
ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಹೊರ ಹಾಕಿದ್ದು ಪಕ್ಷದ ಆಂತರಿಕ ವಿಚಾರ ಅಂತಾ ದಾವಣಗೆರೆಯಲ್ಲಿ ಹರಿಹರ ಮಾಜಿ ಶಾಸಕ ಎಚ್.ಎಸ್ ಶಿವಶಂಕರ್ ಪ್ರತಿಕ್ರಿಯೆ ನೀಡಿದ್ದಾರೆ. ಯತ್ನಾಳ್ ಹೊರ ಹಾಕಿದ್ದಕ್ಕೆ ಪಂಚಮಸಾಲಿ ಸಮುದಾಯ ಹೋರಾಟ ಮಾಡ್ತು. ಅದೂ ಒಳ್ಳೇಯದೆ. ನಾವು ಯತ್ನಾಳ್ ಹೊರ ಹಾಕಿದ್ದರಿಂದ NDA ಕೂಟಕ್ಕೆ ಸಮಸ್ಯೆ ಆಗುತ್ತೆ ಅಂತ ಮಾಡಿದ್ದೆ. ಆದ್ರೆ ಪಕ್ಷದ ನಿರ್ಧಾರ ಆಗಿರೋದನ್ನ ಎಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ.

ಪಂಚಮಸಾಲಿ ಸಮುದಾಯದ ಬಸನಗೌಡ ಪಾಟೀಲ್ ಯತ್ನಾಳ್ ಅವರರ ಪರ ಜಯ ಮೃತ್ಯುಂಜಯ ಸ್ವಾಮೀಜಿ ನಿಂತಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸುತಿದ್ದಾರೆ. ಹಾಗಂತ ಎಲ್ಲರೂ ಸ್ವಾಮೀಜಿ ವಿರುದ್ಧ ಹರಿಹಾಯೋದು ಬೇಡ. ಸಮುದಾಯದ ವ್ಯಕ್ತಿ ಕಷ್ಟದಲ್ಲಿದ್ದಾಗ ಬೆನ್ನಿಗೆ ನಿಲ್ಲೊ ಕೆಲಸವನ್ನು ಸ್ವಾಮೀಜಿ ಮಾಡಿದ್ದಾರೆ. ನಾಳೆ ಸಮುದಾಯದವರಿಗೆ ಯಾರಿಗೆ ಕಷ್ಟ ಬಂದರು ಎಲ್ಲರ ಬೆನ್ನಿಗೆ ನಿಲ್ಲುವ ಕೆಲಸವನ್ನು ಮಾಡ್ತಾರೆ ಎಂದು ಸ್ವಾಮೀಜಿ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.

ಪಂಚಮಸಾಲಿ ಸಮುದಾಯ ಕಟ್ಟುವಲ್ಲಿ ಬಸವ ಜಯ ಮೃತ್ಯುಂಜಯ ಶ್ರೀಗಳು ಒಳ್ಳೇಯ ಕೆಲಸ ಮಾಡಿದ್ದಾರೆ. ಸಮುದಾಯದ ಸ್ವಾಮೀಜಿ ಆದವರು ಒಬ್ಬರ ಪರ ನಿಲ್ಲೋದು ಎಷ್ಟು ಸರಿ ಅಂತ ವಿಜಯಾನಂದ ಕಾಶಪ್ಪನವರ ಸಿಟ್ಟಾಗಿದ್ದಾರೆ. ಸ್ವಾಮೀಜಿ ಒಂದು ಪಕ್ಷದ ಪರವಾಗಿ ನಿಂತಿದ್ದಾರೆ ಅಂತ ತಿಳಿದುಕೊಳ್ಳುವುದು ಬೇಡ. ಒಬ್ಬರಿಗೊಬ್ಬರು ದ್ವೇಷದ ಹೇಳಿಕೆ ಕೊಡುವ ಕೆಲಸ ಮಾಡಬೇಡಿ. ಫೆಸ್ ಬುಕ್ನಲ್ಲಿ ಯಾರು ಇಲ್ಲಸಲ್ಲದ ಕಾಮೆಂಟ್ ಮಾಡುವ ಕೆಲಸ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಇಲ್ಲಿ ಸಮಾಜ ದೊಡ್ಡದು, ವ್ಯಕ್ತಿ ದೊಡ್ಡವರಲ್ಲ ಅನ್ನೋದನ್ನ ಎಲ್ಲರೂ ಅರ್ಥ ಮಾಡ್ಕೊಬೇಕು. ಹುಬ್ಬಳ್ಳಿಯಲ್ಲಿ ವಿಜಯಾನಂದ ಕಾಶಪ್ಪನವರ್ ಸಭೆ ಮಾಡಿ ಸ್ವಾಮೀಜಿ ಬದಲಾವಣೆ ಮಾಡ್ತೀವಿ ಅಂತ ಹೇಳಿಕೆ ನೀಡಿದ್ರು. ಇದು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಏಕಾಏಕಿ ದ್ವೇಷದಿಂದ ಹೇಳಿಕೆ ಕೊಡದಂತೆ ನಾನು ಕಾಶಪ್ಪನವರಿಗೆ ಮನವಿ ಮಾಡಿದ್ದೇನೆ. ಇದೇ ತಿಂಗಳು 19ಕ್ಕೆ ವಿಜಯಾನಂದ ಕಾಶಪ್ಪನವರ್ ಸಭೆ ಕರೆದಿದ್ದರು. 20ಕ್ಕೆ ಜಯಮೃತ್ಯುಂಜಯ ಸ್ವಾಮೀಜಿ ಕೂಡ ಮಠದಲ್ಲಿ ಸಭೆ ಕರೆದಿದ್ದರು. ಇದರಿಂದ ಸಮಾಜದಲ್ಲಿ ಒಡಕು ಆಗುತ್ತೆ.. ದ್ವೇಷ ಬೆಳೆಯುತ್ತದೆ.. ಸಭೆ ಬೇಡ ಅಂತ ಮನವಿ ಮಾಡಿದ್ದೇವೆ. ಸದ್ಯಕ್ಕೆ ಇಬ್ಬರೂ ಕೂಡ ಸಭೆ ಮುಂದೂಡಿದ್ದಾರೆ. ಸಮಾಜದಲ್ಲಿ ಒಡಕು ಬೇಡ ಎಲ್ಲರೂ ಒಟ್ಟಾಗಿ ಹೋಗೋಣ ಎಂದಿದ್ದಾರೆ ಎಚ್ ಎಸ್ ಶಿವಶಂಕರ್.




