• Home
  • About Us
  • ಕರ್ನಾಟಕ
Friday, October 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಹಿಜಾಬ್‌ ವಿವಾದ | ಮಧ್ಯಪ್ರದೇಶದ ಬಿಜೆಪಿ ಹಿಜಾಬ್ ವಿಚಾರದಲ್ಲಿ ತಣ್ಣಗಾಗಿದ್ದೇಕೆ?

ಫೈಝ್ by ಫೈಝ್
February 15, 2022
in ದೇಶ
0
ಹಿಜಾಬ್‌ ವಿವಾದ | ಮಧ್ಯಪ್ರದೇಶದ ಬಿಜೆಪಿ ಹಿಜಾಬ್ ವಿಚಾರದಲ್ಲಿ ತಣ್ಣಗಾಗಿದ್ದೇಕೆ?
Share on WhatsAppShare on FacebookShare on Telegram

ಕರ್ನಾಟಕದಲ್ಲಿ ಹಿಜಾಬ್ ಧರಿಸಿ ಶಿಕ್ಷಣ ಸಂಸ್ಥೆಗಳಿಗೆ ಬರಬಾರದೆಂದು ಹಿಂದುತ್ವ ಪರಿವಾರ ಸಂಘರ್ಷಕ್ಕಿಳಿದ ಬೆನ್ನಲ್ಲೇ, ಮಧ್ಯ ಪ್ರದೇಶದಲ್ಲೂ ಹಿಜಾಬ್ ಧರಿಸುವ ವಿದ್ಯಾರ್ಥಿನಿಯ ಹಕ್ಕುಗಳ ವಿರುದ್ಧ ಅಪಸ್ವರ ಎದ್ದಿದೆ.

ADVERTISEMENT

ಹಿಜಾಬ್ ನಿಷೇಧದ ಕುರಿತಂತೆ ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಘ್ ಚೌಹಾನ್, ಗೃಹ ಸಚಿವ ನರೋತ್ತಮ್ ಮಿಶ್ರಾ, ಶಾಲಾ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ . ಶಾಲೆಗಳಲ್ಲಿ ನೂತನ ವಸ್ತ್ರ ಸಂಹಿತೆಯನ್ನು ಪರಿಚಯಿಸುತ್ತೇವೆ ಎಂದು ಹೇಳಿದ್ದ ಶಿಕ್ಷಣ ಸಚಿವರು ಯೂಟರ್ನ್ ಪಡೆದಿದ್ದು, ಹಿಜಾಬ್ ಕುರಿತು ಮಧ್ಯ ಪ್ರದೇಶ ಬಿಜೆಪಿಯ ಗೊಂದಲವನ್ನು ಬಯಲು ಮಾಡಿದೆ.

ಕರ್ನಾಟಕದ ಹಿಜಾಬ್ ವಿವಾದದ ಕುರಿತು ಪತ್ರಕರ್ತರು ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾನ್ ಅವರನ್ನು ಪ್ರಶ್ನಿಸಿದಾಗ ಅವರು ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಇನ್ನು ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಅವರು ನೂತನ ವಸ್ತ್ರ ಸಂಹಿತೆಯ ಪ್ರಸ್ತಾಪ ಇದೆ ಎಂದು ನೀಡಿದ್ದ ಹೇಳಿಕೆಯನ್ನು ಗೃಹಸಚಿವರು ತಿರಸ್ಕರಿಸಿದ್ದರು. ಅದರ ಬೆನ್ನಲ್ಲೇ ಸ್ಪಷ್ಟೀಕರಣ ನೀಡಿದ ಶಿಕ್ಷಣ ಸಚಿವರು ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಹೇಳಿದ್ದಾರೆ.

ಆದರೆ ಲವ್ ಜಿಹಾದ್, ಮತಾಂತರ-ವಿರೋಧಿ ಕಾನೂನು ಮೊದಲಾದವುಗಳನ್ನು ಬಿಜೆಪಿ ಆಡಳಿತವಿರುವ ಇತರೆ ರಾಜ್ಯಗಳೊಂದಿಗೆ ಪರಿಚಯಿಸಿದ್ದ ಮಧ್ಯಪ್ರದೇಶದಲ್ಲಿ ಬಿಜೆಪಿ ಘಟಕವು ಹಿಜಾಬ್ ಕುರಿತು ಗದ್ದಲವನ್ನು ಏಕೆ ಕಡಿಮೆ ಮಾಡಿದೆ ಎಂದು ದಿ.ಕ್ವಿಂಟ್ ವಿವಿಧ ಹಿರಿಯ ಪತ್ರಕರ್ತರು ಮತ್ತು ರಾಜಕೀಯ ವಿಶ್ಲೇಷಕರೊಂದಿಗೆ ಚರ್ಚಿಸಿದೆ.

ಹಿಜಾಬ್ ವಿವಾದದಿಂದ ಮಧ್ಯಪ್ರದೇಶ ಬಿಜೆಪಿ ಹಿಂದೆ ಸರಿದದ್ದೇಕೆ?

ಮತಾಂತರದ ವಿರುದ್ಧದ ಕಾನೂನು ತರುವುದರಿಂದ ಹಿಡಿದು ಗೋಹತ್ಯೆ ನಿಷೇಧದವರೆಗೆ, ಮಧ್ಯಪ್ರದೇಶ ಬಿಜೆಪಿಯು ರಾಜ್ಯದ ವಿವಿಧ ಧ್ರುವೀಕರಣದ ವಿಷಯಗಳ ಬಗ್ಗೆ ತನ್ನ ನಿಲುವನ್ನು ಪದೇ ಪದೇ ಸ್ಪಷ್ಟಪಡಿಸಿದೆ. ಆದರೆ, ಈಗ ಭಾರತದ ಐದು ರಾಜ್ಯಗಳ ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲಿ ಹಿಜಾಬ್ ವಿಷಯದ ಕುರಿತು ಹಿಂದೆ ಸರಿದಿದೆ.

ಮೂಲಗಳ ಪ್ರಕಾರ, ರಾಜ್ಯದಲ್ಲಿ ಚಾಲ್ತಿಯಲ್ಲಿರುವ ‘ಕಂಫರ್ಟ್ ಝೋನ್’ನಿಂದ ಹೊರಬರಲು ಗೃಹ ಸಚಿವರು ಸಿದ್ಧರಿಲ್ಲ. ಪರ್ಮಾರ್ ಅವರ ಹೇಳಿಕೆಯನ್ನು ನೇರವಾಗಿ ವಿರೋಧಿಸಿದ ಮಿಶ್ರಾ, “ಇದು ಕರ್ನಾಟಕದ ಸಮಸ್ಯೆ ಮತ್ತು ಇದು ನ್ಯಾಯಾಲಯದಲ್ಲಿದೆ” ಎಂದು ಹೇಳಿರುವುದನ್ನು ಗಮನಿಸಬಹುದು.

ಚುನಾವಣೆ ಹತ್ತಿರದಲ್ಲಿದ್ದರೂ ಕೋಮು ಉದ್ವಿಗ್ನತೆಯನ್ನು ಹುಟ್ಟು ಹಾಕಲು ಬಿಜೆಪಿ ಬಯಸುವುದಿಲ್ಲವೇ?

ಚುನಾವಣೆಯ ಸಮಯದಲ್ಲಿ ಬಿಜೆಪಿ ಧ್ರುವೀಕರಣವನ್ನು ಆರಿಸಿಕೊಳ್ಳುತ್ತದೆ ಎಂದು ಹಲವರು ನಂಬುತ್ತಾರೆ. ಆದರೆ ಅದು ಮಧ್ಯಪ್ರದೇಶದಲ್ಲಿ ಮಾತ್ರ ಈ ತಂತ್ರಗಾರಿಕೆ ಇಲ್ಲ. ಹಿಂದಿನ ಜನಗಣತಿಯ ಪ್ರಕಾರ, 7.33 ಕೋಟಿ ಒಟ್ಟು ಜನಸಂಖ್ಯೆಯಲ್ಲಿ ಕೇವಲ ಆರರಿಂದ ಏಳು ಪ್ರತಿಶತದಷ್ಟು ಮಾತ್ರ ಮುಸ್ಲಿಮರು. ಅಲ್ಲದೆ ಮಧ್ಯಪ್ರದೇಶದಲ್ಲಿ ವಿಭಿನ್ನ ಡೆಮಾಗ್ರಫಿ ಇದೆ. ಕರ್ನಾಟಕದಲ್ಲಿ, ರಾಜ್ಯದ ಒಟ್ಟು 6.41 ಕೋಟಿ ಜನಸಂಖ್ಯೆಯಲ್ಲಿ ರಾಜ್ಯದ ಮುಸ್ಲಿಂ ಜನಸಂಖ್ಯೆಯು ಸುಮಾರು 12 ಪ್ರತಿಶತದಷ್ಟಿದೆ.

“ಸಿಎಂ ಮತ್ತು ಬಿಜೆಪಿ ಇಬ್ಬರೂ ರಾಜ್ಯದಲ್ಲಿ ಸ್ವಲ್ಪ ಮಟ್ಟಿಗೆ ಮುಸ್ಲಿಂ ಮತಗಳನ್ನು ಗಳಿಸುತ್ತಿದ್ದಾರೆ. ಚುನಾವಣೆಗೆ ಕೇವಲ ಒಂದೂವರೆ ವರ್ಷ ಮೊದಲು ಧ್ರುವೀಕರಣದ ನೀತಿಗೆ ನಿಂತರೆ ಅವರು ಈ ಮತಗಳನ್ನು ಕಳೆದುಕೊಳ್ಳುತ್ತಾರೆ. ಇದು ಶಿವರಾಜ್ ಅವರ ಸಾರ್ವಜನಿಕ ಗ್ರಹಿಕೆ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ, ತನ್ನ ಚುನಾವಣಾ ಕಾರ್ಯಸೂಚಿಯಲ್ಲಿ ಕೋಮು ರಾಜಕೀಯವನ್ನು ಚಾಲನೆ ಮಾಡಲು ಬಯಸುವುದಿಲ್ಲ, ” ಎಂದು ಮತ್ತೊಬ್ಬ ಪತ್ರಕರ್ತ ಹೇಳುತ್ತಾರೆ.

ಹಿಜಾಬ್ ವಿಷಯದಲ್ಲಿ ತನ್ನ ಬಲಪಂಥೀಯ ಪರವಾದ ನಿಲುವು ತನಗೆ ಹಾನಿಕರವಾಗಬಹುದು ಎಂದು ಬಿಜೆಪಿ ಚಿಂತಿಸಿದೆ ಎಂದು ರಾಜ್ಯ ರಾಜಕೀಯವನ್ನು ಹತ್ತಿರದಿಂದ ಗಮನಿಸುವ ಮತ್ತೊಬ್ಬ ಪತ್ರಕರ್ತ ಹೇಳುತ್ತಾರೆ.

ಹಿಜಾಬ್ ವಿಚಾರದಲ್ಲಿ ಶಿಕ್ಷಣ ಸಚಿವರು ಹೇಳಿಕೆ ನೀಡುತ್ತಿದ್ದಂತೆಯೇ, ಈ ವಿಷಯದ ಬಗ್ಗೆ ವಿವಾದಾತ್ಮಕ ಕಾಮೆಂಟ್ಗಳನ್ನು ಮಾಡುವುದರ ವಿರುದ್ಧ ಶಿವರಾಜ್ ಅವರು ತಮ್ಮ ಕ್ಯಾಬಿನೆಟ್ಗೆ ಬಲವಾದ ಎಚ್ಚರಿಕೆ ರವಾನಿಸಿದ್ದಾರೆ.

ಇದಲ್ಲದೆ, ಆರ್ಎಸ್ಎಸ್ಗೆ ಕರ್ನಾಟಕಕ್ಕಿಂತ ಮಧ್ಯಪ್ರದೇಶದಲ್ಲಿ ಬಲವಾದ ಜಾಲ ಮತ್ತು ಅಸ್ತಿತ್ವವಿದೆ. ಮಧ್ಯಪ್ರದೇಶದ ಅಗರ್ ಮಾಲ್ವಾ ಪ್ರದೇಶವನ್ನು ಆರ್ಎಸ್ಎಸ್ ನೆಲೆ ಎಂದು ಪರಿಗಣಿಸಲಾಗಿದೆ. ಹಾಗಾಗಿ, ರಾಜ್ಯದಲ್ಲಿ ಕೋಮುವಾದಿ ಆಟವನ್ನು ಆಡುವ ಅಗತ್ಯವಿಲ್ಲ ಎಂದು ಹಲವರು ವಾದಿಸುತ್ತಾರೆ.

Tags: Bharatiya Janata PartyChief Minister Shivraj Singh ChouhanHIJABHome Minister Narottam MishraKarnatakaMadhya PradeshMuslim studentsSchool Education Minister Inder Singh Parmarಕರ್ನಾಟಕಗೃಹ ಸಚಿವ ನರೋತ್ತಮ್ ಮಿಶ್ರಾಮಧ್ಯ ಪ್ರದೇಶಮುಸ್ಲಿಂ ವಿದ್ಯಾರ್ಥಿಗಳುಶಾಲಾ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ಸಿಎಂ ಶಿವರಾಜ್ ಸಿಂಘ್ ಚೌಹಾನ್ಹಿಜಾಬ್
Previous Post

ಹಿಜಾಬ್ ನಿಷೇಧದ ಬಗ್ಗೆ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ನೀತಿ ಏನು ಹೇಳುತ್ತದೆ?

Next Post

ಷೇರುಪೇಟೆಯ ದೈತ್ಯ  ಕಂಪನಿ  ಸಿಇಒರನ್ನೇ ಕೈಗೊಂಬೆ ಮಾಡಿಕೊಂಡಿದ್ದ ಹಿಮಾಲಯದ ಬಾಬಾ!

Related Posts

ಸೈದ್ಧಾಂತಿಕ ಸಂಘರ್ಷವೂ ಪರ್ಯಾಯದ ಶೋಧವೂ
Top Story

ಸೈದ್ಧಾಂತಿಕ ಸಂಘರ್ಷವೂ ಪರ್ಯಾಯದ ಶೋಧವೂ

by ಪ್ರತಿಧ್ವನಿ
October 23, 2025
0

ಮಿಲೆನಿಯಂ ಸಮೂಹದ ಮುಂದೆ ಪರ್ಯಾಯವೊಂದನ್ನು  ಇಡದಿದ್ದರೆ  ನಮ್ಮ ಶ್ರಮ ನಿರರ್ಥಕವಾಗುತ್ತದೆ ನಾ ದಿವಾಕರ  ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್)‌ ರಾಜಕೀಯ ಚಟುವಟಿಕೆಗಳನ್ನು ನಿಯಂತ್ರಿಸುವ ಭರದಲ್ಲಿ...

Read moreDetails
ಪ್ರಭಾಸ್‌ಗೆ ಜನ್ಮದಿನದ ಶುಭಾಶಯಗಳು!

ಪ್ರಭಾಸ್‌ಗೆ ಜನ್ಮದಿನದ ಶುಭಾಶಯಗಳು!

October 22, 2025

ನವೆಂಬರ್‌ ಕ್ರಾಂತಿ ನಡುವೆ ಡಿಕೆಶಿ ಟೆಂಪಲ್‌ ರನ್..!‌ ಗುರು ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್ ಮತ್ತು ಪತ್ನಿ ಉಷಾ

October 22, 2025

ದರ್ಶನ್‌ನ ಟಾರ್ಗೆಟ್‌ ಮಾಡಿದ್ದೇ ಸರ್ಕಾರ..?

October 22, 2025

ದರ್ಶನ್ ಅವರ ತಮ್ಮ ನೋಡಿ ನನ್ನ ಬಾಲಿವುಡ್ ಹೀರೋ ಅನ್ಕೊಂಡ್ರೂ

October 22, 2025
Next Post
ಷೇರುಪೇಟೆಯ ದೈತ್ಯ  ಕಂಪನಿ  ಸಿಇಒರನ್ನೇ ಕೈಗೊಂಬೆ ಮಾಡಿಕೊಂಡಿದ್ದ ಹಿಮಾಲಯದ ಬಾಬಾ!

ಷೇರುಪೇಟೆಯ ದೈತ್ಯ  ಕಂಪನಿ  ಸಿಇಒರನ್ನೇ ಕೈಗೊಂಬೆ ಮಾಡಿಕೊಂಡಿದ್ದ ಹಿಮಾಲಯದ ಬಾಬಾ!

Please login to join discussion

Recent News

ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ
Top Story

ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ

by ಪ್ರತಿಧ್ವನಿ
October 24, 2025
ಯತೀಂದ್ರ ನಾಯಕತ್ವ ಹೇಳಿಕೆ – ಡಿಕೆಶಿಯಿಂದ ಹೈಕಮಾಂಡ್ ವಿಚಾರ ಮುಟ್ಟಿಸುವ ಸುಳಿವು
Top Story

ಯತೀಂದ್ರ ನಾಯಕತ್ವ ಹೇಳಿಕೆ – ಡಿಕೆಶಿಯಿಂದ ಹೈಕಮಾಂಡ್ ವಿಚಾರ ಮುಟ್ಟಿಸುವ ಸುಳಿವು

by ಪ್ರತಿಧ್ವನಿ
October 24, 2025
ಬಿಗ್ ಬಾಸ್ ಮಾಜಿ ಸ್ಪರ್ಧಿ ವಿರುದ್ಧ ಹಿಟ್ ರನ್ ಕೇಸ್..- ಬೈಕ್ ಸವಾರಳಿಗೆ ಕಾಲು ಮುರಿತ
Top Story

ಬಿಗ್ ಬಾಸ್ ಮಾಜಿ ಸ್ಪರ್ಧಿ ವಿರುದ್ಧ ಹಿಟ್ ರನ್ ಕೇಸ್..- ಬೈಕ್ ಸವಾರಳಿಗೆ ಕಾಲು ಮುರಿತ

by ಪ್ರತಿಧ್ವನಿ
October 24, 2025
ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ
Top Story

ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ

by ಪ್ರತಿಧ್ವನಿ
October 24, 2025
HD Kumarswamy : ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ HDK ಸ್ಪಷ್ಟನೆ
Top Story

HD Kumarswamy : ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ HDK ಸ್ಪಷ್ಟನೆ

by ಪ್ರತಿಧ್ವನಿ
October 24, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ

ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ

October 24, 2025
ಯತೀಂದ್ರ ನಾಯಕತ್ವ ಹೇಳಿಕೆ – ಡಿಕೆಶಿಯಿಂದ ಹೈಕಮಾಂಡ್ ವಿಚಾರ ಮುಟ್ಟಿಸುವ ಸುಳಿವು

ಯತೀಂದ್ರ ನಾಯಕತ್ವ ಹೇಳಿಕೆ – ಡಿಕೆಶಿಯಿಂದ ಹೈಕಮಾಂಡ್ ವಿಚಾರ ಮುಟ್ಟಿಸುವ ಸುಳಿವು

October 24, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada