• Home
  • About Us
  • ಕರ್ನಾಟಕ
Wednesday, December 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಕೋವಿಡ್‌ ಬಿಕ್ಕಟ್ಟು: ಮೋದಿ ರಾಜಿನಾಮೆಗೆ ಜಾಲತಾಣದಲ್ಲಿ ಕೂಗು

ಫಾತಿಮಾ by ಫಾತಿಮಾ
April 28, 2021
in ದೇಶ
0
ಕೋವಿಡ್‌ ಬಿಕ್ಕಟ್ಟು: ಮೋದಿ ರಾಜಿನಾಮೆಗೆ ಜಾಲತಾಣದಲ್ಲಿ ಕೂಗು
Share on WhatsAppShare on FacebookShare on Telegram

ಭಾರತದಲ್ಲಿ ಕೋವಿಡ್ ಎರಡನೇ ಅಲೆ ವಿನಾಶಕಾರಿಯಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಟ್ವಿಟ್ಟರಿನಲ್ಲಿ #ResignModi ಎನ್ನುವ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿತ್ತು. ಆದರೆ ಆಶ್ಚರ್ಯಕರ ಬೆಳವಣಿಗೆ ಎಂಬಂತೆ, ಪ್ರತಿ ಬಾರಿ ಪ್ರಧಾನಿಯವರನ್ನು ಸಮರ್ಥಿಸುವ ಬಲಪಂಥೀಯ ಟ್ವಿಟರ್ ಪಡೆ ಇದಕ್ಕೆ ಪರ್ಯಾಯ ಹ್ಯಾಶ್‌ಟ್ಯಾಗ್ ಬಳಸದೆ  ಮೌನವಾಗಿ ಟ್ವಿಟರ್ ಟ್ರೆಂಡನ್ನು ಅಂಗೀಕರಿಸಿದಂತೆ ಇತ್ತು.

ADVERTISEMENT

How true na ? #COVIDSecondWaveInIndia #ResignModi pic.twitter.com/MJ7Icg4o8E

— Telangana Congress (@INCTelangana) April 28, 2021

ಕಳೆದ ಸೋಮವಾರ ಸಂಜೆಯ ಹೊತ್ತಿಗೆ ಈ ಹ್ಯಾಶ್‌ಟ್ಯಾಗ್ ಹೊಂದಿದ 2.38 ಲಕ್ಷಕ್ಕೂ ಹೆಚ್ಚು ಟ್ವೀಟ್‌ಗಳು ಹರಿದಾಡಿದ್ದವು.‌ ಕೋವಿಡ್ ದಾಳಿಗೊಳಗಾದ ದೇಹಗಳ ಶವಸಂಸ್ಕಾರ, ಬೆಡ್ ಇಲ್ಲದೆ ಆಸ್ಪತ್ರೆಗಳಲ್ಲಿ ಪರದಾಡುವ ರೋಗಿಗಳ ಚಿತ್ರಗಳೊಂದಿಗೆ  ರೋಮನ್ ಚಕ್ರವರ್ತಿ ನೀರೋನಂತೆ ನರೇಂದ್ರ ಮೋದಿ ವರ್ತಿಸುತ್ತಿರುವುದನ್ನು ತೋರುವ ವ್ಯಂಗ್ಯ ಚಿತ್ರಗಳು ಮತ್ತು ಗ್ರಾಫಿಕ್ಸ್ ಸಾವಿರಾರು ಬಾರಿ ರಿ ಟ್ವೀಟ್ ಆಗಿದ್ದವು. ಇವುಗಳಲ್ಲಿ ಹಲವಾರು ಟ್ವೀಟ್‌ಗಳು ಕಾಂಗ್ರೆಸ್, ತೃಣಮೂಲ ಮತ್ತು ಡಿಎಂಕೆ‌ ಪಕ್ಷಗಳಿಗೆ ಸಂಬಂಧಿಸಿರುವ ಟ್ವಿಟರ್ ಹ್ಯಾಂಡಲ್‌ಗಳಿಂದ ಬಂದವುಗಳು.

ಕರೋನಾ ನಿಯಂತ್ರಿಸಲು ವೈಫಲ್ಯ: ಟ್ರೆಂಡ್ ಆಗುತ್ತಿದೆ #NoVoteTo_EvilModi

ಕರ್ನಾಟಕದ ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು “ಭಾರತದಲ್ಲಿ  ಕೋವಿಡ್ 19ನ ಹೆಚ್ಚಳವು ನರೇಂದ್ರ ಮೋದಿಯವರ ಸರ್ಕಾರದ ತಪ್ಪು ನಿರ್ಧಾರಗಳ ಪ್ರತಿಫಲವಾಗಿದೆ.‌ ತಯಾರಿಯು ಈಗಲೂ ಹತಾಶ ಸ್ಥಿತಿಯಲ್ಲೇ ಇದೆ !!  ನರೇಂದ್ರ ಮೋದಿ ಅವರು ದೇಶಕ್ಕಿಂತ ದೊಡ್ಡವರು ಎಂದು ಭಾವಿಸಿದ್ದಾರೆ ”ಎಂದು ಇದೇ ಹ್ಯಾಶ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದರು.

#Covid19 struggle in India is the reflection of @narendramodi govt.

Assuming the govt was caught off guard for the 1st time, What is the status now?

The preparedness is hopeless even now!!

Modi feels he is bigger than India.#ResignModi pic.twitter.com/pEI3DcYlmP

— Siddaramaiah (@siddaramaiah) April 19, 2021

ಟ್ವೀಟ್‌ಗಳಲ್ಲಿ ಚಿತೆಗಳು ಹೊತ್ತಿ ಉರಿಯುತ್ತಿರುವಾಗ ಮೋದಿ ಸಂಗೀತ ವಾದ್ಯಗಳನ್ನು ನುಡಿಸುತ್ತಿರುವುದನ್ನು ತೋರಿಸಲಾಗಿದೆ.

ಕಾಂಗ್ರೆಸ್ ವಕ್ತಾರ ರೋಶ್ನಿ ಕುಶಾಲ್ ಜೈಸ್ವಾಲ್ ವಾರಣಾಸಿಯ ಗಂಗಾ ದಡದಲ್ಲಿರುವ ಶ್ಮಶಾನವೊಂದರಲ್ಲಿ ಸ್ವತಃ ವಿಡಿಯೋ ಮಾಡಿದ್ದಾರೆ.  ಬಂಗಾಳದಲ್ಲಿ ರ‌್ಯಾಲಿಗಳನ್ನು ಉದ್ದೇಶಿಸಿ ಮಾತಾನಾಡಿದ ಮೋದಿಯವರ ನಿರ್ಧಾರವನ್ನು ಅವರು ಪ್ರಶ್ನಿಸಿದ್ದಾರೆ.

ಬಂಗಾಳದ ಸಚಿವ ಸುಜಿತ್ ಬೋಸ್ ಹಲವಾರು ಉರಿಯುತ್ತಿರುವ ಚಿತೆಯ ಫೋಟೋವನ್ನು ಟ್ವೀಟ್ ಮಾಡಿ “ಪ್ರಿಯ ಪ್ರಧಾನಿಯವರೇ‌‌ ಕಳೆದ ವರ್ಷ ಮಾರ್ಚ್‌ನಲ್ಲಿ, ಮುಂದಿನ 21 ದಿನಗಳಲ್ಲಿ ಕೋವಿಡ್ ಪರಿಸ್ಥಿತಿ ಮುಗಿಯುತ್ತದೆ ಎಂದು ನೀವು ಭರವಸೆ ನೀಡಿದ್ದಿರಿ. ಆದರೆ ಇದು 2021 ರ ಏಪ್ರಿಲ್‌ನ ಚಿತ್.  ಒಂದು ವರ್ಷಕ್ಕೂ ಹೆಚ್ಚು ಕಾಲ ಕಳೆದಿದೆ.  ಈ ಚಿತ್ರವು ನೀವು ಎಷ್ಟು ಅಸಮರ್ಥರಾಗಿದ್ದೀರಿ ಎಂಬುದನ್ನು ತೋರಿಸುತ್ತದೆ” ಎಂದಿದ್ದಾರೆ.

ರಾಷ್ಟ್ರೀಯ ಜನತಾದಳದ ನಾಯಕ ತೇಜ್ ಪ್ರತಾಪ್ ಯಾದವ್ ಅವರು  “ರೋಮ್ ಹೊತ್ತಿ‌ ಉರಿಯುತ್ತಿರುವಾಗ ನೀರೋ ಕೊಳಲು ನುಡಿಸುತ್ತಿದ್ದರು” ಎಂದು ಮೋದಿ‌ ಫೊಟೋ ಬಳಸಿ ಟ್ವೀಟ್ ಮಾಡಿದ್ದಾರೆ.

Dear Mr. Prime Minister, last year in March, you assured that Covid situation will be over in next 21 days. This is the picture of April, 2021, more than a year has been passed. This picture shows how incapable you are to serve this country. #ResignModi pic.twitter.com/YB1L0Wtp00

— Sujit Bose (@sujitboseaitc) April 19, 2021

ಡಿಎಂಕೆ ವೈದ್ಯಕೀಯ ವಿಭಾಗದ ಕಾರ್ಯದರ್ಶಿ ಕನಿಮೋಳಿ ಸೋಮವಾರ ಆರೋಗ್ಯ ಸಚಿವ ಹರ್ಷ್ ವರ್ಧನ್  ಅವರನ್ನು ಉದ್ದೇಶಿಸಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಲಸಿಕೆ ಅಭಿಯಾನವನ್ನು ಹೆಚ್ಚಿಸುವ ವಿಧಾನಗಳ ಬಗ್ಗೆ ಮೋದಿಗೆ ಸಲಹೆ ನೀಡಿದ್ದಾಗ ನೀವು ಅವರ ಸಲಹೆಯನ್ನು ಲೇವಡಿ ಮಾಡಿದ್ದೀರಲ್ಲವೇ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

When Rome was Burning the Nero was Playing the flute.#ResignModi pic.twitter.com/TRqQy5qqHZ

— Tej Pratap Yadav (@TejYadav14) April 19, 2021

ಕಳೆದ ವಾರವೇ ಎಲ್ಲಾ ವಯಸ್ಕ ಭಾರತೀಯರಿಗೆ ಲಸಿಕೆ ಹಾಕಬೇಕೆಂದು ರಾಹುಲ್ ಗಾಂಧಿ ಒತ್ತಾಯಿಸಿದ್ದುದನ್ನು ತಮಿಳಿ ಸುದ್ದಿ ವಾಹಿನಿಯ ಟ್ವಿಟರ್ ಹ್ಯಾಂಡಲ್ ಸರ್ಕಾರದ ಗಮನಕ್ಕೆ ತಂದಿದೆ.

Dear @drharshvardhan as you are talking Staying updated. Let’s talk about updates now.. Kindly update the people of the country why your diplomatic brained government gave permission to “Khumbh Mela” when world Countries warned about a second wave? (1/8) @DMK4TN #ResignModi pic.twitter.com/wmWTUQ0pp5

— Dr Kanimozhi NVN Somu (@DrKanimozhiSomu) April 19, 2021
Previous Post

1 ಆಂಬ್ಯುಲೆನ್ಸ್‌ನಲ್ಲಿ 22 ಹೆಣ: ಆಂಬ್ಯುಲೆನ್ಸ್‌ ಕೊರತೆಯೇ ಇದಕ್ಕೆ ಕಾರಣ

Next Post

ಕರೋನಾ ರೋಗಿ ಚಿಕಿತ್ಸೆಯ ಬಗ್ಗೆ ಬಂಧುಗಳಿಗೆ ತಿಳಿಯುವಂತಹ ಪಾರದರ್ಶಕ ವ್ಯವಸ್ಥೆ ಮಾಡಿ –ನಟ ಜಗ್ಗೇಶ್

Related Posts

Top Story

ಮನರೇಗಾ ಯೋಜನೆ ಹತ್ಯೆ ಮಾಡುತ್ತಿರುವ ಕೇಂದ್ರ : ಡಿಸಿಎಂ ಡಿ.ಕೆ.ಶಿವಕುಮಾರ್

by ಪ್ರತಿಧ್ವನಿ
December 23, 2025
0

"ಮನಮೋಹನ್ ಸಿಂಗ್ ಅವರು ಅನೇಕ ಅಧ್ಯಯನ ನಡೆಸಿ ನರೇಗಾ ಯೋಜನೆ ಜಾರಿಗೆ ತಂದಿದ್ದರು. ಮೋದಿ ಸರ್ಕಾರ ಇಂತಹ ನಿರ್ಧಾರ ಕೈಗೊಳ್ಳುತ್ತದೆ ಎಂದು ಭಾವಿಸಿರಲಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್...

Read moreDetails

ರೈತರ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕು: ಎನ್. ಚಲುವರಾಯಸ್ವಾಮಿ.

December 23, 2025

ಜಾಮೀನು ಅರ್ಜಿ ವಜಾ: ಭೈರತಿ ಬಸವರಾಜುಗೆ ಬಂಧನದ ಭೀತಿ ಶುರು..

December 23, 2025

ಜೀವರಕ್ಷಕ ಪ್ರಶಸ್ತಿ ಸ್ವೀಕರಿಸಿದ ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌

December 23, 2025

ತಂದೆಯಿಂದಲೇ ಗರ್ಭಿಣಿ ಮಗಳ ಹತ್ಯೆ: ಜಿಲ್ಲಾ ಉಸ್ತುವಾರಿ ಸಚಿವ ಖಂಡನೆ

December 22, 2025
Next Post
ಕರೋನಾ ರೋಗಿ ಚಿಕಿತ್ಸೆಯ ಬಗ್ಗೆ ಬಂಧುಗಳಿಗೆ ತಿಳಿಯುವಂತಹ ಪಾರದರ್ಶಕ ವ್ಯವಸ್ಥೆ ಮಾಡಿ –ನಟ ಜಗ್ಗೇಶ್

ಕರೋನಾ ರೋಗಿ ಚಿಕಿತ್ಸೆಯ ಬಗ್ಗೆ ಬಂಧುಗಳಿಗೆ ತಿಳಿಯುವಂತಹ ಪಾರದರ್ಶಕ ವ್ಯವಸ್ಥೆ ಮಾಡಿ –ನಟ ಜಗ್ಗೇಶ್

Please login to join discussion

Recent News

Top Story

ಮನರೇಗಾ ಯೋಜನೆ ಹತ್ಯೆ ಮಾಡುತ್ತಿರುವ ಕೇಂದ್ರ : ಡಿಸಿಎಂ ಡಿ.ಕೆ.ಶಿವಕುಮಾರ್

by ಪ್ರತಿಧ್ವನಿ
December 23, 2025
Top Story

ರೈತರ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕು: ಎನ್. ಚಲುವರಾಯಸ್ವಾಮಿ.

by ಪ್ರತಿಧ್ವನಿ
December 23, 2025
Top Story

ಜಾಮೀನು ಅರ್ಜಿ ವಜಾ: ಭೈರತಿ ಬಸವರಾಜುಗೆ ಬಂಧನದ ಭೀತಿ ಶುರು..

by ಪ್ರತಿಧ್ವನಿ
December 23, 2025
Top Story

ಜೀವರಕ್ಷಕ ಪ್ರಶಸ್ತಿ ಸ್ವೀಕರಿಸಿದ ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌

by ಪ್ರತಿಧ್ವನಿ
December 23, 2025
Daily Horoscope: ಇಂದು ಈ ರಾಶಿಗಳ ಯಶಸ್ಸಿನ ಹಾದಿ ಸುಗಮ..!
Top Story

Daily Horoscope: ಇಂದು ಈ ರಾಶಿಗಳ ಯಶಸ್ಸಿನ ಹಾದಿ ಸುಗಮ..!

by ಪ್ರತಿಧ್ವನಿ
December 23, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮನರೇಗಾ ಯೋಜನೆ ಹತ್ಯೆ ಮಾಡುತ್ತಿರುವ ಕೇಂದ್ರ : ಡಿಸಿಎಂ ಡಿ.ಕೆ.ಶಿವಕುಮಾರ್

December 23, 2025

ರೈತರ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕು: ಎನ್. ಚಲುವರಾಯಸ್ವಾಮಿ.

December 23, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada