಎಂದು ಹೇಳಿಕೊಂಡಿದ್ದರು.

ಇದೀಗ ಜಿಲ್ಲಾಧಿಕಾರಿಗಳ ಮೇಲೆಯೇ ಇಂತಹ ಗಂಭೀರ ಆರೋಪ ಕೇಳಿ ಬಂದಿರುವುದು ಇವರ ಕಾರ್ಯ ವೈಖರಿಯ ಬಗ್ಗೆಯೇ ಅನುಮಾನ ಮೂಡುವಂತೆ ಆಗಿದೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ  ಮಾಜಿ ನಗರಪಾಲಿಕೆ ಸದಸ್ಯ ಮತ್ತು ಜೆಡಿಎಸ್‌ಮುಖಂಡ ಕೆ ವಿ ಮಲ್ಲೇಶ್  ಜಿಲ್ಲಾಧಿಕಾರಿಗಳ  ಅಧಿಕೃತ ನಿವಾಸದಲ್ಲಿ ಸ್ವಿಮ್ಮಿಂಗ್ ಫುಲ್, ಜಿಮ್ ನಿರ್ಮಾಣ ಮಾಡಲಾಗಿದೆ. ಜಲದರ್ಶಿನಿ ಅತಿಥಿ ಗೃಹ ಪಾರಂಪರಿಕ ಕಟ್ಟಡಗಳ ವ್ಯಾಪ್ತಿಗೆ ಸೇರಿದೆ. ಕರೋನಾ ಸಂಕಷ್ಟ ಕಾಲದಲ್ಲಿ ಇಂತಹ ಮೋಜು ಮಸ್ತಿ ಏಕೆ ಬೇಕಿತ್ತು  ಪ್ರಶ್ನಿಸಿದ್ದಾರೆ.

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಪ್ರಾರಂಭವಾಗಿದೆ ಬೆಡ್ಗಳ ಕೊರತೆ

ಸ್ಮಿಮ್ಮಿಂಗ್ ಫುಲ್ ನಿರ್ಮಿಸಲು ಯಾವ ಅನುದಾನ ಖರ್ಚು ಮಾಡಲಾಗಿದೆ..? ಇದಕ್ಕೆ ಸರ್ಕಾರದ ಅನುದಾನ ಬಳಸಿದ್ದೀರಾ? ಅಥವಾ ಬೇರೆ ಯಾರಾದ್ರೂ ಪ್ರಾಯೋಜಕರ ಸಹಾಯ ಪಡೆದಿದ್ದೀರಾ? ಎಂದು ಅವರು ಪ್ರಶ್ನಿಸಿದ್ದಾರೆ. ಕರೋನಾ ಕಾಲದಲ್ಲಿ ದಿನದ 24 ಗಂಟೆ ಕಾಲ ಕೆಲಸ ಮಾಡ್ತೇನೆ ಅಂತಾ ಹೇಳ್ತೀರಾ. ಹಾಗಾದ್ರೆ ಇಂತಹ ಮೋಜು ಮಸ್ತಿಗೆ ಸಮಯ ಹೇಗೆ ಸಿಗುತ್ತೆ. ಜನಪರವಾಗಿ ಚಿಂತಿಸುವ ಯಾರಾದ್ರು ಡಿಸಿಗಳು ಇಂತಹ ಕೆಲಸ ಮಾಡ್ತೀರಾ? ನಿಮಗೆ ನಿಜವಾಗಿಯೂ ಜನಪರ ಕಾಳಜಿ ಇಲ್ಲ. ಆರ್.ಟಿ.ಐ ಮೂಲಕ ಮಾಹಿತಿ ಬಯಸುವೆ ಎಂದು  ಹೇಳಿದ್ದಾರೆ.

 ಜನರಿಗೆ ಒಳ್ಳೆಯದು ಮಾಡಲು ಆಗಲ್ಲ ಅಂದ್ರೆ ಮೈಸೂರಿನಿಂದ ನಿರ್ಗಮಿಸಿ. ಜನ ಯಾರೇ ಹೋಗಿ ಸಮಸ್ಯೆ ಹೇಳಿಕೊಂಡ್ರೂ ನಿಮ್ಮತ್ರ ಸೂಕ್ತ ಸ್ಪಂದನೆ ಸಿಗ್ತಾ ಇಲ್ಲ. ಸ್ಮಿಮ್ಮಿಂಗ್ ಫುಲ್ ವಿಚಾರದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ ಎಂದು ದೂರಿದ್ದಾರೆ. ಇದಕ್ಕಾಗಿ 50 ಲಕ್ಷ ವೆಚ್ಚ ಮಾಡಿದ್ದಾರೆ ಅಂತ ಆರೋಪ ಬಂದಿದೆ ಎಂದು ಬಹಿರಂಗ ಪಡಿಸಿದ್ದಾರೆ. ಈ ಆರೋಪಗಳಿಗೆ ಸೋಮವಾರ ಡಿಸಿ ಉತ್ತರ ಕೊಡುವ ನಿರೀಕ್ಷೆ ಇದೆ.

ಸಾಂಸ್ಕೃತಿಕ ನಗರಿಯಲ್ಲಿಯೂ ಪ್ರಾರಂಭವಾಗಿದೆ ಬೆಡ್‌ಗಳಿಗಾಗಿ ಹಾಹಾಕಾರ

ಈ ನಡುವೆ ಸಾಂಸ್ಕೃತಿಕ ನಗರಿ ಮತ್ತು  ಜಿಲ್ಲೆಯಾದ್ಯಂತ ಹದಿನೈದು ದಿನದಿಂದಲೂ ಬೆರಳೆಣಿಕೆಯ ಕೆಲವೊಂದು ಚಟುವಟಿಕೆ ಹೊರತುಪಡಿಸಿ, ಉಳಿದ ಎಲ್ಲದಕ್ಕೂ ನಿರ್ಬಂಧವಿದ್ದರೂ (ಲಾಕ್ಡೌನ್) ಕರೋನಾ ವೈರಸ್ನ ಎರಡನೇ ಅಲೆಯ ತೀವ್ರತೆ ತಗ್ಗಿಲ್ಲ. ಸೋಂಕಿನ ಸರಪಳಿ ತುಂಡಾಗಿಲ್ಲ. ಇಂದಿಗೂ  ನಿತ್ಯ ಕೋವಿಡ್–19 ಪ್ರಕರಣಗಳು ಎರಡು ಸಾವಿರದಿಂದ ಮೂರು ಸಾವಿರದ ಆಸುಪಾಸಿನಲ್ಲೇ ದಾಖಲಾಗುತ್ತಿವೆ. ರಾಜಧಾನಿ ಬೆಂಗಳೂರು ಹೊರತುಪಡಿಸಿದರೆ, ಹೆಚ್ಚಿನ ಪ್ರಕರಣ ದಾಖಲಾಗುತ್ತಿರುವುದು ಮೈಸೂರು ನಗರ, ಜಿಲ್ಲೆಯಲ್ಲೇ. ಎರಡನೇ ಅಲೆಯ ಸೋಂಕು ನಗರಕ್ಕಷ್ಟೇ ಸೀಮಿತವಾಗದೆ, ಹಳ್ಳಿಯೂ ಹೆಚ್ಚಿದೆ. ಇದರ ಬೆನ್ನಿಗೆ ಸಾವಿನ ಸರಣಿಯೂ ಎಗ್ಗಿಲ್ಲದೇ ಮುಂದುವರಿದಿದೆ, ನಿತ್ಯವೂ ಎರಡಂಕಿ ತಲುಪುತ್ತಿದೆ.

ಸೋಂಕು ಹರಡುವಿಕೆಯ ವೇಗವನ್ನು ತಗ್ಗಿಸಲು ಹಾಗೂ ಸರಪಣಿಯನ್ನು ತುಂಡರಿಸಲು ಈ ಹದಿನೈದು ದಿನದ ಅವಧಿಯಲ್ಲಿ ಜಿಲ್ಲಾಡಳಿತ ಸರಣಿ ಸಭೆ ನಡೆಸಿದೆ. ಪ್ರಮುಖ ಸ್ಥಾನದಲ್ಲಿರುವ ಅಧಿಕಾರಿಗಳು ಸತತವಾಗಿ ಸಭೆಗೆ ಹಾಜರಾಗಿ ಚರ್ಚಿಸಿದ್ದಾರೆ. ಹಲವು ಕ್ರಮ ಕೈಗೊಂಡಿರುವುದಾಗಿ ಹೇಳುತ್ತಿದ್ದಾರೆ. ಆದರೂ ವೈರಸ್ನ ತೀವ್ರತೆ ತಗ್ಗಿಲ್ಲ. ದಿನದಿಂದ ದಿನಕ್ಕೆ ಪಸರಿಸುವುದು ನಿಯಂತ್ರಣಕ್ಕೆ ಬಾರದಾಗಿದೆ ಎಂಬುದನ್ನು ಜಿಲ್ಲಾ ಕೋವಿಡ್ ವಾರ್ ರೂಂನ ಅಂಕಿ–ಅಂಶಗಳೇ ದೃಢಪಡಿಸುತ್ತಿವೆ. ‘ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಸಹಿತ ಹಾಸಿಗೆ ಸಕಾಲಕ್ಕೆ ಸಿಗುತ್ತಿಲ್ಲವಾಗಿದೆ. ಜಿಲ್ಲೆಯ ಪ್ರಮುಖ ಆಸ್ಪತ್ರೆಯಾದ ಕೆ.ಆರ್.ಆಸ್ಪತ್ರೆಯ ದ್ವಾರದಲ್ಲೇ ಈಗಾಗಲೇ ಹಲವು ಬಾರಿ ಹಾಸಿಗೆ ಭರ್ತಿಯ ನಾಮಫಲಕ ತೂಗು ಹಾಕಲಾಗಿದೆ.

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಗರ್ಭಿಣಿಗೆ ವೆಂಟಿಲೇಟರ್ ಸೌಲಭ್ಯ ಸಿಗಲಿಲ್ಲ.  ‘ವಯೋಸಹಜ ಅನಾರೋಗ್ಯದಿಂದ ನಮ್ಮ ತಾಯಿಯ ಆರೋಗ್ಯದಲ್ಲಿ ಏಕಾಏಕಿ ವ್ಯತ್ಯಾಸವಾಯಿತು. ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದೆವು. ಮೂರು ದಿನ ಮೈಸೂರಿನ  ಹಲವು ಆಸ್ಪತ್ರೆಗಳಿಗೆ ಅಲೆದಾಡಿದರೂ ಎಲ್ಲಿಯೂ ಹಾಸಿಗೆ ಸಿಗಲಿಲ್ಲ ಎಂದು ಕೋವಿಡ್ನಿಂದ ಮೃತಪಟ್ಟ ಸುಂದರವಲ್ಲಿ (72) ಎಂಬುವರ ಪುತ್ರ ಅನಿಲ್ ನೋವು ತೋಡಿಕೊಂಡರು. ‘ಆರಂಭದ ದಿನ ಕೋವಿಡ್ ತಪಾಸಣೆ ಮಾಡಿಸಿದಾಗ ವರದಿ ನೆಗೆಟಿವ್ ಬಂದಿತ್ತು. ಆದರೂ ಕೆ.ಆರ್.ಆಸ್ಪತ್ರೆಯ ವೈದ್ಯರು ಪರೀಕ್ಷಿಸಲೇ ಇಲ್ಲ. ನಮ್ಮಮ್ಮನನ್ನು ಕಾರಿನಿಂದ ಕೆಳಗಿಳಿಸಲಾಗಲಿಲ್ಲ. ಎಲ್ಲೆಡೆ ಅಲೆದರೂ ಪ್ರಯೋಜನವಾಗಲಿಲ್ಲ.’ಮೂರನೇ ದಿನ ಮತ್ತೊಮ್ಮೆ ಕೋವಿಡ್ ತಪಾಸಣೆ ಮಾಡಿಸಿದಾಗ ಪಾಸಿಟಿವ್ ಬಂತು. ಆಗಲೂ ಯಾವ ಆಸ್ಪತ್ರೆಯೂ ದಾಖಲಿಸಿಕೊಳ್ಳಲಿಲ್ಲ. ಕಾರಿನಲ್ಲೇ ನಮ್ಮಮ್ಮ ಪ್ರಾಣ ಬಿಟ್ಟರು. ಹಾಸಿಗೆ ಸಿಕ್ಕಿದ್ದರೆ ಬದುಕುತ್ತಿದ್ದರು. ಆದರೆ ಇಂದು ಆಸ್ಪತ್ರೆ, ಚಿಕಿತ್ಸೆ ಎನ್ನುವುದು ದುಡ್ಡಿದ್ದವರಿಗಷ್ಟೇ, ಪ್ರಭಾವಿಗಳಿಗಷ್ಟೇ ಎನ್ನುವಂತಾಗಿದೆ’ ಎಂದು ಅವರು ಕಣ್ಣೀರಿಟ್ಟರು.

ಜಿಲ್ಲೆಯಲ್ಲಿ ಕೋವಿಡ್ನಿಂದ ಮೃತಪಟ್ಟವರ ಸಂಖ್ಯೆ ಮೇ 8 ರ ಶನಿವಾರ ರಾತ್ರಿ 8 ಗಂಟೆಗಯ ಹೊತ್ತಿಗೆ 1,314ಕ್ಕೆ ತಲುಪಿದೆ. ಮೈಸೂರು ನಗರದಲ್ಲೇ ಸತ್ತವರ ಸಂಖ್ಯೆ ಹೆಚ್ಚಿಸಿದೆ. ಮೈಸೂರಿನಲ್ಲಿ 1028 ಜನರು ಕೋವಿಡ್ಗೆ ಬಲಿಯಾಗಿದ್ದರೆ, ಮೈಸೂರು ತಾಲ್ಲೂಕಿನಲ್ಲಿ 55 ಜನ ಮೃತಪಟ್ಟರೆ ನಂಜನಗೂಡು ತಾಲ್ಲೂಕಿನಲ್ಲಿ 58 ಜನರು ಮೃತಪಟ್ಟಿದ್ದಾರೆ. ಟಿ .ನರಸೀಪುರ ತಾಲ್ಲೂಕಿನಲ್ಲಿ 48 ಜನರು, ಹುಣಸೂರು, ಕೆ.ಆರ್.ನಗರದಲ್ಲಿ ತಲಾ 41, ಹೆಚ್.ಡಿ.ಕೋಟೆಯಲ್ಲಿ 25, ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ 18 ಜನರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತದ ಅಂಕಿ–ಅಂಶಗಳು ತಿಳಿಸಿವೆ.

Tags: Amidst pandemicgym at official residenceMysuru DC constructs swimming pool
Previous Post

Karnataka lockdown: ನಿರ್ದಯವಾಗಿ ಲಾಟಿಯಲ್ಲಿ ಹೊಡೆಯಬೇಡಿ ಪೊಲೀಸ್‌ ಇಲಾಖೆಗೆ ನಟ ಜಗ್ಗೇಶ್ ಮನವಿ

Next Post

Covid ನಿಯಂತ್ರಣ- ಪ್ರಧಾನಿಗೆ ಸಲಹೆ ನೀಡಿದ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ

Related Posts

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು
ಕರ್ನಾಟಕ

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

by ಪ್ರತಿಧ್ವನಿ
April 28, 2026
0

ಕಲಬುರಗಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕುರಿತ ಚರ್ಚೆಗಳು ರಾಜಕೀಯ ವಲಯದಲ್ಲಿ ಗರಿಗೆದರಿರುವ ನಡುವೆಯೇ, ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು,...

Read moreDetails
ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

April 28, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

April 26, 2026
ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

April 25, 2026
Next Post
Covid ನಿಯಂತ್ರಣ- ಪ್ರಧಾನಿಗೆ ಸಲಹೆ ನೀಡಿದ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ

Covid ನಿಯಂತ್ರಣ- ಪ್ರಧಾನಿಗೆ ಸಲಹೆ ನೀಡಿದ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada