ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ (Vinay sommaiah) ಆತ್ಮಹತ್ಯೆ ಪ್ರಕರಣದಲ್ಲಿ, ತಮ್ಮ ಹೆಸರು ಕೇಳಿಬಂದಿರುವ ಹಿನ್ನಲೆಯಲ್ಲಿ, ಈ ಸಾವಿನ ಬಗ್ಗೆ ಸಂಬಂಧಿಸಿದಂತೆ ಕೆಲವೇ ದಿನಗಳಲ್ಲಿ ಸತ್ಯಾಂಶ ಹೊರಬರಲಿದೆ ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ (AS Ponnanna) ಪ್ರತಿಕ್ರಿಯಿಸಿದ್ದಾರೆ.

ವಿನಯ್ ಸೋಮಯ್ಯ ಸಾವಿನ ಹಿಂದಿನ ಸತ್ಯಾಂಶ 3-4 ದಿನಗಳಲ್ಲಿ ಬೆಳಕಿಗೆ ಬರಲಿದೆ ಎಂದು ಶಾಸಕ A.S. ಪೊನ್ನಣ್ಣ ಹೇಳಿದ್ದಾರೆ. ವಿನಯ್ ಸೋಮಯ್ಯ ಸಾವಿನಲ್ಲಿ ಸಾಕಷ್ಟು ಅನುಮಾನಗಳಿದೆ. ಸಾವಿನ ಸಮಯ, ವಾಟ್ಸಪ್ ಡೆತ್ ನೋಟ್ ನಿಜವಾಗಿಯೂ ಅದೇ ವ್ಯಕ್ತಿ ಟೈಪ್ ಮಾಡಿದ್ದೇ? ವಿನಯ್ ಸಾವಿಗೆ ಕಾರಣಗಳೇನು? ಎಂಬ ಅಂಶಗಳು ಸ್ಪಷ್ಟವಾಗಬೇಕಿದೆ ಎಂದಿದ್ದಾರೆ.

ಹೀಗಾಗಿ ಈ ಎಲ್ಲಾ ಅಂಶಗಳ ಬಗ್ಗೆ ಪೊಲೀಸರು ಸಂಪೂರ್ಣ ತನಿಖೆ ಕೈಗೊಂಡಿದ್ದಾರೆ.ಈ ಸಾವಿನಲ್ಲೂ ರಾಜಕೀಯ ಮಾಡಿ ಕೂಗಾಡಿದ ಬಿಜೆಪಿ ನಾಯಕರು, ವಿನಯ್ ಸೋಮಯ್ಯ ಪಾರ್ಥಿವ ಶರೀರವನ್ನು ಕುಶಾಲನಗರಕ್ಕೆ ತಂದಾಗ ಯಾರೊಬ್ಬರು ಇರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.






