ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್(Trail Blast) ನಡೆಸಲು ಮುಂದಾಗಿರುವ ಅಧಿಕಾರಿಗಳ ಕ್ರಮಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ(Darshan Puttanaiah) ವಿರೋಧ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ಟ್ರಯಲ್ ಬ್ಲಾಸ್ಟ್ ನಡೆಸಲು ಬಿಡುವುದಿಲ್ಲ ಎಂದಿದ್ದಾರೆ.
KRSನಲ್ಲಿ ಇಂದು ಅಧಿಕಾರಿಗಳಿಂದ ಟ್ರಯಲ್ ಬ್ಲ್ಯಾಸ್ಟ್ ನಡೆಸಲು ಪರಿಶೀಲನೆಗೆ ಮುಂದಾಗಿರು ವಿಚಾರದ ಕುರಿತು ಮಾತನಾಡಿದ ಅವರು, ತಜ್ಞರ ತಂಡ ಏಕೆ ಬಂದಿದೆ ಗೊತ್ತಿಲ್ಲ, ಟ್ರಯಲ್ ಬ್ಲಾಸ್ಟ್ ಮಾಡಲು ನಾವು ಬಿಡುವುದಿಲ್ಲ. ಈಗ ಸಭೆ ಇದೆ. ಅವರೊಂದಿಗೆ ಚರ್ಚೆ ನಡೆಸುತ್ತೇವೆ.
ಕೈಗುಳಿ ಮಾಡುವುದಾರೆ ಮಾಡಲಿ. ಅದನ್ನ ಬಿಟ್ಟು ಟ್ರಯಲ್ ಬ್ಲಾಸ್ಟ್ಗೆ ನಾವು ಅವಕಾಶ ಕೊಡುವುದಿಲ್ಲ. ಉಗ್ರ ಹೋರಾಟದ ಮೂಲಕ ಟ್ರಯಲ್ ಬ್ಲಾಸ್ಟ್ ತಡೆಯುತ್ತೇವೆ ಎಂದು ಎಚ್ಚರಿಸಿದ್ದಾರೆ.
District Administration ಯಾವ ಕಾರಣಕ್ಕೆ ತರಾತುರಿಯಲ್ಲಿ ಟ್ರಯಲ್ ಬ್ಲಾಸ್ಟ್ಗೆ ಮುಂದಾಗಿದೆ ಗೊತ್ತಿಲ್ಲ. ಕೈಗುಳಿಯಲ್ಲಿ Maning ಮಾಡಿದ್ರೆ ಸಮಸ್ಯೆ ಇಲ್ಲ. ಟ್ರಯಲ್ ಬ್ಲಾಸ್ಟ್(Trail Blast) ಮೂಲಕ ಗಣಿಗಾರಿಕೆ ಮಾಡಿದ್ರೆ ನಾವು ಬಿಡಲ್ಲ. ಹೈಕೋರ್ಟ್ ಈಗಾಗಲೇ ಗಣಿಗಾರಿಕೆ ನಿಷೇಧ ಮಾಡಿದೆ. ಇನ್ನೊಂದು ಕಡೆ ಟ್ರಯಲ್ ಬ್ಲಾಸ್ಟ್ ಮಾಡಿ ಎನ್ನುತ್ತಾರೆ. ಇದು ಯಾವ ನಿರ್ಧಾರ ಅನ್ನೊದು ಗೊತ್ತಿಲ್ಲ. ಸರ್ಕಾರ ಮೇಲ್ಮನವಿ ಸಲ್ಲಿಸಬಹುದಿತ್ತು. ಆ ಕೆಲಸಕ್ಕೂ ಸರ್ಕಾರ ಮುಂದಾಗಿಲ್ಲ. ಕಳೆದ ಎರಡೂವರೆ ತಿಂಗಳಿನಿಂದಲೂ ಸರ್ಕಾರದ ಜೊತೆ ಈ ಬಗ್ಗೆ ಚರ್ಚೆ ಮಾಡಿದ್ದೇವೆ. ಜಲಾಶಯ ಉಳಿಸುವುದೇ ಮುಖ್ಯ. ತಜ್ಞರ ತಂಡದೊಂದಿಗೆ ಚರ್ಚೆ ಮಾಡುತ್ತೇವೆ. ಜಾರ್ಖಂಡ್ನಿಂದ ಬಂದಿರುವ ಟೀಂ ಯಾವ ಮಾಹಿತಿ ನೀಡುತ್ತಾರೆ ನೋಡುತ್ತೇವೆ ಎಂದರು.
#DarshanPuttanaiah #Mandya #KRSDarm #TrailBlast #PandavapuraMLA