ಮಠದ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ಎದುರಿಸಿತ್ತಿರುವ ಮರುಘಾ ಶ್ರೀಗಳ ಪ್ರತಿಮೆ ಧ್ವಂಸ ಮಾಡಿ ಆಕ್ರೋಶ ಹೊರಹಾಕಿರುವ ಘಟನೆ ಜಿಲ್ಲೆಯ ಹೊಳಲ್ಕರೆ ತಾಲ್ಲೂಕಿನ ಮಲ್ಲಾಡಿಹಳ್ಳಿಯಲ್ಲಿ ನಡೆದಿದೆ.
ಅನಾಥ ಆಸ್ರಮದ ಹೊರಗೆ ಸ್ಥಾಪಿಸಿದ್ದ ಶರಣರ ಪ್ರತಿಮೆಯನ್ನು ಹೊಡೆದು ಹಾಕಿದ ಯುವಕರ ಗುಂಪೊಂದು ಶರಣರ ಪೋಟೋಗಳನ್ನು ಆಶ್ರಮದಿಂದ ಹೊರತಂದು ಶವಯಾತ್ರೆ ಮಾಡಿ ಶ್ರೀಗಳ ಪೋಟೋವನ್ನು ಸುಟ್ಟುಹಾಕಿ ತಮ್ಮ ಆಕ್ರೋಶವನ್ನ ಹೊರಹಾಕಿದ್ದರು.
ಹಿಂದೆ ಇದ್ದ ರಾಘವೇಂದ್ರ ಶ್ರೀಗಳು ಮಲ್ಲಾಡಹಳ್ಳಿ ಆಶ್ರಮವನ್ನ ಎತ್ತರಕ್ಕೆ ಕೊಂಡೊಯ್ದಿದ್ದರು ಆದರೆ, ಮುರುಘಾ ಶರಣರು ಮಠದ ಅಧ್ಯಕ್ಷರಾಗಿ 15 ವರ್ಷ ಕಳೆದರೂ ಯಾವುದೇ ಅಭಿವೃದ್ದಿ ಕಂಡಿಲ್ಲ ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತೆ ಆಗಿದೆ ಎಂದು ಕಿಡಿಕಾರಿದ್ದಾರೆ.

ಆಶ್ರಮಕ್ಕೆ ವರ್ಷಕ್ಕೆ ಸರಿಸುಮಾರು 9ಕೋಟಿ ರೂಪಾಯಿ ಆದಾಯ ಬರುತಿತ್ತು ಬಂದ ಆದಾಯವೆಲ್ಲಾ ದುರುಪಯಗವಾಗಿದೆ. ಸರಿಯಾದ ನಿರ್ವಹಣೆಯಿಲ್ಲದೆ ಆಶ್ರಮದ ಆವರಣದಲ್ಲಿ ದನಕರುಗಳು ಮೇಯುವ ಪರಿಸ್ಥಿತಿ ಎದುರಾಗಿದೆ ಎಂದು ಯುವಕರು ಆರೋಪಿಸಿದ್ದಾರೆ.
ಆಶ್ರಮದ ಟ್ರಸ್ಟಿಗಳಾಗಲ್ಲಿ ಅಥವಾ ಮಠದವರಾಗಲೀ ಯಾರೂ ಸಹ ಇಲ್ಲಿಗೆ ಬರುವುದಿಲ್ಲ ಈಗ ಆಶ್ರಮದಲ್ಲಿ ಯಾವುದೇ ಶಿಸ್ತಿಲ್ಲದಂತಾಗಿದೆ. ಕಳಂಕ ಹೊತ್ತಿರುವ ಸ್ವಾಮೀಜಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.






