ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ (Renuka swamy murder case) ಜೈಲು ಸೇರಿರುವ 17 ಆರೋಪಿಗಳ ಪೈಕಿ, 4ನೇ ಆರೋಪಿ ರಾಘವೇಂದ್ರ @ ರಘು (A4 Raghavendra) ತಾಯಿ ಮಂಜುಳಮ್ಮ ನಿಧನರಾಗಿದ್ದಾರೆ. ರಘು ಜೈಲು ಸೇರಿದ್ದರಿಂದ ಮಂಜುಳಮ್ಮ ಖಿನ್ನತೆಗೆ ಒಳಗಾಗಿ ಅನಾರೋಗ್ಯದಿಂದ ಬಳಲುತಿದ್ರು ಎಂದು ರಾಘವೇಂದ್ರ ಸಹೋದರ ಹೇಳಿಕೊಂಡಿದ್ದಾರೆ.
ಚಿತ್ರದುರ್ಗದ (Chitradurga) ಕೋಳಿ ಬುರುಜನಹಟ್ಟಿ ನಿವಾಸದಲ್ಲಿ ಬೆಳಗಿನ ಜಾವ ಮಂಜುಳಮ್ಮ (Manjulamma) ಮೃತಪಟ್ಟಿದ್ದಾರೆ. ಇವರ ಮನೆಯಲ್ಲಿ ಅಂತ್ಯ ಸಂಸ್ಕಾರಕ್ಕೂ ಅನುಕೂಲತೆಗಳಿಲ್ಲ, ಕೊನೆಯ ಬಾರಿ ರಘು ತಾಯಿಯ ಮುಖ ನೋಡ್ಲಿ ಎಂದು ರಘುವನ್ನು ಕರೆಸುವಂತೆ ಪೊಲೀಸ್ ಇಲಾಖೆಗೆ (Police department) ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಜೈಲಿನ ನಿಯಗಳಲ್ಲಿ ಯಾವ ರೀತಿ ಅವಕಾಶವಿದೆ ಎಂಬುದನ್ನ ನೋಡಿ ಅಧಿಕಾರಿಗಳು, ರಾಘವೇಂದ್ರಗೆ ತಾಯಿಯ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಲು ಅವಕಾಶ ಮಾಡಿಕೊಡಬೇಕಿದೆ. ಈ ಹಿಂದೆ ಪ್ರಕರಣದ ಮತ್ತೊಬ್ಬ ಆರೋಪಿ ಮನು ತಂದೆ ಕೂಡ ತಮ್ಮ ಮಗ ಅರೆಸ್ಟ್ ಆದ ಸುದ್ದಿ ಕೇಳಿ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದರು.