ಕರೋನಾ ಸೋಂಕಿನಿಂದ ದೇಶ ನಲುಗುತ್ತಿದ್ದು, ಕೋವಿಡ್ ನಿಯಂತ್ರಣದ ಕುರಿತು ಪ್ರಧಾನಿ ನರೇಂದ್ರ ಮೋದಿಗೆ ಈಗಾಗಲೇ ವಿರೋಧ ಪಕ್ಷದ ಹಲವು ನಾಯಕರು ಪ್ರತದ ಮೂಲಕ ಸಲಹೆ ಕೊಟ್ಟಿದ್ದು, ಇದೀಗಾ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಪ್ರಧಾನಿಗೆ ಪತ್ರ ಬರೆದು ಕೆಲವು ಸಲಹೆಗಳನ್ನು ಕೊಟ್ಟಿದ್ದಾರೆ.
ಪತ್ರದಲ್ಲಿ ಬರೆದ ಪ್ರಮುಖ ಅಂಶಗಳು
ವೈದ್ಯಕೀಯ ಸಾಮಗ್ರಿಗಳ ಮೇಲಿನ ತೆರಿಗೆಯನ್ನು ತೆರವುಗೊಳಿಸಬೇಕು .
ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ಕಡ್ಡಾಯ ಪರವಾನಗಿಯನ್ನು ನಿಯಂತ್ರಿಸಬೇಕು.
ಕೋವಿಡ್ ನಿಯಂತ್ರಣದ ಸಂಬಂಧ ನೀಲನಕ್ಷೆ ತಯಾರಿಸುವ ಸಲುವಾಗಿ ಸರ್ವಪಕ್ಷ ಸಭೆ ಕರೆಯ ಬೇಕು.
ವಿದೇಶದಿಂದ ಬಂದಂತಹ ಪರಿಹಾರ ಸಾಮಾಗ್ರಿಗಳ ಹಂಚಿಕೆಯನ್ನು ಚುರುಕುಗೊಳಿಸ ಬೇಕು.
ನಿರುದ್ಯೋಗಿ ವಲಸಿಗರಿಗೆ ನರೇಗಾ ಯೋಜನೆ ಅಡಿಯಲ್ಲಿ ಕನಿಷ್ಠ ಕೂಲಿ ಹಾಗು ಕೆಲಸದ ದಿನಗಳನ್ನು 100 ರಿಂದ 200 ದಿನಕ್ಕೆ ಹೆಚ್ಚಿಸ ಬೇಕೆಂದು ಕೇಂದ್ರಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕೋವಿಡ್ ಲಸಿಕೆ ನೀಡಲು ಹಂಚಿಕೆ ಮಾಡಿರುವ 35,000 ಕೋಟಿ ರೂಪಾಯಿಯನ್ನು ಸದ್ಬಳಕೆ ಮಾಡುವಂತೆ ಆಗ್ರಹಿಸಿದ್ದಾರೆ.