• Home
  • About Us
  • ಕರ್ನಾಟಕ
Saturday, December 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಪ್ರತಿಧ್ವನಿ ಬಜೆಟ್ ಸರಣಿ-1 | ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸವಾಲಾಗಿರುವ ಬೃಹತ್ ಪ್ರಮಾಣದ ವಿತ್ತೀಯ ಕೊರತೆ

Any Mind by Any Mind
January 27, 2022
in ಅಭಿಮತ, ದೇಶ, ವಾಣಿಜ್ಯ
0
ಪ್ರತಿಧ್ವನಿ ಬಜೆಟ್ ಸರಣಿ-1 | ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸವಾಲಾಗಿರುವ ಬೃಹತ್ ಪ್ರಮಾಣದ ವಿತ್ತೀಯ ಕೊರತೆ
Share on WhatsAppShare on FacebookShare on Telegram

ಪ್ರತಿ ವರ್ಷ ಬಜೆಟ್ ಮಂಡನೆ ಪೂರ್ವದಲ್ಲಿ ಹೆಚ್ಚಾಗಿ ಚರ್ಚೆಯಾಗುವ ಮತ್ತು ಪರಿಶೀಲನೆಗೆ ಒಳಪಡುವ ವಿಷಯ ಎಂದರೆ ವಿತ್ತೀಯ ಕೊರತೆ. ವಿತ್ತೀಯ ಕೊರತೆ ಮಿತಿಯನ್ನು ಕಾಯ್ದುಕೊಳ್ಳುವುದು ಸರ್ಕಾರದ ನೈತಿಕ ಜವಾಬ್ದಾರಿ. ಯಾವ ಸರ್ಕಾರ ವಿತ್ತೀಯ ಕೊರತೆ ಮಿತಿಯನ್ನು ಕಾಯ್ದುಕೊಳ್ಳುತ್ತದೋ ಆ ಸರ್ಕಾರ ಆರ್ಥಿಕ ಶಿಸ್ತನ್ನು ಪಾಲಿಸುತ್ತಿದೆ ಎಂದೇ ಅರ್ಥ.

ADVERTISEMENT

ವಿತ್ತೀಯ ಕೊರತೆ ಮಿತಿ ಮೀರಿದರೆ ಅದು ಸರ್ಕಾರದ ಆರ್ಥಿಕ ಅಶಿಸ್ತು ಮತ್ತು ವಿತ್ತ ಸಚಿವರ ಅಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ವಿಶೇಷ ಸಂದರ್ಭಗಳಲ್ಲಿ ವಿತ್ತೀಯ ಕೊರತೆ ಮಿತಿ ಮೀರಿದರೆ ಅದು ಸರ್ಕಾರ ಆರ್ಥಿಕ ಇಶಿಸ್ತಾಗಲೀ, ವಿತ್ತ ಸಚಿವರ ಅಸಾಮರ್ಥ್ಯವಾಗಲೀ ಅಲ್ಲ. ಉದಾಹರಣೆಗೆ ಕೋವಿಡ್ ಸಂಕಷ್ಟ ಕಾಲ!

ಕೋವಿಡ್-19 ಭಾರತಕ್ಕೆ ಕಾಲಿಟ್ಟು ಹೆಚ್ಚು ಕಮ್ಮಿ ಎರಡು ವರ್ಷಗಳಾಗುತ್ತಾ ಬಂದಿದೆ. ಲಾಕ್ಡೌನ್ ಆದ ದಿನವನ್ನು ಲೆಕ್ಕಕ್ಕೆ ತೆಗೆದುಕೊಂಡರೆ 22 ತಿಂಗಳುಗಳಾಗಿವೆ. ಈ ಅವಧಿಯಲ್ಲಿ ಆರ್ಥಿಕತೆ ತೀವ್ರಗತಿಯಲ್ಲಿ ಏರಿಳಿತ ಕಂಡಿದೆ. ಲಾಕ್ಡೌನ್ ಮಾಡುವಾಗ ಕೊಂಚ ವಿವೇಚನೆ ಬಳಸಿದ್ದರೆ ಇಷ್ಟೆಲ್ಲ ಅನಾಹುತಗಳಾಗುತ್ತಿರಲಿಲ್ಲ ಎಂಬ ಮಾತುಗಳೂ ಇವೆ. ಅದೇನೇ ಇರಲಿ, ವಿತ್ತೀಯ ಕೊರತೆ ಪ್ರಮಾಣವು ಐತಿಹಾಸಿಕ ಗರಿಷ್ಠ ಪ್ರಮಾಣಕ್ಕೆ ಜಿಗಿದಿರುವುದಕ್ಕೆ ಕೋವಿಡ್ ಸೋಂಕು ಮತ್ತು ಅದರಿಂದಾದ ದುಷ್ಪರಿಣಾಮಗಳೇ ಕಾರಣ.

2020-21 ನೇ ಸಾಲಿನಲ್ಲಿ ವಿತ್ತೀಯ ಕೊರತೆ ಪ್ರಮಾಣವು ಶೇ.9.4ಕ್ಕೆ ಏರಿತ್ತು. ಇದು ಉದಾರಿಕಣೋತ್ತರದ ಅವಧಿಯಲ್ಲೇ ಅತಿ ಗರಿಷ್ಠ ವಿತ್ತೀಯ ಕೊರತೆ. 1998 ಮತ್ತು 2009ರಲ್ಲಿ ಮಾತ್ರ ವಿತ್ತೀಯ ಕೊರತೆ ಪ್ರಮಾಣವು ಶೇ.6ರ ಗಡಿದಾಟಿತ್ತು. ಉಳಿದಂತೆ ವಿತ್ತೀಯ ಕೊರತೆ ಪ್ರಮಾಣವು ಆಯಾ ಕಾಲಕ್ಕೆ ಬಜೆಟ್ ನಲ್ಲಿ ಘೋಷಿತ ಮಿತಿಯ ಆಜುಬಾಜಿನಲ್ಲೇ ಇದೆ. 1998-2004ರ ವಾಜಪೇಯಿ ಸರ್ಕಾರದ ಅವಧಿಯಲ್ಲಿ ವಿತ್ತೀಯ ಕೊರತೆಯು ಸರಾಸರಿ ಶೇ.5.5ರ ಆಜುಬಾಜಿನಲ್ಲಿತ್ತು. 2004ರಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿ ಹುದ್ದೆಗೇರಿದ ನಂತರ ವಿತ್ತೀಯ ಕೊರತೆ ಪ್ರಮಾಣ ಗಣನೀಯವಾಗಿ ಕುಗ್ಗತ್ತಾ ಬಂತು.2007ರಲ್ಲಿ ಇದು ಶೇ.2.54ಕ್ಕೆ ತಗ್ಗಿ ದಾಖಲೆಯಾಗಿತ್ತು. 2008ರಲ್ಲಿ ಆದ ಜಾಗತಿಕ ಆರ್ಥಿಕ ಕುಸಿತದಿಂದಾಗಿ ವಿತ್ತೀಯ ಕೊರತೆ ಪ್ರಮಾಣ ತ್ವರಿತವಾಗಿ ಜಿಗಿಯಿತು. 2009ರಲ್ಲಿ ಶೇ.6ರ ಗಟಿ ದಾಟಿತು. ನಂತರದ ವರ್ಷಗಳಲ್ಲಿ ಮನಮೋಹನ್ ಸಿಂಗ್ ಸರ್ಕಾರವು ವಿತ್ತೀಯ ಕೊರತೆಯನ್ನು ತಗ್ಗಿಸಲು ಹಲವು ವಿತ್ತೀಯ ಬಲವರ್ಧನಾ ಕ್ರಮಗಳನ್ನು ಕೈಗೊಂಡಿತ್ತು.

2014ರ ಹೊತ್ತಿಗೆ ಶೇ.4ಕ್ಕಿಂತ ಕಡಮೆ ಮಟ್ಟಕ್ಕೆ ಬರುವಂತೆ ನೋಡಿಕೊಂಡಿತು. 2014ರ ನಂತರದಲ್ಲೂ ವಿತ್ತೀಯ ಕೊರತೆ ಶೇ.3.5.- 3.8ರ ಆಜುಬಾಜಿನಲ್ಲೇ ಇತ್ತು. 2016ರಲ್ಲಿ ಜಾರಿಗೆ ಅಪನಗದೀಕರಣದ (ನೋಟ್ ಬ್ಯಾನ್) ಮಧ್ಯಮಾವಧಿ ಪರಿಣಾಮಗಳಿಂದಾಗಿ ಮತ್ತು ಸರಕು ಮತ್ತು ಸೇವಾ ತೆರಿಗೆ ತರಾತುರಿ ಜಾರಿಯಿಂದಾಗಿ 2019ರ ವೇಳೆಗೆ ಶೇ.4ರ ಗಡಿದಾಟಿತ್ತು. 2020-21ಯಲ್ಲಿ ಆಘಾತಕಾರಿಯಾಗಿ ಶೇ.9.4ಕ್ಕೆ ಜಿಗಿದಿದೆ. 2021-22ರಲ್ಲಿ ವಿತ್ತೀಯ ಕೊರತೆಯು ಶೇ.6.8ಕ್ಕೆ ತಗ್ಗಬಹುದು ಎಂದು ವಿವಿಧ ಅರ್ಥಶಾಸ್ತ್ರಜ್ಞರು ಅಂದಾಜಿಸಿದ್ದಾರೆ.

ವಾಸ್ತವಿಕ ಸಮಸ್ಯೆ ಏನು?

ಅಷ್ಟಕ್ಕೂ ವಿತ್ತೀಯ ಕೊರತೆ ಎಂದರೇನು? ಸರ್ಕಾರಕ್ಕೆ ಬರುವ ಎಲ್ಲಾ ರೂಪದ ಆದಾಯಗಳು ಮತ್ತು ಸರ್ಕಾರ ಮಾಡುವ ಎಲ್ಲಾ ವಿಧವಾದ ಖರ್ಚುಗಳ ನಡುವಿನ ಅಂತರವೇ ವಿತ್ತೀಯ ಕೊರತೆ. ವಿತ್ತೀಯ ಕೊರತೆ ಹೆಚ್ಚಾದಷ್ಟೂ ದೇಶದ ಆರ್ಥಿಕತೆಯ ಮೇಲಿನ ಒತ್ತಡ ಹೆಚ್ಚುತ್ತದೆ. ಇದು ಹೆಚ್ಚೆಚ್ಚು ಸಾಲ ಮಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಹೆಚ್ಚೆಚ್ಚು ಸಾಲ ಮಾಡಿದ ಸಂದರ್ಭಗಳಲ್ಲಿ ಬಂಡವಾಳ ವೆಚ್ಚವು ಗಣನೀಯವಾಗಿ ತಗ್ಗುತ್ತದೆ, ಆದಾಯ ವೆಚ್ಚವು ಹಿಗ್ಗುತ್ತದೆ. ಭವಿಷ್ಯದಲ್ಲಿ ದೇಶಕ್ಕೆ ಆಸ್ತಿಗಳಾಗಬಹುದಾದ, ಹೆದ್ದಾರಿ, ವಿಮಾನ ನಿಲ್ದಾಣ, ರೈಲು ಮಾರ್ಗಗಳು, ವಸತಿಗಳು, ಜಲಮಾರ್ಗಗಳು, ಬಂದರುಗಳು- ಇಂತಹವುಗಳ ಮೇಲೆ ಹೂಡಿಕೆ ಮಾಡುವುದು ಬಂಡವಾಳ ವೆಚ್ಚ, ವೇತನ, ಪಿಂಚಣಿ ಪಾವತಿ, ವಿವಿಧ ಇಲಾಖೆಗಳ ಖರ್ಚುಗಳು ಎಲ್ಲವೂ ಆದಾಯವೆಚ್ಚಗಳಾಗುತ್ತವೆ.

ಆದಾಯ ವೆಚ್ಚವು ಬಂಡವಾಳ ವೆಚ್ಚಕ್ಕಿಂತ ಹೆಚ್ಚಾದರೆ, ಭವಿಷ್ಯದಲ್ಲಿ ಆರ್ಥಿಕತೆ ಸದೃಢವಾಗಿ ಬೆಳೆಯಲು ತೊಡಕಾಗುತ್ತದೆ. ವಿತ್ತೀಯ ಕೊರತೆ ತಗ್ಗಿದಷ್ಟೂ ಬಂಡವಾಳ ವೆಚ್ಚ ಮಾಡಲು ಅನುಕೂಲವಾಗುತ್ತದೆ. ವಿತ್ತೀಯ ಕೊರತೆ ಹಿಗ್ಗಿದಷ್ಟೂ ಇರುವ ಆಸ್ತಿಗಳನ್ನೂ ನಗದೀಕರಣದ ಹೆಸರಿನಲ್ಲಿ ಖಾಸಗಿಯವರಿಗೆ ಮಾರಾಟ ಮಾಡಬೇಕಾಗುತ್ತದೆ. ಭವಿಷ್ಯದಲ್ಲಿ ದೇಶದ ಆಸ್ತಿಯು ಖಾಸಗಿಯವರ ಪಾಲಾಗಿ, ಈಗಾಗಲೇ ಹೆಚ್ಚಿರುವ ಉಳ್ಳವರು- ಇಲ್ಲದವರ ನಡುವಿನ ಮತ್ತಷ್ಟು ಹಿಗ್ಗುತ್ತದೆ. ದೀರ್ಘಕಾಲದಲ್ಲಿ ಇದು ಆರ್ಥಿಕ ಸಮಸ್ಯೆಯಾಗಷ್ಟೇ ಉಳಿಯದೇ ಸಾಮಾಜಿಕ ಕ್ಷೋಭೆಗೂ ಕಾರಣವಾಗಬಹುದು. ಈ ಕಾರಣದಿಂದಲೇ ಪ್ರತಿ ವರ್ಷವೂ ಬಜೆಟ್ ಘೋಷಣೆ ಮಾಡುವಾಗಲೇ ವಿತ್ತೀಯ ಕೊರತೆ ಮಿತಿಯನ್ನು ನಿಗದಿ ಮಾಡಲಾಗುತ್ತದೆ ಮತ್ತು ಮಿತಿಯನ್ನು ಕಾಯ್ದುಕೊಳ್ಳಲು ಪ್ರಯತ್ನಿಸಲಾಗುತ್ತದೆ.

Tags: BJPCongress PartyCovid 19ಕರೋನಾಕೋವಿಡ್-19ನರೇಂದ್ರ ಮೋದಿನಿರ್ಮಲಾ ಸೀತಾರಾಮನ್ಬಿಜೆಪಿವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
Previous Post

ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಆರೋಪ: ರಾಯಚೂರು ನ್ಯಾಯಾಧೀಶರ ವಿರುದ್ಧ ಆಕ್ರೋಶ

Next Post

ಕಾಂಗ್ರೆಸ್‌ ಜೊತೆಗಿನ ಮಾತುಕತೆ ವೈಫಲ್ಯಕ್ಕೆ ಕಾರಣ ಬಹಿರಂಗಪಡಿಸಿದ ಪ್ರಶಾಂತ್‌ ಕಿಶೋರ್

Related Posts

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ
Top Story

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

by ಪ್ರತಿಧ್ವನಿ
December 13, 2025
0

ಬೆಂಗಳೂರು : ರಾಜ್ಯದ ಮಹತ್ವಾಕಾಂಕ್ಷೆಯ ಮೇಕೆದಾಟು(Mekedatu) ಸಮತೋಲಿತ ಜಲಾನಯನ ಯೋಜನೆಯ ತ್ವರಿತ ಅನುಷ್ಠಾನಕ್ಕಾಗಿ ಕೆಇಆರ್‌ಎಸ್(KERS) ನಿರ್ದೇಶಕರ ನೇತೃತ್ವದಲ್ಲಿ ಹೊಸ ತಂಡ ರಚಿಸಿ, ಯೋಜನೆ ಕಾರ್ಯಾನುಷ್ಠಾನಕ್ಕೆ ರಾಜ್ಯ ಸರ್ಕಾರ...

Read moreDetails
ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

December 13, 2025

ಆರ್.ಡಿ.ಪಿ.ಆರ್ ಅಧಿಕಾರಿಗಳಿಗೆ ಹೈಕೋರ್ಟಿನಲ್ಲಿ ಐತಿಹಾಸಿಕ ನ್ಯಾಯ: ಪ್ರಿಯಾಂಕ್ ಖರ್ಗೆ

December 12, 2025
ಮತ್ತೆ ಹೋರಾಟ ಘೋಷಿಸಿದ ಅಣ್ಣಾ ಹಜಾರೆ

ಮತ್ತೆ ಹೋರಾಟ ಘೋಷಿಸಿದ ಅಣ್ಣಾ ಹಜಾರೆ

December 12, 2025

ನಾನು ಯಾವುದೇ ಬಲ ಪ್ರದರ್ಶನ ಮಾಡುತ್ತಿಲ್ಲ, ಅದರ ಅವಶ್ಯಕತೆಯೂ ನನಗಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

December 12, 2025
Next Post
ಕಾಂಗ್ರೆಸ್‌ ಜೊತೆಗಿನ ಮಾತುಕತೆ ವೈಫಲ್ಯಕ್ಕೆ ಕಾರಣ ಬಹಿರಂಗಪಡಿಸಿದ ಪ್ರಶಾಂತ್‌ ಕಿಶೋರ್

ಕಾಂಗ್ರೆಸ್‌ ಜೊತೆಗಿನ ಮಾತುಕತೆ ವೈಫಲ್ಯಕ್ಕೆ ಕಾರಣ ಬಹಿರಂಗಪಡಿಸಿದ ಪ್ರಶಾಂತ್‌ ಕಿಶೋರ್

Please login to join discussion

Recent News

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato
Top Story

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

by ಪ್ರತಿಧ್ವನಿ
December 13, 2025
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ
Top Story

ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

by ಪ್ರತಿಧ್ವನಿ
December 13, 2025
ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ
Top Story

ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ

by ಪ್ರತಿಧ್ವನಿ
December 13, 2025
ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ
Top Story

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

by ಪ್ರತಿಧ್ವನಿ
December 13, 2025
ಒಟಿಟಿಗೆ ಎಂಟ್ರಿ ಕೊಟ್ಟ ಸೈಕಲಾಜಿಕಲ್ ಥ್ರಿಲ್ಲರ್ ‘ಗ್ರೀನ್’
Top Story

ಒಟಿಟಿಗೆ ಎಂಟ್ರಿ ಕೊಟ್ಟ ಸೈಕಲಾಜಿಕಲ್ ಥ್ರಿಲ್ಲರ್ ‘ಗ್ರೀನ್’

by ಪ್ರತಿಧ್ವನಿ
December 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

December 13, 2025
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

December 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada