ಸೌಜನ್ಯಾ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ (ಆಗಸ್ಟ್ 28) ಬೆಳ್ತಂಗಡಿಯಲ್ಲಿ ಚಲೋ ಬೆಳ್ತಂಗಡಿ ಮಹಾಧರಣಿ ನಡೆಯಿತು. ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿಸ ಮಾಜಿ ಶಾಸಕ ವಸಂತ ಬಂಗೇರ ಬಿಜೆಪಿ ಶಾಸಕರ ಮತ್ತು ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹನ್ನೊಂದು ವರ್ಷಗಳ ಹಿಂದೆ ಸೌಜನ್ಯಾಳ ಹತ್ಯೆಯಾಗಿದೆ.ಹನ್ನೊಂದು ವರ್ಷಗಳಿಂದ ಪ್ರತಿಭಟನೆಗಳು ನಿರಂತರವಾಗಿ ನಡೆದಿದೆ.ಸೌಜನ್ಯ ಅತ್ಯಾಚಾರ ಸಂಧರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಪ್ರಾರಂಭದಲ್ಲಿ ಪೊಲೀಸ್ ತನಿಖೆ ಬಳಿಕ ಸಿಐಡಿ ತನಿಖೆಯಾಯಿತು ಆದರೆ ಈ ತನಿಖೆಗಳು ಹಳ್ಳ ಹಿಡಿಯಿತು ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ವೇಳೆ ಸಿಬಿಐಗೆ ವಹಿಸಲಾಯಿತು ಆರು ತಿಂಗಳ ಕಾಲ ಸಿಬಿಐ ಒಳ್ಳೆಯ ತನಿಖೆ ಮಾಡಿತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ಸಿಬಿಐ ತನಿಖಾಧಿಕಾರಿ ಮುರುಗನ್ ರ ಬದಲಾವಣೆ ಮಾಡಲಾಯಿತು.ಹನ್ನೊಂದು ವರ್ಷಗಳ ತನಿಖೆ ಬಳಿಕ ಸಿಬಿಐ ಸಂತೋಷ್ ರಾವ್ ನನ್ನು ನಿರಾಪರಾಧಿ ಎಂದು ಹೇಳಿತು.ಸೌಜನ್ಯ ಪ್ರಕರಣ ಹಳ್ಳ ಹಿಡಿಯಲು ಏನು ಕಾರಣ ಎಂದು ನಾವು ತಿಳಿದುಕೊಳ್ಳಬೇಕು
ನಿನ್ನೆ ಬಿಜೆಪಿ ಯವರು ಇದೇ ಸ್ಥಳದಲ್ಲಿ ಪ್ರತಿಭಟನೆ ಮಾಡಿದ್ದರು.ಮಿನಿವಿಧಾನಸೌಧಕ್ಕೆ ಬೀಗ ಹಾಕಿದ ಸಂಧರ್ಭದಲ್ಲಿ ಬಿಜೆಪಿ ಪ್ರತಿಭಟನೆ ಮಾಡಿದರು ನಳಿನ್ ಕುಮಾರ್ ಕಟೀಲ್ ಅವ್ರೇ ಕಳೆದ ಹನ್ನೊಂದು ವರ್ಷ ಎಲ್ಲಿ ಹೋಗಿದ್ರಿ?.ಪಾರ್ಲಿಮೆಂಟ್ ನಲ್ಲಿ ಚರ್ಚೆಗೆ ಅವಕಾಶ ಕೊಡಲಿಲ್ವಾ? ನೀವು ಆದಿತ್ಯವಾರ ಪ್ರತಿಭಟನೆ ಮಾಡಲು ಲಾಯಕ್ಕು ಎಂದು ಇಂದು ಬಿಜೆಪಿ ಶಾಸಕರ ವಿರುದ್ಧ ಮಾಜಿ ಶಾಸಕ ವಸಂತ ಬಂಗೇರ ಆಕ್ರೋಶ ಹೊರಹಾಕಿದ್ದಾರೆ.