ಬೆಳಗಾವಿ : ಜಿಲ್ಲೆಯ ಅಥಣಿ ಪೊಲೀಸ ಠಾಣೆ ಪೊಲೀಸರಿಂದ ಅಂತರರಾಜ್ಯ ಕಳ್ಳರ ಬಂಧನವಾಗಿದೆ. ಜನದಟ್ಟಣೆಯನ್ನೇ ಬಂಡವಾಳ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಮಹಿಳೆಯರು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ.

ಅಥಣಿ ಪಟ್ಟಣದ ಬಸ್ ನಿಲ್ದಾಣದಲ್ಲಿ ದಿನಾಂಕ-24.03.2026 ರಂದು ನಂದಗಾವ ಗ್ರಾಮದ ಶ್ರಿಮತಿ ಪುತಳವ್ವಾ ಷನ್ಮುಕ ಕಾಂಬಳೆ ಎನ್ನುವವರು ಬಸ್ ನಿಲ್ದಾಣದಲ್ಲಿ ಬಸ್ಸು ಹತ್ತುವಾಗ ಜನದಟ್ಟಣೆಯಲ್ಲಿ ಇವರ ಕೊರಳಲ್ಲಿನಲ್ಲಿದ್ದ 50 ಸಾವಿರ ಮೌಲ್ಯದ 07 ಗ್ರಾಂ ಬಂಗಾರದ ಬೋರಮಾಳ ಕಳ್ಳತನವಾಗಿರುವ ಬಗ್ಗೆ ಅಥಣಿ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.
ಇದಾದ ಬಳಿಕ ದೂರು ದಾಖಲಿಸಿಕೊಂಡ ಪೊಲೀಸರು ಬೆಳಗಾವಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರ ನೇತೃತ್ವದಲ್ಲಿ ಅಥಣಿ ಡಿವೈಎಸ್ಪಿ ಪ್ರಶಾಂತ ಮುನ್ನೋಳಿ ಮಾರ್ಗದರ್ಶನದಲ್ಲಿ ಹಾಗೂ ಅಥಣಿ ಸಿಪಿಐ ಸಂತೋಷ್ ಹಳ್ಳೂರ ಜೊತೆಯಾಗಿ ಅಥಣಿಯ ಸ್ಥಳೀಯ ಪಿಎಸ್ಐಗಳ ಸಹಕಾರದೊಂದಿಗೆ ತನಿಖಾ ತಂಡವನ್ನು ರಚಿಸಲಾಗಿತ್ತು
ಇದನ್ನೂ ಓದಿ : ನೀಟ್ ಪೇಪರ್ ಲೀಕ್ಗೆ ಹೊಸ ಟ್ವಿಸ್ಟ್ : ಒಂದೇ ಕುಟುಂಬದ 5 ಮಂದಿ ಸತತ ಎರಡು ವರ್ಷ ಪಾಸ್!
ಪ್ರಕರಣದ ತನಿಖೆಗಿಳಿದ ಈ ತಂಡವು ಮಹಾರಾಷ್ಟ್ರದ ಕೊಲ್ಹಾಪುರ ಮೂಲದ ಕಳ್ಳಿಯರಾದ ಹೇಮಾ ಧರ್ಮೇಂದ್ರ ಕಸಬೇಕರ, ನೀಲಂ ವಿಜಯi ಕಾಂಬಳೆ , ಈ ಇಬ್ಬರೂ ಕಳ್ಳಿಯರು ಟಾಕಳಿ ನಾಕಾ, ಮಾಳಿ ಕಾಲೋನಿ, ರಾಜಾರಾಮಪುರಿ ಕೋಲ್ಹಾಪೂರ ಇಲ್ಲಿನ ನಿವಾಸಿಗಳಾಗಿದ್ದಾರೆ. ಈ ಪ್ರಕರಣದಲ್ಲಿ 07 ಗ್ರಾಂ ತೂಕದ ಬಂಗಾರದ ಬೋರಮಾಳ, 1.12000 ಹಣ, ಅಲ್ಲದೆ ಅಥಣಿ ಪೊಲೀಸ ಠಾಣೆಯ ಇನ್ನೊಂದು ಅಪರಾಧ ಪ್ರಕರಣದಲ್ಲಿ ಒಟ್ಟು 55.5 ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೂ ಅಥಣಿ ಪೋಲಿಸ್ ಠಾಣೆಯ ವತಿಯಿಂದ ಒಟ್ಟು 4 ಪ್ರಕರಣಗಳಲ್ಲಿ 42.5 ಗ್ರಾಂ ಬಂಗಾರದ ಆಭರಣಗಳು 2.80000- ರೂ ಮಾಲನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಲ್ಲದೆ ಕಳ್ಳತನ ಪ್ರಕರಣವನ್ನು ಬೇಧಿಸಿರುವ ಇಲಾಖೆಯ ಎಲ್ಲ ಸಿಬ್ಬಂದಿಗಳ ಕಾರ್ಯಕ್ಕೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.






